2025ರ ಗಂಗಾ ಸಪ್ತಮಿ ಯಾವಾಗ? ದಿನಾಂಕ, ಶುಭ ಸಮಯ, ಪೂಜಾ ವಿಧಾನದ ಜೊತೆಗೆ ಮಹತ್ವವನ್ನು ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025ರ ಗಂಗಾ ಸಪ್ತಮಿ ಯಾವಾಗ? ದಿನಾಂಕ, ಶುಭ ಸಮಯ, ಪೂಜಾ ವಿಧಾನದ ಜೊತೆಗೆ ಮಹತ್ವವನ್ನು ತಿಳಿಯಿರಿ

2025ರ ಗಂಗಾ ಸಪ್ತಮಿ ಯಾವಾಗ? ದಿನಾಂಕ, ಶುಭ ಸಮಯ, ಪೂಜಾ ವಿಧಾನದ ಜೊತೆಗೆ ಮಹತ್ವವನ್ನು ತಿಳಿಯಿರಿ

ಗಂಗಾ ಸಪ್ತಮಿ: ಹಿಂದೂ ಧರ್ಮದಲ್ಲಿ ಗಂಗಾ ಸಪ್ತಮಿಗೆ ಸಾಕಷ್ಟು ಮಹತ್ವವಿದೆ. ಈ ದಿನ ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು. ಈ ಶುಭ ದಿನದಂದು ಗಂಗಾ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.

2025ರ ಗಂಗಾ ಸಪ್ತಮಿ ಯಾವಾಗ, ದಿನಾಂಕ, ಶುಭ ಸಮಯ, ಪೂಜಾ ವಿಧಾನ ಹಾಗೂ ಮಹತ್ವದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
2025ರ ಗಂಗಾ ಸಪ್ತಮಿ ಯಾವಾಗ, ದಿನಾಂಕ, ಶುಭ ಸಮಯ, ಪೂಜಾ ವಿಧಾನ ಹಾಗೂ ಮಹತ್ವದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಗಂಗಾ ಸಪ್ತಮಿ 2025: ಹಿಂದೂ ಧರ್ಮದಲ್ಲಿ ಗಂಗಾ ಸಪ್ತಮಿಗೆ ಸಾಕಷ್ಟು ಮಹತ್ವವಿದೆ. ಧಾರ್ಮಿಕ ದಂತಕಥೆಗಳ ಪ್ರಕಾರ, ಈ ದಿನದಂದು, ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು. ಈ ಶುಭ ದಿನದಂದು, ಗಂಗಾ ದೇವಿಯನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಈ ದಿನವನ್ನು ಗಂಗಾ ಜಯಂತಿ ಅಂತಲೂ ಆಚರಿಸಲಾಗುತ್ತದೆ. ಗಂಗಾ ಸಪ್ತಮಿಯನ್ನು ಪ್ರತಿವರ್ಷ ವೈಶಾಖ ಶುಕ್ಲ ಪಕ್ಷದ ಏಳನೇ ದಿನದಂದು ಆಚರಿಸಲಾಗುತ್ತದೆ. ಗಂಗಾ ಸಪ್ತಮಿಯ ದಿನಾಂಕ, ಪೂಜೆ, ಶುಭ ಸಮಯ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.

ಗಂಗಾ ಸಪ್ತಮಿ ಯಾವಾಗ: ಈ ವರ್ಷ, ಗಂಗಾ ಸಪ್ತಮಿಯನ್ನು 2025ರ ಮೇ 3 ರ ಶನಿವಾರ ಆಚರಿಸಲಾಗುತ್ತದೆ.

ಶುಭ ಮುಹೂರ್ತ

ತಿಥಿ ಪ್ರಾರಂಭ: 2025ರ ಮೇ 03 ರಂದು ಬೆಳಿಗ್ಗೆ 07:51

ಸಪ್ತಮಿ ತಿಥಿ ಕೊನೆಗೊಳ್ಳವ ಸಮಯ: 2025ರ ಮೇ 04 ರಂದು ಬೆಳಿಗ್ಗೆ 07:18

ಗಂಗಾ ಸಪ್ತಮಿ ಮಧ್ಯಾಹ್ನದ ಮುಹೂರ್ತ: ಬೆಳಿಗ್ಗೆ 10:58 ರಿಂದ ಮಧ್ಯಾಹ್ನ 01:38, ಅವಧಿ: 02 ಗಂಟೆ 40 ನಿಮಿಷ

ಗಂಗಾ ಸಪ್ತಮಿ ಪೂಜಾ ವಿಧಿ

ಗಂಗಾ ಸಪ್ತಮಿಯ ಶುಭ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ನೀವು ಮನೆಯಲ್ಲಿಯೇ ಇದ್ದರೆ ಸ್ನಾನದ ನೀರಿನಲ್ಲಿ ಗಂಗಾ ನೀರನ್ನು ಬೆರೆಸಿ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ಗಂಗಾ ಮಾತೆಯನ್ನು ಧ್ಯಾನಿಸಿ. ಸ್ನಾನ ಮಾಡಿದ ನಂತರ, ಮನೆಯ ದೇವಾಲಯದಲ್ಲಿ ದೀಪವನ್ನು ಬೆಳಗಿಸಿ. ಇದರ ನಂತರ, ಎಲ್ಲಾ ದೇವರುಗಳು ಮತ್ತು ದೇವತೆಗಳನ್ನು ಗಂಗಾ ನೀರಿನಿಂದ ಅಭಿಷೇಕಿಸಿ. ನಂತರ ಗಂಗಾ ಮಾತೆಯನ್ನು ಹೆಚ್ಚು ಧ್ಯಾನಿಸಿ. ತಾಯಿಯನ್ನು ಧ್ಯಾನಿಸುವಾಗ ಹೂವುಗಳನ್ನು ಅರ್ಪಿಸಿ.

ಗಂಗಾ ಸಪ್ತಮಿ ದಿನ ಈ ಕೆಲಸವನ್ನು ಮಾಡಿ

ಈ ಪವಿತ್ರ ದಿನದಂದು ಗಂಗಾ ಮಾತೆಗೆ ಆಹಾರವನ್ನು ಅರ್ಪಿಸಬೇಕು. ಸಾತ್ವಿಕ ಪದಾರ್ಥಗಳನ್ನು ಮಾತ್ರ ದೇವರಿಗೆ ಅರ್ಪಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಬಳಿಕ ಗಂಗಾ ಮಾತೆಯ ಆರತಿಯನ್ನು ಬೆಳಗಿ.

ಗಂಗಾ ಸಪ್ತಮಿ ದಿನ ಪೂಜೆ ಮಾಡುವುದರಿಂದ ಆಗುವ ಪ್ರಯೋಜನಗಳಿವು

ತಾಯಿ ಗಂಗಾ ಮಾತೆಯನ್ನು ಮೋಕ್ಷಧಾಯನಿ ಎಂದೂ ಕರೆಯಲಾಗುತ್ತದೆ. ಈ ದಿನ ಗಂಗಾ ದೇವಿಯನ್ನು ಪೂಜಿಸುವುದರಿಂದ ಸಾವಿನ ನಂತರ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಗಂಗಾ ಮಾತೆಯನ್ನು ಪೂಜಿಸುವ ಮೂಲಕ ನಮ್ಮಲ್ಲಿರುವ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿಯನ್ನು ಪಡೆಯಬಹುದು. ಗಂಗಾ ಮಾತೆಯ ಕೃಪೆಯಿಂದ, ಜಾತಕದಲ್ಲಿ ದುಷ್ಟ ಗ್ರಹಗಳ ಪ್ರಭಾವವೂ ಕಡಿಮೆಯಾಗುತ್ತದೆ. ಈ ಶುಭ ದಿನದಂದು, 'ಓಂ ನಮೋ ಗಂಗಾಯೈ ವಿಶ್ವರೂಪಿಣ್ಯೈ ನಾರಾಯಣ್ಯೈ ನಮೋ ನಮಃ' ಎಂಬ ಮಂತ್ರವನ್ನು ಪಠಿಸಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.