ತವರೇ ದೊಡ್ಡ ಸವಾಲು, ಸಿಎಸ್‌ಕೆ ಸೋತರೆ ಪ್ಲೇಆಫ್‌ನಿಂದ ಹೊರಕ್ಕೆ; ಚೆನ್ನೈ vs ಪಂಜಾಬ್ ಪಂದ್ಯದ ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ತವರೇ ದೊಡ್ಡ ಸವಾಲು, ಸಿಎಸ್‌ಕೆ ಸೋತರೆ ಪ್ಲೇಆಫ್‌ನಿಂದ ಹೊರಕ್ಕೆ; ಚೆನ್ನೈ Vs ಪಂಜಾಬ್ ಪಂದ್ಯದ ಪ್ರಮುಖ ಅಂಶಗಳು

ತವರೇ ದೊಡ್ಡ ಸವಾಲು, ಸಿಎಸ್‌ಕೆ ಸೋತರೆ ಪ್ಲೇಆಫ್‌ನಿಂದ ಹೊರಕ್ಕೆ; ಚೆನ್ನೈ vs ಪಂಜಾಬ್ ಪಂದ್ಯದ ಪ್ರಮುಖ ಅಂಶಗಳು

ಇಂಡಿಯನ್ ಪ್ರೀಮಿಯರ್ ಲೀಗ್​ 2025ರ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕೆ ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.

ತವರೇ ದೊಡ್ಡ ಸವಾಲು, ಸಿಎಸ್‌ಕೆ ಸೋತರೆ ಪ್ಲೇಆಫ್‌ನಿಂದ ಹೊರಕ್ಕೆ; ಚೆನ್ನೈ vs ಪಂಜಾಬ್ ಪಂದ್ಯದ ಪ್ರಮುಖ ಅಂಶಗಳು
ತವರೇ ದೊಡ್ಡ ಸವಾಲು, ಸಿಎಸ್‌ಕೆ ಸೋತರೆ ಪ್ಲೇಆಫ್‌ನಿಂದ ಹೊರಕ್ಕೆ; ಚೆನ್ನೈ vs ಪಂಜಾಬ್ ಪಂದ್ಯದ ಪ್ರಮುಖ ಅಂಶಗಳು

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕಿಂತ ಹೆಚ್ಚು ಕೊನೆಯ ಹಂತದಲ್ಲಿ ರೋಚಕತೆ ದುಪ್ಪಟ್ಟಾಗುತ್ತಿದೆ. ಪ್ಲೇಆಫ್​ಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎಲ್ಲಾ ತಂಡಗಳು ಗೆಲುವಿಗಾಗಿ ಜಿದ್ದಿಗೆ ಬಿದ್ದಿವೆ. ಕೆಲವು ತಂಡಗಳ ಮಧ್ಯೆ ನೇರಾನೇರ ಪೈಪೋಟಿ ಏರ್ಪಟ್ಟಿದ್ದರೆ, ಕೆಲವು ತಂಡಗಳು ಒಂದು ಪಂದ್ಯ ಸೋತರೂ ಪ್ಲೇಆಫ್ ರೇಸ್​​ನಿಂದ ಅಧಿಕೃತವಾಗಿ ಹೊರಬೀಳಲಿವೆ. ಅಂತಹ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್​​​ ಕೂಡ ಒಂದು. ಇದೀಗ ಅಗ್ರ-4ರಲ್ಲಿ ಸ್ಥಾನ ಪಡೆಯುವ ಉತ್ಸುಕದಲ್ಲಿರುವ ಪಂಜಾಬ್ ಕಿಂಗ್ಸ್ ಸವಾಲಿಗೆ ಸತತ‌ ಸೋಲುಗಳಿಂದ ಕಂಗೆಟ್ಟಿರುವ ಎಂಎಸ್ ಧೋನಿ ನೇತೃತ್ವದ ತಂಡ ಸಜ್ಜಾಗಿದೆ. ಆದರೆ ತವರಿನಲ್ಲಿ ಸತತ ನಾಲ್ಕು ಸೋತಿದ್ದು, ಸಿಎಸ್​ಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪಂಜಾಬ್ ಮತ್ತು ಚೆನ್ನೈ ನಡುವಿನ ಐಪಿಎಲ್ 49ನೇ ಪಂದ್ಯಕ್ಕೆ ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನ ಸಜ್ಜಾಗಿದೆ. ಪ್ರಸಕ್ತ ಲೀಗ್​ನಲ್ಲಿ ಏಪ್ರಿಲ್ 8ರಂದು ಐಪಿಎಲ್​ನ 22ನೇ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಅಂದು ಸಿಎಸ್​ಕೆ ವಿರುದ್ಧ ಪಿಬಿಕೆಎಸ್ 18 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಸೇಡಿನ ಸಮರದ ಜೊತೆಗೆ ಪ್ಲೇಆಫ್​​ ರೇಸ್​ನಲ್ಲಿ ಉಳಿಯಲು ಸಿಎಸ್​ಕೆ ಗೆಲ್ಲುವುದು ಅನಿವಾರ್ಯ. ಸದ್ಯ ಸಿಎಸ್​ಕೆ 9 ಪಂದ್ಯಗಳಲ್ಲಿ 2 ಗೆದ್ದು, 7 ಸೋಲಿನೊಂದಿಗೆ 4 ಅಂಕ ಪಡೆದು ಕೊನೆಯ ಸ್ಥಾನದಲ್ಲಿದೆ. ಆದರೆ ಪಂಜಾಬ್ ಕಿಂಗ್ಸ್ ಇಷ್ಟೇ ಪಂದ್ಯಗಳಲ್ಲಿ 5 ಗೆಲುವು, 3 ಸೋಲು, 1 ಪಂದ್ಯ ರದ್ದಿನೊಂದಿಗೆ 11 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ಪಂಜಾಬ್ ಬ್ಯಾಟಿಂಗ್ ಡೆಪ್ತ್ ಅದ್ಭುತವಾಗಿದ್ದರೂ ಪರಿಣಾಮಕಾರಿ ಪ್ರದರ್ಶನ ನೀಡದೇ ಇರುವುದು ಅಚ್ಚರಿ ಮೂಡಿಸಿದೆ. ಆರಂಭಿಕ ಆಟಗಾರರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಪ್ರಭುಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾರೆ. ಬಳಿಕ ಕಣಕ್ಕಿಳಿಯುವ ಬ್ಯಾಟರ್​​ಗಳು ಗಣನೀಯ ಕೊಡುಗೆ ನೀಡುತ್ತಿಲ್ಲ. ಶ್ರೇಯಸ್ ಅಯ್ಯರ್​ ಆರಂಭಿಕ ಕೆಲ ಪಂದ್ಯಗಳಲ್ಲಿ ಮಿಂಚಿದರೂ ನಂತರ ಗಣನೀಯ ಕುಸಿತ ಕಂಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಇಂಗ್ಲಿಸ್ ಅವರಿಂದ ದೊಡ್ಡ ಇನ್ನಿಂಗ್ಸ್​​ ಬಂದಿಲ್ಲ. ಪಿಬಿಕೆಎಸ್ ಮಧ್ಯಮ ಕ್ರಮಾಂಕವು ಎರಡನೇ ಅತ್ಯಂತ ಕಡಿಮೆ ಸ್ಟ್ರೈಕ್​ರೇಟ್ ದರ (130.75) ಮತ್ತು 3ನೇ ಅತ್ಯಂತ ಕಡಿಮೆ ಸರಾಸರಿ (24.17) ಹೊಂದಿದೆ.

ಇಂಗ್ಲಿಸ್ ಅತ್ಯುತ್ತಮ ಸ್ಪಿನ್ ಆಟಗಾರನಾಗಿ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ 2024ರ ಐಪಿಎಲ್​ನಲ್ಲಿ ಚೆಪಾಕ್‌ನಲ್ಲಿ ಕೊನೆಯ ಬಾರಿಗೆ ಆಡಿದಾಗ ಅದ್ಭುತ ಶತಕ ಬಾರಿಸಿದ್ದ ಮಾರ್ಕಸ್ ಸ್ಟೊಯ್ನಿಸ್ ಅವರನ್ನು ಪ್ಲೇಯಿಂಗ್ 11ಗೆ ಸೇರಿಸಬಹುದು. ಉಳಿದಂತೆ ತಂಡದಲ್ಲಿ ಬದಲಾವಣೆಗೆ ಮುಂದಾಗದಿರಬಹುದು. ಮತ್ತೊಂದೆಡೆ ಸಿಎಸ್​ಕೆ ಬ್ಯಾಟಿಂಗ್​ ಕೆಟ್ಟದಾಗಿದೆ. ಈ ಋತುವಿನಲ್ಲಿ ಚೆನ್ನೈ ಪ್ಲೇಆಫ್ ಅವಕಾಶಗಳು ಕ್ಷೀಣಿಸುತ್ತಿರುವುದರಿಂದ ಉಳಿದ ಪಂದ್ಯಗಳಲ್ಲಿ ಹೊಸ ಆಟಗಾರರಿಗೆ ಅವಕಾಶ ನೀಡಬಹುದು. ಶೇಕ್ ರಶೀದ್, ಆಯುಷ್ ಮಾತ್ರೆ, ಡೆವಾಲ್ಡ್ ಬ್ರೆವಿಸ್ ಕೊಂಚ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದು ತಂಡದ ಬಲ ಹೆಚ್ಚಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ XII

ಆಯುಷ್ ಮಾತ್ರೆ, ಶೇಕ್ ರಶೀದ್, ಸ್ಯಾಮ್ ಕರನ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ರವೀಂದ್ರ ಜಡೇಜಾ, ವಂಶ್ ಬೇಡಿ, ಎಂಎಸ್ ಧೋನಿ (ನಾಯಕ ಮತ್ತು ವಾರ), ಅನ್ಸುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತೀಶಾ ಪತಿರಾಣ.

ಪಂಜಾಬ್ ಕಿಂಗ್ಸ್ ಸಂಭಾವ್ಯ XII

ಪ್ರಭುಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೋಯ್ನಿಸ್, ನೇಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕೋ ಜಾನ್ಸನ್, ಅಜ್ಮತ್ತುಲ್ಲಾ ಒಮರ್​​ಜಾಯ್, ಹರ್​​ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್.

ಪಿಚ್ ಮತ್ತು ಪರಿಸ್ಥಿತಿ

ಚೆಪಾಕ್‌ನ ಪರಿಸ್ಥಿತಿಯು ತವರು ತಂಡಕ್ಕೂ ಇನ್ನೂ ನಿಗೂಢವಾಗಿದೆ. 2010ರಲ್ಲಿ ಪಿಚ್ ಬದಲಾಯಿಸಿದಾಗಿನಿಂದ ಸಿಎಸ್‌ಕೆ ತಮ್ಮೊಂದಿಗೆ ಹಿಡಿತ ಸಾಧಿಸಿಲ್ಲ ಎಂದು ಎಂಎಸ್ ಧೋನಿ ಹೇಳಿದ್ದರು. ಹಿಂದಿನ ಪಂದ್ಯದಲ್ಲಿ ಸಿಎಸ್‌ಕೆ ಬೌಲರ್‌ಗಳಿಗೆ ಇಬ್ಬನಿ ಅಡ್ಡಿಯಾಗಿತ್ತು. ಆದ್ದರಿಂದ ಟಾಸ್ ಗೆದ್ದ ತಂಡ ಚೇಸಿಂಗ್ ಆಯ್ಕೆ ಮಾಡಿತ್ತು.

ಐಪಿಎಲ್‌ನಲ್ಲಿ ರವೀಂದ್ರ ಜಡೇಜಾ ವಿರುದ್ಧ ಯುಜ್ವೇಂದ್ರ ಚಹಲ್ ಉತ್ತಮ ದಾಖಲೆ ಹೊಂದಿದ್ದಾರೆ. ಚಹಲ್ ಎದುರು ಜಡ್ಡು 30 ಎಸೆತಗಳಲ್ಲಿ 31 ರನ್ ಗಳಿಸಿ 2 ಬಾರಿ ಔಟ್ ಆಗಿದ್ದಾರೆ. ಧೋನಿ ಎದುರೂ ಅದ್ಭುತ ದಾಖಲೆ ಹೊಂದಿರುವ ಮಣಿಕಟ್ಟಿನ ಸ್ಪಿನ್ನರ್, 80 ಎಸೆತಗಳಲ್ಲಿ 102 ರನ್ ನೀಡಿದ್ದು, 3 ವಿಕೆಟ್ ಉರುಳಿಸಿದ್ದಾರೆ.

ಖಲೀಲ್ ಅಹ್ಮದ್ ಪವರ್‌ಪ್ಲೇನಲ್ಲಿ 9 ಇನ್ನಿಂಗ್ಸ್‌ಗಳಲ್ಲಿ 8.70 ಎಕಾನಮಿ ದರದಲ್ಲಿ 8 ವಿಕೆಟ್‌ ಪಡೆದಿದ್ದಾರೆ . ಈ ಐಪಿಎಲ್‌ನಲ್ಲಿ ಈ ಹಂತದಲ್ಲಿ ಖಲೀಲ್‌ಗಿಂತ ಹೆಚ್ಚು ವಿಕೆಟ್‌ ಯಾರೂ ಪಡೆದಿಲ್ಲ.

ಈ ಋತುವಿನಲ್ಲಿ ಸಿಎಸ್‌ಕೆ ಪವರ್‌ಪ್ಲೇನಲ್ಲಿ ಕೇವಲ 5 ಸಿಕ್ಸರ್‌ ಬಾರಿಸಿದೆ. ಪಿಬಿಕೆಎಸ್ ಪವರ್​​ಪ್ಲೇನಲ್ಲಿ 27 ಸಿಕ್ಸರ್‌ ಬಾರಿಸಿದೆ.

ಐಪಿಎಲ್​ನಲ್ಲಿ ಸಿಎಸ್​ಕೆ ಮತ್ತು ಪಿಬಿಕೆಎಸ್ ತಂಡಗಳು 31 ಸಲ ಮುಖಾಮುಖಿಯಾಗಿವೆ. ಸಿಎಸ್​ಕೆ 16ರಲ್ಲಿ ಗೆದ್ದಿದ್ದರೆ, ಪಿಬಿಕೆಎಸ್ 15ರಲ್ಲಿ ಜಯಿಸಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.