2025 ರಲ್ಲಿ ಕರ್ನಾಟಕ ಕರಾವಳಿಯಲ್ಲಿ ನಡೆಯುವ ಜಾತ್ರೆ, ದೇವರ ಉತ್ಸವ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025 ರಲ್ಲಿ ಕರ್ನಾಟಕ ಕರಾವಳಿಯಲ್ಲಿ ನಡೆಯುವ ಜಾತ್ರೆ, ದೇವರ ಉತ್ಸವ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

2025 ರಲ್ಲಿ ಕರ್ನಾಟಕ ಕರಾವಳಿಯಲ್ಲಿ ನಡೆಯುವ ಜಾತ್ರೆ, ದೇವರ ಉತ್ಸವ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಜನವರಿ ಬರುತ್ತಿದ್ದಂತೆ ಹೊಸ ವರ್ಷದ ಜೊತೆಗೆ ಹಲವು ಜಾತ್ರೆಗಳು ಶುರುವಾಗುತ್ತವೆ. ವಿಶೇಷವಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಕಷ್ಟು ಜಾತ್ರೆ, ದೇವರ ಉತ್ಸವ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. 2025 ರಲ್ಲಿ ಈ ಭಾಗದಲ್ಲಿ ನಡೆಯುವ ಜಾತ್ರೆಗಳು, ದೇವರ ಉತ್ಸವಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. (ವರದಿ: ಹರೀಶ್ ಮಾಂಬಾಡಿ)

ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವದಿಂದ ಕಟೀಲು  ಜಾತ್ರೆಯವರಿಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಕಷ್ಟು ಜಾತ್ರೆ, ದೇವರ ಉತ್ಸವ ಹಾಗೂ ಧಾರ್ಮಿಕ ವಿಶೇಷಕಾರ್ಯಕ್ರಮಗಳು ನಡೆಯುತ್ತವೆ.
ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವದಿಂದ ಕಟೀಲು ಜಾತ್ರೆಯವರಿಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಕಷ್ಟು ಜಾತ್ರೆ, ದೇವರ ಉತ್ಸವ ಹಾಗೂ ಧಾರ್ಮಿಕ ವಿಶೇಷಕಾರ್ಯಕ್ರಮಗಳು ನಡೆಯುತ್ತವೆ.

ಮಂಗಳೂರು: ಕರ್ನಾಟಕ ಕರಾವಳಿ ಎನಿಸಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡವಲ್ಲದೆ, ಕಾಸರಗೋಡು ಜಿಲ್ಲೆಗಳಲ್ಲಿಯೂ ಜಾತ್ರೆ ಎಂದರೆ ಇಡೀ ಊರವರಷ್ಟೇ ಅಲ್ಲ, ಹೊರಭಾಗಗಳಲ್ಲಿ ನೆಲೆಸಿದವರೂ ಒಮ್ಮೆ ಬಂದು ಹೋಗುವ ಪದ್ಧತಿ ಇದೆ. ಜನವರಿ ತಿಂಗಳು ಬಂತೆಂದರೆ ಜಾತ್ರೋತ್ಸವಗಳು ಆರಂಭ. ಮೇ ತಿಂಗಳವರೆಗೂ ಹಬ್ಬದೋಪಾದಿಯಲ್ಲಿ ಉತ್ಸವಗಳು ನಡೆಯುತ್ತದೆ. ಹಿಂದು, ಮುಸ್ಲಿಂ, ಜೈನ ಧರ್ಮೀಯರ ಆರಾಧನಾ ಕೇಂದ್ರಗಳಲ್ಲೂ ಉತ್ಸವಗಳು ಪ್ರಸಿದ್ಧ. ಈ ವರ್ಷ ಬೇಸಿಗೆಯಲ್ಲಿ ಯಾವ ದಿನ ಯಾವ ಜಾತ್ರೆ ನಡೆಯುತ್ತದೆ ಎಂಬುದರ ವಿವರ ಇಲ್ಲಿದೆ.

2025ರ ಜನವರಿಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ನಡೆಯುವ ಜಾತ್ರೆ, ದೇವರ ಉತ್ಸಗಳು

ಗಡಿನಾಡು ಕರೋಪಾಡಿ ಗ್ರಾಮದ ವಗೆನಾಡು ಸುಬ್ರಾಯ ದೇವರ ಉತ್ಸವ ಜನವರಿ 5 ರಂದು ನಡೆಯಲಿದೆ. ಅಂದೇ ಕೋಲ್ಪೆ ಸುಬ್ರಹ್ಮಣ್ಯ ಉತ್ಸವ ನಡೆಯುತ್ತದೆ. ಇದಾದ ಬಳಿಕ ಜನವರಿ 9 ರಂದು ಬಂಗಾಡಿ ಬಸದಿ ರಥ, ಕೋಟ ಅಮೃತೇಶ್ವರಿ ಜಾತ್ರೆ ನಡೆಯಲಿದೆ. ಜನವರಿ 11 ರಂದು ಪದ್ಯಾಣ ಮಹಾಲಿಂಗೇಶ್ವರ ಉತ್ಸವ. ಜನವರಿ 14 ರಂದು ಮಹಾ ಸಂಕ್ರಮಣ ಇರುತ್ತದೆ. ಅಂದೇ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧ್ವಜಾರೋಹಣ ನಡೆಯಲಿದೆ. ಉಡುಪಿ ಮೂರುರಥ, ಸಂಗಬೆಟ್ಟು ಬನಶಂಕರಿ ಉತ್ಸವ, ಕಾವೂರು ಧ್ವಜ, ಮಂಜನಾಡಿ ಧ್ವಜ, ಕುಂದಾಪುರ ಅರಸಮ್ಮಕಾನು ಶೇಡಿಮನೆ ದುರ್ಗಾಪರಮೇಶ್ವರಿ ಕೆಂಡೋತ್ಸವ, ಕೂಡ್ಲು ಮಹಾವಿಷ್ಣು ಜಾತ್ರೆ ನಡೆಯಲಿದೆ.

ಜನವರಿ 15ರಂದು ಉಡುಪಿ ಚೂರ್ಣೋತ್ಸವ, 16ರಂದು ಸಾಲಿಗ್ರಾಮ ರಥೋತ್ಸವ ನಡೆಯಲಿದೆ. 17ರಂದು ಕುಂಬಳೆ ಮಹೋತ್ಸವ, ಕಾವೂರು ಮಹಾಲಿಂಗೇಶ್ವರ ಜಾತ್ರೆ, 19ರಂದು ಕಾರ್ಮಾರು ಮಹಾವಿಷ್ಣು ಮಹೋತ್ಸವ, ನಾವೂರ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ ಜಾತ್ರೆ, 21ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ರಥ, ಉಜಿರೆ ಜನಾರ್ದನ ರಥ, ಕದ್ರಿ ರಥೋತ್ಸವ ನಡೆಯಲಿದೆ. ಜನವರಿ 26 ರಂದು ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರ ರಥ, 27 ರಂದು ನಾಳ ದುರ್ಗಾಪರಮೇಶ್ವರಿ ರಥ, 29 ರಂದು ನಾರಂಪಾಡಿ ಉಮಾಮಹೇಶ್ವರ ಧ್ವಜ, 30 ರಂದು ಬಲ್ನಾಡು ಬಟ್ಟೆ ವಿನಾಯಕ ಉತ್ಸವ ಹಾಗೂ ಜನವರಿ 31 ರಂದು ಮುಸ್ಲಿಮರ ಶಾಬಾನ್ ತಿಂಗಳಾರಂಭ ಇರುತ್ತದೆ.

ಫೆಬ್ರವರಿಯಲ್ಲಿ ಕರಾವಳಿ ಜಾತ್ರೆಗಳು

2025ರ ಫೆಬ್ರವರಿ 1ರಂದು ನಾರಂಪಾಡಿ ಉಮಾಮಹೇಶ್ವರ ಉತ್ಸವ ನಡೆಯುತ್ತದೆ. ಫೆ. 2 ರಂದು ಸೌತಡ್ಕ ಮಹಾಗಣಪತಿ ಮೂಡಪ್ಪ ಸೇವೆ, ಬಸ್ರೂರು ಮಹಾಲಸಾ ನಾರಾಯಣಿ ರಥ, ಫೆ. 3 ರಂದು ಸುರತ್ಕಲ್ ವೀರಭದ್ರ ದುರ್ಗಾಪರಮೇಶ್ವರಿ ಚೂರ್ಣೋತ್ಸವ, ಫೆ. 4 ರಂದು ಕಶೆಕೋಡಿ ಲಕ್ಷ್ಮೀವೆಂಕಟೇಶ್ವರ ಉತ್ಸವ, ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ರಥೋತ್ಸವ. ರಥಸಪ್ತಮಿಯ ಆ ದಿನ ಮಂಗಳೂರು ವೆಂಕಟರಮಣ ದೇವರ ರಥೋತ್ಸವ ನಡೆಯಲಿದೆ. ಪೋಳ್ಯ ಲಕ್ಷ್ಮೀವೆಂಕಟರಮಣ ದೇವರ ರಥೋತ್ಸವವೂ ಅಂದೇ ನಡೆಯುವುದು.

ಫೆಬ್ರವರಿ 6 ರಂದು ಉಪ್ಪಿನಂಗಡಿ ಲಕ್ಷ್ಮೀವೆಂಕಟರಮಣ ರಥ, ಪಂಜ ಪಂಚಲಿಂಗೇಶ್ವರ ರಥ, ಮೊಗರ್ನಾಡು ರಥೋತ್ಸವ ಇರಲಿದೆ. ಫೆಬ್ರವರಿ 7 ರಂದು ಒಡಿಯೂರು ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಅಂದು ಕುಂಬಳೆ ಬಂಬ್ರಾಣದ ಧೂಮಾವತಿ ನೇಮೋತ್ಸವ ನಡೆಯಲಿದೆ. ಕಾನಂಗಿ ಗಾಯತ್ರಿ ದೇವಿ ಪ್ರತಿಷ್ಠಾವರ್ಧಂತಿ, ಆಗಲ್ಪಾಡಿ ದುರ್ಗಾಪರಮೇಶ್ವರಿ ಅವಭೃತ ಜರುಗಳಿದೆ. ಫೆಬ್ರವರಿ 9 ರಂದು ಶ್ರೀ ವಾದಿರಾಜ ಜಯಂತಿ, ತೊಡಿಕ್ಕಾನ ಮಲ್ಲಿಕಾರ್ಜುನ ಪ್ರತಿಷ್ಠಾವರ್ಧಂತಿ, 10 ರಂದು ಮೂಡುಬಿದಿರೆ ಬಡಗುಬಸದಿ ರಥ, 11 ರಂದು ಕಲ್ಲೇಗ ಕಲ್ಕುಡ ಜಾತ್ರೆ, ಚಿಪ್ಪಾಡು ಜಾತ್ರೆ, 12 ರಂದು ರಾಮಕುಂಜ ರಥ, 13 ರಂದು ಕೆಲಿಂಜ ಉಳ್ಳಾಲ್ತಿ ಜಾತ್ರೆ, 14 ರಂದು ಕೊಡವೂರು ಶಂಕರನಾರಾಯಣ ರಥ, 15 ರಂದು ನಂದಾವರ ರಥೋತ್ಸವ, 16 ರಂದು ಮುಚ್ಚಂಪಾಡಿ ಧೂಮಾವತಿ ಭಂಡ ನೇಮ, 18 ರಂದು ಮುಜಂಗಾವು ಪಾರ್ಥಸಾರಥಿ ಉತ್ಸವ, ಕಾಪು ಜನಾರ್ದನ ಉತ್ಸವ, 20 ರಂದು ಉಪ್ಪಿನಂಗಡಿ ಮಖೆ ಜಾತ್ರೆ, 22 ರಂದು ಪೆರುವಾಯಿ ಜಾತ್ರೆ, 26 ರಂದು ದೇಲಂಪಾಡಿ ಉತ್ಸವ, 28 ರಂದು ಕಾರಿಂಜ ರಥ, ಗೋಕರ್ಣ ಮಹಾಬಲೇಶ್ವರ ರಥ ನಡೆಯಲಿದೆ.

ಮಾರ್ಚ್ ನಲ್ಲಿ ಕರಾವಳಿ ಜಾತ್ರೆಗಳ ವಿವರ

ಮಾರ್ಚ್ 1 ರಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ರಥ, 2 ರಂದು ಪವಿತ್ರ ರಂಜಾನ್ ತಿಂಗಳಾರಂಭ, 3 ರಂದು ಕೇಳ್ದೋಡಿ ಬ್ರಹ್ಮಬೈದರ್ಕಳ ಜಾತ್ರೆ, 6 ರಂದು ಬಂಟ್ವಾಳ ವೆಂಕಟರಮಣ ರಥ, 8 ರಂದು ಬರಿಮಾರು ಮಹಮ್ಮಾಯಿ ರಥ, 13 ರಂದು ಮೂಡಿಗೆರೆ ಫಲ್ಗುಣಿ ಕಲಾನಾಥೇಶ್ವರ ಬ್ರಹ್ಮರಥಾರೋಹಣ, ಹೋಳಿಹುಣ್ಣಿಮೆ ಕಾಮದಹನ, ಬಾಯಾರು ಪಂಚಲಿಂಗೇಶ್ವರ ಉತ್ಸವ, ಉಪ್ಪಿನಂಗಡಿ ಮಖೆ ಜಾತ್ರೆ, 14 ರಂದು ಕುತ್ಯಾಳ ಗೋಪಾಲಕೃಷ್ಣ ರಥ, ಕಾರ್ಕಳ ಹಿರೇಬಸದಿ ರಥ. 15 ರಂದು ಕಾಸರಗೋಡು ಕಾಳ್ಳಂಗಾಡು ಮೂಕಾಂಬಿಕಾ ಉತ್ಸವ, ಮೂಡಿಗೆರೆ ಫಾಲ್ಗುಣಿ ಕಲಾನಾಥೇಶ್ವರ ರಥ, 16 ರಂದು ಪೆರ್ಡೂರು ರಥ, 17 ರಂದು ವಾದಿರಾಜ ಪುಣ್ಯತಿಥಿ, ಉಳ್ಳಾಲ ಲಕ್ಷ್ಮೀನರಸಿಂಹ ಬ್ರಹ್ಮರಥ, 18 ರಂದು ಅಡೂರು ಅವಭೃತ, ಅನಾರು ಪಟ್ರಮೆ ದುರ್ಗಾಪರಮೇಶ್ವರಿ ಜಾತ್ರಾರಂಭ, 20 ರಂದು ಕರಾಯ ಮಹಾಲಿಂಗೇಶ್ವರ ಉತ್ಸವ, 22 ರಂದು ಆಲಂಕಾರು ದುರ್ಗಾಪರಮೇಶ್ವರಿ ರಥ, ಕೊಲ್ಲೂರು ಜಾತ್ರೆ, ಮಾರ್ಚ್ 30 ರಂದು ಮಂಗಳೂರು ಕಾಳಿಕಾಂಬಾ ಉತ್ಸವ.

ಏಪ್ರಿಲ್ ಕರಾವಳಿ ಜಾತ್ರೆಗಳ ಪಟ್ಟಿ

ಏಪ್ರಿಲ್ 4 ರಂದು ಬಾರ್ಕೂರು ರಥ, ಬ್ರಹ್ಮಾವರ ರಥ, ಮಂಗಳೂರು ಡೊಂಗರಕೇರಿ ರಥ, 5 ರಂದು ಶರವು ರಥ, 6 ರಂದು ಕಣಿವೆ ಶ್ರೀರಾಮ ರಥ, 10 ರಂದು ಪೊಳಲಿ ಜಾತ್ರೆ, 13 ರಂದು ಮಧೂರು ಧ್ವಜ, ಬಂಟ್ವಾಳ ಮಹಾಲಿಂಗೇಶ್ವರ ರಥ, 15 ರಂದು ಮಲ್ಪೆ ವಡಭಾಂಡೇಶ್ವರ ರಥ, 16 ರಂದು ಮಧೂರು ಮಹೋತ್ಸವ, ಅಮ್ಮೆಂಬಳ ಸೋಮನಾಥೇಶ್ವರ ರಥ, ಬಂಟ್ವಾಳ ಮಹಾಲಿಂಗೇಶ್ವರ ರಥ, 17 ರಂದು ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥ, ನೀಲಾವರ ಮಹಿಷಮರ್ದಿನಿ ಮಹಾರಥ, ಪಾವಂಜೆ ರಥ, 18 ರಂದು ಅನಂತಪುರ ಕುಂಬಳೆ ಮಹೋತ್ಸವ, ಎಲ್ಲೂರು ರಥ, 19 ರಂದು ಕಡೇಶಿವಾಲಯ ರಥ, 20 ರಂದು ಕಟೀಲು ದುರ್ಗಾಪರಮೇಶ್ವರಿ ರಥೋತ್ಸವ, 21 ರಂದು ಮುಜುಂಗಾವು ವಾರ್ಷಿಕೋತ್ಸವ, 23 ರಂದು ಉಳ್ಳಾಲ ಮಲರಾಯ ಧ್ವಜ, 29 ರಂದು ಬಾಯಾರು ಮಲರಾಯ ಕಡೇಬಂಡಿ,

ಮೇನಲ್ಲಿ ನಡೆಯಲಿರುವ ಕರಾವಳಿ ಜಾತ್ರೆಗಳು ಹೀಗಿವೆ

ಮೇ 2 ರಂದು ಕಾರ್ಕಳ ವೆಂಕಟರಮಣ ರಥ, 5 ರಂದು ಮಿತ್ತನಡ್ಕ ಕಡೇಬಂಡಿ, 6 ರಂದು ಕೊಕ್ಕಡ ರಥ, 8 ರಂದು ಮಾನ್ಯ ವೆಂಕಟರಮಣ ರಥ, 17 ರಂದು ಉತ್ತರ ಕನ್ನಡದ ಸಿದ್ಧಾಪುರದಲ್ಲಿ ರಥೋತ್ಸವ, ಮಂಜನಾಡಿ ರಥೋತ್ಸವ. (ವರದಿ: ಹರೀಶ್ ಮಾಂಬಾಡಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.