ಗೀತಾ ಜಯಂತಿ 2024: ರವಿ ಯೋಗದಲ್ಲಿ ಗೀತಾ ಜಯಂತಿ ಆಚರಣೆ; ದಿನಾಂಕ, ಶುಭ ಸಮಯ, ಮಹತ್ವದ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗೀತಾ ಜಯಂತಿ 2024: ರವಿ ಯೋಗದಲ್ಲಿ ಗೀತಾ ಜಯಂತಿ ಆಚರಣೆ; ದಿನಾಂಕ, ಶುಭ ಸಮಯ, ಮಹತ್ವದ ಮಾಹಿತಿ ಇಲ್ಲಿದೆ

ಗೀತಾ ಜಯಂತಿ 2024: ರವಿ ಯೋಗದಲ್ಲಿ ಗೀತಾ ಜಯಂತಿ ಆಚರಣೆ; ದಿನಾಂಕ, ಶುಭ ಸಮಯ, ಮಹತ್ವದ ಮಾಹಿತಿ ಇಲ್ಲಿದೆ

ಗೀತಾ ಜಯಂತಿ 2024: ಗೀತಾ ಜಯಂತಿಯನ್ನು ಬ್ರಹ್ಮಾಂಡದ ಅಧಿಪತಿಯಾದ ವಿಷ್ಣುವಿನ ಆರಾಧನೆಗೆ ಸಮರ್ಪಿಸಲಾಗಿದೆ. ಈ ದಿನದಂದು ಉಪವಾಸ ಮತ್ತು ಪೂಜೆ ಮಾಡುವುದರಿಂದ ಭಕ್ತರ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ. 2024ರ ದಿನಾಂಕ ಮತ್ತು ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.

2024ರ ಗೀತಾ ಜಯಂತಿ ಮತ್ತು ಅದರ ಮಹತ್ವವನ್ನು ತಿಳಿಯಿರಿ
2024ರ ಗೀತಾ ಜಯಂತಿ ಮತ್ತು ಅದರ ಮಹತ್ವವನ್ನು ತಿಳಿಯಿರಿ

ಗೀತಾ ಜಯಂತಿ 2024: ಹಿಂದೂ ಧರ್ಮದಲ್ಲಿ ಪ್ರತಿ ವರ್ಷ ಮಾರ್ಗಶಿರ ಮಾಸದ ಶುಕ್ಲಪಕ್ಷ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸುತ್ತೇವೆ. ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ಈ ಬಾರಿ 2024ರ ಡಿಸೆಂಬರ್ 11 (ಬುಧವಾರ) ರಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. 2024ರ ಗೀತಾ ಜಯಂತಿಯು 5,161 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣನು ಈ ದಿನದಂದು ಅರ್ಜುನನಿಗೆ ಗೀತಾ ಜ್ಞಾನವನ್ನು ನೀಡಿದನು. ಅದಕ್ಕಾಗಿಯೇ ಈ ದಿನವನ್ನು ಗೀತಾ ಜಯಂತಿ ಎಂದು ಆಚರಿಸಲಾಗುತ್ತದೆ. ಇದನ್ನು ಗೀತಾ ಮಹೋತ್ಸವ ಅಂತಲೂ ಕರೆಯಲಾಗುತ್ತದೆ.

ಗೀತಾ ಜಯಂತಿಯನ್ನು ವಿಷ್ಣುವಿನ ಪೂಜೆಗೆ ಸಮರ್ಪಿಸಲಾಗಿದೆ. ಈ ದಿನದಂದು ಉಪವಾಸ ಮತ್ತು ಪೂಜೆ ಮಾಡುವುದರಿಂದ ಜನರ ಎಲ್ಲಾ ಅಪೂರ್ಣ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ.

ಗೀತಾ ಜಯಂತಿ ದಿನಾಂಕ, ಶುಭ ಸಮಯ, ಮಹತ್ವ

ಗೀತಾ ಜಯಂತಿ ಯಾವಾಗ?

ಚಂದ್ರಮಾನ ಕ್ಯಾಲೆಂಡರ್ ಪ್ರಕಾರ, ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ ತಿಥಿಯು 2024ರ ಡಿಸೆಂಬರ್ 11 ರಂದು ಬೆಳಗ್ಗೆ 03:42ಕ್ಕೆ ಪ್ರಾರಂಭವಾಗುತ್ತದೆ. ಮರುದಿನ 2024ರ ಡಿಸೆಂಬರ್ 12 ರಂದು ಬೆಳಗ್ಗೆ 01:09 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದಯ ತಿಥಿಯಂತೆ 11ನೇ ಡಿಸೆಂಬರ್ 2024 ರಂದು ಗೀತಾ ಜಯಂತಿಯನ್ನು ಆಚರಿಸುತ್ತೇವೆ. ಗೀತಾ ಜಯಂತಿಯಂದು ರವಿ ಯೋಗ ಉಂಟಾಗುತ್ತದೆ, ಆದರೆ ಈ ದಿನ ಭದ್ರನ ನೆರಳು ಕೂಡ ಇರುತ್ತದೆ.

ಗೀತಾ ಜಯಂತಿ ಶುಭ ಮುಹೂರ್ತ

ಶುಭ ಮುಹೂರ್ತಂ – ಬ್ರಹ್ಮ ಮುಹೂರ್ತ: 05:07 AM ನಿಂದ 06:01 AM

ವಿಜಯ ಮುಹೂರ್ತ: 01:48 ರಿಂದ 02:29

ಗೋಧೂಳಿ ಮುಹೂರ್ತ: 05:11 ರಿಂದ 05:38 PM

ಅಮೃತ ಕಲಾನ: 09:34 ರಿಂದ 11:03

ನಿಶ್ಚಿತ ಮುಹೂರ್ತಂ: 1:03 ರಿಂದ 11:03

ರವಿಯೋಗ: ಡಿಸೆಂಬರ್ 12 ರ ಗುರುವಾರ ಬೆಳಿಗ್ಗೆ 06:56 ರಿಂದ 11:48 ರವರೆಗೆ

ಅಶುಭ ಮುಹೂರ್ತ-ರಾಹು ಕಾಲ: ಮಧ್ಯಾಹ್ನ 12:05 ರಿಂದ ಮಧ್ಯಾಹ್ನ 01:22 ರವರೆಗೆ

ಭದ್ರಕಾಲ: 02:27 ರಿಂದ 01:09

ಡಿಸೆಂಬರ್ 12 ಪಂಚಕ: 06:56 ರಿಂದ 11:48 ರವರೆಗೆ

ಗೀತಾ ಜಯಂತಿ ಏಕೆ ವಿಶೇಷ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣನು ಅರ್ಜುನನಿಗೆ ಗೀತಾ ಸಂದೇಶವನ್ನು ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಕಾದಶಿ ದಿನದಂದು ನೀಡಿದನು. ಭಗವಾನ್ ಕೃಷ್ಣನು ಕುರುಕ್ಷೇತ್ರದಲ್ಲಿ 45 ನಿಮಿಷಗಳ ಕಾಲ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂದು ಹೇಳಲಾಗುತ್ತದೆ. ಗೀತಾ ಜ್ಞಾನದಲ್ಲಿ ಎಲ್ಲಾ ಧಾರ್ಮಿಕ ಮಾರ್ಗಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಮೋಕ್ಷವನ್ನು ಪಡೆಯಬಹುದು. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ನೀಡಿದ ಬೋಧನೆಗಳು ಎಲ್ಲಾ ಮನುಕುಲಕ್ಕೆ ಸ್ಫೂರ್ತಿಯಾಗಿದೆ. ಗೀತಾ ಜಯಂತಿಯಂದು ಉಪವಾಸ ಮಾಡುವುದರಿಂದ ಭಕ್ತಾದಿಗಳ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಅವರಿಗೆ ಜೀವನದಲ್ಲಿ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.