ಕುಂಭ ರಾಶಿಯವರಿಗೆ ರಾಹು ಪ್ರವೇಶ: ಸಮಸ್ಯೆಗಳು ದೂರವಾಗುತ್ತವೆ; ಸಿಂಹ, ಕನ್ಯಾ ಸೇರಿ 4 ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿಯವರಿಗೆ ರಾಹು ಪ್ರವೇಶ: ಸಮಸ್ಯೆಗಳು ದೂರವಾಗುತ್ತವೆ; ಸಿಂಹ, ಕನ್ಯಾ ಸೇರಿ 4 ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ

ಕುಂಭ ರಾಶಿಯವರಿಗೆ ರಾಹು ಪ್ರವೇಶ: ಸಮಸ್ಯೆಗಳು ದೂರವಾಗುತ್ತವೆ; ಸಿಂಹ, ಕನ್ಯಾ ಸೇರಿ 4 ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ

ಕುಂಭ ರಾಶಿಗೆ ರಾಹುವಿನ ಪ್ರವೇಶವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಸಂಕ್ರಮಣದಲ್ಲಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರು ಏನೆಲ್ಲಾ ಶುಭ ಫಲಗಳನ್ನು ಪಡೆಯುತ್ತಾರೆ ಎಂಬುನ್ನು ಇಲ್ಲಿ ವಿವರಿಸಲಾಗಿದೆ.

ಕುಂಭ ರಾಶಿಯಲ್ಲಿ ರಾಹುವಿನ ಸಂಚಾರದಿಂದ ಸಿಂಹ ಕನ್ಯಾ ತುಲಾ ಹಾಗೂ ವೃಶ್ಚಿಕ ರಾಶಿಯವರ ಫಲಾಫಲಗಳು
ಕುಂಭ ರಾಶಿಯಲ್ಲಿ ರಾಹುವಿನ ಸಂಚಾರದಿಂದ ಸಿಂಹ ಕನ್ಯಾ ತುಲಾ ಹಾಗೂ ವೃಶ್ಚಿಕ ರಾಶಿಯವರ ಫಲಾಫಲಗಳು

ರಾಹುವು 2025 ರ ಮೇ 18 ರಂದು ಮೀನರಾಶಿಯಿಂದ ಕುಂಭರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಜನು ಕಟಕರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಜನು ಕಟಕದಲ್ಲಿ 2025 ರ ಜೂನ್ 6 ರವರೆಗೆ ಸಂಚರಿಸುತ್ತಾನೆ. ಈ ವೇಳೆಯಲ್ಲಿ ಕುಜನಿಂದ ರಾಹುವು ಎಂಟನೆ ಮನೆಯಲ್ಲಿ ಇರುವ ಕಾರಣ, ಕುಜನು ರಾಹುಗ್ರಹವನ್ನು ವಿಕ್ಷೀಸುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ಪ್ರತ್ಯೇಕವಾದ ಫಲಗಳನ್ನು ಪಡೆಯುತ್ತದೆ. ಆದರೆ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರಗಳು ಬಂದಾಗ ಮೇಷರಾಶಿಯಲ್ಲಿ ಜನಿಸಿರುವವರ ಜೀವನದಲ್ಲಿ ಶುಭಕರ ಬದಲಾವಣೆಗಳು ದೊರೆಯುತ್ತವೆ. ಇದೇ ರೀತಿ ವಿಶಾಖ, ಅನುರಾಧ ಮತ್ತು ಜೇಷ್ಠ ನಕ್ಷತ್ರಗಳಲ್ಲಿ ಜನಿಸಿರುವವರ ಜೀವನದಲ್ಲಿ ಶುಭಕರ ಬದಲಾವಣೆಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ರಾಹುವಿನ ಪ್ರವೇಶದಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ಸಿಂಹ ರಾಶಿ

ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡೆಯಲಾರವು. ನಿಮ್ಮ ನಂಬಿಕೆಯೇ ಜೀವನವನ್ನು ನಿರ್ಧರಿಸುತ್ತದೆ. ತಂದೆ ತಾಯಿಯ ಜೊತೆಯಲ್ಲಿ ಕೌಟುಂಬಿಕ ಬಿನ್ನಾಭಿಪ್ರಾಯ ಇರುತ್ತದೆ. ಸೋದರರ ಪ್ರೀತಿ ವಿಶ್ವಾಸ ಗಳಿಸುವಿರಿ. ಮಾಡದ ತಪ್ಪನ್ನು ಒಪ್ಪಿಕೊಳ್ಳುವಿರಿ. ಹಣದ ಕೊರತೆ ಇರಲಿದೆ. ವಾತ ಪಿತ್ತದ ತೊಂದರೆ ಇರುತ್ತದೆ. ದೇವತಾಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಕುಟುಂಬದ ಹಿರಿತನವನ್ನು ಒಪ್ಪಿಕೊಳ್ಳುವುದಿಲ್ಲ. ಮನದಲ್ಲಿ ಆತಂಕದ ಭಾವನೆ ಮನೆಮಾಡಿರುತ್ತದೆ. ರಕ್ತದ ತೊಂದರೆ ಇದ್ದಲ್ಲಿ ಎಚ್ಚರಿಕೆವಹಿಸಿ. ಭೂವಿವಾದವೊಂದು ಎದುರಾಗಲಿದೆ. ಸ್ತ್ರೀಯರ ಆರೋಗ್ಯದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಮನೆಯನ್ನು ನವೀಕರಣಗೊಳಿಸುವ ನಿರ್ಧಾರ ಮಾಡುವಿರಿ. ದೃಢವಾದ ಸಂಕಲ್ಪದಿಂದ ಮಾತ್ರ ಗುರಿ ತಲುಪಲು ಸಾಧ್ಯ. ನಿಂದನೆಯ ಮಾತುಗಳು ನಿಮ್ಮ ಆತ್ಮಶಕ್ತಿಯನ್ನು ಕುಂದಿಸುತ್ತದೆ. ಆದರೆ ಕ್ರಮೇಣವಾಗಿ ಜೀವನವು ಸರಿದಾರಿಯಲ್ಲಿ ಸಾಗುತ್ತದೆ. ಮಕ್ಕಳಿಂದ ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರಲಿವೆ.

ಕನ್ಯಾ ರಾಶಿ

ಒಂದೇ ಬಾರಿ ಹಲವಾರು ಕೆಲಸ ಕಾರ್ಯಗಳನ್ನು ನಿರ್ವಹಿಸಲು ಪ್ರಯತ್ನಿಸಿ ತೊಂದರೆಗೆ ಸಿಲುಕುವಿರಿ. ಅತಿಯಾದ ಆತ್ಮವಿಶ್ವಾಸ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೋದರ ಸೋದರಿಯರ ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುತ್ತದೆ. ಎಚ್ಚರ ತಪ್ಪಿದಲ್ಲಿ ಉನ್ನತ ಅಧಿಕಾರವು ಕೈತಪ್ಪಬಹುದು. ತಾಳ್ಮೆಯಿಂದ ವರ್ತಿಸಿದಷ್ಟೂ ಜೀವನದಲ್ಲಿ ಉನ್ನತಿ ಕಾಣುವಿರಿ. ಕೋಪಬಂದರೂ ನಿಮ್ಮಿಂದ ಯಾರಿಗೂ ತೊಂದರೆ ಆಗದು. ಉಷ್ಣದ ತೊಂದರೆ ಇರಲಿದೆ. ದೂರದ ಸಂಬಂಧಿಕರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಗುರು ಹಿರಿಯರ ಮಾರ್ಗದರ್ಶನದಂತೆ ನಡೆದರೆ ಕಷ್ಟ ನಷ್ಟಗಳು ದೂರವಾಗುತ್ತವೆ. ಸಾಮಾಜಿಕ ನಾಯಕತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ತಾಯಿಯೊಂದಿಗೆ ಮನಸ್ತಾಪ ಇರುತ್ತದೆ. ಸಾಕುಪ್ರಾಣಿಗಳಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಅನ್ಯರನ್ನು ಟೀಕಿಸುವುದರಲ್ಲಿ ನಿರತರಾಗುವಿರಿ. ಕುಟುಂಬೇತರ ವ್ಯಕ್ತಿಗಳಿಂದ ನಿಮಗೆ ಸಹಾಯ ದೊರೆಯುತ್ತದೆ.

ತುಲಾ ರಾಶಿ

ಸಮಾಜದಲ್ಲಿ ಉನ್ನತ ಗೌರವ ಗಳಿಸುವಿರಿ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಪರೋಕ್ಷವಾಗಿ ಬೇರೆಯವರನ್ನು ಅವಲಂಬಿಸುವಿರಿ. ನಿಮ್ಮ ಸೋದರದ ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ಧಾರ್ಮಿಕ ಗುರುಗಳ ಭೇಟಿಯ ಅವಕಾಶ ಮತ್ತು ಅನುಗ್ರಹ ದೊರೆಯುತ್ತದೆ. ಮನಸ್ಸಿನ ಕೆಲಸ ಕಾರ್ಯಗಳು ಸುಲಭವಾಗಿ ಕೈಗೊಳ್ಳುತ್ತವೆ. ಮನದಲ್ಲಿರುವ ಆತಂಕದ ಕಾರಣ ಆರಂಭದಲ್ಲಿ ಹಿನ್ನಡೆ ಉಂಟಾಗಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ರೀತಿಯ ಬದಲಾವಣೆಗಳು ಎದುರಾಗಲಿವೆ. ಯಾವುದೇ ಸಂದರ್ಭವನ್ನು ನಿಮಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಬಲ್ಲಿರಿ. ಕುಟುಂಬದ ಎಲ್ಲರ ವಿಶ್ವಾಸ ಗಳಿಸುವಿರಿ. ಹಣಕಾಸಿನ ಕೊರತೆ ಕಂಡು ಬರುವುದಿಲ್ಲ. ಸ್ವಂತ ಮನೆ ಅಥವಾ ಭೂಮಿಯನ್ನು ಖರೀದಿಸುವ ಆಸೆಯು ಆತ್ಮೀಯರ ಸಹಾಯದಿಂದ ಈಡೇರಲಿದೆ. ಗೆಲುವಿನ ಹಠ ಮತ್ತು ಛಲ ನಿಮ್ಮಲ್ಲಿರುತ್ತದೆ. ದುಡುಕಿನ ನಿರ್ಧಾರಗಳಿಂದ ಧನವ್ಯಯವಾಗುತ್ತದೆ. ಯುವಕ ಯುವತಿಯರ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರಲಿವೆ.

ವೃಶ್ಚಿಕ ರಾಶಿ

ತಂದೆಯವರಿಗೆ ಅಥವಾ ಕುಟುಂಬದ ಹಿರಿಯರಿಗೆ ಅನಾರೋಗ್ಯ ಇರುತ್ತದೆ. ಕೆಲಸ ಕಾರ್ಯಗಳು ಅನಿರೀಕ್ಷಿತ ತಿರುಗುಗಳು ಕಂಡುಬರಲಿದೆ. ನಿಮ್ಮ ನಿರೀಕ್ಷೆಯಂತೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಗುರು ಹಿರಿಯರ ಸಹಾಯವು ಅವಶ್ಯಕವಾಗುತ್ತದೆ. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಇದರಿಂದ ಏಕಾಂಗಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಕೆಲಸ ಕಾರ್ಯಗಳು ಅತಿ ನಿಧಾನವಾಗಿ ನಡೆಯಲಿವೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸದಿಂದ ಕಾಣಲು ಪ್ರಯತ್ನಿಸಿ. ಪ್ರತಿಯೊಂದು ವಿಚಾರವನ್ನು ಆಳವಾಗಿ ಅಭ್ಯಾಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ. ಹಿರಿಯರ ಸೇವೆಯನ್ನು ಮಾಡುವಿರಿ. ಎಲ್ಲವನ್ನೂ ಬಲ್ಲೆ ಎಂಬ ಭಾವನೆ ಅಧಿಕವಾಗಿರುತ್ತದೆ. ಅವಿವಾಹಿತ ಯುವತಿಯರಿಗೆ ವಿವಾಹ ನಿಶ್ಚಯವಾಗುತ್ತದೆ. ನಿಮ್ಮಲ್ಲಿರುವ ಬುದ್ದಿವಂತಿಕೆಯನ್ನು ಸರಿಯಾದ ಹಾದಿಯಲ್ಲಿ ಬಳಸಿಕೊಳ್ಳುವುದಿಲ್ಲ. ತಪ್ಪು ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಕೋಪ ತಾಪಗಳಿಂದ ಕುಟುಂಬದಲ್ಲಿ ಬೇಸರದ ಛಾಯೆ ಮೂಡುತ್ತದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.