ದೇವರ ಪ್ರಸಾದವನ್ನು ಎಡಗೈಯಿಂದ ಏಕೆ ತೆಗೆದುಕೊಳ್ಳಬಾರದು? ಇದರ ಹಿಂದಿರುವ ಕಾರಣ ತಿಳಿಯಿರಿ
ಎಡಗೈಯಿಂದ ಪ್ರಸಾದವನ್ನು ಏಕೆ ತಿನ್ನಬಾರದು ಎಂಬುದರ ಹಿಂದಿನ ಕಾರಣವೇನು. ಎಡಗೈಯನ್ನು ಅಶುದ್ಧವೆಂದು ಪರಿಗಣಿಸಬೇಕೇ ಅಥವಾ ಮೂಢನಂಬಿಕೆ ಎಂದು ಪರಿಗಣಿಸಬೇಕೇ ಎಂದು ಅನೇಕರು ಕೇಳುತ್ತಾರೆ. ಈ ಬಗ್ಗೆ ವಿವರವಾಗಿ ತಿಳಿಯೋಣ.

ಸನಾತನ ಧರ್ಮದಲ್ಲಿ ಅನೇಕ ಸಂಪ್ರದಾಯಗಳನ್ನು ಅನುರಿಸಲಾಗುತ್ತದೆ. ಪೂರ್ವಜರು ಅನುಸರಿಸಿದ ಆಚರಣೆಗಳನ್ನೇ ನಾವು ಕೂಡ ಅನುಸರಿಸಿಕೊಂಡು ಹೋಗುತ್ತಿದ್ದೇವೆ. ಹೀಗೆ ಮಾಡುವುದರಿಂದ ನಾವು ಯಾವುದೇ ಅಡೆತಡೆಗಳಿಲ್ಲದೆ ಸಂತೋಷವಾಗಿರಬಹುದು ಎಂದು ನಂಬಲಾಗಿದೆ. ಇಲ್ಲಿಯವರೆಗೆ ನಮ್ಮ ಪೂರ್ವಜರಿಂದ ಬಹಳಷ್ಟು ಅನುಸರಿಸಿದ್ದೇವೆ. ಅವುಗಳಲ್ಲಿ ಒಂದು ಬಲಗೈಯಿಂದ ಪ್ರಸಾದವನ್ನು ತಿನ್ನುವುದು ಕೂಡ ಒಂದಾಗಿದೆ.
ಸಾಮಾನ್ಯವಾಗಿ ಯಾರೂ ಕೂಡ ಎಡಗೈಯಿಂದ ಪ್ರಸಾದವನ್ನು ಸ್ವೀಕರಿಸುವುದಿಲ್ಲ. ಆದರೆ ಪ್ರಸಾದವನ್ನು ಎಡಗೈಯಿಂದ ತಿನ್ನದಿರಲು ಕಾರಣವೇನು ಮತ್ತು ಬಲಗೈಯಿಂದ ಏಕೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳೋಣ. ಎಡಗೈಯನ್ನು ಅಶುದ್ಧವೆಂದು ಪರಿಗಣಿಸಬೇಕೇ ಅಥವಾ ಮೂಢನಂಬಿಕೆ ಎಂದು ಪರಿಗಣಿಸಬೇಕೇ ಎಂದು ಅನೇಕರು ಕೇಳುತ್ತಾರೆ. ಈ ಬಗ್ಗೆ ವಿವರವಾಗಿ ತಿಳಿಯೋಣ.
ಬಲಗೈ ಮಹತ್ವ
ವಿದ್ವಾಂಸರ ಪ್ರಕಾರ, ಬಲಗೈ ಶುಭ ಶಕ್ತಿ, ಸೂರ್ಯನ ಸಂಕೇತವಾಗಿದೆ. ಎಡಗೈಯ ಗುಪ್ತ ಶಕ್ತಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಅದಕ್ಕಾಗಿಯೇ ನಾವು ಪ್ರಸಾದವನ್ನು ತೆಗೆದುಕೊಳ್ಳುವುದರ ಜೊತೆಗೆ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡಲು ಬಲಗೈಯನ್ನು ಬಳಸುತ್ತೇವೆ. ದೇವರಿಗೆ ಆರತಿ ಅರ್ಪಿಸಿದರೆ, ಅರ್ಪಣೆ ಸಲ್ಲಿಸಿದರೆ ಅಥವಾ ಯಾರಿಗಾದರೂ ಯಾವುದೇ ದೇಣಿಗೆ ನೀಡಿದರೆ, ನಾವು ಬಲಗೈಯನ್ನು ಬಳಸುತ್ತೇವೆ. ಇದನ್ನು ಮಾಡುವುದರಿಂದ, ನಾವು ದೇವರ ಆಶೀರ್ವಾದವನ್ನು ಪಡೆಯಬಹುದು ಮತ್ತು ಸಂತೋಷವಾಗಿರಬಹುದು ಹಾಗೂ ಸ್ಥಗಿತಗೊಂಡ ಕೆಲಸಗಳನ್ನು ಸಹ ಪೂರ್ಣಗೊಳಿಸಬಹುದೆಂಬ ನಂಬಿಕೆ ಇದೆ.
ಎಡಗೈ ದುರಾದೃಷ್ಟವನ್ನು ತರುತ್ತದೆಯೇ?
ಜ್ಯೋತಿಷಿಗಳ ಪ್ರಕಾರ, ಎಡಗೈಯನ್ನು ಕೆಲವು ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ. ಇದನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಎಡಗೈಯಿಂದ ಯಾವುದೇ ಧಾರ್ಮಿಕ ಕೆಲಸವನ್ನು ಮಾಡುವುದು ಅಶುಭ ಎಂದು ಹೇಳಲಾಗುತ್ತದೆ.
ಪ್ರಸಾದ ಸ್ವೀಕರಿಸುವುದು ಹೇಗೆ?
ಪಂಡಿತರ ಪ್ರಕಾರ, ಪ್ರಸಾದವನ್ನು ಬಲಗೈಯಿಂದ ತೆಗೆದುಕೊಳ್ಳಬೇಕು. ಇದಕ್ಕೂ ಮುನ್ನ ಕೈಗಳನ್ನು ತೊಳೆದುಕೊಂಡಿರಬೇು. ಸ್ವಚ್ಛವಾದ ಕೈಗಳಿಂದ ಪ್ರಸಾದ ಸ್ವೀಕರಿಸಬೇಕು, ಬಲಗೈ ಮೇಲೆ ಎಡಗೈಯಲ್ಲಿ ಇಟ್ಟುಕೊಂಡು ಪ್ರಸಾದವನ್ನು ಸ್ವೀಕರಿಸಬೇಕು. ನಂತರ ಪ್ರಸಾದವನ್ನು ಕಣ್ಣುಗಳನ್ನು ಮುಚ್ಚಿ ತಿನ್ನಬೇಕು. ಹೀಗೆ ಮಾಡುವುದರಿಂದ ತೃಪ್ತಿ ಮತ್ತು ಮನಸ್ಸಿನ ಶಾಂತಿ ಇರುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ