ದಶಾವತಾರದಲ್ಲಿ ಭಗವಾನ್ ವಿಷ್ಣುವಿನ ಆರನೇ ಅವತಾರವೇ ಪರಶುರಾಮ; ಜಮದಗ್ನಿ ನೀಡಿದ 3 ವರಗಳು, ಕಥೆ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಶಾವತಾರದಲ್ಲಿ ಭಗವಾನ್ ವಿಷ್ಣುವಿನ ಆರನೇ ಅವತಾರವೇ ಪರಶುರಾಮ; ಜಮದಗ್ನಿ ನೀಡಿದ 3 ವರಗಳು, ಕಥೆ ತಿಳಿಯಿರಿ

ದಶಾವತಾರದಲ್ಲಿ ಭಗವಾನ್ ವಿಷ್ಣುವಿನ ಆರನೇ ಅವತಾರವೇ ಪರಶುರಾಮ; ಜಮದಗ್ನಿ ನೀಡಿದ 3 ವರಗಳು, ಕಥೆ ತಿಳಿಯಿರಿ

ಜಮದಗ್ನಿಯ ಆದೇಶದಂತೆ ಪರಶುರಾಮ ತನ್ನ ಪತ್ನಿಯ ಶಿರಚ್ಛೇದ ಮಾಡುತ್ತಾನೆ. ಆ ಬಳಿಕ ವರಗಳಿಂದ ಮತ್ತೆ ಮರುಜನ್ಮ ಪಡೆಯುವಂತೆ ಮಾಡುತ್ತಾನೆ. ವಿಷ್ಣುವಿನ 6ನೇ ಅವತಾರ ಪರಶುರಾಮನ ಕಥೆ ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)

ದಶಾವತಾರದಲ್ಲಿ ವಿಷ್ಣುವಿನ 6ನೇ ಅವತಾರವೇ ಪರಶುಭರಾಮ. ಈ ಕಥೆಯನ್ನು ಇಲ್ಲಿ ನೀಡಲಾಗಿದೆ
ದಶಾವತಾರದಲ್ಲಿ ವಿಷ್ಣುವಿನ 6ನೇ ಅವತಾರವೇ ಪರಶುಭರಾಮ. ಈ ಕಥೆಯನ್ನು ಇಲ್ಲಿ ನೀಡಲಾಗಿದೆ

ದಶಾವತಾರದಲ್ಲಿ ಭಗವಾನ್ ವಿಷ್ಣುವಿನ ಆರನೆಯ ಅವತಾರವೇ ಪರಶುರಾಮನ ಅವತಾರ. ಪರಶುರಾಮನು ಬ್ರಹ್ಮನ ವಂಶಕ್ಕೆ ಸೇರಿದವನು. ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡಿ ಸ್ವತಃ ಪರಶಿವನ ಶಿಷ್ಯನಾಗುತ್ತಾನೆ. ತ್ರೇತಾ ಯುಗದ ಅಂತ್ಯದ ಕಾಲದಲ್ಲಿದ್ದ ಸಪ್ತ ಋಷಿಗಳಲ್ಲಿ ಒಬ್ಬರಾದ ಜಮಜಗ್ನಿ ಮಹರ್ಷಿ ಮತ್ತು ರೇಣುಕಾದೇವಿ ದಂಪತಿಗೆ ಜನಿಸಿದ ವೀರನೇ ಈ ಪರಶುರಾಮ. ಏಳು ಜನ ಚಿರಂಜೀವಿಗಳಲ್ಲಿ ಪರಶುರಾಮನು ಒಬ್ಬನಾಗಿರುತ್ತಾನೆ. ಪರಶುರಾಮನ ಜನ್ಮಸ್ಥಳವು ಪರಶುಘಡ ಎಂಬ ಸ್ಥಳವಾಗಿದೆ. ಇದು ಈಗಿನ ಸವದತ್ತಿ ಆಗಿದೆ. ಕೇರಳದ ಪ್ರಾಚೀನ ಯುದ್ದಕಲೆಯಾದ ಕಲರಿಪಯಟ್ಟು ಆರಂಭವಾದದ್ದು ಪರಶುರಾಮನಿಂದ ಎಂದು ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.

ಇವರ ಆಯುಧ ಕೊಡಲಿ. ಪರಶು ಎಂದರೆ ಕೊಡಲಿ ಎಂಬ ಅರ್ಥ ಬರುತ್ತದೆ. ಆದ್ದರಿಂದ ಇವರಿಗೆ ಪರಶುರಾಮ ಎಂಬ ಹೆಸರು ಬಂದಿದೆ. ಜೀವನದಲ್ಲಿ ಎದುರಾಗುವ ಕೆಲವೊಂದು ಪ್ರಸಂಗದಿಂದ ಪರಶುರಾಮನು ಸಕಲ ಕ್ಷತ್ರಿಯರನ್ನು ಕೊಲ್ಲುವ ನಿರ್ಧಾರಕ್ಕೆ ಬರುತ್ತಾರೆ. ಈ ಕಾರಣದಿಂದ 21 ಬಾರಿ ಭೂಮಿಯನ್ನು ಸುತ್ತಿ ಕೆಟ್ಟ ಮನಸ್ಸಿನ ಕ್ಷತ್ರೀಯರನ್ನು ಧ್ವಂಸ ಮಾಡುತ್ತಾರೆ. ಹೆಚ್ಚು ಬಲಿಷ್ಠನಾದರೂ ವಿನಯಶಾಲಿಯೂ ಆಗಿರುತ್ತಾನೆ. ಹಿಂಸೆಯನ್ನು ವಿರೋಧಿಸುತ್ತಿದ್ದ ಕುಟುಂಬದಲ್ಲಿ ಜನಿಸಿದ್ದರೂ, ತಪ್ಪು ಹಾದಿಯಲ್ಲಿದ್ದ ಕ್ಷತ್ರಿಯರನೆಲ್ಲ ನಾಶಮಾಡುವ ಉದ್ದೇಶ ಇವರಿಗಿತ್ತು. ಹೆತ್ತವರ ಜೊತೆಯಲ್ಲಿ ಗೌರವ ಮತ್ತು ವಿಧೇಯನಾಗಿ ನಡೆದುಕೊಳ್ಳುತ್ತಿದ್ದರು. ರಮಣ್ವಂತ, ಸುಷೇಣ ವಸು, ವಿಶ್ವಾವಸು ಎಂಬುವವರು ಇವರ ಸಹೋದರರು. ಇವರ ತಾಯಿ ರೇಣುಕಾದೇವಿ ಪ್ರಸೇನಜಿತನ ಮಗಳು.

ಜಮದಗ್ನಿಯ ಆದೇಶದಂತೆ ಪತ್ನಿಯ ಶಿರಚ್ಛೇದ ಮಾಡಿದ ಪರಶುರಾಮ

ರೇಣುಕಾದೇವಿಯು ದಿನ ನಿತ್ಯದ ಕೆಲಸಗಳಿಗಾಗಿ ವನಕ್ಕೆ ತೆರಳುತ್ತಾಳೆ. ಮಾರ್ಗ ಮಧ್ಯೆ ಆಕೆಯೂ ಚಿತ್ರರಥ ಎಂಬ ಗಂಧರ್ವನನ್ನು ನೋಡುತ್ತಾಳೆ. ಆ ಕ್ಷಣದಲ್ಲಿ ಅವಳ ಬುದ್ದಿಗೆ ಮಂಕುಕವಿಯುತ್ತದೆ. ತನಗೆ ಅರಿವಿಲ್ಲದಂತೆ ಅವನನ್ನು ಕಂಡು ವ್ಯಾಮೋಹಗೊಳ್ಳುತ್ತಾಳೆ. ಬಹಳ ತಡವಾಗಿ ಆಶ್ರಮಕ್ಕೆ ಮರಳುತ್ತಾಳೆ. ಇದನ್ನು ಕಂಡು ಜಮದಗ್ನಿಯು ಕಾರಣವನ್ನು ಕೇಳುತ್ತಾನೆ. ಆದರೆ ಸರಿಯಾದ ಕಾರಣವನ್ನು ನೀಡುವಲ್ಲಿ ರೇಣುಕಾದೇವಿ ವಿಫಲವಾಗುತ್ತಾಳೆ. ಆದರೆ ಮಹರ್ಷಿ ಜಮದಗ್ನಿಯು ತನ್ನ ದಿವ್ಯ ದೃಷ್ಠಿಯಿಂದ ನಿಜಾಂಶವನ್ನು ಅರಿತುಕೊಳ್ಳುತ್ತಾನೆ. ಅತಿಯಾದ ಕೋಪದಿಂದ ತನ್ನ ಮಕ್ಕಳಾದ ರಮಣ್ವಂತ, ಸುಷೇಣ ವಸು, ವಿಶ್ವಾವಸು ಅವರನ್ನು ಕರೆದು ರೇಣುಕಾದೇವಿಯ ತಲೆಯನ್ನು ಕತ್ತರಿಸಲು ಆಜ್ಞಾಪಿಸುತ್ತಾನೆ. ಆದರೆ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದಿಂದ ಮಕ್ಕಳು ನಿರಾಕರಿಸುತ್ತಾರೆ. ತಂದೆಯ ಶಾಪದಿಂದ ಆವರೆಲ್ಲರೂ ಕಲ್ಲುಗಳಾಗಿ ಮಾರ್ಪಡುತ್ತಾರೆ. ಆನಂತರ ಪರಶುರಾಮನನ್ನು ಕರೆದ ಜಮದಗ್ನಿ, ರೇಣುಕಳ ತಲೆ ಕತ್ತರಿಸಲು ತಿಳಿಸುತ್ತಾರೆ. ಆಗ ಪರಶುರಾಮನು ಮರುಮಾತನಾಡದೆ ರೇಣುಕಾದೇವಿಯ ಶಿರವನ್ನು ತನ್ನ ಕೊಡಲಿಯಿಂದ ಛೇಧಿಸುತ್ತಾನೆ.ಇದರಿಂದ ಸಂತುಷ್ಟಗೊಂಡ ಜಮದಗ್ನಿಯು ಪರಶುರಾಮನಿಗೆ ಮೂರು ವರಗಳನ್ನು ಕೇಳುವಂತೆ ತಿಳಿಸುತ್ತಾನೆ.

ಪರಶುರಾಮನು ಕೇಳಿದ 3 ವರಗಳು

  • ಪರಶುರಾಮನು. ತನ್ನ ತಂದೆ ಮೊದಲು ಕೋಪವನ್ನು ತೊರೆಯಬೇಕೆಂದು ಕೇಳುತ್ತಾನೆ.
  • ಎರಡೆನೆಯ ವರವಾಗಿ ತನ್ನ ಸೋದರನನ್ನು ಹಿಂದಿನ ರೂಪಕ್ಕೆ ಮರಳುವಂತೆ ವರ ನೀಡಬೇಕೆಂದು ಕೇಳುತ್ತಾನೆ.
  • ಮೂರನೆಯ ವರವಾಗಿ ತನ್ನ ತಾಯಿಯಾದ ರೇಣುಕಾದೇವಿಗೆ ಮರುಜನ್ಮ ನೀಡಬೇಕೆಂದು ಕೇಳುತ್ತಾನೆ. ಸಂತೋಷದಿಂದ ಜಮದಗ್ನಿಯು ಪರಶುರಾಮನ ಮನದಾಸೆಗಳನ್ನು ಈಡೇರಿಸುತ್ತಾನೆ

ಕಾರ್ತವೀರ್ಯಾರ್ಜುನ ಇವರ ಆಶ್ರಮಕ್ಕೆ ಬಂದು ಕಪಿಲೆಯನ್ನು ವಿವಾಹ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತಾನೆ. ಆದರೆ ಜಮದಗ್ನಿಯು ಇದಕ್ಕೆ ಒಪ್ಪುವುದಿಲ್ಲ. ಆಗ ನಡೆದ ಘೋರ ಯುದ್ದದಲ್ಲಿ ಜಮದಗ್ನಿಯು ಇಹಲೋಕವನ್ನು ತ್ಯಜಿಸುತ್ತಾನೆ. ಇದರಿಂದಾಗಿ ಸಹನೆಯನ್ನು ಕಳೆದುಕೊಂಡ ಪರುಶರಾಮ, ಕೋಪಾವಿಷ್ಟನಾಗಿ ಕಾರ್ತವೀರ್ಯಾರ್ಜುನನ ತೋಳುಗಳನ್ನು ಕತ್ತರಿಸಿ ಹಾಕುತ್ತಾನೆ. ಆನಂತರ ಶ್ರೀರಾಮನೊಂದಿಗೆ ನಡೆಯುವ ಯುದ್ದದಲ್ಲಿ ಸೋತುಹೋಗುತ್ತಾನೆ. ಆ ಬಳಿಕ ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ಶ್ರೀರಾಮನಿಗೆ ನೀಡುತ್ತಾನೆ.

ತಂದೆಯ ಸಾವಿನಿಂದ ಅತ್ಯಂತ ದು:ಖಿತನಾಗುತ್ತಾನೆ. ಆನಂತರ ಅಶ್ವಮೇಧ ಯಾಗವನ್ನು ಮಾಡುತ್ತಾನೆ. ಸಮಸ್ತ ಭೂ ಮಂಡಲವನ್ನು ಗೆದ್ದು ಕಶ್ಯಪನಿಗೆ ದಾನವಾಗಿ ನೀಡುತ್ತಾನೆ. ಇದರಿಂದ ತಾನುಮಾಡಿರಬಹುದಾದ ಪಾಪಗಳು ಪರಿಹಾರವಾಗಿದೆಯೆಂದು ತಿಳಿಯುತ್ತಾನೆ. ಆನಂತರ ಶ್ರೀ ಶಿವನ ಕುರಿತು ಘೋರ ತಪಸ್ಸನ್ನು ಮಾಡಿ ಸಾವನ್ನು ಜಯಿಸಿ ಚಿರಂಜೀವಿಯಾಗುತ್ತಾನೆ. ಇಂದಿಗೂ ಮಾಹೇಂದ್ರ ಪರ್ವತದಲ್ಲಿ ಪರಶುರಾಮರು ವಾಸವಾಗಿದ್ದಾರೆ ಎಂಬ ನಂಬಿಕೆ ಇದೆ.

(ಬರಹ: ಎಚ್ ಸತೀಶ್, ಜ್ಯೋತಿಷಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.