ಕಟಕ ರಾಶಿ ಭವಿಷ್ಯ ಜುಲೈ 22: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ಉಳಿತಾಯ ಯೋಜನೆಗಳು ಭವಿಷ್ಯಕ್ಕೆ ಅವಶ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಟಕ ರಾಶಿ ಭವಿಷ್ಯ ಜುಲೈ 22: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ಉಳಿತಾಯ ಯೋಜನೆಗಳು ಭವಿಷ್ಯಕ್ಕೆ ಅವಶ್ಯ

ಕಟಕ ರಾಶಿ ಭವಿಷ್ಯ ಜುಲೈ 22: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ಉಳಿತಾಯ ಯೋಜನೆಗಳು ಭವಿಷ್ಯಕ್ಕೆ ಅವಶ್ಯ

Cancer Daily Horoscope July 22, 2024: ರಾಶಿಚಕ್ರಗಳ ಪೈಕಿ ನಾಲ್ಕನೇಯದು ಕಟಕ. ಜನನದ ಸಮಯದಲ್ಲಿ ಚಂದ್ರನು ಕರ್ಕಾಟಕದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ಕರ್ಕಾಟಕ. ಇಂದು ನೀವು ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯ ವಿಚಾರದಲ್ಲಿ ಎಚ್ಚರ ತಪ್ಪದಿರಿ. ವಿಶ್ರಾಂತಿ ಅವಶ್ಯ.

ಕಟಕ ರಾಶಿ ಭವಿಷ್ಯ ಜುಲೈ 22: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ಉಳಿತಾಯ ಯೋಜನೆಗಳು ಭವಿಷ್ಯಕ್ಕೆ ಅವಶ್ಯ
ಕಟಕ ರಾಶಿ ಭವಿಷ್ಯ ಜುಲೈ 22: ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ಉಳಿತಾಯ ಯೋಜನೆಗಳು ಭವಿಷ್ಯಕ್ಕೆ ಅವಶ್ಯ

ಕಟಕ ರಾಶಿ ಭವಿಷ್ಯ ಜುಲೈ 22: ಇಂದು ನಿಮ್ಮ ಬದುಕಿನಲ್ಲಿ ಸಮತೋಲನ ಸಾಧಿಸಲು ಹಾಗೂ ಸಂಬಂಧಗಳೊಂದಿಗೆ ಸಾಮರಸ್ಯ ಸಾಧಿಸಲು ಉತ್ತಮ ದಿನ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ನಡುವೆ ಸಮತೋಲನ ಸಾಧಿಸಲು ಗಮನ ಕೊಡಿ. ಬದಕನ್ನು ಸಮತೋಲಿತವಾಗಿ ನಡೆಸಿಕೊಂಡು ಹೋಗುವ ಉದ್ದೇಶದಿಂದ ಸ್ವಯಂ ಆರೈಕೆ, ಸಂವಹನ ಮತ್ತು ಆರ್ಥಿಕ ಯೋಚನೆಗೆ ಗಮನ ನೀಡುತ್ತೀರಿ. ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಕಟಕ ರಾಶಿಯವರ ಪ್ರೇಮ ಜೀವನ (Cancer Love Horoscope)

ಇಂದು ನಿಮ್ಮಲ್ಲಿರುವ ಭಾವನಾತ್ಮಕ ಸೂಕ್ಷ್ಮತೆ ಮತ್ತು ಅಂತಃಪ್ರಜ್ಞೆಯು ಸಂಬಂಧಗಳಿಗೆ ಮಾರ್ಗದರ್ಶನ ನೀಡುತ್ತದೆ. ಸಂಬಂಧದಲ್ಲಿ ಮುಕ್ತ ಸಂವಹನ ಬಹಳ ಮುಖ್ಯ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಾಗೂ ಸಂಗಾತಿಯ ಅಗತ್ಯಗಳನ್ನು ಕೇಳಲು ಹಿಂಜರಿಯದಿರಿ. ನೀವು ಒಂಟಿಯಾಗಿದ್ದರೆ ಹೊಸ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸಿ. ನಿಮ್ಮ ಹಾಗೂ ಇತರರಿಗೆ ಸಹಾಯ ಮಾಡುವ ಗುಣ ಯಾರನ್ನೂ ಬೇಕಾದರೂ ಸೆಳೆಯಬಹುದು. ಸ್ಪಷ್ಟ ಮತ್ತು ಪ್ರಾಮಾಣಿಕತೆಯಿಂದ ತಪ್ಪು ತಿಳುವಳಿಕೆಯನ್ನು ತಪ್ಪಿಸಿ. ಪ್ರೀತಿ ತೋರುವುದು ಹಾಗೂ ಮೆಚ್ಚುಗೆಯ ಮಾತುಗಳನ್ನಾಡುವುದು ನಿಮ್ಮ ಸಂಬಂಧದ ಬಂಧ ಇನ್ನಷ್ಟು ಬಿಗಿಗೊಳ್ಳಲು ಕಾರಣವಾಗುತ್ತದೆ. ನೆನಪಿಡಿ ಸಮತೋಲಿತ ಭಾವನಾತ್ಮಕ ಜೀವನವು ಪ್ರೀತಿಯಲ್ಲಿ ಮುಂದುವರಿಯಲು ಕಾರಣವಾಗುತ್ತದೆ.

ಕಟಕ ರಾಶಿಯವರ ವೃತ್ತಿ ಭವಿಷ್ಯ (Cancer Professional Horoscope)

ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಇಂದು ಹೆಚ್ಚು ಗಮನ ಹರಿಸಬೇಕಾಗಬಹುದು. ಕೆಲಸದ ಬದ್ಧತೆಗಳು ಮತ್ತು ವೈಯಕ್ತಿಕ ಅಗತ್ಯಗಳನ್ನು ಸಮತೋಲನಗೊಳಿಸುವುದು ನಿರ್ಣಾಯಕವಾಗಿದೆ. ಕೆಲಸಗಳಿಗೆ ಆದ್ಯತೆ ನೀಡುವುದು ಮತ್ತು ಗಡುವನ್ನು ಪೂರೈಸಲು ನಿಮ್ಮ ನೈಸರ್ಗಿಕ ಸಾಂಸ್ಥಿಕ ಕೌಶಲಗಳನ್ನು ಬಳಸಿ. ಸಹಯೋಗ ಹಾಗೂ ತಂಡವಾಗಿ ಕೆಲಸ ಮಾಡುವುದು ಪ್ರಯೋಜನಕಾರಿಯಾಗಿದೆ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಒಳನೋಟವು ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಬಹುದು. ಅತಿಯಾದ ಒತ್ತಡ ತಪ್ಪಿಸಲು ಸಣ್ಣ ವಿರಾಮ ತೆಗೆದುಕೊಳ್ಳಲು ಮರೆಯದಿರಿ. ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸಹಾಯ ಮಾಡುವ ಮೌಲ್ಯಯುತ ಸಂಪರ್ಕಗಳನ್ನು ಬೆಳೆಸಿಕೊಳ್ಳಿ.

ಕಟಕ ರಾಶಿಯವರ ಆರ್ಥಿಕ ಜೀವನ (Cancer Money Horoscope)

ನೀವು ಇಂದು ಆರ್ಥಿಕ ವಿಷಯದಲ್ಲಿ ಸ್ಥಿರತೆ ಸಾಧಿಸುವುದು ಬಹಳ ಮುಖ್ಯವಾಗಿದೆ. ನಿಮ್ಮ ಬಜೆಟ್ ಅನ್ನು ಪರಿಶೀಲಿಸಿ ಮತ್ತು ಅಗತ್ಯವಿರುವಲ್ಲಿ ಹೊಂದಾಣಿಕೆ ಮಾಡಿ. ಹಠಾತ್ ಖರ್ಚು ಮಾಡುವುದನ್ನು ತಪ್ಪಿಸಿ ಮತ್ತು ದೀರ್ಘಾವಧಿಯ ಹಣಕಾಸಿನ ಗುರಿಗಳ ಮೇಲೆ ಕೇಂದ್ರೀಕರಿಸಿ. ಇಂದು ಮಾಡಿದ ಹೂಡಿಕೆಗಳು ಧನಾತ್ಮಕ ಆದಾಯವನ್ನು ನೀಡಬಹುದು, ಆದ್ದರಿಂದ ಹಣಕಾಸು ತಜ್ಞರಿಂದ ಸಲಹೆ ಪಡೆಯಲು ಪರಿಗಣಿಸಿ. ಉಳಿತಾಯ ಯೋಜನೆಗಳು ಮತ್ತು ವಿವೇಕಯುತ ಖರ್ಚು ನಿಮ್ಮ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಮನೆ ಹಾಗೂ ಕೌಟುಂಬಿಕ ಖರ್ಚುಗಳು ಹೆಚ್ಚಾಗಬಹುದು. ಇದನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಒಟ್ಟಾರೆಯಾಗಿ, ಹಣ ನಿರ್ವಹಣೆಗೆ ಸಮತೋಲಿತ ವಿಧಾನವು ಸ್ಥಿರವಾದ ಆರ್ಥಿಕ ಭವಿಷ್ಯವನ್ನು ಖಚಿತಪಡಿಸುತ್ತದೆ.

ಕಟಕ ರಾಶಿಯವರ ಆರೋಗ್ಯ ಜಾತಕ(Cancer Health Horoscope)

ನೀವು ಸ್ವಯಂ-ಆರೈಕೆ ಹಾಗೂ ಸಮತೋಲನಕ್ಕೆ ಒತ್ತು ನೀಡಬೇಕು. ಧ್ಯಾನ ಅಥವಾ ಯೋಗದಂತಹ ಒತ್ತಡ ನಿರ್ವಹಣೆ ತಂತ್ರಗಳು ನಿಮಗೆ ಹೆಚ್ಚು ಪ್ರಯೋಜನ ನೀಡಬಹುದು. ನಿಮ್ಮ ಆಹಾರಕ್ರಮದ ಮೇಲೆ ಗಮನ ಹರಿಸಿ. ಪೌಷ್ಟಿಕ ಆಹಾರ ಸೇವನೆಯು ನಿಮ್ಮಲ್ಲಿ ಶಕ್ತಿಯ ಮಟ್ಟ ಹೆಚ್ಚಲು ಕಾರಣವಾಗಬಹುದು. ನಿಮ್ಮ ಮನಸ್ಸು ಹಾಗೂ ದೇಹವನ್ನು ರಿಲ್ಯಾಕ್ಸ್‌ ಮಾಡಲು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಹೈಡ್ರೇಟ್‌ ಆಗಿರುವುದು ಬಹಳ ಮುಖ್ಯ, ಹಾಗಾಗಿ ಸಾಕಷ್ಟು ನೀರು ಕುಡಿಯಿರಿ. ಹವಾಮಾನಕ್ಕೆ ಸಂಬಂಧಿಸಿದ ರೋಗಗಳು ಕಾಡಬಹುದು. ಎಚ್ಚರದಿಂದಿರಿ. ಆರೋಗ್ಯದ ಕಡೆಗೆ ಗಮನ ಹರಿಸುವುದರಿಂದ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮ ವೃದ್ಧಿಸಿಕೊಳ್ಳಲು ಸಾಧ್ಯ.

ಕಟಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಕಟಕ ರಾಶಿಯ ಅಧಿಪತಿ: ಚಂದ್ರ, ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.

ಕಟಕ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ದಕ್ಷಿಣಾಮೂರ್ತಿ ಸ್ತೋತ್ರ: ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.

2) ಈ ದಾನಗಳಿಂದ ಶುಭ ಫಲ: ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.