ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂಗೆ ಇಂದು ಮಳೆಯ ಆತಂಕವಿರುವುದೇ; ಐಪಿಎಲ್ ಕ್ರಿಕೆಟ್ ಫೈನಲ್ ಮ್ಯಾಚ್ ಸಮಯದ ಹವಾಮಾನ ವರದಿ
Chennai Weather Updates, IPL 2024 Final, KKR vs SRH: ಐಪಿಎಲ್ 2024 ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಕೆಕೆಆರ್ ಮತ್ತು ಎಸ್ಆರ್ ಹೆಚ್ ತಂಡಗಳ ಕದನಕ್ಕೆ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

Chennai Weather Updates: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವೆ ಇಂದು (ಮೇ 26ರ) ರಾತ್ರಿಯ ಹೈ-ವೋಲ್ಟೇಜ್ ಇಂಡಿಯನ್ ಪ್ರೀಮಿಯರ್ ಲೀಗ್ 2024 ಫೈನಲ್ಗೆ ಮಳೆ ಅಡ್ಡಿಪಡಿಸಲಿದೆಯೇ? ಪ್ರಶಸ್ತಿ ಸುತ್ತಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವವರು ಹವಾಮಾನ ವರದಿ ಇಲ್ಲಿ ನೋಡಬಹುದು.
ಕೆಕೆಆರ್ ಮತ್ತು ಎಸ್ಆರ್ಹೆಚ್ ಫೈನಲ್ ಫೈಟ್ಗೆ ಮಳೆ ಸಂಭವ ಕಡಿಮೆ ಎಂದು ವರದಿಯಾಗಿದೆ. ಹವಾಮಾನ ವರದಿ ನೀಡಿರುವ ಮಾಹಿತಿ ಪ್ರಕಾರ, ಮೋಡ ಕವಿದ ವಾತಾವರಣ ಇರಲಿದೆ. ಮೇ 25 ರಂದು ಚೆನ್ನೈನಲ್ಲಿ ತೀವ್ರ ಮಳೆ ಸುರಿದು ಉಭಯ ತಂಡಗಳ ಅಭ್ಯಾಸಕ್ಕೆ ಅಡ್ಡಿಪಡಿಸಿತ್ತು. ಇದು ಫೈನಲ್ಗೂ ಮಳೆ ಬರುವ ಆತಂಕ ಸೃಷ್ಟಿಸಿತ್ತು. ಆದರೀಗ ಇಂದು (ಭಾನುವಾರ) ಅಕ್ಯುವೆದರ್ ಪ್ರಕಾರ ಮಳೆಯ ಅಪಾಯವು ಕೇವಲ 4% ರಷ್ಟಿದೆ.
ಐಪಿಎಲ್ ಫೈನಲ್ಗೆ ಮೀಸಲು ದಿನ
ಮೇ 25ರಂದು ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಫೈನಲ್ ಪಂದ್ಯಕ್ಕೆ ಮೋಡ ಕವಿದ ವಾತಾವರಣ ಇರಲಿದ್ದು, ಕೆಲ ಹೊತ್ತು ಮಳೆ ಅಡ್ಡಿಪಡಿಸುವ ನಿರೀಕ್ಷೆ ಇದೆ ಎಂದು ಹೇಳಿತ್ತು. ಆದರೀಗ ಇವತ್ತು ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದೆ. ಒಂದು ವೇಳೆ ವರುಣ ಅವಕೃಪೆ ತೋರಿದರೆ ಮೀಸಲು ದಿನದಂದು ನಡೆಸಲಾಗುತ್ತದೆ. ಆದರೂ ಇವತ್ತೇ ಪಂದ್ಯ ನಡೆಸಲು 120 ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಗುತ್ತದೆ. 5 ಓವರ್ ಅಥವಾ ಸೂಪರ್ ಓವರ್ ನಡೆಸಲು ಅವಕಾಶ ನೀಡದೆ ನಿರಂತರ ಮಳೆ ಸುರಿದರೆ ಮೀಸಲು ದಿನವಾದ ಸೋಮವಾರ (27) ಪಂದ್ಯ ಆರೋಜಿಸಲಾಗುತ್ತದೆ.
ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುಕ್ತಾಯದ ನಂತರ ಆಟಕ್ಕೆ ಅವಕಾಶ ನೀಡದೆ ನಿರಂತರ ಮಳೆ ಕಾಣಿಸಿಕೊಂಡರೂ ಪಂದ್ಯವನ್ನು ಮೀಸಲು ದಿನಕ್ಕೆ ಮುಂಡೂಡಲಾಗುತ್ತದೆ. ಒಂದು ವೇಳೆ ಇದೇ ದಿನ ಎರಡನೇ ಬ್ಯಾಟಿಂಗ್ ಮಾಡುವ ತಂಡವು 5 ಓವರ್ಗಳನ್ನು ಪೂರ್ಣಗೊಳಿಸಿದ್ದರೆ, ಡಕ್ವರ್ಥ್ ಲೂಯಿಸ್ ನಿಯಮದಡಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. 2023ರ ಐಪಿಎಲ್ ಫೈನಲ್ ಪಂದ್ಯ ಮೀಸಲು ದಿನದಂದು ನಡೆದಿತ್ತು. ಒಟ್ಟು ಮೂರು ದಿನಗಳ ಕಾಲ ಫೈನಲ್ ಪಂದ್ಯ ನಡೆದಿತ್ತು. ಅಂದು ಸಿಎಸ್ಕೆ ಚಾಂಪಿಯನ್ ಆಗಿತ್ತು.
ಕೆಂಪು ಪಿಚ್ನಲ್ಲಿ ಕೆಕೆಆರ್ vs ಎಸ್ಆರ್ಹೆಚ್ ಸೆಣಸಾಟ
ಮೇ 24ರ ಶುಕ್ರವಾರ, ಎಸ್ಆರ್ಹೆಚ್ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿತ್ತು. ಕಪ್ಪು ಮಣ್ಣಿನ ಪಿಚ್ನಲ್ಲಿ 2ನೇ ಇನ್ನಿಂಗ್ಸ್ನಲ್ಲಿ ಗಮನಾರ್ಹ ತಿರುವು ಪಡೆಯಲು ಪ್ರಾರಂಭಿಸಿತು. ಎರಡೂ ತಂಡಗಳಿಗೂ ಇಬ್ಬನಿ ಕಾಡಿತ್ತು. ಇದು ಚೇಸಿಂಗ್ ತಂಡಕ್ಕೆ ಹೆಚ್ಚು ಪ್ರಯೋಜನ ನೀಡಿತ್ತು. ಆದರೆ ಫೈನಲ್ಗಾಗಿ ಪಿಚ್ ಕೆಂಪು-ಮಣ್ಣಿನ ಪಟ್ಟಿಯಾಗಿದೆ.
ಕೆಂಪು ಮಣ್ಣಿನ ಪಿಚ್ ಅನ್ನು ಮೇ 1 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಸಿಎಸ್ಕೆ ಪಂದ್ಯಕ್ಕೆ ಬಳಸಲಾಗಿತ್ತು. ಸ್ಪಿನ್ನರ್ಗಳಾದ ಹರ್ಪ್ರೀತ್ ಬ್ರಾರ್ ಮತ್ತು ರಾಹುಲ್ ಚಾಹರ್ ಅವರು ದಿನದಂದು ಪಿಬಿಕೆಎಸ್ನ ಮ್ಯಾಚ್ ವಿನ್ನರ್ಗಳಾಗಿದ್ದರು. ಈ ಜೋಡಿ 8 ಓವರ್ ಬೌಲಿಂಗ್ ಮಾಡಿ, ಕೇವಲ 33 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಆದರೆ ಫೈನಲ್ ಪಂದ್ಯದಲ್ಲೂ ಸ್ಪಿನ್ನರ್ಗಳೇ ಮಿಂಚುವ ನಿರೀಕ್ಷೆ ಇದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)