ಕುಂಭ ರಾಶಿಗೆ ರಾಹು ಪ್ರವೇಶ: ಮೇಷ, ವೃಷಭ, ಮಿಥುನ, ಕಟಕ ರಾಶಿಯವರು ಏನೆಲ್ಲಾ ಪರಿಹಾರಗಳನ್ನು ಮಾಡಬೇಕು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿಗೆ ರಾಹು ಪ್ರವೇಶ: ಮೇಷ, ವೃಷಭ, ಮಿಥುನ, ಕಟಕ ರಾಶಿಯವರು ಏನೆಲ್ಲಾ ಪರಿಹಾರಗಳನ್ನು ಮಾಡಬೇಕು

ಕುಂಭ ರಾಶಿಗೆ ರಾಹು ಪ್ರವೇಶ: ಮೇಷ, ವೃಷಭ, ಮಿಥುನ, ಕಟಕ ರಾಶಿಯವರು ಏನೆಲ್ಲಾ ಪರಿಹಾರಗಳನ್ನು ಮಾಡಬೇಕು

2025ರ ಮೇ 18 ರಂದು ಕುಂಭ ರಾಶಿಗೆ ರಾಹು ಪ್ರವೇಶವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತೆ. ರಾಹು ತಾನಿರುವ ಕ್ಷೇತ್ರವನ್ನು ಕಾಪಾಡಿಕೊಳ್ಳುತ್ತಾನೆ. ಮೇಷ, ವೃಷಭ, ಕಟಕ, ಮಿಥುನ ರಾಶಿಯವರ ಶುಭಫಲಗಳು ಇಲ್ಲಿವೆ.

ಕುಂಭ ರಾಶಿಯಲ್ಲಿ ರಾಹು ಸಂಚಾರದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಶುಭಫಲಗಳ ವಿವರ ಇಲ್ಲಿವೆ.
ಕುಂಭ ರಾಶಿಯಲ್ಲಿ ರಾಹು ಸಂಚಾರದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಶುಭಫಲಗಳ ವಿವರ ಇಲ್ಲಿವೆ.

ಗ್ರಹಗಳ ಸಂಚಾರವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ರಾಹುವು 2025 ರ ಮೇ 18ರ ಭಾನುವಾರದಂದು ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ರಾಹುವು ಕುಂಭರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ರಾಹು ತಾನಿರುವ ಕ್ಷೇತ್ರವನ್ನು ಕಾಪಾಡಿಕೊಳ್ಳುತ್ತಾನೆ. ಆದರೆ ರಾಹುವು ದೃಷ್ಟಿಸುವ ಭಾವಗಳನ್ನು ತೊಂದರೆಗೆ ಒಳಗಾಗುತ್ತವೆ. ಆದ್ದರಿಂದ ಸೂಕ್ತ ರೀತಿಯ ಪರಿಹಾರಗಳನ್ನು ಮಾಡಬೇಕಾಗುತ್ತದೆ. ಪ್ರತಿಯೊಂದು ರಾಶಿಯ ರಾಹುವಿನ ದೃಷ್ಟಿಯನ್ನು ಹೊಂದಿರುವ ಮನೆಯನ್ನು ತಿಳಿಸಿದ್ದೇನೆ. ಮೇಷದಿಂದ ಕಟಕದವರಿಗೆ ನಾಲ್ಕು ರಾಶಿಯವರಿಗೆ ಏನೆಲ್ಲಾ ಶುಭಫಲಗಲಿವೆ ಎಂಬುದನ್ನು ತಿಳಿಯೋಣ

ಮೇಷ ರಾಶಿ

ದಂತದ ಪದಾರ್ಥಗಳನ್ನು ಬಳಸಬಾರದು. ಬೆಲ್ಲದಿಂದ ತಯಾರಿಸಿದ ತಿಂಡಿಯನ್ನು ಮಗಳಿಗೆ ಮತ್ತು ಚಿಕ್ಕ ವಯಸ್ಸಿನ ಹಣ್ಣುಮಕ್ಕಳಿಗೆ ನೀಡಿರಿ. ಶ್ರೀ ದುರ್ಗಾಪೂಜೆಯನ್ನು ಮಾಡುವುದು ಸೂಕ್ತ. ಅಶಕ್ತರ ಮನೆಯ ವಿವಾಹ ಕಾರ್ಯಕ್ಕೆ ಹಣದ ಸಹಾಯ ಮಾಡಿರಿ. ನಿಮ್ಮಲ್ಲಿ ಪದ್ಧತಿ ಇದ್ದಲ್ಲಿ ಮರು ಮಾಂಗಲ್ಯಧಾರಣೆ ಮಾಡಿರಿ. ನಿಮಗೆ 60 ಅಥವಾ 70 ವರ್ಷಗಳಾದಲ್ಲಿ ರಾಹು ಶಾಂತಿಯನ್ನು ಮಾಡಬೇಕು. ಅಲ್ಲದೆ ಆಯುಷ್ಯಹೋಮವನ್ನು ಮಾಡುವುದು ಒಳ್ಳೆಯದು. ದೇವಾಲಯಕ್ಕೆ ಕೆಲವು ಬಾದಾಮಿಗಳನ್ನು ತೆಗೆದುಕೊಂಡುಹೋಗಿ ಅದರ ಅರ್ಧ ಭಾಗವನ್ನು ಮನೆಗೆ ತಂದು ಬಳಸಬೇಕು. ಮನೆಯಲ್ಲಿ ಬಾದಮಿ ಮತ್ತು ಗೋಡಂಬಿಯನ್ನು ಬಿಳಿ ಬಟ್ಟೆಯಲ್ಲಿ ಇಡಬೇಕು. ನಿಮ್ಮ ಆತ್ಮೀಯರ ಒತ್ತಡಕ್ಕೆ ಮಣಿದು ಯಾತ್ರಾಸ್ಥಳಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡುವಿರಿ. ಆ ನಂತರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುವುದು ಒಳ್ಳೆಯದು. ಧಾರ್ಮಿಕ ಸ್ಥಳಗಳಿಗೆ ಅಕ್ಕಿ, ಬೇಳೆ ಮತ್ತು ಬೆಲ್ಲವನ್ನು ನೀಡಿರಿ.

ವೃಷಭ ರಾಶಿ

ಉದ್ಯೋಗದಲ್ಲಿ ಸದಾಕಾಲ ಕೆಲಸದ ಒತ್ತಡ ಇರುತ್ತದೆ. ಬೆಳ್ಳಿಯ ಉಂಗುರ ಅಥವಾ ಬಳೆಯನ್ನು ಧರಿಸಿ. ಇದರಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ. ಹಣೆಯಲ್ಲಿ ತಿಲಕವಿರಲಿ. ಇದರಿಂದ ಬಂಧು ಬಳಗದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಉಂಟಾಗುತ್ತದೆ. ಮನೆಯ ವಾಯುವ್ಯದಿಕ್ಕಿನಲ್ಲಿ ನಿಮ್ಮ ಬೆಳ್ಳಿಯ ಉಂಗುರವನ್ನು ಇಡಿ. ಈ ದಿಕ್ಕಿನಲ್ಲಿ ನೀರನ್ನು ಶೇಖರಿಸಿ ಇಡುವುದು ಲಾಭಕರ. ಗಂಗಾಸ್ನಾನದಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಮನೆಯ ಮುಂದೆ ಮತ್ತು ಮನೆಯ ಒಳಗೆ ನೀರು ನಿಲ್ಲದಂತೆ ಗಮನವಹಿಸಿ. ಇಲ್ಲವಾದಲ್ಲಿ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಮಹಡಿ ಮೆಟ್ಟಿಲುಗಳ ಕೆಳಗೆ ತರಕಾರಿ ಮತ್ತು ಇತರೆ ದಿನಿಸಿ ಪದಾರ್ಥಗಳನ್ನು ಶೇಖರಿಸಿ ಇಡಬಾರದು. ಕಪ್ಪು ನಾಯಿಗಳನ್ನು ಸಾಕುವುದು ಒಳ್ಳೆಯದು. ಸಾಧ್ಯವಾಗದ ಪಕ್ಷದಲ್ಲಿ ಕಪ್ಪುನಾಯಿಗಳಿಗೆ ಆಹಾರವನ್ನು ನಿಡಿರಿ. ಹಾಲನ್ನು ಅನಾವಶ್ಯಕವಾಗಿ ಚೆಲ್ಲಬಾರದು. ಕಪ್ಪು ಬಣ್ಣದ ಮತ್ತು ಹೊಗೆಯ ಬಣ್ಣದ ವಸ್ತ್ರಗಳನ್ನು ಧರಿಸದೆ ಇರುವುದು ಒಳ್ಳೆಯದು.

ಮಿಥುನ ರಾಶಿ

ನಿಮ್ಮ ಕುಲದೇವರ ಬೆಳ್ಳಿ ಪದಕವನ್ನು ಕತ್ತಿನಲ್ಲಿ ಧರಿಸುವುದು ಲಾಭಕರ. ಹಣೆಯಲ್ಲಿ ಕೆಂಪು ಬಿಂದಿ ಇಡುವುದು ಶುಭಕರ. ಚಿನ್ನದ ಒಡವೆಗಳನ್ನು ಧರಿಸುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ವಾಯುವ್ಯ ಮತ್ತು ಆಗ್ನೇಯ ದಿಕ್ಕುಗಳನ್ನು ಶುಭ್ರವಾಗಿರಿಸಿಕೊಳ್ಳಬೇಕು. ಮನೆಯ ಮುಂಬಾಗಿಲಿನಲ್ಲಿ ಪೂರ್ವದಿಕ್ಕಿನಲ್ಲಿ ಹೂವಿನ ಗಿಡಗಳನ್ನು ಬೆಳೆಸಬೇಕು. ಪ್ರತಿದಿನ ಬೆಳಗಿನ ವೇಳೆ ಗಿಡಗಳಿಗೆ ನೀರನ್ನು ಹಾಕಿರಿ. ತಲೆಗೆ ನೀರನ್ನು ಹಚ್ಚಿ ತಲೆಗೆ ಸ್ನಾನವನ್ನು ಮಾಡಿರಿ. ಅನಾಥಾಶ್ರಮಕ್ಕೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿರಿ. ಅಪರಿಚಿತರ ಜೊತೆಯಲ್ಲಿ ಸಹ ಪ್ರೀತಿ ವಿಶ್ವಾಸದಿಂದ ವರ್ತಿಸಿ. ದಂತದ ವಸ್ತುಗಳನ್ನು ಬಳಸದಿರಿ. ಮನೆತನದ ಹೆಣ್ಣುಮಕ್ಕಳ ಜೊತೆಯಲ್ಲಿ ಆತ್ಮೀಯತೆ ಬೆಳೆಸಿಕೊಳ್ಳುವಿರಿ. ಆತ್ಮೀಯರಿಗೆ ಹಣದ ಸಹಾಯ ಮಾಡಿ. ಸಾಧ್ಯವಾದಷ್ಟು ಸಾಲ ಮಾಡುವುದರಿಂದ ದೂರವಿರಿ. ದಂಪತಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸಬೇಕು. ಏಕಾಂಗಿಯಾಗಿ ವಿದ್ಯಾಭ್ಯಾಸ ಮುಂದುವರೆಸುವ ಬದಲು ಸಹಪಾಠಿಗಳ ಜೊತೆಗೂಡಿ ಕಲಿಯಲು ಪ್ರಯತ್ನಿಸಿ. ಕುಟುಂಬದ ಹಿರಿಯರ ಜೊತೆಯಲ್ಲಿ ಉತ್ತಮ ಒಡನಾಟ ಇರುವುದು ಒಳ್ಳೆಯದು.

ಕಟಕ ರಾಶಿ

ಮಾತಿನ ಮೇಲೆ ಹತೋಟಿ ಸಾಧಿಸುವುದು ಒಳ್ಳೆಯದು. ಕೈಯಲ್ಲಿ ಬೆಳ್ಳಿಯ ಬ್ರೇಸ್ ಲೆಟ್ ಇರಲಿ. ಬ್ಯಾಗು ಅಥವಾ ಜೇಬಿನಲ್ಲಿ ಬೆಳ್ಳಿಯ ರೇಕಿರಲಿ. ಹಣೆಗೆ ಕಪ್ಪು ಬಣ್ಣದ ಬಿಂದಿ ಇಡದಿರಿ. ಯಾವುದೇ ಚಿನ್ನದ ಒಡವೆಯನ್ನು ಧರಿಸಿ. ಪಶ್ಚಿಮ ದಿಕ್ಕಿನಲ್ಲಿ ಕುಳಿತು ವಿದ್ಯಾರ್ಥಿಗಳು ಅಭ್ಯಾಸವನ್ನು ಮಾಡಬಾರದು. ಪಶ್ಚಿಮದ ಗೋಡೆಗೆ ಹೊಂದಿಕೊಂಡಂತೆ ವಿಶ್ರಾಂತಿ ಪಡೆಯಲು ಮಂಚವನ್ನು ಹಾಕಬಾರದು. ಇದರಿಂದ ಅನಾರೋಗ್ಯ ಉಂಟಾಗುತ್ತದೆ. ಮನೆಯಲ್ಲಿ ನೀರು ಹರಿಯಲು ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಲಬೇಕು. ಇಲ್ಲವಾದಲ್ಲಿ ಹಣಕಾಸಿನ ತೊಂದರೆ ಉಂಟಾಗುತ್ತದೆ. ಕುಟುಂಬದ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು. ವಿವಾಹವಾದ ಮಗಳಿಗೆ ಅಥವಾ ಸೋದರಿಗೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿ ಅವರಿಂದ ಶುಭ ಹಾರೈಕೆಗಳನ್ನು ಪಡೆಯಬೇಕು. ಪುಟ್ಟಮಕ್ಕಳಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯನ್ನಾಗಿ ನೀಡಿ. ಸೂರ್ಯ ಮುಳುಗುವ ಮುನ್ನ ಮನೆಯಲ್ಲಿನ ದೀಪಗಳನ್ನು ಬೆಳಗಿಸ ಬೇಕು.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.