ಆರ್​ಆರ್ ಸೋಲಿಗೆ ದ್ರಾವಿಡ್, ಸ್ಯಾಮ್ಸನ್ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ; ಪೂಜಾರ, ಬಿಷಪ್ ಆರೋಪ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಆರ್ ಸೋಲಿಗೆ ದ್ರಾವಿಡ್, ಸ್ಯಾಮ್ಸನ್ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ; ಪೂಜಾರ, ಬಿಷಪ್ ಆರೋಪ

ಆರ್​ಆರ್ ಸೋಲಿಗೆ ದ್ರಾವಿಡ್, ಸ್ಯಾಮ್ಸನ್ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ; ಪೂಜಾರ, ಬಿಷಪ್ ಆರೋಪ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋಲಿಗೆ ರಾಹುಲ್ ದ್ರಾವಿಡ್, ಸಂಜು ಸ್ಯಾಮ್ಸನ್ ಅವರ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ ಎಂದು ಚೇತೇಶ್ವರ್ ಪೂಜಾರ, ಇಯಾನ್ ಬಿಷಪ್ ಆರೋಪಿಸಿದ್ದಾರೆ.

ಆರ್​ಆರ್ ಸೋಲಿಗೆ ದ್ರಾವಿಡ್, ಸ್ಯಾಮ್ಸನ್ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ; ಪೂಜಾರ, ಬಿಷಪ್ ಆರೋಪ
ಆರ್​ಆರ್ ಸೋಲಿಗೆ ದ್ರಾವಿಡ್, ಸ್ಯಾಮ್ಸನ್ ಸೂಪರ್ ಓವರ್ ಗೇಮ್ ಪ್ಲಾನ್ ಕಾರಣ; ಪೂಜಾರ, ಬಿಷಪ್ ಆರೋಪ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 16) ನಡೆದ 2025 ರ ಐಪಿಎಲ್ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್​ ಓವರ್​​ನಲ್ಲಿ ಸೂಪರ್ ಡೂಪರ್ ಗೆಲುವು ಸಾಧಿಸಿತು. 20ನೇ ಓವರ್ (8 ರನ್)​ ಮತ್ತು ಸೂಪರ್ ಓವರ್​​ನಲ್ಲಿ (11 ರನ್) ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಆರ್​ಆರ್​ ಸೋಲನುಭವಿಸಿತು. ಆದರೆ, ಸೂಪರ್ ಓವರ್​​ ಬ್ಯಾಟಿಂಗ್​ಗೆ ರಾಜಸ್ಥಾನ್ ಕೈಗೊಂಡ ತಂತ್ರಗಳ ಕುರಿತು ಟೀಕೆ ವ್ಯಕ್ತವಾಗಿದೆ. ತಂಡದ ಸೋಲಿಗೆ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಸಂಜು ಸ್ಯಾಮ್ಸನ್​ ಗೇಮ್​ ಪ್ಲಾನ್​ಗಳೇ ಕಾರಣ ಎಂದು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.

20ನೇ ಓವರ್​ನಲ್ಲಿ ರಾಜಸ್ಥಾನ್ ಗೆಲ್ಲಲು 9 ರನ್ ಬೇಕಿತ್ತು. ಆದರೆ, ಆಗ ಕ್ರೀಸ್​ನಲ್ಲಿ ಇದ್ದದ್ದು ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್​. ಈ ಇಬ್ಬರು ಸೇರಿ ಗಳಿಸಿದ್ದು 8 ರನ್ ಮಾತ್ರ. ಪರಿಣಾಮ ಸೂಪರ್ ಓವರ್ ಆಯಿತು. ಬಳಿಕ ಈ ಓವರ್​ನಲ್ಲಿ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರನ್ನು ಕಳುಹಿಸಲಾಯಿತು. ಇದು ಕೋಚ್ ಮತ್ತು ನಾಯಕನ ನಿರ್ಧಾರವಾಗಿತ್ತು. ಯಶಸ್ವಿ ಜೈಸ್ವಾಲ್ ಅವರನ್ನು 3ನೇ ಬ್ಯಾಟರ್ ಆಗಿ ಕಣಕ್ಕಿಳಿಸಿದರು. ಇದು ದೊಡ್ಡ ಎಡವಟ್ಟಿಗೆ ಕಾರಣವಾಯಿತು. ಇನ್​ಫಾರ್ಮ್ ಬ್ಯಾಟರ್ಸ್ ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರಾಣಾ ಅವರನ್ನು ಸೂಪರ್​​ ಓವರ್​ನಲ್ಲಿ ಕಳುಹಿಸದೇ ಇರುವುದು ಅಚ್ಚರಿ ಮೂಡಿಸಿದೆ.

ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರಾಣಾ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಡೆಲ್ಲಿ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸಿದ್ದರ ಹೊರತಾಗಿಯೂ ಕಳಪೆ ಪ್ರದರ್ಶನ ನೀಡಿದ್ದ ಬ್ಯಾಟರ್​​ಗಳನ್ನು ಸೂಪರ್​​ ಓವರ್​​ನಲ್ಲಿ ಆಡಿದ್ದು ಅಚ್ಚರಿ ಮೂಡಿಸಿದೆ. ಸೂಪರ್ ಓವರ್​​​ನಲ್ಲಿ ಸ್ಟಾರ್ಕ್ 11 ರನ್​​ಗಳನ್ನು ಬಿಟ್ಟುಕೊಟ್ಟರೆ, ಪರಾಗ್, ಜೈಸ್ವಾಲ್ ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ರನೌಟ್ ಆದರು. ಬಳಿಕ ರಾಜಸ್ಥಾನದ ಸಂದೀಪ್ ಶರ್ಮಾ ವಿರುದ್ಧ ಡಿಸಿ 4 ಎಸೆತಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಆದರೆ ಆರ್​ಆರ್​ ತಂತ್ರಗಳ ಬಗ್ಗೆ ಚೇತೇಶ್ವರ್ ಪೂಜಾರ ಮತ್ತು ಇಯಾನ್ ಬಿಷಪ್ ಅವರು ಟೀಕಿಸಿದ್ದಾರೆ.

ಕೋಚ್, ನಾಯಕನ ತಂತ್ರ ಟೀಕಿಸಿದ ಪೂಜಾರ

ಇಎಸ್​ಪಿಎನ್ ಕ್ರಿಕ್ಇನ್ಫೋ ಜತೆ ಮಾತನಾಡಿದ ಚೇತೇಶ್ವರ ಪೂಜಾರ ಮತ್ತು ಇಯಾನ್ ಬಿಷಪ್ ಅವರು, ‘ಸೂಪರ್ ಓವರ್​​ಗಾಗಿ ದ್ರಾವಿಡ್ ಮತ್ತು ಸ್ಯಾಮ್ಸನ್ ಅವರ ಆಟದ ಯೋಜನೆಯನ್ನು ಟೀಕಿಸಿದ್ದಾರೆ. ಫಾರ್ಮ್​ನಲ್ಲಿದ್ದ​​ ರಾಣಾ ಅವರನ್ನು ಕಳುಹಿಸಬೇಕಿತ್ತು. ಜೈಸ್ವಾಲ್ ಮತ್ತು ರಾಣಾ ಆಡಬೇಕಿತ್ತು. ಆ ಮೂವರಲ್ಲಿ ನಿತೀಶ್ ಇರಬೇಕಿತ್ತು ಎಂದು ನಾನು ಭಾವಿಸುತ್ತೇನೆ ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ. ಮಿಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಯಶಸ್ವಿ ಇನ್ನಿಂಗ್ಸ್ ಪ್ರಾರಂಭಿಸಬೇಕಿತ್ತು ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್​ನ ಮೂರು ಸ್ವರೂಪಗಳಲ್ಲಿ ಸ್ಟಾರ್ಕ್ ದಾಖಲೆ ಅದ್ಭುತವಾಗಿದೆ. (ಟಿ20 ಯಲ್ಲಿ ಔಟಾಗದೆ 15 ಎಸೆತಗಳಲ್ಲಿ 26 ರನ್, ಟೆಸ್ಟ್​​ನಲ್ಲಿ ಮೂರು ಔಟ್​ಗಳೊಂದಿಗೆ 203 ರಿಂದ 133 ರನ್). 'ಇದು ಸೂಪರ್ ಓವರ್ ಎಂದು ನನಗೆ ತಿಳಿದಿದೆ. ಸ್ಟಾರ್ಕ್ ವಿರುದ್ಧ ಯಶಸ್ವಿ ಆಡಿದ್ದರೆ ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತಿದ್ದರು. ಆದರೆ ಸರಿಯಾದ ನಿರ್ಧಾರ ಪಡೆಯದ ಕಾರಣ ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಇಯಾನ್ ಬಿಷಪ್ ಹೇಳಿದ್ದೇನು?

ಏತನ್ಮಧ್ಯೆ, ವೆಸ್ಟ್ ಇಂಡೀಸ್ ದಂತಕಥೆ ಬಿಷಪ್ ಪೂಜಾರ ಅವರ ಅಭಿಪ್ರಾಯವನ್ನು ಪ್ರತಿಧ್ವನಿಸಿದರು. ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾನು ಜೈಸ್ವಾಲ್ ಅವರನ್ನು ಆರಂಭಿಕರಾಗಿ ಬರಬೇಕಿತ್ತು. ಆದರೆ ಮೂರನೇ ಕ್ರಮಾಂಕದಲ್ಲಿ ಆಡಿಸಿದ್ದು ದೊಡ್ಡ ತಪ್ಪು. ನಿತೀಶ್ ರಾಣಾ ಅವರ ಬಗ್ಗೆಯೂ ಪಕ್ಷಪಾತ ಹೊಂದಿದ್ದೇನೆ. ರಾಣಾ ಅವರ ಕೌಶಲ್ಯವು ಅದ್ಭುತವಾಗಿದೆ. ಪಂದ್ಯದಲ್ಲಿ ಇಬ್ಬರು ಅದ್ಭುತ ಪ್ರದರ್ಶನ ನೀಡಿದರು. ಹೀಗಿದ್ದರೂ ಫಾರ್ಮ್​​ನಲ್ಲಿ ಇಲ್ಲದವರನ್ನು ಕಳುಹಿಸಿದ್ದು ಸರಿಯಾದ ನಿರ್ಧಾರವಾಗಿರಲಿಲ್ಲ ಎಂದು ಹೇಳಿದ್ದಾರೆ. ಅಂಕಪಟ್ಟಿಯಲ್ಲಿ ಆರ್​ಆರ್​ ಈಗ ಐದು ಸೋಲು ಮತ್ತು ಎರಡು ಗೆಲುವಿನ ನಂತರ ಎಂಟನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಡಿಸಿ ಐದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.