Weekly Horoscope: ಕುಟುಂಬದ ಸದಸ್ಯರಿಂದ ಹಣದ ಸಹಾಯ ಸಿಗಲಿದೆ, ಉದ್ಯೋಗ ಬದಲಿಸುವ ಸೂಚನೆಯಿದೆ; ಮಾರ್ಚ್ 24ರಿಂದ 30ರವರೆಗಿನ ವಾರಭವಿಷ್ಯ
ಮಾರ್ಚ್ 24ರಿಂದ ಮಾರ್ಚ್ 30 ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ( March 24 to March 30 Weekly Horoscope)

ಮಾರ್ಚ್ 24ರಿಂದ ಮಾರ್ಚ್ 30 ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (March 24 to March 30 Weekly Horoscope)
ರಾಶಿ ಫಲಗಳು
ಮೇಷ
ಹೊಸತಾದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನಿಮ್ಮ ಕಾರ್ಯಯೋಜನೆಯ ಬಗ್ಗೆ ಕುಟುಂಬದೊಂದಿಗೆ ಚರ್ಚಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಿ. ವಾರದ ಆರಂಭದಲ್ಲಿಯೇ ಶುಭ ವರ್ತಮಾನವೊಂದು ಬರಲಿದೆ. ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆದಾಯವು ಹೆಚ್ಚುವ ಸೂಚನೆಗಳಿವೆ. ಉದ್ಯೋಗದಲ್ಲಿನ ಕಾರ್ಯದಕ್ಷತೆಗೆ ಎಲ್ಲರಿಂದ ಪ್ರಶಂಸೆ ದೊರೆಯುತ್ತದೆ. ಸೋದರಿಯ ಕುಟುಂಬದಲ್ಲಿನ ವಿವಾದವು ಪರಿಹಾರಗೊಳ್ಳುತ್ತದೆ. ಕುಟುಂಬದ ಸದಸ್ಯರ ಜೊತೆಗೂಡಿ ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣದು. ಯೋಚಿಸದಿರಿ.
ವೃಷಭ
ಬುದ್ಧಿವಂತಿಕೆಯಿಂದ ಅಮೂಲ್ಯವಾದ ಅವಕಾಶವನ್ನು ನಿಮ್ಮದಾಗಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಮೇಲ್ದರ್ಜೆಗೆ ಏರುವಿರಿ. ಅನಿವಾರ್ಯವಾದಲ್ಲಿ ಉದ್ಯೋಗವನ್ನು ಬದಲಾಯಿಸಬಹುದು. ಮೊಮ್ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ತುಂಬಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಕುಟುಂಬದ ಸದಸ್ಯರಿಂದ ಹಣದ ಸಹಾಯ ದೊರೆಯುತ್ತದೆ. ಬಂದು ಮಿತ್ರರ ಕಾರ್ಯಕ್ರಮಕ್ಕಾಗಿ ದೂರದ ಸ್ಥಳಕ್ಕೆ ತೆರಳುವಿರಿ. ಸಂಗಾತಿ ಅಥವಾ ಮಗಳಿಗಾಗಿ ದುಬಾರಿ ಬೆಲೆಯ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಇರುವ ಹಣ್ಣವನ್ನೆಲ್ಲಾ ಖರ್ಚುಮಾಡಿದ ನಂತರ ಪಶ್ಚಾತಾಪ ಪಡೆಯುವಿರಿ. ಸ್ವಂತ ಬಳಕೆಗಾಗಿ ವಾಹನವನ್ನು ಕೊಳ್ಳುವಿರಿ.
ಮಿಥುನ
ಅನುಕೂಲಕರ ವ್ಯವಸ್ಥೆಯಲ್ಲಿ ಇರುವ ಕಾರಣ ಸಂತೃಪ್ತಿಯ ಭಾವನೆ ಮೂಡುತ್ತದೆ. ಉದ್ಯೋಗ ಬದಲಿಸುವ ಸೂಚನೆ ಇದೆ. ಹೊಸ ಸನ್ನಿವೇಶಕ್ಕೆ ಸುಲಭವಾಗಿ ಹೊಂದಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಮನೆಯನ್ನು ನವೀಕರಣಗೊಳಿಸಲು ಹಣ ಖರ್ಚಾಗಬಹುದು. ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಹಿರಿಯರ ಮಾರ್ಗದರ್ಶನ ದೊರೆಯುತ್ತದೆ. ಹಿರಿಯರ ಜೊತೆ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವ ಅವಕಾಶ ದೊರೆಯಲಿದೆ. ಖರ್ಚು ವೆಚ್ಚಗಳಲ್ಲಿ ಮಿತಿ ಇರುವುದು ಒಳ್ಳೆಯದು. ಆತುರ ಪಡದೆ ಸಹನೆಯಿಂದ ಎಲ್ಲರೊಂದಿಗೆ ಸ್ಪಂದಿಸಿ. ಪ್ರಯತ್ನ ಪಟ್ಟಲ್ಲಿ ಹಣ ಉಳಿತಾಯ ಸಾಧ್ಯವಾಗಲಿದೆ.
ಕಟಕ
ಸ್ವಂತ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ತಂದೆಯ ವಿಚಾರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಅವರ ಆರೋಗ್ಯದಲ್ಲಿ ತೊಂದರೆ ಆದರೂ ಅಪಾಯವಿಲ್ಲ. ಕ್ರಿಯಾಶೀಲತೆಯ ವ್ಯಕ್ತಿತ್ವದಿಂದ ಯಶಸ್ಸನ್ನು ಗಳಿಸುವಿರಿ. ಉದ್ಯೋಗವನ್ನು ಬದಲಾಯಿಸುವ ಸೂಚನೆಯಿದೆ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವಿರಿ. ಹಣವನ್ನು ಉಳಿಸಲು ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸುವಿರಿ. ಬಂಧು ವರ್ಗದಿಂದ ಅನಿರೀಕ್ಷಿತ ಸಹಾಯ ಸಹಕಾರ ದೊರೆಯಲಿದೆ. ತಂದೆಯವರು ನಡೆಸುತ್ತಿರುವ ವ್ಯಾಪಾರ ಅಥವಾ ಕೈಗಾರಿಕೆಗಳ ನಿರ್ವಹಣೆಯ ಜವಾಬ್ದಾರಿ ದೊರೆಯಲಿದೆ. ಯಾವುದೇ ವಿಚಾರವಾದರು ಆತುರದ ತೀರ್ಮಾನವನ್ನು ತೆಗೆದುಕೊಳ್ಳದಿರಿ.
ಸಿಂಹ
ಹಠವನ್ನು ಬಿಡದ ಕಾರಣ ಎಲ್ಲರ ವಿರೋಧ ಎದುರಿಸುವಿರಿ. ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸಿ. ಉದ್ಯೋಗದಲ್ಲಿ ಎಲ್ಲರಿಂದಲೂ ಪ್ರಶಂಸೆ ಲಭಿಸುತ್ತದೆ. ಉನ್ನತ ಅಧಿಕಾರ ದೊರೆಯುತ್ತದೆ. ರಕ್ತ ಸಂಬಂಧಿಕರಿಂದ ಶುಭ ವಾರ್ತೆಯನ್ನು ಕೇಳುವಿರಿ. ನೇರ ನಿಷ್ಠುರ ಮಾತುಕತೆ ಆತ್ಮೀಯರಲ್ಲಿಯೂ ಬೇಸರವನ್ನು ಮೂಡಿಸುತ್ತದೆ. ತಂದೆಯೊಂದಿಗೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗಲಿದೆ. ವಿಧ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿದೆ. ಧಾರ್ಮಿಕ ಕೆಲಸ ಕಾರ್ಯಗಳನ್ನು ಆಯೋಜಿಸಿ ಯಶಸ್ಸನ್ನು ಗಳಿಸುವಿರಿ.
ಕನ್ಯಾ
ಸ್ಥಿರವಾದ ಮನಸ್ಸಿಲ್ಲದೆ ಹೋದರು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ದುಡುಕಿ ಮಾತನಾಡಿದಲ್ಲಿ ಉದ್ಯೋಗದಲ್ಲಿ ಬೇಸರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ದೇವತಾ ಕಾರ್ಯ ನಿರ್ವಹಿಸಲು ದೂರದ ಊರಿಗೆ ತೆರಳುವಿರಿ. ಕೆಲಸ ಕಾರ್ಯಗಳಲ್ಲಿ ದಿಟ್ಟತನದ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರಬಹುದು. ಚಿಕ್ಕ ಪ್ರಮಾಣದ ಸಣ್ಣ ಕೈಗಾರಿಕೆ ಒಂದನ್ನು ಆರಂಭಿಸುವ ಬಗ್ಗೆ ಯೋಚಿಸುವಿರಿ. ಮನಸ್ಸು ಒಪ್ಪದೇ ಹೋದರೂ ಬೇರೆಯವರಿಂದ ಹಣವನ್ನು ಪಡೆಯುವಿರಿ. ಹಣದ ವಿಚಾರವಾಗಿ ಸಮಸ್ಯೆಯೊಂದು ಎದುರಾಗಲಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರವಿರಲಿ.
ತುಲಾ
ಕೌಟುಂಬಿಕ ವಿಚಾರದಲ್ಲಿ ಯೋಚಿಸದೆ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಮಯ ಸಂದರ್ಭಕ್ಕೆ ಅನುಗುಣವಾಗಿ ವರ್ತಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ ಭವಿಷ್ಯದ ಯೋಜನೆಗಳಲ್ಲಿ ಸುಲಭ ಜಯ ದೊರೆಯುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬಲ್ಲಿರಿ. ಸೋದರ ಅಥವಾ ಸೋದರಿಯ ನಡುವಿನ ವಿವಾದ ಕೊನೆಯಾಗುತ್ತದೆ. ವಂಶದಾರಿತ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಯಾರೊಂದಿಗೂ ವಾದ ವಿವಾದ ಮಾಡದಿರಿ. ಹಣದ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ತಪ್ಪುಮಾಡುವ ಗುಣ ಇರದು. ಬೇರೆಯವರ ತಪ್ಪನ್ನು ಒಪ್ಪುವುದೂ ಇಲ್ಲ. ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ತಿಳಿ ಹೇಳುವ ಕೆಲಸ ಮಾಡುವಿರಿ.
ವೃಶ್ಚಿಕ
ಆರೋಗ್ಯದಲ್ಲಿ ಕಾಲಕ್ರಮೇಣ ಚೇತರಿಕೆ ಕಂಡು ಬರುತ್ತದೆ. ಅತಿಯಾದ ಕೋಪ ಎಲ್ಲರಲ್ಲೂ ಬೇಸರವನ್ನು ಉಂಟುಮಾಡುತ್ತದೆ. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರೂ ಮೆಚ್ಚುವಂತಹ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿನ ಕಿರಿಯ ಸದಸ್ಯರ ವಿವಾಹ ನಿಶ್ಚಯವಾಗುತ್ತದೆ. ಹಣಕಾಸಿನ ವ್ಯವಹಾರದ ಬಗ್ಗೆ ಆತ್ಮೀಯರ ಜೊತೆಯಲ್ಲಿ ಮಾತುಕತೆ ನಡೆಯಲಿದೆ. ಆತುರದ ನಿರ್ಧಾರ ತೆಗೆದುಕೊಳ್ಳದಿರಿ.
ಧನಸ್ಸು
ಉದ್ಯೋಗ ಕ್ಷೇತ್ರದಲ್ಲಿ ಮಾಡಿದ ತಪ್ಪನ್ನು ಮೇಲಧಿಕಾರಿಗಳು ಮನ್ನಿಸುತ್ತಾರೆ. ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸಿದರೆ ಕೆಲಸಕಾರ್ಯಗಳಲ್ಲಿ ಹಿನ್ನೆಡೆ ಲಭಿಸಬಹುದು. ನಿಮ್ಮಿಂದ ಕುಟುಂಬದಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ದಂಪತಿಗಳ ನಡುವಿನ ಐಕ್ಯತೆ ಬದಲಾಗದು. ಮಕ್ಕಳ ಆರೋಗ್ಯದಲ್ಲಿ ಅಲ್ಪಮಟ್ಟದ ತೊಂದರೆ ಆಗಬಹುದು. ಕೈ ಹಿಡಿದ ಕೆಲಸ ಕಾರ್ಯಗಳಲ್ಲಿಯೂ ಸುಲಭವಾಗಿ ಜಯಗಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಆಧುನಿಕತೆಯ ಸವಾಲನ್ನು ಎದುರಿಸಬೇಕಾಗುತ್ತದೆ. ಮನದ ಬೇಸರ ಕಳೆಯಲು ಪ್ರವಾಸ ಕೈಗೊಳ್ಳುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಉಪವೃತ್ತಿಯನ್ನು ಅವಲಂಭಿಸುವಿರಿ.
ಮಕರ
ಆತುರದಿಂದ ಕೆಲಸ ಕಾರ್ಯಗಳನ್ನು ಮಾಡಿದರು ಸರಿಯಾದ ಹಾದಿಯಲ್ಲಿ ಇರುವಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಕುಟುಂಬದ ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಎಲ್ಲರಿಗೂ ಮಾದರಿಯಾಗಬಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ಕಷ್ಟ ನಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಸಲುವಾಗಿ ಸಂಘ ಸಂಸ್ಥೆಯನ್ನು ಆರಂಭಿಸುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಜೊತೆ ವಿವಾದ ಉಂಟಾಗಲಿದೆ. ಪರಿಚಯಸ್ಥರ ಜೀವನದ ಸಕಾರಾತ್ಮಕ ಬದಲಾವಣೆ ಹೊಸ ಆಯಾಮವನ್ನು ಸೃಷ್ಟಿಸುತ್ತದೆ. ತಪ್ಪು ಮಾಹಿತಿಗಳ ಕಾರಣ ಮನಸ್ಸಿನ ಸಂತೋಷ ಬಹುಕಾಲ ಉಳಿಯದದು.
ಕುಂಭ
ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಸಂತಸ ನೀಡುತ್ತದೆ. ಮನ ಬಿಚ್ಚಿ ಆತ್ಮೀಯರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿರಿ. ಅನಾವಶ್ಯಕ ವಿಚಾರಗಳ ಬಗ್ಗೆ ಚಿಂತೆ ಇರುತ್ತದೆ. ಕುಟುಂಬದಲ್ಲಿ ಹಣಕಾಸಿನ ಸಂಬಧ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಸಮಾಜ ಸೇವೆ ಮಾಡುವ ಇಂಗಿತದಿಂದ ರಾಜಕೀಯ ಪ್ರವೇಶಿಸುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಹಣದ ವ್ಯವಹಾರದ ಬಗ್ಗೆ ಯೋಚಿಸುವುದು ಒಳ್ಳೆಯದು. ಕೇವಲ ಮನಸ್ಸಿಗೆ ಮುದ ನೀಡುವ ವಿಚಾರಗಳನ್ನು ಮಾತ್ರ ಎಲ್ಲರೊಡನೆ ಹಂಚಿಕೊಳ್ಳುವಿರಿ. ಗುಟ್ಟಾಗಿ ಹಣ ಸಂಪಾದಿಸುವಿರಿ., ಸಾಲದ ವ್ಯವಹಾರದಿದ ದೂರ ಉಳಿಯುವಿರಿ.
ಮೀನ
ಸಂತಸದಿಂದ ಎಲ್ಲರ ಜೊತೆ ಬೆರೆಯುವಿರಿ.ಸಮಾಜದಲ್ಲಿ ಉನ್ನತ ಗೌರವ ಗಳಿಸುವಿರಿ. ಆಡುವ ಮಾತುಗಳನ್ನು ಪಾಲಿಸಲು ಸಾಧ್ಯವಾಗದು. ಸಂತಾನ ಲಾಭವಿದೆ. ಉದ್ಯೋಗದಲ್ಲಿ ಹಿತಕರ ಬದಲಾವಣೆಗಳು ಆಗಲಿವೆ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನದ ಅವಕಾಶ ಪಡೆಯಲಿದ್ದಾರೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಕೃಷಿ ಭೂಮಿಯನ್ನು ಕೊಳ್ಳುವ ಸೂಚನೆಗಳಿವೆ. ಕೆಲವೊಂದು ಕೆಲಸ ಕಾರ್ಯಗಳು ಅಪೂರ್ಣವಾಗಲಿವೆ. ಗಂಟಲು ಅಥವಾ ಬಾಯಿಗೆ ಸಂಬಂಧಿಸಿದಂತೆ ಅನಾರೋಗ್ಯ ಉಂಟಾಗಲಿದೆ. ವಂಶಕ್ಕೆ ಸೇರಿದ ಆಸ್ತಿಯೊಂದು ನಿಮ್ಮದಾಗಲಿದೆ. ಮಕ್ಕಳಿಗೆ ಉದ್ಯೋಗ ದೊರೆಯಲಿದೆ. ನೂತನ ವಾಹನ ಲಾಭವಿದೆ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
