ಮಿಥುನ ರಾಶಿ ಭವಿಷ್ಯ ಜುಲೈ 13; ವಿವಾಹಿತರು ಹಳೆ ಪ್ರೇಮಪಾಶಕ್ಕೆ ಮತ್ತೆ ಬೀಳದಿರಿ, ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್‌ ಇಂದು ಬೇಡ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನ ರಾಶಿ ಭವಿಷ್ಯ ಜುಲೈ 13; ವಿವಾಹಿತರು ಹಳೆ ಪ್ರೇಮಪಾಶಕ್ಕೆ ಮತ್ತೆ ಬೀಳದಿರಿ, ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್‌ ಇಂದು ಬೇಡ

ಮಿಥುನ ರಾಶಿ ಭವಿಷ್ಯ ಜುಲೈ 13; ವಿವಾಹಿತರು ಹಳೆ ಪ್ರೇಮಪಾಶಕ್ಕೆ ಮತ್ತೆ ಬೀಳದಿರಿ, ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್‌ ಇಂದು ಬೇಡ

Gemini Daily Horoscope July 13, 2024: ರಾಶಿಚಕ್ರಗಳ ಪೈಕಿ ಮೂರನೇಯದು ಮಿಥುನ ರಾಶಿಚಕ್ರ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ಮಿಥುನ ರಾಶಿಯಲ್ಲಿ ಸಾಗುತ್ತಿರುವ ಜನರು ಮಿಥುನ ರಾಶಿಯವರು. ಜುಲೈ 13 ರ ಮಿಥುನ ರಾಶಿ ಭವಿಷ್ಯದ ಪ್ರಕಾರ, ಈ ದಿನ ವಿವಾಹಿತರು ಹಳೆ ಪ್ರೇಮಪಾಶಕ್ಕೆ ಮತ್ತೆ ಬೀಳದಿರಿ. ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್‌ ಇಂದು ಬೇಡ. ಅಪಾಯ ಉಂಟಾಗಬಹುದು.

ಮಿಥುನ ರಾಶಿ ಭವಿಷ್ಯ ಜುಲೈ 13; ವಿವಾಹಿತರು ಹಳೆ ಪ್ರೇಮಪಾಶಕ್ಕೆ ಮತ್ತೆ ಬೀಳದಿರಿ, ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್‌ ಇಂದು ಬೇಡ
ಮಿಥುನ ರಾಶಿ ಭವಿಷ್ಯ ಜುಲೈ 13; ವಿವಾಹಿತರು ಹಳೆ ಪ್ರೇಮಪಾಶಕ್ಕೆ ಮತ್ತೆ ಬೀಳದಿರಿ, ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್‌ ಇಂದು ಬೇಡ

ಮಿಥುನ ರಾಶಿಯವರು ಇಂದು (ಜುಲೈ 13) ತಮ್ಮ ಸಂಬಂಧಗಳ ನಿರ್ವಹಣೆಯ ವಿಚಾರದಲ್ಲಿ ತಾಳ್ಮೆಯಿಂದಿರಬೇಕು. ಇಂದು ನೀವು ನಿಮ್ಮ ವೃತ್ತಿಯಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯವು ಉತ್ತಮವಾಗಿರುತ್ತದೆ. ಅದೇ ರೀತಿ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ಶುಭ ಫಲವಿದ್ದರೂ ಕೆಲವೆಡೆ ವಿವೇಚನೆ ಮತ್ತು ವಿವೇಕದ ನಡೆಗಳು ಅಗತ್ಯ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮಿಥುನ ರಾಶಿಯವರ ಲವ್ ಲೈಫ್ (Gemini Love Horoscope): ಈ ದಿನ ಮಿಥುನ ರಾಶಿಯವರಾದ ನಿಮ್ಮ ಪ್ರಣಯ ಜೀವನ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಪ್ರೀತಿಯ ಜೀವನದಲ್ಲಿ ಸಣ್ಣ ಸಂತೋಷವನ್ನು ಅನುಭವಿಸಿ. ಹಳೆಯ ನೋವು ಉಂಟು ಮಾಡುವ ವಿಷಯಗಳನ್ನು ಹೆಚ್ಚು ಚರ್ಚಿಸಬೇಡಿ. ಕೆಲವರ ಪ್ರೇಮ ಸಂಬಂಧಕ್ಕೆ ಅವರ ಪಾಲಕರ ಒಪ್ಪಿಗೆ ಸಿಗಬಹುದು. ಕೆಲವರು ತಮ್ಮ ಮಾಜಿ ಪ್ರೇಮಿಯನ್ನು ಭೇಟಿಯಾಗಬಹುದು. ಸಂಬಂಧವನ್ನು ಹೊಸದಾಗಿ ಪ್ರಾರಂಭಿಸಲು ಸಹ ಈ ಸಂದರ್ಭದಲ್ಲಿ ನೀವು ಪರಿಗಣಿಸಬಹುದು. ಆದರೆ ವಿವಾಹಿತರು ಇದನ್ನು ಮಾಡಬಾರದು. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಿಥುನ ರಾಶಿ ದಿನ ಭವಿಷ್ಯ ಜುಲೈ 13; ಉದ್ಯೋಗ, ಆದಾಯ, ಆರೋಗ್ಯ

ಮಿಥುನ ರಾಶಿಯವರ ವೃತ್ತಿ ಜಾತಕ (Gemini Professional Horoscope): ವೃತ್ತಿ ಜೀವನದಲ್ಲಿ ನೀವು ಹೊಸ ಕೆಲಸದ ಜವಾಬ್ದಾರಿಯನ್ನು ಪಡೆಯಬಹುದು. ಐಟಿ ವೃತ್ತಿಪರರು ಮತ್ತು ಬರವಣಿಗೆ ಕ್ಷೇತ್ರದಲ್ಲಿರುವವರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸಬೇಕು. ಗ್ರಾಹಕರು ಕೆಲವು ಕಾರ್ಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಕೋರಬಹುದು. ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಕ್ಲೈಂಟ್‌ನಿಂದ ನಿಮ್ಮ ಕೆಲಸದ ಫೀಡ್‌ಬ್ಯಾಕ್ ಅಥವಾ ಹಿಮ್ಮಾಹಿತಿ ತೆಗೆದುಕೊಳ್ಳಲು ಮರೆಯದಿರಿ. ಕಚೇರಿ ರಾಜಕೀಯದಿಂದ ದೂರವಿರಿ. ಇದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಹಿರಿಯರೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ಇಂದು ಉದ್ಯಮಿಗಳು ಹೊಸ ಸ್ಥಳದಲ್ಲಿ ವ್ಯಾಪಾರ ಪ್ರಾರಂಭಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ.

ಮಿಥುನ ರಾಶಿ ಆರ್ಥಿಕ ಜಾತಕ (Gemini Money Horoscope): ಇಂದು ಹಣಕಾಸಿನ ವಿಷಯಗಳಲ್ಲಿ ನೀವು ಅದೃಷ್ಟಶಾಲಿಗಳಾಗುವಿರಿ. ಹಣದ ಒಳಹರಿವು ಹೆಚ್ಚಾಗುತ್ತದೆ. ಆದರೆ, ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ. ಕೆಲವರಿಗೆ ಷೇರು ಮಾರುಕಟ್ಟೆ, ವ್ಯಾಪಾರ ಅಥವಾ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವ ಬಯಕೆ ಹೆಚ್ಚಾಗುತ್ತದೆ. ಕೆಲವರು ತಮ್ಮ ಸಹೋದರ, ಸಹೋದರಿಯರು ಅಥವಾ ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ಸ್ತ್ರೀಯರ ಆದಾಯವೂ ಹೆಚ್ಚಾಗಬಹುದು.

ಮಿಥುನ ರಾಶಿ ಆರೋಗ್ಯ ಜಾತಕ (Gemini Health Horoscope): ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಹಿರಿಯರು ಕೀಲು ನೋವಿನಿಂದ ಬಳಲಬಹುದು. ಮಹಿಳೆಯರಿಗೆ ಮೈಗ್ರೇನ್ ಅಥವಾ ಸ್ಕಿನ್‌ ಅಲರ್ಜಿಯ ಸಮಸ್ಯೆಗಳಿರಬಹುದು. ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸಿ. ಮೌಂಟೇನ್ ಬೈಕಿಂಗ್ ಅಥವಾ ಟ್ರೆಕ್ಕಿಂಗ್‌ನಂತಹ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಡಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಅಧಿಕ ರಕ್ತದೊತ್ತಡ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಮಿಥುನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮಿಥುನ ರಾಶಿಯ ಅಧಿಪತಿ: ಬುಧ, ಮಿಥುನ ರಾಶಿಯವರಿಗೆ ಶುಭ ದಿನಾಂಕಗಳು: 1, 4, 12, 20, 29, 30. ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ. ಮಿಥುನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಮಿಥುನ ರಾಶಿಯವರಿಗೆ ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು, ಮಿಥುನ ರಾಶಿಯವರಿಗೆ ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಮಿಥುನ ರಾಶಿಯವರಿಗೆ ಶುಭ ತಿಂಗಳು: ಜುಲೈ 15ರಿಂದ ಆಗಸ್ಟ್ 15 ಮತ್ತು ಮಾರ್ಚ್ 15ರಿಂದ ಮೇ 14. ಮಿಥುನ ರಾಶಿಯವರಿಗೆ ಶುಭ ಹರಳು: ಪಚ್ಚೆ ಹಸಿರು, ಝೆರ್ಕೋನ್ ಮತ್ತು ನೀಲಮಣಿ. ಮಿಥುನ ರಾಶಿಯವರಿಗೆ ಶುಭ ರಾಶಿ: ತುಲಾ ಮತ್ತು ಕುಂಭ. ಮಿಥುನ ರಾಶಿಯವರಿಗೆ ಅಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೇಷ.

ಮಿಥುನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ವಿಷ್ಣುಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

2) ಈ ದಾನಗಳಿಂದ ಶುಭ ಫಲ: ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಮತ್ತು ಕಡಲೆಬೇಳೆಯನ್ನು ದಾನ ನೀಡುವುದರಿಂದ ಖರ್ಚು ಕಡಿಮೆ ಆಗಲಿವೆ.

3) ದೇವಾಲಯ ಮತ್ತು ದೇವರ ಪೂಜೆ: ದುರ್ಗಾ ದೇವಾಲಯಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿ ಹೊಸ ಕೆಲಸ ಆರಂಭಿಸಿರಿ. ಹೀಗೆ ಮಾಡುವ ಮೂಲಕ ಶುಭ ಫಲ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಲಕ್ಷ್ಮೀದೇವಿ ಅಥವಾ ಅನ್ನಪೂರ್ಣೇಶ್ವರಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಪ್ರತಿದಿನ ಮನೆಯಲ್ಲಿರುವ ಚಿಕ್ಕ ಹೆಣ್ಣುಮಕ್ಕಳಿಗೆ ಕುಡಿಯಲು ಹಾಲನ್ನುನೀಡಿ ದಿನದ ಕೆಲಸ ಆರಂಭಿಸಿರಿ. ಒಣಗಿದ ಹೂ ಬಿಡುವ ಗಿಡಗಳನ್ನು ವಿಲೇವಾರಿ ಮಾಡಿ. ಹಳದಿ ಹೂ ಬಿಡುವ ಗಿಡಗಳಿಗೆ ನೀರು ಎರೆದರೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಹೂ ಗಳನ್ನು ಕಸದಲ್ಲಿ ಎಸೆಯದಿರಿ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು, ನೀಲಿ ಅಥವಾ ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.