ವೃಶ್ಚಿಕ ರಾಶಿ ಭವಿಷ್ಯ ಜುಲೈ 18: ಕಳೆದು ಹೋದ ಪ್ರೀತಿ ಮತ್ತೆ ಸಿಗಲಿದೆ, ಕಚೇರಿಯಲ್ಲಿ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಶ್ಚಿಕ ರಾಶಿ ಭವಿಷ್ಯ ಜುಲೈ 18: ಕಳೆದು ಹೋದ ಪ್ರೀತಿ ಮತ್ತೆ ಸಿಗಲಿದೆ, ಕಚೇರಿಯಲ್ಲಿ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇದೆ

ವೃಶ್ಚಿಕ ರಾಶಿ ಭವಿಷ್ಯ ಜುಲೈ 18: ಕಳೆದು ಹೋದ ಪ್ರೀತಿ ಮತ್ತೆ ಸಿಗಲಿದೆ, ಕಚೇರಿಯಲ್ಲಿ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇದೆ

Scorpio Daily Horoscope July 18: ರಾಶಿಚಕ್ರದಲ್ಲಿ ಇದು 8ನೇ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ವೃಶ್ಚಿಕ. ಜುಲೈ 18ರ ವೃಶ್ಚಿಕ ರಾಶಿ ಭವಿಷ್ಯದ ಪ್ರಕಾರ, ಇಂದು ನಿಮಗೆ ಹಣದ ಸಮಸ್ಯೆ ಇರುವುದಿಲ್ಲ. ಸಂಗಾತಿಯೊಂದಿಗೆ ನೀವು ಎಚ್ಚರದಿಂದ ಸಂವಹನ ನಡೆಸಬೇಕು.

ವೃಶ್ಚಿಕ ರಾಶಿ ಭವಿಷ್ಯ ಜುಲೈ 18: ಕಳೆದುಹೋದ ಪ್ರೀತಿ ಮತ್ತೆ ಸಿಗಲಿದೆ, ಕಚೇರಿಯಲ್ಲಿ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇದೆ
ವೃಶ್ಚಿಕ ರಾಶಿ ಭವಿಷ್ಯ ಜುಲೈ 18: ಕಳೆದುಹೋದ ಪ್ರೀತಿ ಮತ್ತೆ ಸಿಗಲಿದೆ, ಕಚೇರಿಯಲ್ಲಿ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇದೆ

ವೃಶ್ಚಿಕ ರಾಶಿ ಭವಿಷ್ಯ ಜುಲೈ 18: ಇಂದು, ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದೀರಿ. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಕಚೇರಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಹಣದ ಸಮಸ್ಯೆ ಇರುವುದಿಲ್ಲ. ನಿಮ್ಮ ಆರೋಗ್ಯವೂ ಇಂದು ಉತ್ತಮವಾಗಿರುತ್ತದೆ. , ಎಲ್ಲಾ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ವೃಶ್ಚಿಕ ರಾಶಿಯ ಪ್ರೇಮ ಭವಿಷ್ಯ (Scorpio love relation)

ನಿಮ್ಮ ಪ್ರೇಮ ಜೀವನ ಉತ್ತಮವಾಗಿರುತ್ತದೆ. ಚರ್ಚೆ ಮತ್ತು ಆರೋಪಗಳಿಂದ ದೂರವಿರಿ. ನಿಮ್ಮ ಸಂಗಾತಿಯ ಬಗ್ಗೆ ನಂಬಿಕೆ ಇಡಿ, ಅನುಮಾನವು ನಿಮ್ಮ ನಡುವೆ ಬಿರುಕು ತರಬಹುದು. ಪ್ರೀತಿಯ ಜೀವನದಲ್ಲಿ ನೀವು ಸಕ್ಸಸ್‌ ಆಗಲು ಸಂವಹನವು ಒಂದು ಪ್ರಮುಖ ಅಂಶವಾಗಿದೆ. ನಿಮ್ಮ ಭಾವನೆಗಳನ್ನು ಪ್ರೇಮಿಯೊಂದಿಗೆ ಹಂಚಿಕೊಳ್ಳಲು, ಒಟ್ಟಿಗೆ ಸಮಯ ಕಳೆಯಲು ನೀವು ಕಾಳಜಿ ವಹಿಸಬೇಕು. ಇಂದು ಕೆಲವರು ತಮ್ಮ ಕಳೆದುಹೋದ ಪ್ರೀತಿಯನ್ನು ಕಂಡುಕೊಳ್ಳಬಹುದು ಆದರೆ ಮತ್ತೆ ಸಂಬಂಧವನ್ನು ಪ್ರಾರಂಭಿಸುವುದು ಜೀವನದಲ್ಲಿ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ವೃಶ್ಚಿಕ ರಾಶಿಯ ಜನರು ಇಂದು ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿ ಆಗಬಹುದು.

ವೃಶ್ಚಿಕ ವೃತ್ತಿ ರಾಶಿ ಭವಿಷ್ಯ (Scorpio Professional Horoscope)

ಕಚೇರಿಯಲ್ಲಿ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇರುವುದರಿಂದ ನೀವು ಎಚ್ಚರವಿರಬೇಕು. ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯ ಕ್ಷಮತೆಯತ್ತ ಬೆರಳು ತೋರಿಸಬಹುದು. ನಕಾರಾತ್ಮಕ ವಿಷಯಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ವೃತ್ತಿಪರ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುವ ತಂಡದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ. ನಿಮ್ಮ ವ್ಯಾಪಾರದಲ್ಲಿ ಪಾಲುದಾರರು ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡದೆ ಹಿಂಜರಿಯಬಹುದು. ಇದರಿಂದಾಗಿ ನೀವು ಮುಜುಗರದ ಪರಿಸ್ಥಿತಿಗೆ ಒಳಗಾಗಬಹುದು. ಆದರೂ ನಾಳೆಯ ವೇಳೆಗೆ ವಿಷಯಗಳು ಮತ್ತೆ ಸುಧಾರಿಸಲಿದೆ.

ವೃಶ್ಚಿಕ ರಾಶಿಯ ಆರ್ಥಿಕ ಭವಿಷ್ಯ (Scorpio money horoscope)

ಇಂದು ವೃಶ್ಚಿಕ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಕೆಲವು ವೃಶ್ಚಿಕ ರಾಶಿಯವರು ಸ್ನೇಹಿತರಿಗೆ ಸಂಬಂಧಿಸಿದ ಹಣಕಾಸಿನ ವಿವಾದವನ್ನು ಪರಿಹರಿಸುವುದರಿಂದ ಸಂತೋಷ ಪಡುತ್ತಾರೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಉದ್ಯಮಿಗಳು ಇಂದು ಹಣದ ವಿಚಾರದಲ್ಲಿ ತೊಂದರೆ ಎದುರಿಸಿಬಹುದು.

ವೃಶ್ಚಿಕ ರಾಶಿಯ ಆರೋಗ್ಯ ಜಾತಕ (Scorpio Health Horoscope)

ಇಂದು ನಿಮಗೆ ಉಸಿರಾಟದ ತೊಂದರೆ ಉಂಟಾಗಬಹುದು. ದೇಹವನ್ನು ಹುರಿಗೊಳಿಸಲು ಲಘು ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿ. ಬೆಳಗ್ಗೆ ಯೋಗ ಮತ್ತು ಧ್ಯಾನವು ಸವಾಲುಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲವು ಮಹಿಳೆಯರು ದಿನದ ಮೊದಲ ಭಾಗದಲ್ಲಿ ಚರ್ಮದ ಸೋಂಕುಗಳು ಅಥವಾ ಮೈಗ್ರೇನ್‌ ಸಮಸ್ಯೆಯನ್ನು ಎದುರಿಸಬಹುದು. ಸಂಜೆ ವೇಳೆ ಚಾಲಕರು ಜಾಗರೂಕರಾಗಿರಬೇಕು.

ವೃಶ್ಚಿಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ವೃಶ್ಚಿಕ ರಾಶಿಯ ಅಧಿಪತಿ: ಮಂಗಳ, ಶುಭ ದಿನಾಂಕಗಳು: 1, 2, 3, 4, 7, 9, ವೃಶ್ಚಿಕ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ, ವೃಶ್ಚಿಕ ರಾಶಿಯವರಿಗೆ ಶುಭ ವರ್ಣ: ಹಳದಿ, ಕೆಂಪು, ಕಿತ್ತಳೆ ಮತ್ತು ಕೆನೆಬಣ್ಣ, ವೃಶ್ಚಿಕ ರಾಶಿಯವರಿಗೆ ಅಶುಭ ವರ್ಣ: ಹಳದಿ ಮಿಶ್ರಿತ ಹಸಿರು, ವೃಶ್ಚಿಕ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ವೃಶ್ಚಿಕ ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15 ರಿಂದ ಅಕ್ಟೋಬರ್ 14, ವೃಶ್ಚಿಕ ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ವೃಶ್ಚಿಕ ರಾಶಿಯವರಿಗೆ ಶುಭ ರಾಶಿ: ಧನಸ್ಸು, ಮೀನ, ಕಟಕ ಮತ್ತು ಸಿಂಹ, ವೃಶ್ಚಿಕ ರಾಶಿಯವರಿಗೆ ಅಶುಭ ರಾಶಿ: ಮಕರ, ಮೇಷ, ವೃಷಭ ಮತ್ತು ತುಲಾ.

ವೃಶ್ಚಿಕ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು

1) ಹನುಮಾನ ಚಾಲೀಸಾ: ಪ್ರತಿದಿನ ಹನುಮಾನ್ ಚಾಲಿಸಾ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.

2) ಈ ದಾನಗಳಿಂದ ಶುಭಫಲ: ಉದ್ದಿನಬೇಳೆ ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.

3) ದೇವಾಲಯ, ಗುರುಪೂಜೆ: ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಕುಟುಂಬದಲ್ಲಿ ಧನಾತ್ಮಕ ಪ್ರಗತಿ ದೊರೆಯುತ್ತದೆ. ಶ್ರೀ ಗುರುಪೂಜೆ ಮಾಡುವುದರಿಂದ ಭೂ ವಿವಾದಗಳು ದೂರವಾಗಲಿದೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು, ಕೇಸರಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.