Bhagavad Gita: ಸರ್ವಾಂತರ್ಯಾಮಿಯಾದ ವಿಷ್ಣುವಿನ ಆಕಾರ ಅರ್ಜುನನ ಮನಸ್ಸು ತಲ್ಲಣಗೊಳಿಸಿದ್ದು ಹೇಗೆ; ಭಗವದ್ಗೀತೆಯ ಈ ಶ್ಲೋಕಗಳಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಸರ್ವಾಂತರ್ಯಾಮಿಯಾದ ವಿಷ್ಣುವಿನ ಆಕಾರ ಅರ್ಜುನನ ಮನಸ್ಸು ತಲ್ಲಣಗೊಳಿಸಿದ್ದು ಹೇಗೆ; ಭಗವದ್ಗೀತೆಯ ಈ ಶ್ಲೋಕಗಳಲ್ಲಿದೆ ವಿವರ

Bhagavad Gita: ಸರ್ವಾಂತರ್ಯಾಮಿಯಾದ ವಿಷ್ಣುವಿನ ಆಕಾರ ಅರ್ಜುನನ ಮನಸ್ಸು ತಲ್ಲಣಗೊಳಿಸಿದ್ದು ಹೇಗೆ; ಭಗವದ್ಗೀತೆಯ ಈ ಶ್ಲೋಕಗಳಲ್ಲಿದೆ ವಿವರ

Bhagavad Gita: ವಿಶ್ವರೂಪದಲ್ಲಿ ಪರಮಾತ್ಮನ ಬೃಹದಾಕಾರ, ಪ್ರಜ್ವಲಿಸುತ್ತಿರುವ ಮೃತ್ಯು ಸದೃಶ ಮುಖಗಳು, ಭಯಂಕರವಾದ ಹಲ್ಲುಗಳನ್ನು ಕಂಡು ಅರ್ಜುನನ ಮನಸ್ಸು ತಲ್ಲಣಗೊಳ್ಳುತ್ತದೆ. ಭಗವದ್ಗೀತೆಯ ಈ ಸಾಲುಗಳನ್ನು ಹೀಗೆ ವಿವರಿಸಲಾಗಿದೆ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 24
ನಭಃಸ್ಪೃಶಂ ದೀಪ್ತಮನೇಕವರ್ಣಮ್
ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ |
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾನ್ತರಾತ್ಮಾ
ಧೃತಿಂ ನ ವಿನ್ದಾಮಿ ಶಮಂ ಚ ವಿಷ್ಣೋ || 24 ||

ಅರ್ಥ: ಸರ್ವಾಂತರ್ಯಾಮಿಯಾದ ವಿಷ್ಣುವೆ! ಆಕಾಶವನ್ನು ಮುಟ್ಟುತ್ತಿರುವ ನಿನ್ನ ಅನೇಕ ಉಜ್ವಲ ವರ್ಣಗಳು, ತೆರೆದಿರುವ ನಿನ್ನ ಬಾಯಿಗಳು, ನಿನ್ನ ವಿಶಾಲವಾದ ಹೊಳೆಯುತ್ತಿರುವ ಕಣ್ಣುಗಳು, ಇವೆಲ್ಲವನ್ನು ಕಂಡು ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ನನ್ನ ಧೃತಿಯನ್ನಾಗಲಿ, ಸಮಚಿತ್ರವನ್ನಾಗಲಿ ಉಳಿಸಿಕೊಳ್ಳಲಾರೆ.

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 25
ದಂಷ್ಟಾಕರಾಲಾನಿ ಚ ತೇ ಮುಖಾನಿ
ದೃಷ್ಟೈವ ಕಾಲಾನಲಸನ್ನಿಭಾನಿ |
ದಿಶೋ ನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ || 25 ||

ಅರ್ಥ: ಎಲ್ಲ ಪ್ರಭುಗಳ ಪ್ರಭುವೆ, ಎಲ್ಲ ಲೋಕಗಳ ಆಶ್ರಯನೆ, ನನ್ನಲ್ಲಿ ಕೃಪೆ ಮಾಡು. ನಿನ್ನ ಪ್ರಜ್ವಲಿಸುತ್ತಿರುವ ಮೃತ್ಯು ಸದೃಶ ಮುಖಗಳನ್ನೂ, ಭಯಂಕರವಾದ ಹಲ್ಲುಗಳನ್ನೂ ಕಂಡೂ ನಾನು ನನ್ನ ಸಮತೋಲನವನ್ನು ಉಳಿಸಿಕೊಳ್ಳಲಾರೆ. ಎಲ್ಲ ರೀತಿಯಲ್ಲೂ ನಾನು ದಿಗ್ರಾಂತನಾಗಿದ್ದೇನೆ.

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 26
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ
ಸರ್ವೇ ಸಹೈವಾವನಿಪಾಲ ಸಂಘಃ |
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ
ಸಹಾಸ್ಮದೀಯೈರಪಿ ಯೋಧಮುಖ್ಯೈಃ || 26 ||

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 27
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ
ದಂಷ್ಟ್ರಾಕರಾಲಾನಿ ಭಯಾನಕಾನಿ |
ಕೇಚಿದ್ ವಿಲಗ್ನಾ ದಶನಾನ್ತರೇಷು
ಸಂದೃಶ್ಯಂತೇ ಚೂರ್ಣಿತೈರುತ್ತಮಾನ್ಗೈಃ || 27 ||

ಅರ್ಥ: ಧೃತರಾಷ್ಟ್ರನ ಎಲ್ಲ ಪುತ್ರರೂ ಅವರ ಸ್ನೇಹಿತರಾದ ರಾಜರುಗಳೂ, ಭೀಷ್ಮ, ದ್ರೋಣ ಮತ್ತು ಕರ್ಣರೂ, ನಮ್ಮ ಮುಖ್ಯಯೋಧರೂ, ನಿನ್ನ ಭಯಂಕರ ಬಾಯಿಗಳನ್ನು ವೇಗವಾಗಿ ಪ್ರವೇಶಿಸುತ್ತಿದ್ದಾರೆ. ನಿನ್ನ ಹಲ್ಲಿನ ಸಂದುಗಳಲ್ಲಿ ಸಿಕ್ಕಿಕೊಂಡು ಪುಡಿಪುಡಿಯಾದ ಕೆಲವರ ತಲೆಗಳನ್ನು ಕಾಣುತ್ತಿದ್ದೇನೆ.

ಭಾವಾರ್ಥ: ಹಿಂದಿನ ಒಂದು ಶ್ಲೋಕದಲ್ಲಿ ಅರ್ಜುನನಿಗೆ ಬಹು ಆಸಕ್ತಿಯನ್ನುಂಟುಮಾಡುವ ದೃಶ್ಯಗಳನ್ನು ತೋರಿಸುವುದಾಗಿ ಪರಮ ಪ್ರಭುವು ಭರವಸೆ ನೀಡಿದ. ತಮ್ಮ ವಿರುದ್ಧಪಕ್ಷದ ನಾಯಕರು (ಭೀಷ್ಮ, ದ್ರೋಣ, ಕರ್ಣ ಮತ್ತು ಧೃತರಾಷ್ಟ್ರನ ಎಲ್ಲ ಗಂಡು ಮಕ್ಕಳು), ಅವರ ಯೋಧರು ಮತ್ತು ಅರ್ಜುನನ ಯೋಧರು ಸಹ ನಾಶವಾಗುತ್ತಿರುವುದನ್ನು ಈಗ ಅರ್ಜುನನು ಕಾಣುತ್ತಾನೆ. ಕುರುಕ್ಷೇತ್ರದಲ್ಲಿ ಸೇರಿದವರಲ್ಲಿ ಸ್ವಲ್ಪ ಹೆಚ್ಚು ಕಡಮೆ ಎಲ್ಲರ ಸಾವಿನನಂತರ ಅರ್ಜುನನು ಜಯಶಾಲಿಯಾಗುತ್ತಾನೆ ಎನ್ನುವುದಕ್ಕೆ ಇದೊಂದು ಸೂಚನೆ. ಅಜೇಯನೆನಿಸಿಕೊಂಡ ಭೀಷ್ಮನು ಸಹ ನುಚ್ಚುನೂರಾಗುತ್ತಾನೆ ಎಂದು ಇಲ್ಲಿ ಹೇಳಿದೆ. ಹಾಗೆಯೇ ಕರ್ಣನೂ ಸಹ. ಶತ್ರುಪಕ್ಷದ ಭೀಷ್ಮನಂತಹ ಮಹಾ ಯೋಧರು ಮಾತ್ರವಲ್ಲದೆ ಅರ್ಜುನನ ಪಕ್ಷದ ಹಲವಾರು ಮಹಾನ್ ಯೋಧರೂ ನುಚ್ಚುನೂರಾಗುತ್ತಾರೆ.

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 28

ಯಥಾ ನದೀನಾಂ ಬಹವೋಮ್ಬುವೇಗಾಃ

ಸಮುದ್ರಮೇವಾಭಿಮುಖಾ ದ್ರವನ್ತಿ|

ತಥಾ ತವಾಮೀ ನರಲೋಕವೀರಾ

ವಿಶನ್ತಿ ವಕ್ತ್ರಾಣ್ಯಭಿವಿಜ್ವಲನ್ತಿ || 28 ||

ಅರ್ಥ: ನದಿಗಳ ಅಧಿಕ ಸಂಖ್ಯೆಯ ಅಲೆಗಳು ಸಮುದ್ರದೊಳಕ್ಕೆ ಹರಿಯುವಂತೆ, ಈ ಎಲ್ಲ ಮಹಾ ಯೋಧರು ಪ್ರಜ್ವಲಿಸುತ್ತ ನಿನ್ನ ಬಾಯಿಗಳನ್ನು ಪ್ರವೇಶಿಸುತ್ತಿರುವರು.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

HT Kannada Desk

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.