ಕನ್ನಡ ಸುದ್ದಿ  /  Astrology  /  Financial Benefits When The Planet Is In The Sign Of Its Best Friend Then You Get Financial Benefits Get Money

Financial benefits: ಗ್ರಹಗತಿ ಮತ್ತು ನಮ್ಮ ಹಣಕಾಸಿನ ಪರಿಸ್ಥಿತಿ; ಆರ್ಥಿಕ ಲಾಭ ಆಗುವುದು ಯಾವಾಗ?

Financial benefits: ಫಲಿತ ಜ್ಯೋತಿಷ್ಯದ ಪ್ರಕಾರ, ಗ್ರಹಗತಿ ಮತ್ತು ಹಣಕಾಸಿನ ಪರಿಸ್ಥಿತಿ ಎರಡಕ್ಕೂ ಅವಿನಾಭಾವ ಸಂಬಂಧ. ಒಂದು ಗ್ರಹವು ತನ್ನ ಆತ್ಮೀಯ ಸ್ನೇಹಿತನೆನಿಸಿಕೊಂಡ ರಾಶಿಯಲ್ಲಿದ್ದಾಗ, ಆ ರಾಶಿಯವರಿಗೆ ಹೆಚ್ಚಿನ ಆರ್ಥಿಕ ಲಾಭ, ಸಂಪತ್ತು ವೃದ್ಧಿ ಉಂಟಾಗುತ್ತದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (Live hindustan )

ಬದುಕಿನಲ್ಲಿ ಯಾವುದೇ ಸಂಕಷ್ಟಗಳು, ವಿಶೇಷವಾಗಿ ಆರ್ಥಿಕ ಸಂಕಷ್ಟ ಎದುರಾದಾಗ ಹಲವರು ಜ್ಯೋತಿಷ್ಯರ ಬಳಿಗೆ ಹೋಗುವುದುಂಟು. ಜಾತಕ ಫಲ ಕೇಳಿ, ಪರಿಹಾರ ಕ್ರಮಗಳನ್ನು ಜರುಗಿಸುವುದುಂಟು. ಹಾಗಾದರೆ, ಗ್ರಹಗತಿಗೂ ಹಣಕಾಸಿನ ಪರಿಸ್ಥಿತಿಗೂ ಸಂಬಂಧ ಇದೆಯಾ?

ಫಲಿತ ಜ್ಯೋತಿಷ್ಯದ ಪ್ರಕಾರ, ಗ್ರಹಗತಿ ಮತ್ತು ಹಣಕಾಸಿನ ಪರಿಸ್ಥಿತಿ ಎರಡಕ್ಕೂ ಅವಿನಾಭಾವ ಸಂಬಂಧ. ಒಂದು ಗ್ರಹವು ತನ್ನ ಆತ್ಮೀಯ ಸ್ನೇಹಿತನೆನಿಸಿಕೊಂಡ ರಾಶಿಯಲ್ಲಿದ್ದಾಗ, ಆ ರಾಶಿಯವರಿಗೆ ಹೆಚ್ಚಿನ ಆರ್ಥಿಕ ಲಾಭ, ಸಂಪತ್ತು ವೃದ್ಧಿ ಉಂಟಾಗುತ್ತದೆ.

ಫಲಿತ ಜ್ಯೋತಿಷ್ಯದ ಪ್ರಕಾರ ಗ್ರಹಗತಿಗಳು ಹಲವು. ಈ ಗ್ರಹಗತಿಗಳ ಆಧಾರದ ಮೇಲೆ ಎಲ್ಲ ಫಲಗಳೂ ಲಭ್ಯವಾಗುತ್ತ ಸಾಗುತ್ತವೆ. ಜಾತಕದಲ್ಲಿನ ಗ್ರಹಗಳು ಶುಭ ಮತ್ತು ಅಶುಭ ಪರಿಣಾಮಗಳನ್ನು ಹೊಂದಿವೆ. ಗ್ರಹಗಳ ಯಾವ ಚಲನೆಯಿಂದ ಏನು ಫಲ ಎಂಬಿತ್ಯಾದಿಗಳು ನಿರ್ಣಯಿಸಲ್ಪಡುತ್ತವೆ. ಗ್ರಹಗತಿಯ ಅವಧಿಯನ್ನು ಪರಿಗಣಿಸಿ ʻಬದುಕಿನ ದೆಸೆʼ ಎಂದು ಆಡು ಮಾತಿನಲ್ಲಿ ಹೇಳುವುದುಂಟು.

ಗ್ರಹಗಳು ತಮ್ಮ ಉತ್ಕೃಷ್ಟ ರಾಶಿಗಳಲ್ಲಿದ್ದಾಗ ಅಂದರೆ ತಮಗೆ ಆಪ್ತವೆನಿಸುವ ರಾಶಿಗಳಲ್ಲಿ ಇದ್ದಾಗ ಪ್ರಕಾಶಮಾನವಾಗಿರುತ್ತದೆ. ಈ ಗ್ರಹವು ತನ್ನ ಈ ದೆಸೆಯಲ್ಲಿ ಸಂಪತ್ತು ಮತ್ತು ಖ್ಯಾತಿಯನ್ನು ನೀಡುತ್ತದೆ. ಗ್ರಹವು ತನ್ನದೇ ಆದ ಹಕ್ಕಿನ ರಾಶಿಯಲ್ಲಿರುವಾಗ ಆರೋಗ್ಯಕರ ಅಥವಾ ಮೂಲ ತ್ರಿಕೋನ ರಾಶಿಚಕ್ರದಲ್ಲಿದ್ದರೆ ಆಗ ಆ ಅವಧಿಯು ಆ ಜಾತಕದವರಿಗೆ ಖ್ಯಾತಿಯನ್ನು ನೀಡುತ್ತದೆ. ಪ್ರತಿ ಕ್ಷೇತ್ರದಲ್ಲಿ ಯಶಸ್ಸು ಮತ್ತು ಶತ್ರುಗಳ ಮೇಲೆ ಜಯವನ್ನು ನೀಡುತ್ತದೆ.

ಗ್ರಹವು ಅದರ ಆತ್ಮೀಯ ಸ್ನೇಹಿತನೆನಿಸಿಕೊಂಡ ರಾಶಿಯಲ್ಲಿದ್ದಾಗ ವ್ಯಕ್ತಿಯು ಆರ್ಥಿಕ ಲಾಭ, ಹಣ, ನಾಗರಿಕ ನಡವಳಿಕೆ, ಹಿಂದೆ ಮಾಡಿದ ಸತ್ಕಾರ್ಯಗಳ ಫಲವನ್ನು ಪಡೆಯುತ್ತಾನೆ. ಒಬ್ಬರಿಗೆ ಗೌರವ ಮತ್ತು ಮಾನಸಿಕ ತೃಪ್ತಿ ಸಿಗುತ್ತದೆ.

ಜಾತಕದಲ್ಲಿ ಗ್ರಹವು ಶುಭ ಗ್ರಹದ ಚಿಹ್ನೆಯಲ್ಲಿ ಮತ್ತು ‌ವರ್ಗಗಳಲ್ಲಿ (ಸಪ್ತಮಾಂಶ, ನವಾಂಶ, ದಶಮಾಂಶ ಇತ್ಯಾದಿ) ತನ್ನ ಸ್ನೇಹಿತನೆನಿಸಿಕೊಂಡ ರಾಶಿಯಲ್ಲಿದ್ದಾಗ ವ್ಯಕ್ತಿ ಶಾಂತಚಿತ್ತದಿಂದ ಇರುತ್ತಾನೆ. ಇಂತಹ ವ್ಯಕ್ತಿ ಸಲಹೆಗಾರ, ಬರವಣಿಗೆ ಕೆಲಸ, ಹೆಚ್ಚಿನದನ್ನು ಪಡೆಯುವ ಬಯಕೆ ಇರುತ್ತದೆ. ಮನೆ ಮತ್ತು ಆಸ್ತಿ ಸಂಬಂಧಿತ ಖರೀದಿಗಳು ನಡೆಯುತ್ತವೆ.

ಗ್ರಹವು ಏರುತ್ತಿರುವ ಸ್ಥಿತಿಯಲ್ಲಿದ್ದಾಗ ಅಂದರೆ ಗ್ರಹವು ಅಸ್ತಮಿಸುವ ಮೊದಲು ಮುಂಗೋಪ ಉಂಟಾಗಬಹುದು. ಕಾರ್ಯ ಪ್ರಗತಿ, ಖ್ಯಾತಿ ಲಭ್ಯವಾಗುತ್ತದೆ. ಇದಕ್ಕೆ ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಕೆಲವೊಮ್ಮೆ ಅನಿರೀಕ್ಷಿತ ಫಲಿತಾಂಶ ಉಂಟಾಗಬಹುದು. ಆದರೆ ಹೆಚ್ಚಾಗಿ ಕೆಟ್ಟ ಫಲಿತಾಂಶಗಳು ಕಂಡುಬರುವುದಿಲ್ಲ.

ಗ್ರಹವು ಪೀಡಿತ ಸ್ಥಿತಿಯಲ್ಲಿದ್ದರೆ ಸೂರ್ಯನ ಹತ್ತಿರ ಬಂದ ನಂತರ ಅಸ್ತಮಿಸಬೇಕು. ವಿಷಮ ರಾಶಿಯಲ್ಲಿರುವ ಗ್ರಹದ ಸ್ಥಿತಿಯು ಅದರ ಪೀಡಿತ ಸ್ಥಿತಿಯಾಗಿದೆ. ಪೀಡಿತ ಗ್ರಹವು ಕೆಲಸದಲ್ಲಿ ವೈಫಲ್ಯವನ್ನು ನೀಡುತ್ತದೆ.

ದೀನ ಕುಂಡಲಿಯಲ್ಲಿ ಗ್ರಹಗಳು ದುರ್ಬಲಗೊಂಡ ರಾಶಿಗಳಲ್ಲಿರುತ್ತವೆ. ಅಂತಹ ದುರ್ಬಲ ಗ್ರಹದ ದೆಸೆಯಲ್ಲಿ, ಒಬ್ಬ ವ್ಯಕ್ತಿಯು ಹೋರಾಟ ನಡೆಸುವುದು ಸಾಧ್ಯವಾಗುವುದಿಲ್ಲ.

ಯಾವುದೇ ಮನೆಯಲ್ಲಿ ಅಥವಾ ಜಾತಕದ ಚಿಹ್ನೆಯಲ್ಲಿ ಗ್ರಹವು ದುಷ್ಟ (ಅಶುಭ) ಗ್ರಹಗಳೊಂದಿಗೆ ಇರುವಾಗ ವಿಕಲತೆಯನ್ನು ಹೊಂದಿರುತ್ತದೆ. ಅಂತಹ ಗ್ರಹವು ಅದರೊಂದಿಗೆ ಕುಳಿತಿರುವ ಗ್ರಹಗಳ ಮೇಲೂ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಕೆಟ್ಟ ಫಲ ನೀಡುತ್ತದೆ. ಮಾನಸಿಕ ಕಿರುಕುಳ, ಜೀವನ ಸಂಗಾತಿ ಮತ್ತು ಮಕ್ಕಳಿಂದ ತೊಂದರೆ ಮತ್ತು ಕಳ್ಳರಿಂದ ನಷ್ಟ ಸಾಧ್ಯತೆಯನ್ನೂ ನಿರೀಕ್ಷಿಸಬಹುದು.

ಯಾವುದೇ ರಾಶಿಯಲ್ಲಿ ಎರಡು ಗ್ರಹಗಳು ಅಥವಾ ಎರಡಕ್ಕಿಂತ ಹೆಚ್ಚು ಗ್ರಹಗಳು ಪರಸ್ಪರ ಡಿಗ್ರಿ ವ್ಯತ್ಯಾಸದಲ್ಲಿದ್ದಾಗ, ಬದುಕಿನಲ್ಲಿ ಸಂಘರ್ಷಮಯ ಸನ್ನಿವೇಶ ಉಂಟಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಪರಾಭವ ಹೆಚ್ಚು. ಸ್ವಜನರಿಂದಲೇ ಕಿರುಕುಳ, ಸಂಪತ್ತು ಮತ್ತು ಆಸ್ತಿ ಹಾನಿಯ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ.

ದುಷ್ಟ ಗ್ರಹವು ಶತ್ರುವಿನ ಪ್ರದೇಶದಲ್ಲಿರಬಹುದು ಅಥವಾ ಶತ್ರು ರಾಶಿಯಲ್ಲಿ ಕುಳಿತಿರಬಹುದು. ಆಗಲೂ ಅಂತಹ ಗ್ರಹಗಳು ಗೊಂದಲದ ಫಲಿತಾಂಶಗಳನ್ನು ನೀಡುತ್ತವೆ. (ಮೂಲ- ಲೈವ್‌ಹಿಂದುಸ್ತಾನ್‌)

ವಿಭಾಗ