ಕುಂಭ ರಾಶಿಗೆ ರಾಹು ಪ್ರವೇಶ: ಶುಭಫಲಗಳಿಗಾಗಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರು ಏನೆಲ್ಲಾ ಪರಿಹಾರಗಳನ್ನು ಮಾಡಬೇಕು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿಗೆ ರಾಹು ಪ್ರವೇಶ: ಶುಭಫಲಗಳಿಗಾಗಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರು ಏನೆಲ್ಲಾ ಪರಿಹಾರಗಳನ್ನು ಮಾಡಬೇಕು

ಕುಂಭ ರಾಶಿಗೆ ರಾಹು ಪ್ರವೇಶ: ಶುಭಫಲಗಳಿಗಾಗಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರು ಏನೆಲ್ಲಾ ಪರಿಹಾರಗಳನ್ನು ಮಾಡಬೇಕು

2025ರ ಮೇ 18 ರಂದು ಕುಂಭ ರಾಶಿಗೆ ರಾಹು ಪ್ರವೇಶವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತೆ. ರಾಹು ತಾನಿರುವ ಕ್ಷೇತ್ರವನ್ನು ಕಾಪಾಡಿಕೊಳ್ಳುತ್ತಾನೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶುಭಫಲಗಳು ಇಲ್ಲಿವೆ.

ಕುಂಭ ರಾಶಿಯಲ್ಲಿ ರಾಹುವಿನ ಸಂಚಾರದಿಂದ ಶುಭಫಲಗಳನ್ನು ಪಡೆಯಲು ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಏನೆಲ್ಲಾ ಪರಿಹಾರಗಳನ್ನು ಮಾಡಬೇಕು
ಕುಂಭ ರಾಶಿಯಲ್ಲಿ ರಾಹುವಿನ ಸಂಚಾರದಿಂದ ಶುಭಫಲಗಳನ್ನು ಪಡೆಯಲು ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಏನೆಲ್ಲಾ ಪರಿಹಾರಗಳನ್ನು ಮಾಡಬೇಕು

ಗ್ರಹಗಳ ಸಂಚಾರವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ರಾಹುವು 2025 ರ ಮೇ 18ರ ಭಾನುವಾರದಂದು ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ರಾಹುವು ಕುಂಭರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ರಾಹು ತಾನಿರುವ ಕ್ಷೇತ್ರವನ್ನು ಕಾಪಾಡಿಕೊಳ್ಳುತ್ತಾನೆ. ಆದರೆ ರಾಹುವು ದೃಷ್ಟಿಸುವ ಭಾವಗಳನ್ನು ತೊಂದರೆಗೆ ಒಳಗಾಗುತ್ತವೆ. ಆದ್ದರಿಂದ ಸೂಕ್ತ ರೀತಿಯ ಪರಿಹಾರಗಳನ್ನು ಮಾಡಬೇಕಾಗುತ್ತದೆ. ಪ್ರತಿಯೊಂದು ರಾಶಿಯ ರಾಹುವಿನ ದೃಷ್ಟಿಯನ್ನು ಹೊಂದಿರುವ ಮನೆಯನ್ನು ತಿಳಿಸಿದ್ದೇನೆ. ಸಿಂಹದಿಂದ ವೃಶ್ಚಿಕದವರಿಗೆ ನಾಲ್ಕು ರಾಶಿಯವರಿಗೆ ಏನೆಲ್ಲಾ ಶುಭಫಲಗಲಿವೆ ಎಂಬುದನ್ನು ತಿಳಿಯೋಣ

ಸಿಂಹ ರಾಶಿ

ಕಪ್ಪು ಬಣ್ಣದ ಮತ್ತು ನೀಲಿ ಬಣ್ಣದ ವಸ್ತ್ರಗಳನ್ನು ಧರಿಸಬಾರದು. ಇಲ್ಲವಾದಲ್ಲಿ ಎಲ್ಲರ ಜೊತೆ ಸಿಡುಕುತನದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನ ಮಾನಕ್ಕೆ ಕುಂದು ಬರುತ್ತದೆ. ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಿದಷ್ಟೂ ಒಳ್ಳೆಯದು. ಅಧಿಕಾರಿಗಳಾಗಿದ್ದಲ್ಲಿ ನಿಮ್ಮ ಜೊತೆಗಿನ ನೌಕರರಿಗೆ ಸಹಾಯ ಮಾಡಿರಿ. ಧಾರ್ಮಿಕ ಸಂಸ್ಥೆಗಳ ಜೀರ್ಣೋದ್ದಾರದಲ್ಲಿ ಸಹಾಯ ಮಾಡಬೇಕು. ನೆರೆಹೊರೆಯ ಪುಟ್ಟ ಮಕ್ಕಳಿಗೆ ಕುಡಿಯಲು ಹಾಲು ನೀಡಿರಿ. ನಿಮ್ಮ ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಕಾಣಿರಿ. ಮನೆಯಲ್ಲಿ ಕತ್ತಲೆ ಇರದಂತೆ ನೋಡಿಕೊಳ್ಳಿರಿ. ಮನೆತನದ ಹೆಣ್ಣುಮಕ್ಕಳಿಗೆ ಹಣದ ಸಹಾಯ ಮಾಡಿರಿ. ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ದಾನ ನೀಡಿ. ದಂಪತಿ ಪರಸ್ಪರ ಹೊಂದಿಕೊಂಡು ಬಾಳುವುದು ಒಳ್ಳೆಯದು. ಇಲ್ಲವಾದಲ್ಲಿ ಕುಟುಂಬದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಾರವು. ಮನೆಯಲ್ಲಿರುವ ಸಾಕುಪ್ರಾಣಿಗಳ ಬಗ್ಗೆ ಅನುಕಂಪ ಇರಲಿ. ಕುಟುಂಬದ ಹಿರಿಯರ ಆಶೀರ್ವಾದ ಇಲ್ಲದೆ ಯಾವುದೇ ಕೆಲಸ ಆರಂಭಿಸದಿರಿ.

ಕನ್ಯಾ ರಾಶಿ

ಪ್ರಾಣಿಗಳನ್ನು ಪ್ರೀತಿ ಮತ್ತು ಕನಿಕರದಿಂದ ಕಾಣಬೇಕು. ಅವಶ್ಯಕತೆ ಇದ್ದವರಿಗೆ ನೀಲಿ ಬಣ್ಣದ ವಸ್ತ್ರಗಳನ್ನು ನೀಡಿ. ಕಷ್ಟ ಪಟ್ಟು ದುಡಿಯುವವರನ್ನು ಗುರುತಿಸಿ ಸಹಾಯ ಮಾಡಬೇಕು. ಮಹಿಳಾ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡಲು ಪ್ರಯತ್ನಿಸಿ. ಕಪ್ಪು ಬಣ್ಣದ ನಾಯಿಗೆ ಆಹಾರ ನೀಡಿ. ಮನೆಗೆ ಬೀದಿ ದೀಪದ ಬೆಳಕು ಬೀಳುವಂತಿರಬೇಕು. ಮನೆಯ ಮುಂಬಾಗಿಲ ಮುಂದೆ ಒಣಗಿದ ಹೂವಿನ ಗಿಡಗಳಿದ್ದಲ್ಲಿ ವಿಲೇವಾರಿ ಮಾಡಿರಿ. ಬೆಳ್ಳಿ ಲೇಪನವುಳ್ಳ ಲೇಖನಿಯನ್ನು ಬರೆಯಲು ಬಳಸಿ. ಬೆಳ್ಳಿ ವಸ್ತುಗಳನ್ನು ಕಳೆದುಕೊಳ್ಳದಿರಿ. ಪ್ರಾಣಿಗಳನ್ನು ಹಿಂಸಿಸದಿರಿ. ಮನೆಯಲ್ಲಿ ಹಾಲು ಚೆಲ್ಲದಂತೆ ನೋಡಿಕೊಳ್ಳಿ. ದಂಪತಿಗೆ ಆಹಾರದ ವ್ಯವಸ್ಥೆ ಮಾಡಿ. ದಿಂಬಿನ ಕೆಳಗೆ ಸಕ್ಕರೆ ಮತ್ತು ಸೋಪನ್ನು ಇರಿಸಿ. ನಿಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವವರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ವರ್ತಿಸಿ. ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಶ್ರೀ ಸತ್ಯನಾರಯಣ ಸ್ವಾಮಿ ಪೂಜೆ ಮಾಡಿರಿ.

ತುಲಾ ರಾಶಿ

ಮನೆಯಲ್ಲಿ ದುರ್ಗೆಯ ಬೆಳ್ಳಿಯ ವಿಗ್ರಹವಿರಲಿ. ದಂಪತಿಯರು ಕುಲದೇವರಿಗೆ ಕಲ್ಯಾಣ್ಯೋತ್ಸವ ಮಾಡಿಸುವುದು ಒಳ್ಳೆಯದು. ಮಹಡಿ ಮೆಟ್ಟಿಳುಗಳ ಕೆಲಭಾಗದಲ್ಲಿ ನೀರನ್ನು ಶೇಖರಿಸಿಡಿ. ಕಪ್ಪು ಬಣ್ಣದ ವಿನಹ ಯಾವುದೇ ಬಣ್ಣದ ನಾಯಿಯನ್ನು ಸಾಕದಿರಿ. ಧಾರ್ಮಿಕ ಕೇಂದಕ್ಕೆ ಜನರು ಕುಳಿತುಕೊಳ್ಳುವ ವ್ಯವಸ್ಥೆ ಇರಲಿ. ದೇವಾಲಯಕ್ಕೆ ಎಳನೀರು ನೀಡಿರಿ. ನದಿ ಸ್ನಾನ ಮಾಡಿರಿ. ನ್ಯಾಯ ನೀತಿಯ ಹಾದಿಯಲ್ಲಿ ಸಾಗಿರಿ. ಕೂಡು ಕುಟುಂಬದಲ್ಲಿ ವಾಸಿಸುವುದು ಒಳ್ಳೆಯದು. ಶುಕ್ರವಾರದ ದಿನದಂದು ರಾಹುಕಾಲದಲ್ಲಿ ಶ್ರೀ ದುರ್ಗಾಮಾತೆಯ ಪೂಜೆಯನ್ನು ಮಾಡುವುದು ಹೆಚ್ಚು ಲಾಭದಾಯಕ. ಧಾರ್ಮಿಕ ಕೇಂದ್ರಗಳ ನೇತೃತ್ವವನ್ನು ವಹಿಸಿಕೊಳ್ಳಿರಿ. ಬೆಳ್ಳಿಯ ಲೋಟದಲ್ಲಿ ನೀರು ಅಥವ ಹಾಲನ್ನು ಕುಡಿಯಿರಿ. ಆದರೆ ರಾತ್ರಿಯ ವೇಳೆ ಹಾಲನ್ನು ಕುಡಿಯಬಾರದು. ಕೆಂಪು ಮತ್ತು ಹಸಿರು ಬಣ್ಣಗಳಿಂದ ದೂರ ಇರುವುದು ಒಳ್ಳೆಯದು. ಯಾತ್ರಾಸ್ಥಳಗಳಿಗೆ ಬೇಟಿ ನೀಡುವುದು ಒಳ್ಳೆಯದು.

ವೃಶ್ಚಿಕ ರಾಶಿ

ಮನೆಯ ಒಳಗೆ ನೀರು ಸೋರುವಂತೆ ಒದ್ದೆ ಬಟ್ಟೆಗಳನ್ನು ಒಣಗಿ ಹಾಕಬಾರದು. ತಿನ್ನುವ ಪದಾರ್ಥಗಳನ್ನು ಅಡುಗೆಮನೆಯಲ್ಲಿ ಕಾಲಿಗೆ ಸಿಗುವಂತೆ ಚೆಲ್ಲಬಾರದು. ಕಬ್ಬಿಣದ ಮಹಡಿಯ ಮೆಟ್ಟಿಲು ಇರಬಾರದು. ಬಡರೋಗಿಗಳಿಗೆ ಸಹಾಯ ಮಾಡಿ. ಹಣದ ತೊಂದರೆ ಇರುವವರಿಗೆ ತೀರ್ಥಯಾತ್ರೆ ಮಾಡಲು ಹಣದ ಸಹಾಯ ಮಾಡಿ. ಸಾಕು ಪ್ರಾಣಿಗಳಿಗೆ ಆಹಾರ ನೀಡಿದ ನಂತರ ನಿಮ್ಮ ಕೆಲಸವನ್ನು ಆರಂಭಿಸಿ. ಮನೆಯ ಕಿಟಕಿಗಳಿಗೆ ವಿವಿದ ಬಣ್ಣವಿರಲಿ. ಹಣದ ಪೆಟ್ಟಿಗೆಯಲ್ಲಿ ಹನ್ನೊಂದು ಕವಡೆಗಳನ್ನು ಇಡಿ. ನಿಮಗೆ 32,48 ಮತ್ತು 60 ವರ್ಷಗಳಾಗಿದ್ದಲ್ಲಿ ನವಗ್ರಹ ಹೋಮ ಅಥವಾ ನವಗ್ರಹ ಪೂಜೆ ಮಾಡಿಸುವುದು ಒಳ್ಳೆಯದು. ಬಿಳಿ ಮತ್ತು ಹಸಿರು ಬಣ್ಣವನ್ನು ಬಳಸಬಾರದು. ಚಿನ್ನದ ಸರ ಅಥವಾ ಬ್ರೇಸ್ ಲೆಟ್ ಅನ್ನು ಬಳಸಬಹುದು.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.