ಮಿಥುನ ರಾಶಿ ಭವಿಷ್ಯ ಜುಲೈ 11; ಪ್ರೀತಿಯ ಅರುಣೋದಯ, ಜೀವನೋತ್ಸಾಹ ತುಂಬಬಲ್ಲವರು ಸಿಕ್ಕಾರು, ಸಂಪತ್ತು ಜೋಪಾನ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನ ರಾಶಿ ಭವಿಷ್ಯ ಜುಲೈ 11; ಪ್ರೀತಿಯ ಅರುಣೋದಯ, ಜೀವನೋತ್ಸಾಹ ತುಂಬಬಲ್ಲವರು ಸಿಕ್ಕಾರು, ಸಂಪತ್ತು ಜೋಪಾನ

ಮಿಥುನ ರಾಶಿ ಭವಿಷ್ಯ ಜುಲೈ 11; ಪ್ರೀತಿಯ ಅರುಣೋದಯ, ಜೀವನೋತ್ಸಾಹ ತುಂಬಬಲ್ಲವರು ಸಿಕ್ಕಾರು, ಸಂಪತ್ತು ಜೋಪಾನ

Gemini Daily Horoscope July 11, 2024: ರಾಶಿಚಕ್ರಗಳ ಪೈಕಿ ಮೂರನೇಯದು ಮಿಥುನ ರಾಶಿಚಕ್ರ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ಮಿಥುನ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯನ್ನು ಮಿಥುನ ರಾಶಿಯವರು ಎಂದು ಪರಿಗಣಿಸಲಾಗುತ್ತದೆ. ಜುಲೈ 11ರ ಮಿಥುನ ರಾಶಿ ಭವಿಷ್ಯದ ಪ್ರಕಾರ, ಪ್ರೀತಿಯ ಅರುಣೋದಯವಾಗಲಿದೆ. ಜೀವನೋತ್ಸಾಹ ತುಂಬಬಲ್ಲವರು ಸಿಕ್ಕಾರು.

ಮಿಥುನ ರಾಶಿ ಭವಿಷ್ಯ ಜುಲೈ 11; ಪ್ರೀತಿಯ ಅರುಣೋದಯ, ಜೀವನೋತ್ಸಾಹ ತುಂಬಬಲ್ಲವರು ಸಿಕ್ಕಾರು, ಸಂಪತ್ತು ಜೋಪಾನ
ಮಿಥುನ ರಾಶಿ ಭವಿಷ್ಯ ಜುಲೈ 11; ಪ್ರೀತಿಯ ಅರುಣೋದಯ, ಜೀವನೋತ್ಸಾಹ ತುಂಬಬಲ್ಲವರು ಸಿಕ್ಕಾರು, ಸಂಪತ್ತು ಜೋಪಾನ

ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಇಂದು (ಜುಲೈ 11) ಬೆಳವಣಿಗೆ ಮತ್ತು ಬದಲಾವಣೆಯ ಸಾಧ್ಯತೆಗಳು ಬಹಳ ಹೆಚ್ಚು ಕಾಣುತ್ತಿವೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಿ. ಮುಕ್ತ ಮನಸ್ಸಿನಿಂದ ಕೆಲಸ ಮಾಡಿ. ಪ್ರೀತಿ ಮತ್ತು ಆರೋಗ್ಯದ ವಿಚಾರದಲ್ಲೂ ಅದೃಷ್ಟವಂತರಾಗಿದ್ದು, ಪರಿವರ್ತಕ ಅನುಭವವನ್ನು ನಿರೀಕ್ಷಿಸಿ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮಿಥುನ ರಾಶಿಯವರ ಲವ್ ಲೈಫ್ (Gemini Love Horoscope): ಮಿಥುನ ರಾಶಿಯ ಜನರು ಪ್ರೀತಿಯ ವಿಷಯದಲ್ಲಿ ಹೊಸ ಆರಂಭವನ್ನು ಮಾಡಬಹುದು. ನೀವು ಒಂಟಿಯಾಗಿದ್ದರೆ, ನಿಮ್ಮ ಜೀವನದಲ್ಲಿ ಜೀವನೋತ್ಸಾಹ ಉಲ್ಲಾಸ ತುಂಬಬಲ್ಲವರು ಯಾರಾದರೂ ಬರುತ್ತಾರೆಯೇ ಎಂದು ಗಮನಿಸಿ. ಪ್ರೇಮ ಸಂಬಂಧದಲ್ಲಿರುವವರಿಗೆ, ಪ್ರೇಮ ಸಂಭಾಷಣೆಗಳು ಮತ್ತು ಪ್ರೀತಿಗೆ ಸಂಬಂಧಿಸಿದ ಚಟುವಟಿಕೆಗಳ ಮೂಲಕ ನಿಮ್ಮ ಒಡನಾಟವನ್ನು ಬಲಪಡಿಸಲು ಇಂದು ಸರಿಯಾದ ಸಮಯ. ನಿಮ್ಮೊಳಗೇ ಇರುವ ನೈಸರ್ಗಿಕ ಮೋಡಿ ಮಾಡುವ ಗುಣ ಹೊಳೆಯಲಿ. ಏಕೆಂದರೆ ಅವು ನಿಮ್ಮ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪ್ರಣಯ ಮತ್ತು ಭಾವನಾತ್ಮಕ ಬೆಳವಣಿಗೆಗೆ ದಿನದಲ್ಲಿ ಎದುರಾಗುವ ಅವಕಾಶಗಳ ಪ್ರಯೋಜನವನ್ನು ಪಡೆದುಕೊಳ್ಳಿ. ನಿಮ್ಮ ನೈಜ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ.

ಮಿಥುನ ರಾಶಿ ದಿನ ಭವಿಷ್ಯ ಜುಲೈ 11; ಉದ್ಯೋಗ, ಆದಾಯ, ಆರೋಗ್ಯ

ಮಿಥುನ ರಾಶಿಯವರ ವೃತ್ತಿ ಜಾತಕ (Gemini Professional Horoscope): ಇಂದು ನಿಮ್ಮ ವೃತ್ತಿಯು ಭರವಸೆಯ ಅವಕಾಶಗಳೊಂದಿಗೆ ಕೇಂದ್ರದಲ್ಲಿದೆ. ವೃತ್ತಿಕ್ಷೇತ್ರದಲ್ಲಿ ಸಕ್ರಿಯವಾಗಿರಲು ಮತ್ತು ನಿಮ್ಮ ಕೌಶಲ ಮತ್ತು ಆಲೋಚನೆಗಳನ್ನು ಸಾಬೀತುಪಡಿಸುವ ದಿನ. ಸಹೋದ್ಯೋಗಿಗಳು ಮತ್ತು ಹಿರಿಯರು ಇಂದು ನಿಮ್ಮ ಹೊಸ ಚಿಂತನೆಯತ್ತ ಗಮನ ಹರಿಸುವ ಸಾಧ್ಯತೆಯಿದೆ. ನೆಟ್‌ವರ್ಕಿಂಗ್ ಮತ್ತು ಟೀಮ್‌ವರ್ಕ್ ಹೊಸ ಯೋಜನೆಗಳ ಅವಕಾಶಗಳು ತೆರೆದುಕೊಳ್ಳಬಹುದು. ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದಿರಿ. ಏಕೆಂದರೆ ನಿಮ್ಮ ಶ್ರಮ ಇಂದು ಫಲ ನೀಡುತ್ತದೆ. ನಿಮ್ಮ ವೃತ್ತಿ ಗುರಿಗಳ ಕಡೆಗೆ ನಿಮ್ಮನ್ನು ಮುಂದೂಡಲು ಮತ್ತು ಭವಿಷ್ಯದ ಯಶಸ್ಸಿಗೆ ವೇದಿಕೆಯನ್ನು ಹೊಂದಿಸಲು ಈ ದಿನದ ಅವಕಾಶಗಳನ್ನು ಶಕ್ತಿಯನ್ನಾಗಿ ಬಳಸಿಕೊಳ್ಳಿ.

ಮಿಥುನ ರಾಶಿ ಆರ್ಥಿಕ ಜಾತಕ (Gemini Money Horoscope): ಹಣದ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕಾದ ದಿನ. ಲಾಭ ಗಳಿಸಲು ಅನೇಕ ಅವಕಾಶಗಳಿರಬಹುದು. ಆದರೆ ಸರಿಯಾದ ಯೋಜನೆಯೊಂದಿಗೆ ಅವುಗಳನ್ನು ಸಾಧಿಸುವುದು ಅವಶ್ಯಕ. ಖರ್ಚು ಮಾಡುವುದನ್ನು ತಪ್ಪಿಸಿ ಮತ್ತು ದೀರ್ಘಾವಧಿಯ ಬೆಳವಣಿಗೆಯಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಿ. ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಲಹೆಗಾರರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಸಂದರ್ಭಗಳನ್ನು ನಿಭಾಯಿಸುವ ನಿಮ್ಮ ಸ್ವಾಭಾವಿಕ ಸಾಮರ್ಥ್ಯವು ಸರಿಯಾದ ಆಯ್ಕೆಗಳನ್ನು ಮಾಡುವಲ್ಲಿ ನಿಮಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಹಣಕಾಸಿನ ವ್ಯವಹಾರಗಳಲ್ಲಿ ಸಮತೋಲನದಿಂದಿರಿ. ವಿತ್ತೀಯ ವಿಷಯಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಿ.

ಮಿಥುನ ರಾಶಿ ಆರೋಗ್ಯ ಜಾತಕ (Gemini Health Horoscope): ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾದ ದಿನವಿದು. ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ನಿಮ್ಮನ್ನು ಪ್ರೇರೇಪಿಸುವ ಸನ್ನಿವೇಶಗಳು ಎದುರಾಗಬಹುದು. ಹೊಸ ಫಿಟ್‌ನೆಸ್ ದಿನಚರಿ ಅಥವಾ ಆಹಾರ ಕ್ರಮ ಶುರುಮಾಡುವ ಸಮಯ. ಶರೀರದ ಸಂಕೇತಗಳನ್ನು ಗಮನಿಸಿ, ನಿಮ್ಮ ಮನಸ್ಸು ಮತ್ತು ಆತ್ಮವನ್ನು ಉಲ್ಲಾಸಗೊಳಿಸುವುದಕ್ಕೆ ಅಗತ್ಯ ಚಟುವಟಿಕೆ ಮಾಡಿ, ಅದಕ್ಕೆ ಆದ್ಯತೆ ಕೊಡಿ. ಒತ್ತಡ ಕಡಿಮೆ ಮಾಡಿಕೊಳ್ಳಿ. ಅದನ್ನು ನಿರ್ವಹಿಸುವುದಕ್ಕೆ ಆರೋಗ್ಯಕರ ಮಾರ್ಗಗಳನ್ನು ಪರಿಹಾರಕ್ರಮಗಳನ್ನು ಕಂಡುಕೊಳ್ಳಿ. ಧ್ಯಾನ, ಯೋಗ ಅಥವಾ ವಾಕಿಂಗ್ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ನಿಮ್ಮ ಆರೋಗ್ಯವನ್ನು ಸುಧಾರಿಸಲು ದಿನದ ಧನಾತ್ಮಕ ಶಕ್ತಿಯನ್ನು ಅಳವಡಿಸಿಕೊಳ್ಳಿ.

ಮಿಥುನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮಿಥುನ ರಾಶಿಯ ಅಧಿಪತಿ: ಬುಧ, ಮಿಥುನ ರಾಶಿಯವರಿಗೆ ಶುಭ ದಿನಾಂಕಗಳು: 1, 4, 12, 20, 29, 30. ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ. ಮಿಥುನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಮಿಥುನ ರಾಶಿಯವರಿಗೆ ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು, ಮಿಥುನ ರಾಶಿಯವರಿಗೆ ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಮಿಥುನ ರಾಶಿಯವರಿಗೆ ಶುಭ ತಿಂಗಳು: ಜುಲೈ 15ರಿಂದ ಆಗಸ್ಟ್ 15 ಮತ್ತು ಮಾರ್ಚ್ 15ರಿಂದ ಮೇ 14. ಮಿಥುನ ರಾಶಿಯವರಿಗೆ ಶುಭ ಹರಳು: ಪಚ್ಚೆ ಹಸಿರು, ಝೆರ್ಕೋನ್ ಮತ್ತು ನೀಲಮಣಿ. ಮಿಥುನ ರಾಶಿಯವರಿಗೆ ಶುಭ ರಾಶಿ: ತುಲಾ ಮತ್ತು ಕುಂಭ. ಮಿಥುನ ರಾಶಿಯವರಿಗೆ ಅಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೇಷ.

ಮಿಥುನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ವಿಷ್ಣುಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

2) ಈ ದಾನಗಳಿಂದ ಶುಭ ಫಲ: ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಮತ್ತು ಕಡಲೆಬೇಳೆಯನ್ನು ದಾನ ನೀಡುವುದರಿಂದ ಖರ್ಚು ಕಡಿಮೆ ಆಗಲಿವೆ.

3) ದೇವಾಲಯ ಮತ್ತು ದೇವರ ಪೂಜೆ: ದುರ್ಗಾ ದೇವಾಲಯಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿ ಹೊಸ ಕೆಲಸ ಆರಂಭಿಸಿರಿ. ಹೀಗೆ ಮಾಡುವ ಮೂಲಕ ಶುಭ ಫಲ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಲಕ್ಷ್ಮೀದೇವಿ ಅಥವಾ ಅನ್ನಪೂರ್ಣೇಶ್ವರಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಪ್ರತಿದಿನ ಮನೆಯಲ್ಲಿರುವ ಚಿಕ್ಕ ಹೆಣ್ಣುಮಕ್ಕಳಿಗೆ ಕುಡಿಯಲು ಹಾಲನ್ನುನೀಡಿ ದಿನದ ಕೆಲಸ ಆರಂಭಿಸಿರಿ. ಒಣಗಿದ ಹೂ ಬಿಡುವ ಗಿಡಗಳನ್ನು ವಿಲೇವಾರಿ ಮಾಡಿ. ಹಳದಿ ಹೂ ಬಿಡುವ ಗಿಡಗಳಿಗೆ ನೀರು ಎರೆದರೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಹೂ ಗಳನ್ನು ಕಸದಲ್ಲಿ ಎಸೆಯದಿರಿ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು, ನೀಲಿ ಅಥವಾ ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.