ಶ್ರೀಕೃಷ್ಣನಿಗೆ ಅಚ್ಚುಮೆಚ್ಚಿನ 4 ರಾಶಿಯವರು, ವಾಸುದೇವನ ಕೃಪೆಯಿಂದ ಇವರ ಬಾಳಿನಲ್ಲಿ ಸದಾ ಸುಖ, ಸಂತೋಷ ತುಂಬಿರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರೀಕೃಷ್ಣನಿಗೆ ಅಚ್ಚುಮೆಚ್ಚಿನ 4 ರಾಶಿಯವರು, ವಾಸುದೇವನ ಕೃಪೆಯಿಂದ ಇವರ ಬಾಳಿನಲ್ಲಿ ಸದಾ ಸುಖ, ಸಂತೋಷ ತುಂಬಿರುತ್ತೆ

ಶ್ರೀಕೃಷ್ಣನಿಗೆ ಅಚ್ಚುಮೆಚ್ಚಿನ 4 ರಾಶಿಯವರು, ವಾಸುದೇವನ ಕೃಪೆಯಿಂದ ಇವರ ಬಾಳಿನಲ್ಲಿ ಸದಾ ಸುಖ, ಸಂತೋಷ ತುಂಬಿರುತ್ತೆ

ಹಿಂದೂಗಳಲ್ಲಿ ಹಲವರು ಶ್ರೀಕೃಷ್ಣನ ಪರಮಭಕ್ತರಿದ್ದಾರೆ. ಆದರೆ ವಾಸುದೇವನಿಗೆ ಕೆಲವು ರಾಶಿಯವರ ಮೇಲೆ ವಿಶೇಷ ಪ್ರೀತಿ. ಅವನ ಕೃಪೆಯಿಂದ ಈ ರಾಶಿಯವರ ಬಾಳಿನಲ್ಲಿ ಸದಾ ಸುಖ, ಸಂತೋಷ ತುಂಬಿರುತ್ತದೆ. ಆ 4 ರಾಶಿಯವರು ಯಾರು ನೋಡಿ.

ಶ್ರೀಕೃಷ್ಣನಿಗೆ ಅಚ್ಚುಮೆಚ್ಚಿನ 4 ರಾಶಿಯವರು, ವಾಸುದೇವನ ಕೃಪೆಯಿಂದ ಇವರ ಬಾಳಿನಲ್ಲಿ ಸದಾ ಸುಖ, ಸಂತೋಷ ತುಂಬಿರುತ್ತೆ
ಶ್ರೀಕೃಷ್ಣನಿಗೆ ಅಚ್ಚುಮೆಚ್ಚಿನ 4 ರಾಶಿಯವರು, ವಾಸುದೇವನ ಕೃಪೆಯಿಂದ ಇವರ ಬಾಳಿನಲ್ಲಿ ಸದಾ ಸುಖ, ಸಂತೋಷ ತುಂಬಿರುತ್ತೆ

ಶ್ರೀಕೃಷ್ಣನಿಗೆ ಕನ್ನಯ್ಯ, ಗೋಪಾಲ, ವಾಸುದೇವ, ಪಾಂಡುರಂಗ, ಮಧುಸೂದನ ಹೀಗೆ ಹಲವಾರು ಹೆಸರುಗಳಿವೆ. ಸನಾತನ ಧರ್ಮದಲ್ಲಿ ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಕೃಷ್ಣ ವೃಷಭ ರಾಶಿಯ ರೋಹಿಣಿ ನಕ್ಷತ್ರದಲ್ಲಿ ಜನಿಸುತ್ತಾನೆ. ಹಿಂದೂಗಳಲ್ಲಿ ಹಲವರು ಶ್ರೀಕೃಷ್ಣನ ಪರಮಭಕ್ತರು. ಕೃಷ್ಣನನ್ನು ಆರಾಧ್ಯ ದೈವವಾಗಿ ಪೂಜಿಸುತ್ತಾರೆ. ಆದರೆ ಗೋಪಿಲೋಲನಿಗೆ ಕೆಲವು ರಾಶಿಯವರ ಮೇಲೆ ವಿಶೇಷ ಒಲವು. ಆ ರಾಶಿಗೆ ಸೇರಿದವರು ಎಂದರೆ ಅವನಿಗೆ ಅಚ್ಚುಮೆಚ್ಚು.

ಅಂತಹವರಿಗೆ ಯಾವಾಗಲೂ ಶ್ರೀಕೃಷ್ಣನ ಅನುಗ್ರಹವಿರುತ್ತದೆ. ಶ್ರೀಕೃಷ್ಣ ಪರಮಾತ್ಮನ ದೆಸೆಯಿಂದ ಅವರ ಬಾಳಿನಲ್ಲಿ ಯಾವಾಗಲೂ ಸುಖ, ಸಂತೋಷ, ಸಮೃದ್ಧಿ ತುಂಬಿರುತ್ತದೆ. ಹಾಗಾದರೆ ಕೃಷ್ಣನಿಗೆ ಅಚ್ಚುಮೆಚ್ಚಿನ 4 ರಾಶಿಯವರು ಯಾರು ಎಂಬುದನ್ನು ನೋಡೋಣ.

ಕೃಷ್ಣನ ನೆಚ್ಚಿನ ರಾಶಿಗಳು

1. ಕಟಕ ರಾಶಿ

ಶ್ರೀಕೃಷ್ಣನಿಗೆ ಕಟಕ ರಾಶಿಯವರೆಂದರೆ ಬಹಳ ಪ್ರೀತಿ. ಈ ರಾಶಿಚಕ್ರದ ಅಡಿಯಲ್ಲಿ ಜನಿಸಿದವರು ಅದೃಷ್ಟವಂತರು ಎಂದು ಹೇಳಬಹುದು. ಈ ರಾಶಿಯಲ್ಲಿ ಜನಿಸಿದವರ ಮೇಲೆ ಕೃಷ್ಣ ಪರಮಾತ್ಮನ ಆಶೀರ್ವಾದ ಯಾವಾಗಲೂ ಇರುತ್ತದೆ. ಕೃಷ್ಣನ ಕೃಪೆಯಿಂದ ಇವರ ಬಾಳಿನಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಕೃಷ್ಣನು ಈ ರಾಶಿಯವರ ಕಷ್ಟಗಳನ್ನು ಸಹ ನಿವಾರಿಸುತ್ತಾನೆ. ಮಾನಸಿಕ ಶಾಂತಿಯನ್ನು ನೀಡುತ್ತಾನೆ.

2. ವೃಷಭ ರಾಶಿ

ಕೃಷ್ಣನಿಗೆ ವೃಷಭ ರಾಶಿಯವರೆಂದರೆ ತುಂಬಾ ಇಷ್ಟ. ಈ ರಾಶಿಯಲ್ಲಿ ಜನಿಸಿದವರು ಕೃಷ್ಣನಿಂದ ವಿಶೇಷ ಆಶೀರ್ವಾದ ಪಡೆಯುತ್ತಾರೆ. ಈ ರಾಶಿಚಕ್ರದ ಜನರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಅವರು ಎಲ್ಲದರಲ್ಲೂ ಹೊಂದಿಕೊಳ್ಳುತ್ತಾರೆ. ಕೃಷ್ಣನ ಕೃಪೆಯಿಂದ ಇವರ ಬಾಳು ಸುಂದರವಾಗಿರುತ್ತದೆ.

3. ತುಲಾ ರಾಶಿ

ತುಲಾ ರಾಶಿಯವರಿಗೆ ಯಾವಾಗಲೂ ಕೃಷ್ಣನ ಆಶೀರ್ವಾದ ಇರುತ್ತದೆ. ಶ್ರೀಕೃಷ್ಣನಿಗೆ ತುಲಾ ರಾಶಿಯ ಜನರು ಇಷ್ಟ. ಅವರು ತುಂಬಾ ಪ್ರೀತಿಯಿಂದ ಇರುತ್ತಾರೆ. ಶ್ರೀಕೃಷ್ಣನು ಈ ರಾಶಿಯವರ ಜೀವನದಲ್ಲಿ ಸಾಮರಸ್ಯವನ್ನು ತರುತ್ತಾನೆ. ಕೃಷ್ಣನ ಪೂಜೆ ಮಾಡುವುದರಿಂದ ಆರ್ಥಿಕ ತೊಂದರೆಗಳು ದೂರವಾಗುತ್ತವೆ. ಈ ರಾಶಿಚಕ್ರದ ಜನರು ತಮ್ಮ ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾಗಿದ್ದಾರೆ.

4. ಸಿಂಹ ರಾಶಿ

ಕೃಷ್ಣನಿಗೆ ಸಿಂಹ ರಾಶಿಯವರೆಂದರೆ ತುಂಬಾ ಇಷ್ಟ. ಶ್ರೀಕೃಷ್ಣನು ಅವರ ಜೀವನದಲ್ಲಿ ಸಂತೋಷ ಮತ್ತು ಯಶಸ್ಸನ್ನು ತರುತ್ತಾನೆ. ಅವನು ಯಾವಾಗಲೂ ತನ್ನ ಭಕ್ತರಿಗೆ ಅವರ ಶ್ರಮದ ಫಲವನ್ನು ನೀಡುತ್ತಾನೆ. ಸಿಂಹ ರಾಶಿಯವರು ಶ್ರೀಕೃಷ್ಣನ ಕೃಪೆಯಿಂದ ತಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.