ನಿಜವಾಗಿದೆ ಮೊಬೈಲ್ ಬಗ್ಗೆ ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿ; ಅವರ ಪ್ರಕಾರ ಮುಂದಿನ ದಿನಗಳಲ್ಲಿ ಇವೆಲ್ಲವೂ ಆಗಲಿವೆ
ಇಂದು ಮೊಬೈಲ್ ಎಂಬ ಒಂದು ಸಣ್ಣ ಸಾಧನ ಇಡೀ ಪ್ರಪಂಚವನ್ನು ಅಂಗೈಯಲ್ಲೇ ತೋರಿಸುತ್ತಿದೆ. ಸ್ಮಾರ್ಟ್ಫೋನ್ಗಳು ನಮ್ಮೆಲ್ಲರ ಬದುಕಿನ ಭಾಗವಾಗಿವೆ. ಮೊಬೈಲ್ ಫೋನ್ಗಳ ಬಗ್ಗೆ ಬಾಬಾ ವಂಗಾ ಆ ಕಾಲದಲ್ಲೇ ಭವಿಷ್ಯವಾಣಿ ನುಡಿದಿದ್ದರು, ಮಾತ್ರವಲ್ಲ ಅದು ನಿಜವಾಗಿದೆ.

ಬಾಬಾ ವಂಗಾ ಬಲ್ಗೇರಿಯಾ ಮೂಲದ ಕಾಲಜ್ಞಾನಿ. ಕುರುಡರಾಗಿದ್ದ ಆಕೆ ಜಗತ್ತಿಗೆ ಸಂಬಂಧಿಸಿ ಸಾಕಷ್ಟು ಭವಿಷ್ಯವಾಣಿಗಳನ್ನು ನುಡಿದಿದ್ದರು. ಆ ಕಾಲದಲ್ಲಿ ಅವರು ಹೇಳಿದ್ದ ಅದೆಷ್ಟು ಭವಿಷ್ಯವಾಣಿಗಳು ಈಗ ಸತ್ಯವಾಗುತ್ತಿವೆ. ಆ ಕಾರಣದಿಂದ ವಂಗಾ ಬಾಬಾ ಭವಿಷ್ಯವಾಣಿಗಳು ಇತ್ತೀಚೆಗೆ ಸಖತ್ ಫೇಮಸ್ ಆಗುತ್ತಿವೆ. ಬಾಬಾ ವಂಗಾ ಆ ಕಾಲದಲ್ಲೇ ಮೊಬೈಲ್ ಫೋನ್ಗಳ ಬಗ್ಗೆ ಭವಿಷ್ಯ ನುಡಿದಿದ್ದರು ಮತ್ತು ಅದು ಈಗ ಸತ್ಯವಾಗಿದೆ ಕೂಡ. ಬಾಬಾ ವಂಗಾ ಮುಂದೊಂದು ದಿನ ಮೊಬೈಲ್ ಫೋನ್ಗಳು ಮನುಷ್ಯ ದೇಹದ ಭಾಗದಂತಾಗುತ್ತದೆ ಎಂದು ಹೇಳಿದ್ದರು. ಆಗ ಜನರು ಆ ಮಾತಿನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಆ ಮಾತು ಈಗ ಅಕ್ಷರಶಃ ನಿಜವಾಗಿದೆ.
ಬಾಬಾ ವಂಗ ತನ್ನ ಭವಿಷ್ಯವಾಣಿಯಲ್ಲಿ ಮುಂದೊಂದು ದಿನ ಜನರು ಈ ಸಾಧನವಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಫೋನ್ಗಳು ನಮ್ಮ ನಡವಳಿಕೆ, ನಾವು ಯೋಚಿಸುವ ರೀತಿ ಮತ್ತು ನಾವು ಇತರರೊಂದಿಗೆ ಸಂಪರ್ಕ ಸಾಧಿಸುವ ರೀತಿಯನ್ನು ಬದಲಿಸುತ್ತವೆ ಎಂದು ಆಕೆ ಹೇಳಿದ್ದರು. ಈ ಹೊತ್ತಿಗೆ ಅದು ನಿಜವಾಗಿದೆ ಎಂದು ಅನ್ನಿಸುತ್ತಿದೆ.
ಮೊಬೈಲ್ ಫೋನ್ ಬಳಕೆ ಇತ್ತೀಚಿನ ಜನರ ಉಸಿರಿನಂತಾಗಿದೆ. ಪ್ರತಿದಿನ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಗಲುವರೆಗೂ ಮೊಬೈಲ್ ನಮ್ಮ ಜೊತೆಗಿರುವ ಜೀವನಾಡಿಯಾಗಿದೆ. ಹಲವರಿಗೆ ಮೊಬೈಲ್ ಜೊತೆಗಿಲ್ಲ ಎಂದರೆ ಏನನ್ನೋ ಕಳೆದುಕೊಳ್ಳುವ ಅಥವಾ ಕಳೆದು ಕೊಂಡಂತಹ ಆತಂಕ ಎದುರಾಗುವುದು ಸಹಜ.
ಜಗತ್ತನ್ನು ಆಳಲು ಬರಲಿದೆ ಟೆಲಿಪತಿ
ಬಾಬಾ ವಂಗಾ ಮೊಬೈಲ್ ಫೋನ್ಗಳ ಬಗ್ಗೆ ಮಾತ್ರ ಭವಿಷ್ಯ ಹೇಳಿ ಅಲ್ಲಿಗೆ ನಿಲ್ಲಿಸಿರಲಿಲ್ಲ. 2025ನೇ ವರ್ಷಕ್ಕೆ ಸಂಬಂಧಿಸಿ ಆಕೆ ಇನ್ನೊಂದಿಷ್ಟು ಭವಿಷ್ಯ ವಾಣಿಗಳನ್ನು ನುಡಿದಿದ್ದು ಇದು ಈಗ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಆಕೆ ಟೆಲಿಪತಿ ಬಗ್ಗೆಯೂ ತಮ್ಮ ಭವಿಷ್ಯವಾಣಿಗಳಲ್ಲಿ ಹೇಳಿದ್ದಾರೆ. ಟೆಲಿಪತಿ ಅಂದರೆ ಮನಸ್ಸನ್ನು ಬಳಸಿಕೊಂಡು ಸಂವಹನ ನಡೆಸುವ ಸಾಮರ್ಥ್ಯ. ಹೊಸ ತಂತ್ರಜ್ಞಾನವು ಭವಿಷ್ಯದಲ್ಲಿ ಇದನ್ನು ಸಾಧ್ಯವಾಗಿಸಬಹುದು ಎಂದು ಕೆಲವು ತಜ್ಞರು ನಂಬುತ್ತಾರೆ. ವಿಜ್ಞಾನಿಗಳು ಈಗಾಗಲೇ ಮೆದುಳು-ಕಂಪ್ಯೂಟರ್ ಇಂಟರ್ಫೇಸ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅದು ಜನರು ತಮ್ಮ ಆಲೋಚನೆಗಳಂತೆ ಯಂತ್ರಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.
ವೈದ್ಯಕೀಯ ಜಗತ್ತಿನಲ್ಲೂ ಬದಲಾವಣೆ
ವೈದ್ಯಕೀಯ ಲೋಕದಲ್ಲಿ ದೊಡ್ಡ ಬದಲಾವಣೆಗಳ ಬಗ್ಗೆಯೂ ಅವರು ಭವಿಷ್ಯ ನುಡಿದರು. ಕಸಿಗಾಗಿ ಪ್ರಯೋಗಾಲಯಗಳಲ್ಲಿ ಜನರು ಅಂಗಗಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಬಾಬಾ ವಂಗಾ ಹೇಳಿದ್ದರು. ಇಂದು, ವೈದ್ಯಕೀಯ ಸಂಶೋಧನೆಯು ಇದನ್ನು ವಾಸ್ತವಕ್ಕೆ ಹತ್ತಿರವಾಗಿಸುತ್ತಿದೆ. ಅಂಗಗಳ 3D ಮುದ್ರಣ ಮತ್ತು ಕಾಂಡಕೋಶ ಸಂಶೋಧನೆಯು ನಡೆಯುತ್ತಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳಿರುವ ರೋಗಿಗಳಿಗೆ ಇದು ಭರವಸೆಯನ್ನು ನೀಡುತ್ತದೆ.
ಅನ್ಯ ಗ್ರಹ ಜೀವಿಗಳ ಸಂಪರ್ಕ
ಬಾಬಾ ವಂಗರ ಮತ್ತೊಂದು ಭಯಾನಕ ಭವಿಷ್ಯವಾಣಿಯು ಇತರ ಗ್ರಹಗಳ ಜೀವಿಗಳ ಸಂಪರ್ಕದ ಬಗ್ಗೆ. ಬಾಹ್ಯಾಕಾಶದಲ್ಲಿನ ಬುದ್ಧಿವಂತ ಜೀವಿಗಳಿಂದ ಭೂಮಿಯು ಶೀಘ್ರದಲ್ಲೇ ಸ್ಪಷ್ಟ ಸಂದೇಶವನ್ನು ಪಡೆಯುತ್ತದೆ ಎಂದು ಬಾಬಾ ವಂಗಾ ನಂಬಿದ್ದರು. ಇದು ವೈಜ್ಞಾನಿಕ ಕಾದಂಬರಿಯಂತೆ ತೋರುತ್ತದೆಯಾದರೂ, ಕೆಲವು ವಿಜ್ಞಾನಿಗಳು ಈ ಕಲ್ಪನೆಗೆ ಮುಕ್ತರಾಗಿದ್ದಾರೆ, ವಿಶೇಷವಾಗಿ ನಾವು ಬಾಹ್ಯಾಕಾಶ ಪರಿಶೋಧನೆಯಲ್ಲಿ ಎಷ್ಟು ಪ್ರಗತಿ ಸಾಧಿಸುತ್ತಿದ್ದೇವೆ ಎಂಬುದನ್ನು ಮರೆಯುವಂತಿಲ್ಲ.
ಯುರೋಪ್ನಲ್ಲಿ ಯದ್ಧ
ಅವರ ಗಂಭೀರ ಎಚ್ಚರಿಕೆಗಳಲ್ಲಿ ಒಂದು ಯುರೋಪಿನಲ್ಲಿ ನಡೆಯಲಿರುವ ಪ್ರಮುಖ ಸಂಘರ್ಷದ ಕುರಿತಾಗಿದೆ. ಬಾಬಾ ವಂಗಾ ಅವರ ಪ್ರಕಾರ, ಈ ಯುದ್ಧವು ದುಃಖವನ್ನು ತರುತ್ತದೆ ಮತ್ತು ಜಗತ್ತನ್ನು ಆಳವಾಗಿ ಬದಲಾಯಿಸುತ್ತದೆ. ಯಾರೂ ಅಂತಹ ಭವಿಷ್ಯವನ್ನು ಬಯಸದಿದ್ದರೂ, ಜನರು ಈಗ ರಾಜಕೀಯ ಮತ್ತು ಜಾಗತಿಕ ಉದ್ವಿಗ್ನತೆಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ, ಅವರ ದೃಷ್ಟಿಕೋನವು ನಿಜವಾಗುತ್ತದೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)