ಗುರು-ರಾಹುವಿನ ಪರಸ್ಪರ ದೃಷ್ಟಿ: ದಾಂಪತ್ಯಜೀವನದಲ್ಲಿ ನೆಮ್ಮದಿ ಇರುತ್ತೆ; ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ
ಗುರು ಮತ್ತು ರಾಹು ಪರಸ್ಪರ ದೃಷ್ಟಿಗೆ ರಾಶಿಗಳು ಸಾಕ್ಷಿಯಾಗಲಿದೆ. ಈ 2 ಗ್ರಹಗಳು ಪರಸ್ಪರ ದೃಷ್ಟಿ ಯಾಗ ನಡೆಯುತ್ತವೆ ಮತ್ತು ಇದರಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಪ್ರಯೋಜಗಳಿವೆ ಎಂಬುದನ್ನು ತಿಳಿಯಿರಿ.

ಗುರು ಗ್ರಹವು 2025ರ ಮೇ 14 ರಂದು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ರಾಹುವು 2025 ರ ಮೇ 18 ರ ಭಾನುವಾರದಂದು ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಗುರು ಮತ್ತು ರಾಹುಗ್ರಹಗಳ ನಡುವೆ ಪರಸ್ಪರ ದೃಷ್ಟಿ ಇರಲಿದೆ. 2025ರ ಅಕ್ಟೋಬರ್ 18 ರವರೆಗೆ ಈ ದೃಷ್ಟಿಯು ಮುಂದುವರೆಯುತ್ತದೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ವಿಶಿಷ್ಟವಾದ ಫಲಗಳನ್ನು ಪಡೆಯುತ್ತವೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಫಲಾಫಲಗಳನ್ನು ಇಲ್ಲಿ ನೀಡಲಾಗಿದೆ.
ಮೇಷ ರಾಶಿ
ಸೋಲಿನ ಭಯ ಇರುವುದಿಲ್ಲ. ಕಷ್ಟವೆನಿಸಿದರು ಸಂದರ್ಭಕ್ಕೆ ಹೊಂದಿಕೊಂಡು ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿ ಇರುವ ಭಿನ್ನಾಭಿಪ್ರಾಯಕ್ಕೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಬಲ್ಲಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಪ್ರಯತ್ನಕ್ಕೆ ತಕ್ಕಂತಹ ಫಲಗಳು ನಿಮಗೆ ದೊರೆಯಲಿವೆ. ಇರುವ ವರಮಾನದಲ್ಲಿಯೇ ಹಣವನ್ನು ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ. ಕೊಂಚವೂ ಯೋಚಿಸಿದೆ ಎಲ್ಲರ ಮಾತನ್ನು ನಂಬುವಿರಿ. ನಿಮ್ಮಲ್ಲಿನ ಕ್ರೀಡಾಮನೋಭಾವನೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಧ್ಯವಯಸ್ಕರು ಸಮಾಜದಲ್ಲಿ ಉನ್ನತ ಗೌರವವನ್ನು ಗಳಿಸುವಿರಿ. ಕೋಪಗೊಂಡರು ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಹಾರ್ಮೋನ್ ಗಳ ಸ್ರವಿಕೆಯಲ್ಲಿ ತೊಂದರೆ ಕಂಡು ಬರಬಹುದು. ಆಡಂಬರದ ಜೀವನವನ್ನು ಇಷ್ಟಪಡುವುದಿಲ್ಲ. ಸಂಪ್ರದಾಯವಬದ್ಧ ಜೀವನ ನಡೆಸುವಿರಿ. ದಾಂಪತ್ಯ ಜೀವನವು ಸುಖ ಸಂತೋಷದಿಂದ ಕೂಡಿರುತ್ತದೆ. ಖರ್ಚು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುವಿರಿ. ಹೋರಾಟದ ಮನೋಭಾವನೆ ಇರುತ್ತದೆ. ವಿರೋಧಿಗಳ ಕುತಂತ್ರಕ್ಕೆ ಮಣಿಯುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುತ್ತದೆ.
ವೃಷಭ ರಾಶಿ
ನಿಮ್ಮಲ್ಲಿ ಧೈರ್ಯ ಸಾಹಸದ ಗುಣವಿರುತ್ತದೆ. ಉತ್ತಮ ಗೆಳೆಯರಾಗುವಿರಿ. ಕುಟುಂಬದಲ್ಲಿಯೂ ನಿಮಗೆ ವಿಶೇಷ ಪ್ರೀತಿ ವಿಶ್ವಾಸ ಇರುತ್ತದೆ. ಯಾವುದೇ ಕಷ್ಟಕರ ವಿಚಾರವಾದರೂ ಸುಲಭವಾಗಿ ಅರ್ಥಮಾಡಿಕೊಳ್ಳುವಿರಿ. ಆತುರದಲ್ಲಿ ಎಲ್ಲರ ಜೊತೆ ಸ್ನೇಹ ಸಂಬಂಧವನ್ನು ಬೆಳೆಸುವುದಿಲ್ಲ. ಭಾವನಾ ಜೀವಿಗಳು. ನಿಮಗೆ ಬಹುಮುಖ ಪ್ರತಿಭೆ ಇರುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ವಿಶೇಷ ಸ್ಥಾನ ನಿಮಗೆ ದೊರೆಯಲಿದೆ. ಎಲ್ಲರೂ ಮೆಚ್ಚುವಂತೆ ಜೀವನ ನಡೆಸುವಿರಿ. ನಿಮ್ಮ ತಪ್ಪಿಗೆ ಬೇರೆಯವರನ್ನು ದೂಷಿಸುವಿರಿ. ಬುದ್ಧಿವಂತಿಕೆಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವುದಲ್ಲದೆ ಹಣ ಉಳಿತಾಯ ಮಾಡುವಿರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಹರುಷ ತುಂಬಿರುತ್ತದೆ. ಅತಿಯಾದ ಆಸೆ ನಿಮಗೆ ಇರುವುದಿಲ್ಲ. ಉದ್ಯೋಗದಲ್ಲಿನ ತೊಂದರೆಗಳು ದೂರವಾಗುತ್ತವೆ. ಕಠಿಣ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದ ವರ್ತಿಸುವಿರಿ. ನಿಮ್ಮ ಬಗ್ಗೆ ಮಕ್ಕಳಿಗೆ ವಿಶೇಷ ಗೌರವ ಮತ್ತು ನಂಬಿಕೆ ಇರುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಬುದ್ಧಿವಂತಿಕೆಯ ಮಾತುಕತೆಯಿಂದ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಗೆಲ್ಲಬಲ್ಲಿರಿ.
ಮಿಥುನ ರಾಶಿ
ವಿಶೇಷವಾದ ಬುದ್ಧಿ ಚಾತುರ್ಯ ಇರುತ್ತದೆ. ಜೀವನದಲ್ಲಿ ಸದಾ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಕ್ರೀಡೆಗಳಲ್ಲಿ ಆಸಕ್ತಿ ಮೂಡುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಮನಸ್ಸು ಬದಲಿಸುವಿರಿ. ಸಮಯಕ್ಕೆ ತಕ್ಕಂತ ವರ್ತಿಸಲು ಸಾಧ್ಯವಾಗುವುದಿಲ್ಲ. ನೀವು ಇರುವ ಕಡೆ ಹಾಸ್ಯಕ್ಕೆ ಕೊರತೆ ಇರುವುದಿಲ್ಲ. ದುಡಿಕಿನಿಂದ ಮಾತನಾಡುವಿರಿ. ಯಾವುದೇ ರೀತಿಯ ಸಮಯ ಸಂದರ್ಭಕ್ಕೆ ಹೊಂದಿಕೊಂಡು ಬಾಳುವಿರಿ. ಮಾನಸಿಕ ಶಾಂತಿ ಇರುವುದಿಲ್ಲ. ಅಲ್ಪ ಪ್ರಮಾಣದ ಸೋಲನ್ನು ತಡೆದುಕೊಳ್ಳುವುದಿಲ್ಲ. ಮಕ್ಕಳೊಂದಿಗೆ ಸ್ನೇಹಿತರಂತೆ ಬಾಳುವಿರಿ. ದಂಪತಿ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ದುಡುಕಿನ ವರ್ತನೆಯಿಂದ ಉದ್ಯೋಗದಲ್ಲಿ ಹಿನ್ನಡೆ ಉಂಟಾಗುತ್ತದೆ. ಕುಟುಂಬದ ಹಿರಿಯರನ್ನು ಗೌರವದಿಂದ ಕಾಣುವಿರಿ. ಎಲ್ಲರ ಮನಗೆಲ್ಲುವಂತೆ ಮಾತನಾಡುವಿರಿ. ಬಂಧು-ಬಳಗದವರಿಂದ ದೂರ ಉಳಿಯುವಿರಿ. ಆತುರದಲ್ಲಿ ತಪ್ಪನ್ನು ಮಾಡಿ ನಂತರ ಪಶ್ಚಾತಾಪ ಪಡುವಿರಿ. ಪ್ರತಿಯೊಂದು ವಿಚಾರವನ್ನು ಆಸಕ್ತಿಯಿಂದ ಕಲಿಯುವಿರಿ. ಅವಿವಾಹಿತರಿಗೆ ಪರಿಚಯವಿರುವವರ ಜೊತೆಯಲ್ಲಿ ವಿವಾಹವಾಗುತ್ತದೆ.
ಕಟಕ ರಾಶಿ
ಮನದಲ್ಲಿರುವ ಆಸೆ ಆಕಾಂಕ್ಷಿಗಳು ಭಾಗಶಃ ನೆರವೇರುತ್ತದೆ. ಅಪೇಕ್ಷೆ ಇಲ್ಲದೆ ಹೋದರು ಆಪತ್ತಿನಲ್ಲಿದ್ದವರಿಗೆ ಸಹಾಯ ಸಹಕಾರ ನೀಡುವಿರಿ. ಸುಖ ದುಃಖಗಳಿಗೆ ಭಾವುಕರಾಗಿ ವರ್ತಿಸುವಿರಿ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಅನಾವಶ್ಯಕವಾಗಿ ಬಾಳ ಸಂಗಾತಿಯನ್ನು ಸಂದೇಹಿಸುವಿರಿ. ನಿಮ್ಮಲ್ಲಿನ ಕ್ರಿಯಾಶೀಲತೆ ಇತರರಿಗೆ ಮಾದರಿಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಎದುರಾಗುವ ಅಡ್ಡಿ ಆತಂಕಗಳಿಗೆ ಬೆದರುವುದಿಲ್ಲ. ದಾನ ಧರ್ಮದ ಕೆಲಸದಲ್ಲಿ ಸಂತಸ ಕಾಣುವಿರಿ. ಚಂಚಲದ ಮನಸ್ಸಿರುತ್ತದೆ. ನಿಮ್ಮ ಕೆಲಸ ಕಾರ್ಯದಲ್ಲಿ ಸದಾ ಕಾಲ ಉತ್ತಮ ಬದಲಾವಣೆಗಳನ್ನು ಕಾಣುವಿರಿ. ಸ್ವಾರ್ಥದ ಮನೋಭಾವನೆ ಇದ್ದರೂ ಯಾವುದೇ ತೊಂದರೆ ಆಗುವುದಿಲ್ಲ. ಮನದಲ್ಲಿ ಹತ್ತು ಹಲವು ಕನಸುಗಳಿರುತ್ತವೆ. ಅವುಗಳನ್ನು ಸಹಕಾರಗೊಳಿಸಲು ಆತ್ಮೀಯರ ಸಹಾಯವು ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಕಂಡು ಬರುತ್ತದೆ. ಕಣ್ಣಿನ ದೋಷ ನಿಮ್ಮನ್ನು ಕಾಡುತ್ತದೆ. ನೋಡಲು ಶಾಂತರಾದರೂ ಕೋಪಗೊಂಡರೆ ಉದ್ವೇಗದಿಂದ ವರ್ತಿಸುವಿರಿ. ಹಣದ ಕೊರತೆ ಇರುವುದಿಲ್ಲ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).