ಜೂನ್‌ 6 ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ; 7 ರಾಶಿಯವರಿಗೆ ಶುಭ ಫಲ, ಉಳಿದವರಿಗೆ ಕಷ್ಟ ಕಾಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೂನ್‌ 6 ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ; 7 ರಾಶಿಯವರಿಗೆ ಶುಭ ಫಲ, ಉಳಿದವರಿಗೆ ಕಷ್ಟ ಕಾಲ

ಜೂನ್‌ 6 ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ; 7 ರಾಶಿಯವರಿಗೆ ಶುಭ ಫಲ, ಉಳಿದವರಿಗೆ ಕಷ್ಟ ಕಾಲ

ಜೂನ್‌ 6, ಗುರುವಾರ ಜ್ಯೇಷ್ಠ ಅಮಾವಾಸ್ಯೆ ಇದ್ದು ಪಂಚಗ್ರಹ ಕೂಟ ರೂಪುಗೊಳ್ಳಲಿದೆ. ಈ ಗ್ರಹಗಳ ಸಂಕ್ರಮಣದಿಂದ ಕೆಲವೊಂದು ರಾಶಿಯವರಿಗೆ ಶುಭ ಫಲಗಳು ದೊರೆತರೆ ಕೆಲವರ ಜೀವನದಲ್ಲಿ ಶತ್ರು ಕಾಟ, ಅನಾರೋಗ್ಯ ಕಾಡಲಿದೆ. ಯಾವ ರಾಶಿಯವರಿಗೆ ಏನು ಲಾಭ ನೋಡೋಣ.

ಜೂನ್‌ 6 ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ; 7 ರಾಶಿಯವರಿಗೆ ಶುಭ ಫಲ, ಉಳಿದವರಿಗೆ ಕಷ್ಟ ಕಾಲ
ಜೂನ್‌ 6 ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ; 7 ರಾಶಿಯವರಿಗೆ ಶುಭ ಫಲ, ಉಳಿದವರಿಗೆ ಕಷ್ಟ ಕಾಲ

ಪಂಚಗ್ರಹ ಕೂಟಮಿ 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ಯಾವುದೇ ರಾಶಿಯಲ್ಲಿ ಮತ್ತೊಂದು ಗ್ರಹವನ್ನು ಸೇರಿಕೊಂಡರೆ, ಆ ಗ್ರಹದ ಸಂಯೋಜನೆಯು ಕೆಲವು ವಿಶೇಷ ಫಲಿತಾಂಶಗಳನ್ನು ನೀಡುತ್ತದೆ. ಪಂಚಾಂಗಕರ್ತ, ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾತನಾಡಿ, ಈ ಗ್ರಹಗಳ ಸಂಕ್ರಮಣವು ಯಾವ ರೀತಿಯ ಫಲಗಳನ್ನು ನೀಡಲಿದೆ ಎಂದು ವಿವರಿಸಿದ್ದಾರೆ.

ಒಂದೇ ರಾಶಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳಿದ್ದರೆ ಅವುಗಳನ್ನು ವಿಶೇಷ ಎಂದು ಹೇಳಲಾಗುತ್ತದೆ. ಒಂದೇ ರಾಶಿಯಲ್ಲಿ 5 ಗ್ರಹಗಳಿದ್ದರೆ ಅದು ಪಂಚಗ್ರಹ ಕೂಟಮಿ ಎನ್ನಲಾಗುತ್ತದೆ. ಒಂದೇ ರಾಶಿಯಲ್ಲಿ ಐದು ಗ್ರಹಗಳು ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಸಂಭವಿಸುತ್ತದೆ. ಈ ರೀತಿಯ ಗ್ರಹಗಳ ಸಂಯೋಜನೆಯಿಂದ ಕೆಲವು ರಾಶಿಯವರಿಗೆ ಶುಭ, ಕೆಲವರಿಗೆ ಅಶುಭ ಫಲಗಳನ್ನು ನೀಡುತ್ತದೆ.

ಜೂನ್‌ 6, ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಪಂಚಗ್ರಹ ಕೂಟ

ಜೂನ್‌ 6 ವೈಶಾಖ ಮಾಸದ ಅಮವಾಸ್ಯೆಯಂದು ಚಂದ್ರನು ರೋಹಿಣಿ ನಕ್ಷತ್ರದಲ್ಲಿ ಇರುತ್ತಾನೆ. ಅಲ್ಲದೆ ರವಿ ಚಂದ್ರರು ವೃಷಭ ರಾಶಿಯಲ್ಲಿ ಕೂಡಿರುತ್ತಾರೆ. ಶುಭ ಗ್ರಹಗಳಾದ ಬುಧ, ಗುರು , ಶುಕ್ರ, ಸೂರ್ಯ ಮತ್ತು ಚಂದ್ರರು ಪಂಚಗ್ರಹ ರಾಶಿಯನ್ನು ರಚಿಸುವುದು ಬಹಳ ವಿಶೇಷವಾಗಿದೆ.

ಈ ಮೈತ್ರಿಯು ವೃಷಭ ರಾಶಿಯಲ್ಲಿ ರೂಪುಗೊಳ್ಳುತ್ತದೆ . ಇದರ ಪರಿಣಾಮ ವೃಷಭ, ಕರ್ಕಾಟಕ, ಸಿಂಹ, ಕನ್ಯಾ, ವೃಶ್ಚಿಕ, ಮಕರ, ಮೇಷ ರಾಶಿಯವರಿಗೆ ಉತ್ತಮ ಫಲ ದೊರೆಯಲಿದೆ. ಈ ಪಂಚಗ್ರಹ ಕೂಟದ ದಿನದಂದು ಶುಭ ಮುಹೂರ್ತದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ ಆ ಕಾರ್ಯವು ವಿಶೇಷ ಫಲಿತಾಂಶವನ್ನು ನೀಡುತ್ತದೆ.

ಪಂಚಗ್ರಹ ಕೂಟದಿಂದ ಯಾವ ರಾಶಿಯವರಿಗೆ ಏನು ಫಲ?

ಮೇಷ: ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಧನ ಯೋಗ , ಕೌಟುಂಬಿಕ ಸೌಕರ್ಯ ಮತ್ತು ಸಂತೋಷ ಹೆಚ್ಚಾಗುತ್ತದೆ.

ವೃಷಭ ರಾಶಿ : ಈ ಯೋಗದಿಂದ ಜನ್ಮ ರಾಶಿಯಲ್ಲಿ ಬಹಳ ಸಂತೋಷ ತರುತ್ತದೆ ಜೊತೆಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ.

ಮಿಥುನ : ಈ ಮೈತ್ರಿಯ ಪ್ರಭಾವದಿಂದ ಖರ್ಚು ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ: ಪಂಚಗ್ರಹ ಮೈತ್ರಿಯು ಧನಲಾಭ ಮತ್ತು ಉದ್ಯೋಗ ಅಭಿವೃದ್ಧಿಯನ್ನು ತರುತ್ತದೆ.

ಸಿಂಹ ರಾಶಿ: ಈ ರಾಶಿಯವರ ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ, ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.

ಕನ್ಯಾ: ಧನಲಾಭವಿದೆ, ವ್ಯಾಪಾರ ಅಭಿವೃದ್ಧಿಯಾಗಲಿದೆ, ಜೀವನದಲ್ಲಿ ನೆಮ್ಮದಿ ಇರುತ್ತದೆ.

ತುಲಾ: ಅಷ್ಟಮದಲ್ಲಿ ಪಂಚಗ್ರಹ ಕೂಟಮಿ ರಚನೆಯಿಂದ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ, ಆರೋಗ್ಯ ಸಮಸ್ಯೆ ಉಲ್ಬಣಿಸುತ್ತದೆ.

ವೃಶ್ಚಿಕ: ಕೌಟುಂಬಿಕ ನೆಮ್ಮದಿ ದೊರೆಯಲಿದೆ.

ಧನು: ಶತ್ರು ಬಾಧೆ ಬಹಳ ಇದೆ, ಪ್ರತಿ ಹೆಜ್ಜೆಯಲ್ಲೂ ನೀವು ಬಹಳ ಎಚ್ಚರಿಕೆಯಿಂದ ಇರಬೇಕು.

ಮಕರ: ಆರೋಗ್ಯದಲ್ಲಿ ಬದಲಾವಣೆ ಕಂಡು ಬರಲಿದೆ . ಕೌಟುಂಬಿಕ ನೆಮ್ಮದಿ ದೊರೆಯಲಿದೆ.

ಕುಂಭ: ಗ್ರಹಗಳ ಸ್ಥಾನ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಶುಭ ಫಲಿತಾಂಶಗಳು ದೊರೆಯುತ್ತದೆ.

ಮೀನ: ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಜಾಗ್ರತೆಯಿಂದ ಇರಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.