2025 ಹನುಮಂತನ ವರ್ಷ: ಅದೃಷ್ಟ ಸಂಖ್ಯೆ 9 ಹೊಂದಿರುವವರರು ತುಂಬಾ ಶಕ್ತಿವಂತರು; ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025 ಹನುಮಂತನ ವರ್ಷ: ಅದೃಷ್ಟ ಸಂಖ್ಯೆ 9 ಹೊಂದಿರುವವರರು ತುಂಬಾ ಶಕ್ತಿವಂತರು; ರಂಗಸ್ವಾಮಿ ಮೂಕನಹಳ್ಳಿ ಬರಹ

2025 ಹನುಮಂತನ ವರ್ಷ: ಅದೃಷ್ಟ ಸಂಖ್ಯೆ 9 ಹೊಂದಿರುವವರರು ತುಂಬಾ ಶಕ್ತಿವಂತರು; ರಂಗಸ್ವಾಮಿ ಮೂಕನಹಳ್ಳಿ ಬರಹ

ವಾಯುಪುತ್ರ ಹನುಮಂತ ಮತ್ತು 2025ರ ಇಸವಿಗೆ ಅವಿನಾಭಾವ ಸಂಬಂಧವಿದೆ. 2025 ಅನ್ನು ಕೂಡಿದರೆ ಸಂಖ್ಯೆ 9 ಬರುತ್ತದೆ. ಇದು ಹನುಮಂತನ ಸಂಖ್ಯೆ. ಈ ಸಂಖ್ಯೆಯ ಜನರು ಕೂಡ ತುಂಬಾ ಶಕ್ತಿವಂತರು ಎಂದು ಆರ್ಥಿಕ ತಜ್ಞ, ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿಯವರು ಉದಾಹರಣೆ ಸಹಿತ ವಿವರಿಸಿದ್ದಾರೆ.

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್ ಸಂಖ್ಯೆ 9 ಹೊಂದಿರುವವರು ತುಂಬಾ ಶಕ್ತಿವಂತರು. ವಾಯುಪುತ್ರ ಭಗವಾನ್ ಹನುಮಂತನ ಸಂಖ್ಯೆಯೂ 9 ಆಗಿದೆ.
ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್ ಸಂಖ್ಯೆ 9 ಹೊಂದಿರುವವರು ತುಂಬಾ ಶಕ್ತಿವಂತರು. ವಾಯುಪುತ್ರ ಭಗವಾನ್ ಹನುಮಂತನ ಸಂಖ್ಯೆಯೂ 9 ಆಗಿದೆ.

ಆರ್ಥಿಕ ತಜ್ಞ, ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಇದು 2025ನೇ ಇಸವಿ. ಈ ಸಂಖ್ಯೆಗಳನ್ನು ಕೂಡಿದರೆ ಒಟ್ಟು 9 ಆಗುತ್ತದೆ. ಒಂಬತ್ತು ನ್ಯೂಮರಾಲಜಿ ಮತ್ತು ಹಿಂದೂ ನಂಬಿಕೆಗಳ ಪ್ರಕಾರ ಹನುಮನ ಸಂಖ್ಯೆ. ಹೀಗಾಗಿ ಈ ವರ್ಷವನ್ನು ಹನುಮನ ವರ್ಷ ಎಂದು ಕೂಡ ಕರೆಯಬಹುದು. ಒಂಬತ್ತು ಸಂಖ್ಯೆಯನ್ನು ಮಂಗಳ ಗ್ರಹಕ್ಕೂ ತಳುಕು ಹಾಕಲಾಗಿದೆ. ಮಂಗಳ ಪ್ಲಾನೆಟ್ ಆಫ್ ಎನರ್ಜಿ ಮತ್ತು ಆಕ್ಷನ್. ನೀವು ಒಂಬತ್ತು ಸಂಖ್ಯೆಯಲ್ಲಿ ಜನಿಸಿದ ಜನರನ್ನು ಅಂದರೆ 9,18,27 ದಿನಾಂಕದಂದು ಜನಿಸಿದವರನ್ನು ಗಮನಿಸಿ ನೋಡಿ , ಎನರ್ಜಿ ಮತ್ತು ಆಕ್ಷನ್ ಎಂದರೇನು ಎನ್ನುವುದರ ನಿಜವಾದ ಅರ್ಥ ತಿಳಿಯುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಕೊಡಬೇಕೆಂದರೆ ನಮ್ಮ ದೇವೇಗೌಡರನ್ನು ನೋಡಿ ! 91ರ ಹರಯದಲ್ಲೂ ಕೆಲವೇ ದಿನಗಳ ಹಿಂದೆ ಅವರು ರಾಜ್ಯಸಭೆಯಲ್ಲಿ ಮಾಡಿದ ಭಾಷಣ ಕೇಳಿನೋಡಿ !

ಎಲ್ಲಾ 9 ರ ಸಂಖ್ಯೆಯಲ್ಲಿ ಜನಿಸಿದವರೂ ಮತ್ತೇಕೆ ಪ್ರಸಿದ್ದರೂ ಹಣವಂತರೂ ಆಗಿಲ್ಲ? ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಹನುಮನಂತ ಬಹು ಪರಾಕ್ರಮಿ , ಶಕ್ತಿಶಾಲಿ ಆದರೆ ಆತನಿಗೆ ತನ್ನ ಶಕ್ತಿಯ ಅರಿವಿರಲಿಲ್ಲ. ಜಾಂಬವಂತ ಇದು ನಿನ್ನಿಂದ ಸಾಧ್ಯ ಎಂದು ಹುರುದುಂಬಿಸುವವರೆಗೆ ಹನುಮಂತ ಅತ್ಯಂತ ಸಾಧಾರಣವಾಗಿದ್ದ ಎನ್ನುವುದು ಕಥೆಗಳ ಮೂಲಕ ನಮೆಗೆಲ್ಲಾ ತಿಳಿದಿದೆ. 9 ಸಂಖ್ಯೆಯ ಜನರ ಪಾಲಿಗೆ ಒಬ್ಬ ಜಾಂಬವಂತನ ಅವಶ್ಯಕತೆ ಬಹಳವಿರುತ್ತದೆ. ಒಮ್ಮೆ ಇವರಿಗೆ ತಮ್ಮ ಶಕ್ತಿಯ ಅರಿವಾದರೆ ಸಾಕು , ಇತರರಿಗಿಂತ ಬಹಳ ವೇಗವಾಗಿ ಕಾರ್ಯಸಾಧನೆಯಲ್ಲಿ ತೊಡಗುತ್ತಾರೆ.

ಬೇಜನ್ ದಾರುವಾಲಾ ಎನ್ನುವ ಜ್ಯೋತಿಷಿ ಇವತ್ತಿಗೆ ಇಲ್ಲ. ಆದರೆ ಆತನನ್ನು ನಾನು ಬಹಳ ನಂಬಿ ಫಾಲೋ ಮಾಡಿಕೊಂಡು ಬಂದಿದ್ದೇನೆ. ಪಾಶ್ಚಾತ್ಯರ ನಡೆನುಡಿಯನ್ನು ಪೂರ್ಣವಾಗಿ ನನ್ನದಾಗಿಸಿಕೊಂಡು , ಭಾರತೀಯ ಎಂದ್ದದ್ದೆಲ್ಲಾ ಮೂಢನಂಬಿಕೆ ಎನ್ನುವ ನಂಬಿಕೆಯನ್ನು ಗಟ್ಟಿಗೊಳಿಸಿಕೊಂಡಿದ್ದ ನನಗೆ ಬದುಕಿನ ಬೇರೆ ದಾರಿಯನ್ನು ತೋರಿಸಿದ್ದು ದಾರುವಾಲಾ. ಈ ನಂಬಿಕೆ ಎನ್ನುವುದು ಬಹಳ ಮುಖ್ಯ ಕಣ್ರೀ. ನಂಬಿ ಕೆಟ್ಟವರಿಲ್ಲ ಎಂದು ದಾಸರು ಹೇಳಿದ್ದು ಅದಕ್ಕೆ ಇರಬೇಕು. ನಂಬಿಕೆ ಎಂದರೆ ಸುಮ್ಮನೆ ಕಾಟಾಚಾರಕ್ಕೆ ನಂಬುವುದಲ್ಲ. ಪೂರ್ಣ ಮನಸ್ಸಿನಿಂದ ನಂಬುವುದು. ಆಚಾರ , ವಿಚಾರಗಳನ್ನು ಪಾಲಿಸುವುದು ಮಾಡಬೇಕು. ಆಗ ನಂಬಿಕೆಯ ನಿಜವಾದ ಬಲದ ಅನಾವರಣವಾಗುತ್ತದೆ.

2025 ರ ಸಮಯದಲ್ಲೂ ಇದೇನಿದು ಇವನದು ಕಂದಾಚಾರದ ಮಾತು ಎಂದು ಈ ವೇಳೆಗೆ ನೀವು ಅಂದುಕೊಂಡಿದ್ದರೆ , ಸ್ವಲ್ಪ ನಿಧಾನಿಸಿ. ಈ ಅಗಾಧ ಬ್ರಹ್ಮಾಂಡದಲ್ಲಿ ನಾನು ಎನ್ನುವ ನಾನು ಅದೆಷ್ಟು ನಿಕೃಷ್ಟ ಎನ್ನುವ ಅರಿವು ಮಾಡಿಕೊಳ್ಳಲು ಪ್ರಯತ್ನಿಸಿ. ಇದರ ಅರಿವಾದ ಮೇಲೆ ಸ್ವಲ್ಪ ಸುತ್ತಮುತ್ತಲಿನ ಸಮಾಜವನ್ನು , ಜನರನ್ನು ಗಮನಿಸಿ. ಅದೇಕೆ ಕೆಲವರಿಗೆ ಕಷ್ಟ ಜಾಸ್ತಿ? ಅದೇಕೆ ಕೆಲವರಿಗೆ ಏನೇ ಮಾಡಿದರೂ ಯಶಸ್ಸು ಕೈ ಹತ್ತುವುದಿಲ್ಲ? ಅದೇಕೆ ಕೆಲವರಿಗೆ ಬದುಕು ಹೂವಿನ ಹಾದಿ? ಇದಕ್ಕೆ ಕರ್ಮಫಲ ಎನ್ನದೆ ಬೇರಾವ ಹೆಸರನ್ನು ನೀವು ಇಡಬಲ್ಲಿರಿ?

ತುಂಬು ನಿಷ್ಠೆಯಿಂದ ಹನುಮನ ನೆನೆಯಿರಿ , ಸಾಧ್ಯವಾದರೆ ಪ್ರತಿ ದಿನ ಹನುಮಾನ್ ಚಾಲೀಸಾ ಓದುವ ಪ್ರಯತ್ನ ಮಾಡಿ. ಮಹಾನ್ ರಾಮಭಕ್ತ ಹನುಮಾನ್ ಸ್ಮರಣೆಯಿಂದ ಎಲ್ಲಾ ಕಷ್ಟಗಳೂ ಪರಿಹಾರವಾಗುತ್ತದೆ. ನಾನೂ ನಂಬರ್ ನೈನ್ ಎಂದು ಹೇಳಿಕೊಳ್ಳಲು ನನಗೆ ಅಪರಿಮಿತ ಆನಂದವಾಗುತ್ತಿದೆ. ನಿತ್ಯ ಹನುಮಾನ್ ಚಾಲೀಸಾ ಓದುತ್ತೇನೆ. ಆ ಹನುಮನ ಒಂದಂಶ ನಮ್ಮೆಲ್ಲರಲ್ಲೂ ಇರುತ್ತದೆ. ಅದನ್ನು ಉದ್ದೀಪನ ಗೊಳಿಸುವ ಜಾಂಬವಂತ ನಮ್ಮ ಪಾಲಿಗೆ ಸಿಗಬೇಕು. ಇಲ್ಲವೇ ಸ್ವಸಾಮರ್ಥ್ಯದ ಅರಿವು ಮೂಡಬೇಕು. ಸಂಕಟ ನಿವಾರಕ ಹನುಮ ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ. ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.