ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ; ದಿಟ್ಟ ನಿರ್ಧಾರಗಳ ಬಳಿಕ ರಾಜಕೀಯದಿಂದ ದೂರ ಉಳಿಯುತ್ತಾರಾ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ; ದಿಟ್ಟ ನಿರ್ಧಾರಗಳ ಬಳಿಕ ರಾಜಕೀಯದಿಂದ ದೂರ ಉಳಿಯುತ್ತಾರಾ

ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ; ದಿಟ್ಟ ನಿರ್ಧಾರಗಳ ಬಳಿಕ ರಾಜಕೀಯದಿಂದ ದೂರ ಉಳಿಯುತ್ತಾರಾ

ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಮಾತುಗಳಿಂದ ಎಲ್ಲರನ್ನ ಮಂತ್ರಮುಗ್ಧರನ್ನಾಗಿಸುತ್ತಾರೆ. ಹಠದಿಂದ ಸಮಯ ಸಾಧಿಸಿ ಮನದ ಯೋಜನೆಗಳಿಗೆ ಕಾಯಕಲ್ಪ ನೀಡುವ ಇವರ ಮುಂದಿನ ದಿನಗಳ ಹೇಗಿರಲಿವೆ ನೋಡಿ. (ಬರಹ: ಸತೀಶ್ ಎಚ್, ಜ್ಯೋತಿಷಿ)

ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ ಎಂಬುದರ ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ. ಅವರ ಈ ಬರಹವನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ. ನನಗೆ ದೊರೆತ ಶ್ರೀಯುತರ ಜನನದ ವೇಳೆ ಮತ್ತು ದಿನಾಂಕವನ್ನು ಆಧರಿಸಿ ಈ ಕೆಳಕಂಡ ಅಂಶಗಳನ್ನು ಬರೆದಿದ್ದೇನೆ. ಇದರಿಂದ ಯಾರ ಮನಸ್ಸನ್ನೂ ನೋಯಿಸುವ ಅಥವಾ ಇಲ್ಲದ ಭರವಸೆಗಳನ್ನು ಸೃಷ್ಟಿಸುವ ಆಸೆ ನನಗಿಲ್ಲ. ಪ್ರತಿಯೊಬ್ಬರೂ ಕ್ಷೇಮದಿಂದ ಇರಬೇಕೆಂಬುದೇ ನನ್ನ ಆಶಯ. ದೊರೆತ ಮೂಲಗಳ ಪ್ರಕಾರ ಇವರ ಜನ್ಮ ದಿನಾಂಕ 17.9.1950. ಜನನದ ವೇಳೆ ಮಧ್ಯಾಹ್ನ 12.09. ಇವರ ಜನನವು ಗುಜರಾತ್ ನಲ್ಲಿನ ವಡ್ ನಗರದಲ್ಲಿ ಆಗಿದೆ.

ಇವರ ಜಾತಕದಲ್ಲಿ ಮಂಗಳನು ಸ್ವಕ್ಷೇತ್ರದಲ್ಲಿ ನೆಲೆಸಿದ್ದಾನೆ. ದಶಮಾಧಿಪತಿ ಆದ ರವಿಯು ಲಾಭಸ್ಥಾನದಲ್ಲಿ ನೆಲೆಸಿದ್ದಾನೆ. ಕರ್ಮಭಾವದಲ್ಲಿ ಶುಕ್ರ ಮತ್ತು ಶನಿಗ್ರಹಗಳು ಯುತಿಯಲ್ಲಿ ಇದ್ದಾರೆ. ಆದರೆ ರಾಹುವಿನ ದೃಷ್ಟಿಯು ಲಗ್ನಕ್ಕಿದೆ. ಇದರಿಂದ ಇವರಿಗೆ ಧೈರ್ಯ ಸಾಹಸದ ಗುಣವಿರುತ್ತದೆ. ಆದರೆ ಮನಸಿನಲ್ಲಿ ಯಾವುದಾದರೊಂದು ವಿಚಾರಕ್ಕೆ ಯೋಜನೆ ಇರುತ್ತದೆ. ವೃಶ್ಚಿಕ ಲಗ್ನವಾದ್ದರಿಂದ ಕೋಪದ ಸ್ವಭಾವವಿರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಗೆಲ್ಲಲೇ ಬೇಕೆಂಬ ಹಠದಿಂದಲೇ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ. ಇವರಿಗೆ ಆತ್ಮೀಯರ ಸಹಾಯ ಸಹಕಾರ ಸದಾ ಇರುತ್ತದೆ. ಆದರೆ ಅತಿ ನಿಧಾನಗತಿಯಲ್ಲಿ ಕೆಲಸ ಕಾರ್ಯಗಳು ಸಾಗುತ್ತವೆ.

2025 ಜೂನ್ ತಿಂಗಳ 2ನೇ ದಿನಾಂಕದಿಂದ ಇದೇ ವರ್ಷದ ಅಕ್ಟೋಬರ್ ತಿಂಗಳ 29 ನೇ ದಿನಾಂಕದವರೆಗು ಅನಿರೀಕ್ಷಿತ ಬದಲಾವಣೆಗಳು ಇವರ ಜೀವನದಲ್ಲಿ ಕಂಡುಬರಲಿವೆ. ಈ ಅವಧಿಯು ಇವರಿಗೆ ಶುಭದಾಯಕವಾಗಿರುವುದಿಲ್ಲ. ಬದಲಾವಣೆಗಳಿಗೆ ಹೊಂದಿಕೊಳ್ಳಲೇಬೇಕಾಗುತ್ತದೆ. ನವೆಂಬರ್ ಮಧ್ಯಭಾಗದಿಂದ ಮತ್ತೋಮ್ಮೆ ಇವರು ಮೇಲುಗೈ ಸಾಧಿಸುತ್ತಾರೆ. ಇವರಿಗೆ 25ನೇ ವಯಸ್ಸಿನಲ್ಲಿಯೇ ಮಹತ್ತರ ಬದಲಾವಣೆಗಳಾಗಿವೆ. ಇವರ ಮಾತುಗಳು ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ. ಕುಜನಿಂದಾಗಿ ಪ್ರಪಂಚದ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಹಠದಿಂದ ಸಮಯ ಸಾಧಿಸಿ ಮನದ ಯೋಜನೆಗಳಿಗೆ ಕಾಯಕಲ್ಪ ನೀಡುವರು. ಕನ್ಯಾದಲ್ಲಿ ಬುಧನಿರುವ ಕಾರಣ ವಿಶೇಷ ಬುದ್ಧಿ ಇರುತ್ತದೆ. ಬರುವ ದಿನಗಳಲ್ಲಿ ತಮ್ಮ ತತ್ವವನ್ನು ಎಲ್ಲರಿಗೂ ತಿಳಿಸುತ್ತಾರೆ. ಎಲ್ಲರೂ ಮೆಚ್ಚುವಂತಹ ಅನೇಕ ಕೆಲಸಗಳನ್ನು ಮಾಡಲಿದ್ದಾರೆ. ನೀರು ಅಥವಾ ವಾಹನದ ಕಂಟಕದಿಂದ ಪಾರಾಗುತ್ತಾರೆ. ಇವರಿಗೆ ದುರ್ಗಾಮಾತೆಯ ಕೃಪೆ ಇದೆ. ಇವರ ಜನ್ಮಸ್ಥಳದಲ್ಲಿ ಇಂದಿಗೂ ಸರ್ಪಸಂಚಾರವಿದೆ. ಇವರ ಹಸ್ತದಲ್ಲಿ ಸರ್ಪರೇಖೆ ಇದೆ.

ಇವರ 38ನೇ ವಯಸ್ಸಿನಿಂದ ಜೀವನದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಿವೆ. ವಿಶ್ವದಲ್ಲಿ ಇವರಿಗೆ ಉನ್ನತ ಗೌರವ ಲಭಿಸುತ್ತದೆ. ಜೂನ್ ತಿಂಗಳ ನಂತರ ಮಿತ್ರದೇಶವೊಂದರ ಜೊತೆಯಲ್ಲಿ ವಿರಸ ಉಂಟಾಗುತ್ತದೆ. ಕೆಲವೊಂದು ತಪ್ಪು ಅಭಿಪ್ರಾಯಗಳು ಉಂಟಾಗಲಿವೆ. ಇವರ ಆತ್ಮೀಯರೊಬ್ಬರು ವದಂತಿಗಳನ್ನು ನಂಬುವ ಕಾರಣ ಪರಸ್ಪರ ವಿರಸ ಉಂಟಾಗಲಿದೆ. ಜುಲೈ ತಿಂಗಳಲ್ಲಿ ಇವರ ಮಹತ್ವಾಕಾಂಕ್ಷೆ ಯೋಜನೆಯೊಂದು ಆಮೆ ವೇಗದಲ್ಲಿ ಸಾಗುತ್ತದೆ. ಯಾರನ್ನೂ ಅತಿಯಾಗಿ ನಂಬಬಾರದು ಎನಿಸುತ್ತದೆ. ಈ ಅವಧಿಯಲ್ಲಿ ಇವರ ಮನಸ್ಸಿಗೆ ನೆಮ್ಮದಿ ಇರದ ಸಂಗತಿಯೊಂದು ನಡೆಯಲಿದೆ. ಆಗಸ್ಟ್ ತಿಂಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇವರ ಕೆಲಸ ಕಾರ್ಯಗಳಲ್ಲಿ ಮೂರನೆ ವ್ಯಕ್ತಿಯ ಪ್ರಭಾವ ಹೆಚ್ಚುವ ಸಾಧ್ಯತೆ ಕಂಡುಬರುತ್ತದೆ.

ಸೆಪ್ಟೆಂಬರ್ ತಿಂಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತಾರೆ. ಇವರ ಮುಂದಾಲೋಚನೆ ಉನ್ನತ ಮಟ್ಟದಲ್ಲಿ ಇರುತ್ತದೆ. ಆದರೆ ಕ್ರಮೇಣವಾಗಿ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಪಕ್ಷದವರ ಮತ್ತು ಕಾರ್ಯಕರ್ತರ ಒತ್ತಡದ ನಡುವೆಯೂ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅಕ್ಟೋಬರ್ ತಿಂಗಳಲ್ಲಿ ಇವರು ತೆಗೆದುಕೊಳ್ಳುವ ನಿರ್ಧಾರಗಳು ವಿವಾದಕ್ಕೆ ಕಾರಣವಾಗುತ್ತದೆ. ಆದರೆ ಜನಮೆಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. 2026 ಅಥವಾ 2027 ರ ನವೆಂಬರ್ ತಿಂಗಳ ನಂತರ ಕ್ರಮೇಣವಾಗಿ ರಾಜಕಾರಣದಿಂದ ದೂರ ಉಳಿಯುತ್ತಾರೆ.

ಬರಹ: ಸತೀಶ್ ಎಚ್, ಜ್ಯೋತಿಷಿ

(ಗಮನಿಸಿ: ಇದು ನರೇಂದ್ರ ಮೋದಿ ಅವರ ಜನ್ಮದಿನಾಂಕ ಮತ್ತು ಸಮಯವನ್ನು ಆಧರಿಸಿ ಮಾಡಿರುವ ಜಾತಕ ವಿಶ್ಲೇಷಣೆ. ಇದು ಸಂಪೂರ್ಣವಾಗಿ ಜ್ಯೋತಿಷ್ಯದ ಲೆಕ್ಕಾಚಾರ ಮತ್ತು ಶಾಸ್ತ್ರ, ಸಂಪ್ರದಾಯವನ್ನು ಆಧರಿಸಿದೆ. ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ‘ಎಚ್‌ಟಿ ಕನ್ನಡ’ ಜಾಲತಾಣದ ಸಿಬ್ಬಂದಿ ಈ ಬರಹವನ್ನು ಬದಲಿಸಿಲ್ಲ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.