ಕನ್ನಡ ಸುದ್ದಿ  /  Cricket  /  I Promoted Manish Pandey Gautam Gambhir Reveals Only Time He Felt Ashamed As Captain Cricket News In Kannada Prs

ಮನೀಷ್​ ಪಾಂಡೆಯನ್ನು ಪ್ರಮೋಟ್ ಮಾಡಿದ್ದಕ್ಕೆ ನಾಚಿಕೆ ಪಡುತ್ತೇನೆ; ಗೌತಮ್ ಗಂಭೀರ್​

Gautam Gambhir: ಪಂದ್ಯದ ಸಮಯದಲ್ಲಿ ಎಂದೂ ಒತ್ತಡಕ್ಕೆ ಒಳಗಾಗಿರಲಿಲ್ಲ. ಆದರೆ 2014ರ ಐಪಿಎಲ್​ನಲ್ಲಿ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​​​ ಹೇಳಿದ್ದಾರೆ.

ಮನೀಷ್ ಪಾಂಡೆ ಮತ್ತು ಗೌತಮ್ ಗಂಭೀರ್​.
ಮನೀಷ್ ಪಾಂಡೆ ಮತ್ತು ಗೌತಮ್ ಗಂಭೀರ್​.

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir), ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ್ದ ಒತ್ತಡದ ಸಂದರ್ಭವನ್ನು ಬಹಿರಂಗಪಡಿಸಿದ್ದಾರೆ. ಆದರೆ ಭಾರತದಲ್ಲಿ ಅಲ್ಲ, ಬದಲಾಗಿ ಐಪಿಎಲ್​​​​ನಲ್ಲಿ (IPL). ಕನ್ನಡಿಗ ಮನೀಷ್ ಪಾಂಡೆ (Manish Pandey) ವಿಚಾರವಾಗಿ ಅವರು ಮಾತನಾಡಿದ್ದು, ಅವರನ್ನು ಆರಂಭಿಕ ಸ್ಥಾನಕ್ಕೆ ಪ್ರಮೋಟ್ ಮಾಡಿದ್ದಕ್ಕೆ ನಾಚಿಪಡುತ್ತೇನೆ. ಇದಕ್ಕಾಗಿ ಮನೀಷ್ ಪಾಂಡೆ ಬಳಿ ಕ್ಷಮೆಯಾಚಿಸಿದ್ದೆ ಎಂದ ಗಂಭೀರ್, ಅದಕ್ಕೆ ಕಾರಣ ಏನೆಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂಡಿಯನ್ ಪ್ರೀಮಿಯರ್​ ಲೀಗ್​​​​​​ನಲ್ಲಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ತಂಡಗಳಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಕೂಡ ಒಂದು. ನಟ ಶಾರೂಖ್​ ಖಾನ್ ಒಡೆತನದ ಈ ತಂಡಕ್ಕೆ ಪಶ್ಚಿಮ ಬಂಗಾಳದ ಜೊತೆಗೆ ಅವರ ಅಭಿಮಾನಿಗಳು ಕೆಕೆಆರ್​​ಗೆ ಬೆಂಬಲ ನೀಡುತ್ತಾರೆ. ತಂಡಕ್ಕೆ 2 ಪ್ರಶಸ್ತಿ ಗೆದ್ದುಕೊಟ್ಟ ಕೀರ್ತಿ ಗೌತಮ್ ಗಂಭೀರ್​ಗೆ ಸಲ್ಲುತ್ತದೆ. ಸೌರವ್ ಗಂಗೂಲಿ ಮತ್ತು ಬ್ರೆಂಡನ್ ಮೆಕಲಮ್​ ನಾಯಕತ್ವದಲ್ಲಿ ಟ್ರೋಫಿ ಗೆಲ್ಲದ ಕೆಕೆಆರ್​, ಗಂಭೀರ್​​ ಕ್ಯಾಪ್ಟನ್ಸಿಯಲ್ಲಿ 2012, 2014ರಲ್ಲಿ ಐಪಿಎಲ್​ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

‘ಅತ್ಯಂತ ಒತ್ತಡ ಸಂದರ್ಭ ಎದುರಿಸಿದ್ದೆ’

ಸದ್ಯ ಒತ್ತಡದ ಸಂದರ್ಭವನ್ನು ಎದುರಿಸಿರುವ ಕುರಿತು ಮಾತನಾಡಿದ ಗಂಭೀರ್​, ಪಂದ್ಯದ ಸಮಯದಲ್ಲಿ ಎಂದೂ ಒತ್ತಡಕ್ಕೆ ಒಳಗಾಗಿರಲಿಲ್ಲ. ಆದರೆ 2014ರ ಐಪಿಎಲ್​ನಲ್ಲಿ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ಏಕೆಂದರೆ, 2014ರ ಸೀಸನ್‌ನ ಆರಂಭಿಕ 3 ಪಂದ್ಯಗಳಲ್ಲಿ ಡಕೌಟ್​ ಆಗಿದ್ದೆ. ಏನು ಮಾಡಬೇಕೆಂದು ತೋಚದೆ ಗೊಂದಲಕ್ಕೊಳಗಾಗಿದ್ದೆ ಎಂದು ಹೇಳುರುವ ಗಂಭೀರ್​, ಮುಂದಿನ ಪಂದ್ಯದಲ್ಲೂ ಡಕೌಟ್​ ಆಗುತ್ತೇನೆ ಎಂಬ ಭಯದಲ್ಲಿ ಮನೀಷ್​​ಗೆ ಓಪನಿಂಗ್ ಮಾಡುವಂತೆ ಹೇಳಿದ್ದೆ. ನಾನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದೆ ಎಂದು 2014ರ ಘಟನೆಯನ್ನು ವಿವರಿಸಿದ್ದಾರೆ.

‘ಕ್ಷಮೆ ಕೇಳಿದ್ದೆ’

ಆ ಸೀಸನ್​ನಲ್ಲಿ ಮನೀಷ್ ಪಾಂಡೆ ಅದ್ಭುತ ಫಾರ್ಮ್​​​ನಲ್ಲಿದ್ದರು. ಆದರೆ ನಾನು ಹಾಗೆ ಮಾಡಿದ್ದಕ್ಕೆ ನಾಚಿಕೆಪಡುತ್ತೇನೆ. ಅದ್ಭುತ ಫಾರ್ಮ್​​ನಲ್ಲಿದ್ದ ಮನೀಷ್​ ಪಾಂಡೆ ಕೂಡ ಡಕೌಟ್​ ಆದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾನು ಸಹ 1 ರನ್​ಗೆ ಔಟಾದೆ. ಈ ವೇಳೆ ಮನೀಷ್​ ಬಳಿ ತೆರಳಿ ಕ್ಷಮಿಸಿ ಎಂದು ಕೇಳಿದ್ದೆ. ಇನ್ನು ಎಂದೂ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದೆ. ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ನಿರ್ಧರಿಸಿದೆ ಎಂದು ಗಂಭೀರ್​​ ತನ್ನ ಕೆಟ್ಟ ದಿನಗಳ ಕುರಿತು ವಿವರಿಸಿದ್ದಾರೆ.

‘ನಂತರ ಮುಕ್ತವಾಗಿ ಬ್ಯಾಟ್ ಬೀಸಿದ್ದೆ’

ಅಲ್ಲದೆ, ಆ ಒತ್ತಡದಿಂದ ಹೇಗೆ ಹೊರ ಬಂದರೂ ಎಂಬುದನ್ನೂ ತಿಳಿಸಿದ್ದಾರೆ. ಕಠಿಣ ಪರಿಸ್ಥಿತಿಯಿಂದ ಹೊರಬರಲು ಯತ್ನಿಸಿದೆ. ಕಠಿಣ ಸಂದರ್ಭಗಳನ್ನು ಎದುರಿಸಿದಾಗ ನಿಜವಾದ ಆಟಗಾರ, ನಾಯಕ ಹೊರ ಬರುತ್ತಾನೆ. ಮುಂದಿನ ಪಂದ್ಯದಲ್ಲಿ ನಾನೇ ಆರಂಭಿಕನಾಗಿ ಕಣಕ್ಕಿಳಿದು ಕೇನ್ ರಿಚರ್ಡ್​ಸನ್ ಬೌಲಿಂಗ್​​ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ್ದೆ. ನನ್ನ ಐಪಿಎಲ್​ ಕರಿಯರ್​​​ನಲ್ಲಿ ಆ ಬೌಂಡರಿ ಅತ್ಯಂತ ಮುಖ್ಯವಾದ ಬೌಂಡರಿಯಾಗಿತ್ತು. ಆ ಬೌಂಡರಿ ನಂತರ ನನ್ನ ಮೇಲಿದ್ದ ನನ್ನ ಮೇಲಿದ್ದ ಟನ್​​​​ಗಳಷ್ಟು ಒತ್ತಡದ ಭಾರತ ಇಳಿದುಹೋಯಿತು. ನಂತರ ಮುಕ್ತವಾಗಿ ಬ್ಯಾಟ್ ಬೀಸಿದ್ದೆ ಎಂದು ಕೆಕೆಆರ್​ ಮಾಜಿ ಕ್ಯಾಪ್ಟನ್​ ತಿಳಿಸಿದ್ದಾರೆ.

ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 4217 ರನ್ ಗಳಿಸಿದ್ದ ಗೌತಮ್ ಗಂಭೀರ್, 2014ರಲ್ಲಿ ನಾಲ್ಕು ಪಂದ್ಯಗಳಲ್ಲಿ ಡಕೌಟ್​ ಆದರೂ 335 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. 2014ರ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಅಂತಿಮ ಪಂದ್ಯದಲ್ಲಿ ವೃದ್ಧಿಮಾನ್ ಸಾಹ 115 ರನ್‌ಗಳ ಅಜೇಯ ಶತಕ ಗಳಿಸಿದ್ದರು. ಇದರಿಂದ 199 ರನ್‌ಗಳ ಬೃಹತ್​ ಟಾರ್ಗೆಟ್​ ನೀಡಿತ್ತು. ಮನೀಶ್ ಪಾಂಡೆ (94 ರನ್), ಯೂಸುಫ್ ಪಠಾಣ್ (36 ರನ್) ಅವರ ಅದ್ಭುತ ಆಟದ ನೆರವಿನಿಂದ 3 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿ 2ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತ್ತು.

ಸಂಬಂಧಿತ ಲೇಖನ

ಕ್ರಿಕೆಟ್ ಪ್ರೇಮಿಗಳೇ Cricket News, Live Score ಮತ್ತು Kannada News ಮತ್ತು ಸಂಬಂಧಿಸಿದ ಬರಹಗಳನ್ನು ಓದಿ.