ಏಪ್ರಿಲ್ ನಲ್ಲಿ ಮಾಸ ಶಿವರಾತ್ರಿ ಯಾವಾಗ; ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಏಪ್ರಿಲ್ ನಲ್ಲಿ ಮಾಸ ಶಿವರಾತ್ರಿ ಯಾವಾಗ; ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಮಾಹಿತಿ ಇಲ್ಲಿದೆ

ಏಪ್ರಿಲ್ ನಲ್ಲಿ ಮಾಸ ಶಿವರಾತ್ರಿ ಯಾವಾಗ; ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಮಾಹಿತಿ ಇಲ್ಲಿದೆ

ಮಾಸ ಶಿವರಾತ್ರಿಯ ದಿನದಂದು ಶಿವನ ಕುಟುಂಬವನ್ನು ಪೂರ್ಣ ಮನಸ್ಸಿನಿಂದ ಪೂಜಿಸಲಾಗುತ್ತದೆ. ಮಾಸ ಶಿವರಾತ್ರಿಯ ಪವಿತ್ರ ಹಬ್ಬವನ್ನು ಏಪ್ರಿಲ್ ಯಾವಾಗ ಆಚರಿಸಲಾಗುತ್ತದೆ ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

2025ರ ಏಪ್ರಿಲ್ ನಲ್ಲಿ ಮಾಸ ಶಿವರಾತ್ರಿ ಯಾವಾಗ ಮತ್ತು ಶುಭ ಮುಹೂರ್ತದ ಮಾಹಿತಿಯನ್ನು ತಿಳಿಯಿರಿ
2025ರ ಏಪ್ರಿಲ್ ನಲ್ಲಿ ಮಾಸ ಶಿವರಾತ್ರಿ ಯಾವಾಗ ಮತ್ತು ಶುಭ ಮುಹೂರ್ತದ ಮಾಹಿತಿಯನ್ನು ತಿಳಿಯಿರಿ

ಏಪ್ರಿಲ್ ತಿಂಗಳ ಮಾಸ ಶಿವರಾತ್ರಿ: ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಮಾಸ ಶಿವರಾತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಿವನಿಗೆ ಅರ್ಪಿಸಲಾಗಿದೆ. ಹಿಂದೂ ಧರ್ಮದಲ್ಲಿ ಮಾಸ ಶಿವರಾತ್ರಿಗೆ ವಿಶೇಷ ಮಹತ್ವವಿದೆ. ಈ ದಿನ, ಶಿವನ ಕುಟುಂಬವನ್ನು ಪೂರ್ಣ ಮನಸ್ಸಿನಿಂದ ಪೂಜಿಸಲಾಗುತ್ತದೆ. ಮಾಸ ಶಿವರಾತ್ರಿಯ ಪವಿತ್ರ ಹಬ್ಬವನ್ನು ಏಪ್ರಿಲ್ ನಲ್ಲಿ ಶನಿವಾರ ಆಚರಿಸಲಾಗುವುದು. ಶಿವನನ್ನು ಪೂಜಿಸಿದರೆ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ವೈಶಾಖ ಮಾಸ ಶಿವರಾತ್ರಿಯ ದಿನಾಂಕಗಳು, ಮುಹೂರ್ತ, ಪೂಜಾ ವಿಧಿ ಮತ್ತು ಪೂಜೆಗೆ ಬೇಕಿರುವಂತಹ ಸಾಮಗ್ರಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಪೂಜಾ ಸಾಮಗ್ರಿಗಳು: ಮಾಸ ಶಿವರಾತ್ರಿಯ ಪೂಜೆಗೆ ಬೇಕಿರುವ ಸಾಮಾಗ್ರಿಗಳೆಂದರೆ ಬಿಲ್ವಪತ್ರೆ, ಬಿಳಿ ಶ್ರೀಗಂಧ, ಅಕ್ಷತೆಕಾಳು, ಕಪ್ಪು ಎಳ್ಳು, ಭಾಂಗ್, ದತ್ತುರಾ, ಶಮಿ ಹೂವುಗಳು, ಕನೇರ್ ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು, ಬಿಳಿ ಹೂವುಗಳು, ಗಂಗಾಜಲ, ಹಸುವಿನ ಹಾಲು, ಜೇನುತುಪ್ಪ, ತುಪ್ಪ, ಮೊಸರು ಇತ್ಯಾದಿ ವಸ್ತುಗಳು ಬೇಕಾಗುತ್ತವೆ.

ಏಪ್ರಿಲ್ ತಿಂಗಳ ಮಾಸ ಶಿವರಾತ್ರಿ ಶುಭ ಮುಹೂರ್ತ

ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿ 2025ರ ಏಪ್ರಿಲ್ 26 ರಂದು ಬೆಳಿಗ್ಗೆ 08:27 ಕ್ಕೆ ಪ್ರಾರಂಭವಾಗುತ್ತದೆ, ಇದು ಏಪ್ರಿಲ್ 27 ರಂದು ಬೆಳಿಗ್ಗೆ 04:49 ಕ್ಕೆ ಕೊನೆಗೊಳ್ಳುತ್ತದೆ. ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ ನ ಮಾಸ ಶಿವರಾತ್ರಿಯನ್ನು 2025 ರ ಏಪ್ರಿಲ್ 26 ರಂದು ಆಚರಿಸಲಾಗುತ್ತದೆ.

ಮಾಸ ಶಿವರಾತ್ರಿ ಪೂಜಾ ವಿಧಿ-ವಿಧಾನ

  • ಮುಂಜಾನೆ ಬೇಗ ಎದ್ದೇಳಿ
  • ಸ್ನಾನ ಇತ್ಯಾದಿಗಳ ನಂತರ ದೇವಾಲಯವನ್ನು ಸ್ವಚ್ಛಗೊಳಿಸಿ
  • ಶಿವನಿಗೆ ಜಲಾಭಿಷೇಕ, ಪಂಚಾಮೃತದೊಂದಿಗೆ ಗಂಗಾ ನೀರಿನಿಂದ ಅಭಿಷೇಕ ಮಾಡಿ
  • ಬಿಲ್ವಪತ್ರೆ, ಅಕ್ಷತೆ, ಭಾಂಗ್, ದತ್ತುರಾ, ಹಣ್ಣುಗಳು, ಹಸುವಿನ ಹಾಲು ಅರ್ಪಿಸಿ
  • ದೇವರಿಗೆ ಬಿಳಿ ಶ್ರೀಗಂಧ ಮತ್ತು ಬಿಳಿ ಹೂವುಗಳನ್ನು ಅರ್ಪಿಸಿ
  • ದೇವಾಲಯದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ
  • ಸಾಧ್ಯವಾದರೆ ಉಪವಾಸ ಮಾಡಿ
  • ಭೋಗದೊಂದಿಗೆ ಶಿವನ ಆರತಿಯನ್ನು ಮಾಡಿ
  • ಕೊನೆಯಲ್ಲಿ ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಸುವಂತೆ ಪ್ರಾರ್ಥಿಸಿ

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.