ಬುಧ, ಶುಕ್ರ ಸಂಯೋಗ; ಸೋಲುವ ಕೊನೆ ಗಳಿಗೆಯಲ್ಲಿ ಗೆಲುವು ನಿಮ್ಮದೆ, ಮೇಷ ಸೇರಿ 7 ರಾಶಿಯವರಿಗೆ ಭಾರಿ ಅದೃಷ್ಟ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬುಧ, ಶುಕ್ರ ಸಂಯೋಗ; ಸೋಲುವ ಕೊನೆ ಗಳಿಗೆಯಲ್ಲಿ ಗೆಲುವು ನಿಮ್ಮದೆ, ಮೇಷ ಸೇರಿ 7 ರಾಶಿಯವರಿಗೆ ಭಾರಿ ಅದೃಷ್ಟ

ಬುಧ, ಶುಕ್ರ ಸಂಯೋಗ; ಸೋಲುವ ಕೊನೆ ಗಳಿಗೆಯಲ್ಲಿ ಗೆಲುವು ನಿಮ್ಮದೆ, ಮೇಷ ಸೇರಿ 7 ರಾಶಿಯವರಿಗೆ ಭಾರಿ ಅದೃಷ್ಟ

ಒಂದೇ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಚಾರವು ಎಲ್ಲಾ ರಾಶಿಯವರಿಗೆ ಲಾಭಗಳನ್ನು ತರುತ್ತದೆ. ಆದರೆ ಕೆಲವು ರಾಶಿಯವರಿಗೆ ಹೆಚ್ಚಿನ ಪ್ರಯೋಚನಗಳಿವೆ. ಇವರು ಸೋಲು ಕೊನೆಯ ಹಂತದಲ್ಲೂ ಗೆಲುವು ಸಾಧಿಸುತ್ತಾರೆ. ಆ ರಾಶಿಯವರು ಯಾರು ಅನ್ನೋದರ ವಿವರ ಇಲ್ಲಿದೆ.

ಬುಧ, ಶುಕ್ರ ಸಂಯೋಗ; ಸೋಲುವ ಕೊನೆ ಗಳಿಗೆಯಲ್ಲಿ ಗೆಲುವು ನಿಮ್ಮದೆ, ಮೇಷ ಸೇರಿ 7 ರಾಶಿಯವರಿಗೆ ಭಾರಿ ಅದೃಷ್ಟ
ಬುಧ, ಶುಕ್ರ ಸಂಯೋಗ; ಸೋಲುವ ಕೊನೆ ಗಳಿಗೆಯಲ್ಲಿ ಗೆಲುವು ನಿಮ್ಮದೆ, ಮೇಷ ಸೇರಿ 7 ರಾಶಿಯವರಿಗೆ ಭಾರಿ ಅದೃಷ್ಟ

ಸಿಂಹರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗವು 2024 ಜುಲೈ 31 ರಿಂದ ಆಗಸ್ಟ್ 24 ರವರೆಗು ಇರಲಿದೆ. ಇದರಿಂದ ಮೇಷ, ವೃಷಭ, ಕಟಕ, ಸಿಂಹ,ತುಲಾ, ವೃಶ್ಚಿಕ, ಧನುರ್ ರಾಶಿಗಳಿಗೆ ಉತ್ತಮ ಪದಗಳನ್ನು ನೀಡಲಿದ್ದಾರೆ.

ಮೇಷ ರಾಶಿ

ಮೇಷ ರಾಶಿಯಲ್ಲಿ ಜನಿಸಿರುವ ವಿದ್ಯಾರ್ಥಿಗಳಿಗೆ ವಿಶೇಷವಾದ ಫಲ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ವಿಶೇಷವಾದ ಯಶಸ್ಸು ದೊರೆಯಲಿದೆ. ಇವರ ಮಾತಿನಲ್ಲಿ ಸದಾ ಕಾಲ ಸತ್ಯ ಮತ್ತು ಸತ್ಯವಾಗುವ ವಿಚಾರಗಳು ಅಡಗಿರುತ್ತವೆ. ಹಣಕಾಸಿನ ವಿಚಾರದಲ್ಲಿ ತಂದೆ ಮಕ್ಕಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತದೆ. ನವ ವಿವಾಹಿತರಿಗೆ ಸಂತಾನ ಲಾಭವಿದೆ. ಆತ್ಮೀಯರ ಸಹಾಯದಿಂದ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ. ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ. ಒಂದು ಮುಖ್ಯವಾದ ಅಂಶವೆಂದರೆ ಉತ್ತಮ ಪ್ರಯತ್ನವಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಆದರೆ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾಗುವುದಿಲ್ಲ.

ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದವರು ತಮ್ಮ ಕಷ್ಟ ನಷ್ಟಗಳಿಂದ ದೂರವಾಗಿ ಸುಖಜೀವನ ನಡೆಸುತ್ತಾರೆ. ಕುಟುಂಬದಲ್ಲಿನ ಆತಂಕದ ಸನ್ನಿವೇಶಗಳು ಕ್ರಮೇಣವಾಗಿ ದೂರವಾಗಲಿವೆ. ಭೂ ವಿವಾದವು ಆತ್ಮೀಯರ ಮಧ್ಯಸ್ಥಿಕೆ ಮತ್ತು ಮಾತುಕತೆಯ ಮೂಲಕ ಪರಿಹಾರ ಸಿಗಲಿದೆ. ತಾಯಿಯವರಿಗೆ ಸ್ವಂತ ಭೂಮಿ ಅಥವಾ ಸ್ವಂತ ಮನೆಯನ್ನು ಕೊಳ್ಳುವ ಯೋಗ ಬರಲಿದೆ. ನಿಮ್ಮ ತಾಯಿಯವರ ಹೆಸರಿನಲ್ಲಿ ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಸ್ವಂತ ಮನೆ ಅಥವಾ ಜಮೀನನ್ನು ಕೊಳ್ಳುವ ಕನಸು ನನಸಾಗುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ಯಶಸ್ವಿಯಾಗಿ ನಡೆಯಲಿದೆ. ಬಿಡುವಿಲ್ಲದೆ ಹೋದರು ಬಂದು ಬಳಗದವರ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.

ಕಟಕ ರಾಶಿ

ನೀವು ಆಡುವ ಮಾತುಗಳಿಗೆ ವಿಶೇಷವಾದಂತಹ ಗೌರವ ಲಭಿಸುತ್ತದೆ. ಆರಂಭಿಸಿದ ಪ್ರತಿಯೊಂದು ವಿಚಾರದಲ್ಲಿಯೂ ಸುಲಭವಾಗಿ ಯಶಸ್ಸನ್ನು ಕಾಣುವಿರಿ. ನಿಮ್ಮ ಮಾತಿನ ವಿರುದ್ಧ ನಿಲ್ಲುವ ಧೈರ್ಯ ಯಾರಿಗೂ ಬರುವುದಿಲ್ಲ. ಮೊದಲು ಲಾಭದ ಲೆಕ್ಕಾಚಾರವನ್ನು ಮಾಡಿ ನಂತರ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಕುಟುಂಬದಲ್ಲಿನ ಸಂತೃಪ್ತಿಯ ಜೀವನಕ್ಕೆ ನಿಮ್ಮ ಕೊಡುಗೆ ಅಪಾರವಾಗಿರುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಕಂಡು ಬಂದರು ನಿಮ್ಮ ಮೇಲೆ ಪ್ರಭಾವ ಬೀರದು. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಬಾಳುವಿರಿ. ಹಿರಿಯ ಸೋದರ ಅಥವಾ ಸೋದರಿಗೆ ಹಣದ ಸಹಾಯ ಮಾಡಬೇಕಾದ ಸಂಭವ ಏರ್ಪಡುತ್ತದೆ. ಕಷ್ಟದ ಹಿಂದೆ ಸುಖವಿದೆ ಹಾಗೆಯೇ ನಷ್ಟದ ಹಿಂದೆ ಲಾಭವು ಇರುತ್ತದೆ.

ಸಿಂಹ ರಾಶಿ

ಎಲ್ಲರೂ ಆಶ್ಚರ್ಯ ಪಡುವಷ್ಟು ಶಾಂತಿ ಸಹನೆಯಿಂದ ವರ್ತಿಸುವಿರಿ. ನಿಮ್ಮ ಮಾತು ಎಲ್ಲರಿಗೂ ವೇದ ವಾಕ್ಯವಾಗುತ್ತದೆ. ಉದ್ಯೋಗದಲ್ಲಿ ಇದ್ದ ಅಡಚಣೆಗಳನ್ನು ಕೇವಲ ಮಾತಿನಲ್ಲಿ ಸರಿಪಡಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರು ಅದರಿಂದ ನಿಮಗೆ ಉಪಯೋಗವಿರುತ್ತದೆ. ಲಾಭವಿಲ್ಲದ ಕೆಲಸಗಳನ್ನು ಆರಂಭಿಸುವುದಿಲ್ಲ. ನಿಮ್ಮ ತೀರ್ಮಾನಗಳನ್ನು ಎಲ್ಲರೂ ಒಪ್ಪುತ್ತಾರೆ. ಇದರಿಂದ ಕುಟುಂಬದಲ್ಲಿ ಮಾತ್ರವಲ್ಲದೆ ವೃತ್ತಿಕ್ಷೇತ್ರದಲ್ಲಿಯೂ ಸಮಾಧಾನಕರ ವಾತಾವರಣವಿರುತ್ತದೆ. ಯಾರಿಗೂ ಹಣ ಸಹಾಯ ಮಾಡುವುದಿಲ್ಲ. ಆದರೆ ಬೇರೆಯವರ ಕೆಲಸ ಕಾರ್ಯಗಳಲ್ಲಿ ತೊಂದರೆ ಎದುರಾಗದಂತೆ ನೋಡಿಕೊಳ್ಳುವಿರಿ. ಪರೋಪಕಾರ ಮಾಡುವ ಮನಸ್ಸಿದ್ದರೆ ಇದು ಅಪರೂಪದ ಅವಕಾಶ ಎನ್ನಬಹುದು.

ತುಲಾ ರಾಶಿ

ವಿದ್ಯಾಭ್ಯಾಸವನ್ನು ಮುಗಿಸಿರುವವರಿಗೆ ಕೂಡಲೆ ಉತ್ತಮ ಉದ್ಯೋಗ ದೊರೆಯುತ್ತದೆ. ಹೊಸದಾಗಿ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಿರುವವರಿಗೆ ನಿರೀಕ್ಷೆಗೂ ಮೀರಿದ ಲಾಭವಿರುತ್ತದೆ. ಈ ಅವಧಿಯಲ್ಲಿನ ಹೊಸತನದ, ಹೊಸ ರೀತಿಯ ಬದಲಾವಣೆಗಳು ಮನಸ್ಸಿಗೆ ಸಂತೋಷವನ್ನು ಉಂಟುಮಾಡುತ್ತದೆ. ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಮಾಡುವ ಕೆಲಸಗಳು ಸುಗಮವಾಗಿ ನೆರವೇರಲಿವೆ. ದೀರ್ಘ ಕಾಲದ ಪ್ರವಾಸಕ್ಕೆ ತೆರಳುವ ಆಸೆ ಇದ್ದಲ್ಲಿ ಈಗ ಸಾಧ್ಯವಾಗುತ್ತದೆ. ಐಷಾರಾಮಿ ವಾಹನವನ್ನು ಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಮುದ ನೀಡುವ ದುಬಾರಿ ಬೆಲೆಯ ವಸ್ತ್ರಗಳು ಮತ್ತು ಆಭರಣಗಳನ್ನು ಕೊಳ್ಳುವಿರಿ. ಹೆಚ್ಚಿನ ಆದಾಯ ವಿರುತ್ತದೆ. ಖರ್ಚು ವೆಚ್ಚಗಳು ನಿಮ್ಮ ನಿಯಂತ್ರಣದಲ್ಲಿ ಇರುತ್ತವೆ

ವೃಶ್ಚಿಕ ರಾಶಿ

ಯಾವುದೇ ಅಡಚಣೆ ಇಲ್ಲದೆ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮ್ಮ ವಾದ ವಿವಾದಗಳನ್ನು ಆಕ್ಷೇಪಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಆತ್ಮೀಯರಿಂದ ಬರಬೇಕಿದ್ದ ಹಣವು ಮರಳಿ ಕೈ ಸೇರುವುದು. ಅನಿರೀಕ್ಷಿತ ಧನಲಾಭವಿದೆ. ಬೇರೆಯವರನ್ನು ಮೆಚ್ಚಿಸುವ ಸಲುವಾಗಿ ನಿಮ್ಮ ರೀತಿ ನೀತಿಗಳನ್ನು ಬದಲಿಸುವುದಿಲ್ಲ. ಆರಂಭಿಸಿದ ಕೆಲಸವನ್ನು ಯಶಸ್ವಿಗೊಳಿಸುವವರೆಗೂ ವಿಶ್ರಾಂತಿಯನ್ನು ಬಯಸುವುದಿಲ್ಲ. ಸಾಧ್ಯವಾದರೆ ಕೋಪ ತಾಪದ ಗುಣವನ್ನು ಕಡಿಮೆ ಮಾಡಿಕೊಳ್ಳಬೇಕು. ಹಠದ ವಿಚಾರದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಉಳ್ಳವರೂ ನಿಮ್ಮನ್ನು ವಿರೋಧಿಸುತ್ತಾರೆ. ಯಾರಿಗೂ ಯಾವುದೇ ರೀತಿಯ ಉಚಿತ ಕೆಲಸಗಳನ್ನು ಮಾಡಿಕೊಡುವುದಿಲ್ಲ. ಹೇರಳವಾಗಿ ಹಣ ಗಳಿಸುವುದು ನಿಮ್ಮ ಏಕೈಕ ಗುರಿಯಾಗಿರುತ್ತದೆ.

ಧನು ರಾಶಿ

ಅದೃಷ್ಟದ ಬೆಂಗಾವಲು ನಿಮಗೆ ಇರಲಿದೆ. ಸೋಲುವ ಸಂದರ್ಭದಲ್ಲಿಯೂ ಗೆಲ್ಲುವಿರಿ. ನಷ್ಟವೆನಿಸುವ ಸಂದರ್ಭದಲ್ಲಿ ಹಣಕಾಸಿನ ವ್ಯವಹಾರದಿಂದ ಹಿಂದೆ ಉಳಿಯುವಿರಿ. ಒಟ್ಟಾರೆ ಸಂದರ್ಭವನ್ನು ಅನುಸರಿಸಿ ನಡೆದುಕೊಳ್ಳುವುದರಿಂದ ಯಾವುದೇ ರೀತಿಯ ಹಿನ್ನೆಡೆ ಉಂಟಾಗುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ದೊರೆಯುತ್ತದೆ. ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಕುಟುಂಬದ ಹಿರಿಯ ಸದಸ್ಯರ ಆರೋಗ್ಯವನ್ನುಕಾಪಾಡುವುದರಲ್ಲಿ ಯಶಸ್ವಿಯಾಗುವಿರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.