ಪ್ರೀತಿಯೆಂಬ ಪವಿತ್ರ ಬಂಧನ; ಶಿವ–ಪಾರ್ವತಿಯರಿಂದ ಪ್ರತಿಯೊಬ್ಬರೂ ಕಲಿಯಬೇಕಾದ 7 ಪ್ರೇಮ ಪಾಠಗಳಿವು
ನಮ್ಮ ಇಡೀ ಜಗತ್ತು ನಿಂತಿರುವುದು ಪ್ರೀತಿಯ ಬುನಾದಿಯ ಮೇಲೆ. ದೇವತೆಗಳು ಕೂಡ ಪ್ರೀತಿಗಾಗಿ ಯುದ್ಧ ಮಾಡಿದವರೇ, ಕಣ್ಣೀರು ಹಾಕಿದವರೇ. ರಾಧಾ–ಕೃಷ್ಣ ಮಾತ್ರವಲ್ಲ ಶಿವ–ಪಾರ್ವತಿಯ ಪ್ರೇಮಕಥೆಯು ನಮಗೆ ಹಲವು ಪಾಠವನ್ನು ಕಲಿಸುತ್ತದೆ. ಶಿವ–ಪಾರ್ವತಿಯರಿಂದ ಪ್ರತಿಯೊಬ್ಬರೂ ಕಲಿಯಬೇಕಾದ 7 ಪ್ರೇಮ ಪಾಠಗಳಿವು.

ಪ್ರೀತಿ ಎಂಬುದು ಎಲ್ಲರಿಗೂ ಹೂವಿನ ಹಾಸಿಗೆಯಲ್ಲ. ನಿಜವಾದ ಪ್ರೀತಿಯನ್ನು ಪಡೆಯಬೇಕು ಎಂದರೆ ಯುದ್ಧಭೂಮಿಯನ್ನು ಜಯಿಸಿ ಬಂದಷ್ಟೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರೀತಿಯನ್ನು ಪಡೆದುಕೊಳ್ಳಲು ಸಾಮಾನ್ಯ ಜನರಿಗೆ ಮಾತ್ರವಲ್ಲ ದೇವಾನುದೇವತೆಗಳಿಗೂ ಕಷ್ಟವಾಗಿತ್ತು. ಅನಾದಿಕಾಲದಿಂದಲೂ ಪ್ರೀತಿಯನ್ನು ಉಳಿಸಿಕೊಳ್ಳಲು ದೇವರುಗಳು ಕೂಡ ಹೋರಾಟ ನಡೆಸಿದ್ದರು. ಕೆಲವರ ಪ್ರೇಮಕಥೆ ಅರ್ಧಕ್ಕೆ ಅಂತ್ಯವಾದರೆ, ಇನ್ನೂ ಕೆಲವರದ್ದು ಸಾವಿರ ವರ್ಷಗಳ ಕಾಲ ಜೀವಂತವಾಗಿರುವಂಥದ್ದು.
ಪ್ರೀತಿ ಎಂದು ಬಂದಾಗ ನಮ್ಮ ಕಣ್ಣ ಮುಂದೆ ಮೊದಲು ಬರೋದು ರಾಧಾ–ಕೃಷ್ಣ. ಅವರದ್ದು ಅಮರ ಪ್ರೇಮ. ಪ್ರೀತಿ ಪಡೆಯಲು ಸಾಧ್ಯವಾಗದೇ ಇದ್ದರೂ ಒಬ್ಬರನ್ನೊಬ್ಬರು ಜೀವಕ್ಕೆ ಜೀವ ಎಂಬಂತೆ ಪ್ರೀತಿಸುತ್ತಿದ್ದರು. ಆದರೆ ಇವರಂತೆ ಪ್ರೀತಿ ಮಾಡಿ, ಪ್ರೀತಿಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಮದುವೆಯಾದ ಜೋಡಿಯು ನಮ್ಮ ಪುರಾಣದಲ್ಲಿತ್ತು. ಅದುವೇ ಶಿವ–ಪಾರ್ವತಿ ಜೋಡಿ. ಇವರು ಕೂಡ ಪ್ರೀತಿಗೆ ಹೊಸ ವಾಖ್ಯಾನ ಬರೆದಿದ್ದರು. ಅಲ್ಲದೇ ಇವರಿಗೆ ಪ್ರೀತಿ ಸುಲಭವಾಗಿ ದಕ್ಕಿರಲಿಲ್ಲ. - ಶಿವ ಮತ್ತು ಪಾರ್ವತಿಯ ಸಂಬಂಧವು ಪ್ರೀತಿಯು ಆಳವಾಗಿ ಮನದಲ್ಲಿ ಬೇರೂರಿದಾಗ ಅದು ಹೇಗಿರಬಹುದು ಎಂಬುದರ ಜ್ಞಾಪನೆಯಾಗಿದೆ. ಇವರ ಪ್ರೀತಿಯು ನಮಗೆ ಹಲವು ಪಾಠಗಳನ್ನು ಕಲಿಸುತ್ತದೆ. ಶಿವ ಪಾರ್ವತಿ ಪ್ರೀತಿಯಿಂದ ಕಲಿಯಬೇಕಾದ ಮಹತ್ವದ ಪಾಠಗಳು ಇಲ್ಲಿವೆ ನೋಡಿ.
ಪ್ರೀತಿ ಎಂದರೆ ಪರಿಪೂರ್ಣತೆಯ ಅಲ್ಲ, ಎರಡು ಹೃದಯಗಳ ಸಂಪರ್ಕ
ಪ್ರೀತಿ ಎಂದರೆ ಪರಿಪೂರ್ಣತೆಯಲ್ಲ, ಶಿವ–ಪಾರ್ವತಿಯರ ಪ್ರೀತಿ ಎಂದಿಗೂ ಪರಿಪೂರ್ಣವಾಗಿರಲಿಲ್ಲ. ಅವರ ಪ್ರೀತಿಯ ಹಾದಿ ಸುಲಭವಾಗಿಯೂ ಇರಲಿಲ್ಲ. ಅವರ ಪ್ರೀತಿಯ ಕಥೆಯು ಸಮಯ, ತಿಳುವಳಿಕೆ, ತಾಳ್ಮೆ ಮತ್ತು ತ್ಯಾಗದ ಮೇಲೆ ಅವಲಂಬಿತವಾಗಿತ್ತು. ಸ್ಮಶಾನಗಳಲ್ಲಿ ಅಲೆದಾಡುತ್ತಿದ್ದ ಪರಮೇಶ್ವರ ಪರಿಪೂರ್ಣ ಪ್ರೇಮಿ ಎನ್ನಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಅವನ ಬದುಕು ಕೂಡ ಇರಲಿಲ್ಲ. ಆದರೆ ಪಾರ್ವತಿಯ ಬದುಕು ಶಿವನಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿತ್ತು. ಆದರೆ ಈ ಇಬ್ಬರೂ ಪ್ರೀತಿಯಲ್ಲಿ ಪರಿಪೂರ್ಣತೆಯನ್ನು ಬಯಸಿರಲಿಲ್ಲ. ಆದರೆ ಅವರ ಪ್ರೀತಿಯು ಎರಡು ಹೃದಯಗಳ ನಡುವೆ ಸಂಪರ್ಕವಾಗಿತ್ತು.
ಪ್ರೀತಿ ಎಂದರೆ ಸ್ವಾತಂತ್ರ್ಯ, ಸ್ವಾಧೀನವಲ್ಲ
ಪ್ರೀತಿ ಎಂದರೆ ಪ್ರೀತಿ ಮಾಡಿದವರು ನಮಗಾಗಿ ಸ್ವಂತ ಎಂದು ನಾವು ಹೇಳುತ್ತಿರುತ್ತೇವೆ, ಅಂದರೆ ಅವರು ನಮ್ಮವರು ಎನ್ನುವ ಸ್ವಾಧೀನ ಮನೋಭಾವ ಇರುತ್ತದೆ. ಆದರೆ ಶಿವ ಮತ್ತು ಪಾರ್ವತಿ ನಮಗೆ ವಿಭಿನ್ನ ರೀತಿಯ ಪ್ರೀತಿಯನ್ನು ತೋರಿಸುತ್ತಾರೆ, ಅದು ಸಂಬಂಧದೊಳಗಿನ ಅಂತರ್ಗತ ಸ್ವಾತಂತ್ರ್ಯವನ್ನು ಗುರುತಿಸುತ್ತದೆ. ಶಿವನು ಎಂದಿಗೂ ಪಾರ್ವತಿಯನ್ನು ತನ್ನಂತೆ ಆಗು ಎಂದು ಒತ್ತಾಯಿಸಿ ಇರಲಿಲ್ಲ. ಪಾರ್ವತಿಯನ್ನು ನಿರ್ದಿಷ್ಟ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಅವನು ಎಂದಿಗೂ ಒತ್ತಾಯಿಸಲಿಲ್ಲ. ಅವನ ಪ್ರೀತಿ ಅವಳನ್ನು ನಿಯಂತ್ರಿಸಿರಲಿಲ್ಲ, ಬದಲಾಗಿ ತನ್ನದೇ ಆದ ಹಕ್ಕಿನಲ್ಲಿ ಜಾಗವನ್ನು ಸೃಷ್ಟಿಸಿ ಅದರಲ್ಲಿ ಬದುಕು ಅವಕಾಶ ನೀಡಿದ್ದ. ಪಾರ್ವತಿ ಕೂಡ ಎಂದಿಗೂ ಶಿವನ ಮೇಲೆ ಅವಲಂಬಿತಳಾಗಿ ಇದ್ದಿರಲಿಲ್ಲ.
ನಿಜವಾದ ಪ್ರೀತಿ ಸ್ವಾತಂತ್ರ್ಯವನ್ನು ಅನುಮತಿಸುತ್ತದೆ, ಸ್ವಾಧೀನವಲ್ಲ ಎಂದು ಅವರು ಅರ್ಥಮಾಡಿಕೊಂಡರು. ಪ್ರೀತಿಯ ಅತ್ಯುನ್ನತ ರೂಪ ಎಂದರೆ ಸ್ವಾತಂತ್ರ್ಯ . ಪ್ರೀತಿಯಲ್ಲಿ ಇಬ್ಬರೂ ವ್ಯಕ್ತಿಗಳು ಸಂಪೂರ್ಣವಾಗಿ ತಾವು ತಾವಾಗಿಯೇ ಬದುಕಬೇಕು. ಪ್ರೀತಿ ಎಂದಿಗೂ ಬಂಧನವಾಗಬಾರದು.
ಸಮಯದ ಅಂತರ ಪ್ರೀತಿಯನ್ನು ಕಡಿಮೆ ಮಾಡುವುದಿಲ್ಲ, ಬಲಪಡಿಸುತ್ತದೆ
ಪ್ರೀತಿ ಎಂದರೆ ಎಂದೆಂದಿಗೂ ಜೊತೆಯಾಗಿ ಇರುವುದು ಎನ್ನುವ ಭಾವನೆ ಈಗಿನವರಲ್ಲಿದೆ. ಜೊತೆಗಿಲ್ಲ ಎಂದರೆ ಸಂಬಂಧ ದುರ್ಬಲವಾಗುತ್ತದೆ ಎನ್ನುವ ಮನೋಭಾವ ಈಗಿನವರದ್ದು. ಆದರೆ ಶಿವ–ಪಾರ್ವತಿ ಇದ್ದಕ್ಕೆ ತದ್ವಿರುದ್ಧವಾಗಿದ್ದರು. ಶಿವ–ಪಾರ್ವತಿ ಆಗಾಗ ದೂರಾಗುತ್ತಿದ್ದರು. ಶಿವನು ದೀರ್ಘ ಸಮಯಗಳನ್ನು ಆಳವಾದ ಧ್ಯಾನದಲ್ಲಿ ಕಳೆದನು, ಮತ್ತು ಪಾರ್ವತಿಗೆ ತನ್ನದೇ ಆದ ಪ್ರಯಾಣವಿತ್ತು. ಆದರೂ, ಅವರು ಒಟ್ಟಿಗಾದಾಗ ಅವರ ಸಂಪರ್ಕವು ಅಚಲವಾಗಿತ್ತು. ಯಾವಾಗಲೂ ದೈಹಿಕವಾಗಿ ಹತ್ತಿರವಿದ್ದರೆ ಮಾತ್ರ ಪ್ರೀತಿ ಸದಾ ಜೀವಂತವಾಗಿರುತ್ತದೆ ಎನ್ನುವುದು ಸುಳ್ಳು. ಆಗಾಗ ದೂರವಾಗುವುದರಿಂದ ಮತ್ತೆ ಹತ್ತಿರವಾದಾಗ ಪ್ರೀತಿ ಇನ್ನಷ್ಟು ಅಚಲವಾಗುತ್ತದೆ ಎಂದು ಶಿವ–ಪಾರ್ವತಿ ನಿರೂಪಿಸಿದ್ದರು.
ಪ್ರೀತಿ ಎಂದರೆ ಕೇವಲ ಪ್ರಣಯವಲ್ಲ, ಗೌರವ
ಇತ್ತೀಚಿನ ಪ್ರೀತಿಯು ನಿಂತಿರುವುದು ಪ್ರಯಣ ಸಂಬಂಧಗಳ ಮೇಲೆ. ಪ್ರಣಯದಿಂದ ಮಾತ್ರ ಪ್ರೀತಿ ಆಳವಾಗಿ ಬೇರೂರಲು ಸಾಧ್ಯ ಎಂದು ಈಗಿನವರು ನಂಬಿರುತ್ತಾರೆ. ಆದರೆ ಶಿವ–ಪಾರ್ವತಿಯ ಪ್ರೀತಿಯಲ್ಲಿ ಪ್ರಯಣಕ್ಕಿಂತ ಹೆಚ್ಚು ಗೌರವವಿತ್ತು. ಶಿವನು ಪಾರ್ವತಿಯ ಶಕ್ತಿ, ಅವಳ ಬುದ್ಧಿವಂತಿಕೆಯನ್ನು ಗೌರವಿಸುತ್ತಿದ್ದ. ಪಾರ್ವತಿ ಶಿವನ ಬದ್ಧತೆ, ಶಿಸ್ತು ಮತ್ತು ದೃಢತೆಯನ್ನು ಗೌರವಿಸಿದಳು. ಅವರ ಪ್ರೀತಿ ಪರಸ್ಪರ ಗೌರವದಲ್ಲಿ ಬೇರೂರಿತ್ತು. ಯಾವುದೇ ಪ್ರೀತಿಯಲ್ಲಿ ಮೊದಲು ಗೌರವಿರಬೇಕು. ಗೌರವವಿಲ್ಲದ ಸಂಬಂಧ ಬಹಳ ದಿನ ಉಳಿಯುವುದಿಲ್ಲ. ಸಂಬಂಧದಲ್ಲಿ ಗೌರವವಿದ್ದಾಗ ಮಾತ್ರ ಆ ಸಂಬಂಧ ಬಹಳ ದಿನ ಉಳಿಯಲು ಸಾಧ್ಯ.
ಹೋರಾಟಗಳನ್ನು ಪ್ರೀತಿ ಪಯಣದ ಭಾಗವಾಗಿ ಅಪ್ಪಿಕೊಳ್ಳಿ
ಶಿವ ಮತ್ತು ಪಾರ್ವತಿಯ ಪ್ರೀತಿಗೂ ಸಾಕಷ್ಟು ಕಷ್ಟಗಳು ಹಾಗೂ ಅಡೆತಡೆಗಳು ಎದುರಾಗಿದ್ದವು. ಪ್ರತ್ಯೇಕತೆ, ಅನುಮಾನ, ಮನೆಯವರು, ಸಮಾಜದಿಂದ ಒತ್ತಡ ಇವೆಲ್ಲವೂ ಇತ್ತು. ಆದರೆ ಅವರು ಕುಸಿಯಲಿಲ್ಲ. ಅವೆಲ್ಲವನ್ನೂ ಧೈರ್ಯದಿಂದ ಎದುರಿಸಿದರು. ಸಾಮಾನ್ಯವಾಗಿ ಪ್ರೀತಿ ವಿಚಾರದಲ್ಲಿ ಕಷ್ಟಗಳು ಎದುರಾದಾಗ ನಾವು ದೂರಾಗುತ್ತೇವೆ. ಹೋರಾಟಕ್ಕಿಂತ ಪ್ರೀತಿಯಿಂ ದೂರಾಗುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರುತ್ತೇವೆ. ಆದರೆ ಶಿವ ಪಾರ್ವತಿ ಕಷ್ಟಗಳಿಂದ ಒಬ್ಬರಿಗೊಬ್ಬರು ಇನ್ನಷ್ಟು ಹತ್ತಿರವಾಗಿದ್ದರು. ಪ್ರೀತಿ ಎಂದರೆ ಕಷ್ಟಗಳು ಎದುರಾದಾಗ ಇಬ್ಬರೂ ಜೊತೆ ನಿಂತು ಎದುರಿಸುವುದು ಎಂಬುದನ್ನು ತೋರಿಸಿದವರು. ಶಿವ–ಪಾರ್ವತಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಪ್ರೀತಿಯನ್ನು ಗೆದ್ದು ಅಮರ ಪ್ರೇಮಿಗಳು ಎನ್ನಿಸಿಕೊಂಡವರು
ಪ್ರೀತಿಗೆ ಪರಸ್ಪರ ಅಚಲವಾದ ನಂಬಿಕೆ ಬೇಕು
ನಂಬಿಕೆಯೇ ಶಿವ ಮತ್ತು ಪಾರ್ವತಿಯ ಪ್ರೀತಿಯ ಮೂಲಾಧಾರ. ಅದು ಕೇವಲ ಪರಸ್ಪರ ನಂಬಿಕೆಯಾಗಿರಲಿಲ್ಲ - ಅದು ಅವರ ಪ್ರೀತಿ ಪ್ರಯಾಣದ ಮೇಲಿನ ನಂಬಿಕೆ, ಅವರ ದಾರಿಯಲ್ಲಿ ಏನೇ ಬಂದರೂ ಅವರು ಅದರ ಮೂಲಕ ಒಟ್ಟಿಗೆ ಇರುತ್ತಾರೆ ಎಂಬ ನಂಬಿಕೆ. ಅವರಿಗೆ ನಿರಂತರ ಭರವಸೆಗಳು ಬೇಕಾಗಿರಲಿಲ್ಲ. ಅವರಿಗೆ ಪ್ರತಿ ಕ್ಷಣದಲ್ಲೂ ಪ್ರೀತಿಯ ಪುರಾವೆ ಬೇಕಾಗಿರಲಿಲ್ಲ. ಅವರ ನಂಬಿಕೆಯೇ ಅವರ ಬಂಧವಾಗಿತ್ತು.
ಇತ್ತೀಚಿನ ಸಂಬಂಧಗಳಲ್ಲಿ ನಂಬಿಕೆ ಎನ್ನುವುದು ಕಡಿಮೆ ಆಗಿ ಕೆಲವು ದಿನಗಳಲ್ಲಿ ಒಬ್ಬರಿಗೊಬ್ಬರು ದೂರಾಗುತ್ತಾರೆ. ಈಗಿನ ಸಂಬಂಧಗಳಲ್ಲಿ ಪ್ರಶ್ನೆ ಮಾಡುವುದು, ಅನುಮಾನ ಪಡುವುದು ಹೆಚ್ಚಾಗಿದೆ. ಭರವಸೆಯೇ ಇಲ್ಲದೇ ಸಂಬಂಧವನ್ನು ಮುಂದುವರಿಸಲು ಹೋಗುತ್ತೇವೆ. ಆದರೆ ಶಿವ–ಪಾರ್ವತಿ ಪ್ರೀತಿಗೆ ನಂಬಿಕೆಯೇ ಬುನಾದಿ ಎಂಬುದನ್ನು ತೋರಿಸಿಕೊಟ್ಟಿದ್ದರು.
ಪ್ರೀತಿ ಎಂಬ ಸಂಬಂಧ ದೊಡ್ಡದು
ಶಿವ ಮತ್ತು ಪಾರ್ವತಿಯ ಪ್ರೇಮಕಥೆಯ ಹೃದಯಭಾಗದಲ್ಲಿ ಒಂದು ದೊಡ್ಡ ಉದ್ದೇಶವಿದೆ. ಅವರ ಸಂಬಂಧವು ಅವರಿಬ್ಬರ ಬಗ್ಗೆ ಮಾತ್ರ ಇರಲಿಲ್ಲ. ಅದು ಪ್ರಪಂಚದ ಬಗ್ಗೆ ಅವರ ಹಂಚಿಕೆಯ ದೃಷ್ಟಿಕೋನ, ವಿಶ್ವ ಕ್ರಮದಲ್ಲಿ ಅವರ ಪಾತ್ರಗಳ ಬಗ್ಗೆ. ಈ ಅರ್ಥದಲ್ಲಿ, ಪ್ರೀತಿಯು ಒಂದು ಪ್ರತ್ಯೇಕ ಅನುಭವವಾಗಿರಲಿಲ್ಲ; ಅದು ಹೊರಮುಖವಾಗಿ ಅಲೆಯಂತೆ ಅಲೆಯಂತೆ ಹೊರಹೊಮ್ಮುವ, ಅವರ ಸುತ್ತಲಿನ ಎಲ್ಲವನ್ನೂ ರೂಪಿಸುವ ಶಕ್ತಿಯಾಗಿತ್ತು. ಇದು ಕೂಡ ಅವರ ಪ್ರೀತಿಯಿಂದ ಕಲಿಯಬೇಕಾದ ಪಾಠವಾಗಿದೆ.
ಅತೀತವಾದ ಪ್ರೀತಿ
ಶಿವ ಮತ್ತು ಪಾರ್ವತಿಯ ಪ್ರೇಮಕಥೆಯು ಕೇವಲ ದೈವಿಕ ಪ್ರಣಯದ ಕಥೆಯಲ್ಲ, ಇದೊಂದು ಬುದ್ಧವಂತಿಕೆಯ ಕಥೆ. ಪ್ರೀತಿ ಎನ್ನುವುದು ಖಂಡಿತ ವ್ಯವಹಾರವಲ್ಲ. ಪ್ರೀತಿ ಎನ್ನುವುದು ಒಂದು ಪ್ರಯಾಣ. ತಾಳ್ಮೆ, ಸ್ವಾತಂತ್ರ್ಯ, ಗೌರವ, ನಂಬಿಕೆ ಈ ಎಲ್ಲವೂ ಇದರಲ್ಲಿ ಇರಬೇಕು. ಇದರೊಂದಿಗೆ ಪ್ರೀತಿ ಪಯಣದಲ್ಲಿ ಒಮ್ಮೆ ಮೇಲೆರುವುದು ಒಮ್ಮೆ ಕುಸಿಯುವುದು ಎಲ್ಲವೂ ಇರುತ್ತದೆ. ಆದರೆ ಎಂಥ ಸಮಯದಲ್ಲೂ ಜೊತೆಯಾಗಿ ಇರಬೇಕು. ಪ್ರೀತಿ ಎಂದರೆ ಅತೀತವಾದದ್ದು, ಯಾವುದೋ ಒಂದು ಕ್ಷಣಿಕ ಸುಖ ಖಂಡಿತ ಪ್ರೀತಿ. ಪ್ರೀತಿ ಎಂಬುದು ಅತೀತವಾದದ್ದು ಎಂಬುದನ್ನು ತೋರಿಸಿದವರು ಶಿವ–ಪಾರ್ವತಿ.