ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

Ambati Rayudu mocks RCB: ಐದು ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್​ ನಿಮಗೊಂದು ಟ್ರೋಫಿಯನ್ನು ಕೊಡುತ್ತದೆ. ಬೆಂಗಳೂರಿನಲ್ಲಿ ಮೆರವಣಿಗೆ ಮಾಡಿ ಎಂದು ಆರ್​ಸಿಬಿ ತಂಡವನ್ನು ಅಂಬಾಟಿ ರಾಯುಡು ಅಣಕಿಸಿದ್ದಾರೆ.

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು
ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

17ನೇ ಆವೃತ್ತಿಯ ಐಪಿಎಲ್​ನ ನಿರ್ಣಾಯಕ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್​ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ತಂಡವಾಗಿ ಲಗ್ಗೆ ಇಟ್ಟಿತು. ಆದರೆ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಸಿಎಸ್​ಕೆ ಮಾಜಿ ಆಟಗಾರ ಅಂಬಾಟಿ ರಾಯುಡು, ಆರ್​ಸಿಬಿ ತಂಡವನ್ನು ಅಣಕಿಸಿದ್ದಾರೆ. ಪ್ಲೇಆಫ್​ ರೇಸ್​ನಿಂದ ಹೊರಗಟ್ಟಿದ ಬೆನ್ನಲ್ಲೇ ನೊಂದ ರಾಯುಡು, ತೀವ್ರ ಸಂಕಟಗೊಳಗಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ಲೇಆಫ್​ ಡಿಸೈಡರ್ ಹಾಗೂ ಲೀಗ್​ 68ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಫಾಫ್ ಡು ಪ್ಲೆಸಿಸ್ (54), ವಿರಾಟ್ ಕೊಹ್ಲಿ (47), ರಜತ್ ಪಾಟೀದಾರ್ (41). ಕ್ಯಾಮರೂನ್ ಗ್ರೀನ್ (38*) ಬ್ಯಾಟಿಂಗ್ ನಡೆಸಿದರು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ತನ್ನ ಪಾಲಿನ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಪ್ಲೇಆಫ್​ ಪ್ರವೇಶಿಸಲು ಚೆನ್ನೈ 201 ರನ್​ ಗಳಿಸಿದ್ದರೆ ಸಾಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ತನ್ನ ಮಾಜಿ ತಂಡ ಸೋಲಿಗೆ ಶರಣಾಗಿ ಪ್ಲೆಆಫ್ ಪ್ರವೇಶಿಸಲು ವಿಫಲವಾಗುತ್ತಿದ್ದಂತೆ ಅಂಬಾಟಿ ರಾಯುಡು ಮನಬಂದಂತೆ ಮಾತನಾಡಿದ್ದಾರೆ. ಸಿಎಸ್​ಕೆ ಎದುರು ದಿಗ್ವಿಜಯ ಸಾಧಿಸಿದ ಆರ್​​ಸಿಬಿ ಕೇವಲ ಪ್ಲೇಆಫ್ ಪ್ರವೇಶಿಸಿದೆ. ಆದರೆ ಕಪ್​ ಗೆದ್ದವರಂತೆ ಹಾರಾಡುತ್ತಿದೆ. ಅವರು ಪ್ರವೇಶಿಸಿರುವುದು ಪ್ಲೇಆಫ್ ಮಾತ್ರ. ಇನ್ನೂ ಟ್ರೋಫಿ ಗೆದ್ದಿಲ್ಲ. ಅವರು ರಾತ್ರಿ ಸಂಭ್ರಮಿಸಿದ್ದು ನೋಡಿದರೆ, ಈಗಾಗಲೇ ಪ್ರಶಸ್ತಿಯನ್ನೇ ಜಯಿಸಿದವರಂತೆ ವರ್ತಿಸಿದರು. ಬೆಂಗಳೂರಿನ ಬೀದಿಗಳಲ್ಲಿ ಅಭಿಮಾನಿಗಳಿಂದ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಮಾಜಿ ಸಿಎಸ್​ಕೆ ಆಟಗಾರ, ಈ ಬಾರಿ ಕಪ್​ ಗೆಲ್ಲಲು ಆಗದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್​​ ಗೆದ್ದಿರುವ ಐದು ಟ್ರೋಫಿಗಳಲ್ಲಿ ಒಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಬೇಕು. ಅದನ್ನು ಆರ್​ಸಿಬಿ ತಂಡದವರು ಪರೇಡ್ ಮಾಡಬಹುದು. ಮೆರವಣಿಗೆ ಮಾಡಬಹುದು ಎಂದು ಅಂಬಾಟಿ ಸ್ಟಾರ್​ಸ್ಟೋರ್ಟ್ಸ್​ನಲ್ಲಿ ರೆಡ್​ ಆರ್ಮಿಯನ್ನು ಅಣಕಿಸಿದ್ದಾರೆ. ಅವರ ಮಾತುಗಳಿಗೆ ಆಕ್ರೋಶಗೊಂಡ ಆರ್​ಸಿಬಿ ಫ್ಯಾನ್ಸ್​, ರೊಚ್ಚಿಗೆದ್ದಿದ್ದಾರೆ.

ವರುಣ್ ಆರೋನ್ ತಿರುಗೇಟು

ಸ್ಟಾರ್​ ಸ್ಪೋರ್ಟ್ಸ್​ ಶೋನಲ್ಲಿ ಅಂಬಾಟಿ ಪಕ್ಕದಲ್ಲಿದ್ದ ಆರ್​ಸಿಬಿ ಮಾಜಿ ವೇಗಿ ವರುಣ್​ ಅರೋನ್, ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ. ಸಿಎಸ್​ಕೆ ತಂಡವನ್ನು ಪ್ಲೇಆಫ್​ ರೇಸ್​ನಿಂದ ಹೊರದಬ್ಬಿದ ಆರ್​ಸಿಬಿ ತಂಡದ ದಿಗ್ವಿಜಯವನ್ನು ಅರಗಿಸಿಕೊಳ್ಳಲು ಇವರಿಂದಾಗುತ್ತಿಲ್ಲ ಎಂದು ಅರೋನ್​, ರಾಯುಡುಗೆ ಚಾಟಿ ಬೀಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಪಿಎಲ್​-2024ರ ಪ್ಲೇಆಫ್​ ವೇಳಾಪಟ್ಟಿ

ಮೇ 21 - ಕೆಕೆಆರ್​ vs ಎಸ್​ಆರ್​ಹೆಚ್, ನರೇಂದ್ರ ಮೋದಿ ಸ್ಟೇಡಿಯಂ​​ (ಮೊದಲ ಕ್ವಾಲಿಫೈಯರ್​​)

ಮೇ 22 - ಆರ್​ಆರ್​​ vs ಆರ್​ಸಿಬಿ, ನರೇಂದ್ರ ಮೋದಿ ಸ್ಟೇಡಿಯಂ (ಎಲಿಮಿನೇಟರ್​​)

ಮೇ 24 - ಕ್ವಾಲಿಫೈಯರ್​-1 ಸೋತವರು vs ಎಲಿಮಿನೇಟರ್ ಗೆದ್ದವರು, ಚೆಪಾಕ್ ಮೈದಾನ (2ನೇ ಕ್ವಾಲಿಫೈಯರ್​)

ಮೇ 26 - ಫೈನಲ್​ ಪಂದ್ಯ, ಚೆಪಾಕ್ ಮೈದಾನ

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner