ಇಂಟರ್‌ನ್ಯಾಷನಲ್‌ ಮಾಸ್ಟರ್ಸ್ ಲೀಗ್ ಟಿ20: ವೆಸ್ಟ್‌ ಇಂಡೀಸ್ ಮಣಿಸಿ ಚಾಂಪಿಯನ್ ಆದ ಭಾರತ ಮಾಸ್ಟರ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಟರ್‌ನ್ಯಾಷನಲ್‌ ಮಾಸ್ಟರ್ಸ್ ಲೀಗ್ ಟಿ20: ವೆಸ್ಟ್‌ ಇಂಡೀಸ್ ಮಣಿಸಿ ಚಾಂಪಿಯನ್ ಆದ ಭಾರತ ಮಾಸ್ಟರ್ಸ್

ಇಂಟರ್‌ನ್ಯಾಷನಲ್‌ ಮಾಸ್ಟರ್ಸ್ ಲೀಗ್ ಟಿ20: ವೆಸ್ಟ್‌ ಇಂಡೀಸ್ ಮಣಿಸಿ ಚಾಂಪಿಯನ್ ಆದ ಭಾರತ ಮಾಸ್ಟರ್ಸ್

ಇಂಟರ್‌ನ್ಯಾಷನಲ್‌ ಮಾಸ್ಟರ್ಸ್ ಲೀಗ್ ಟಿ20ಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ ಮಾಸ್ಟರ್ಸ್‌ 7 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಭಾರತ ಮಾಸ್ಟರ್ಸ್‌ ಕೇವಲ 17.1 ಓವರ್‌ಗಳಲ್ಲಿ ಗುರಿ ಸಾಧಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮಾಸ್ಟರ್ಸ್ ಲೀಗ್ ಟಿ20: ವೆಸ್ಟ್‌ ಇಂಡೀಸ್ ಮಣಿಸಿ ಚಾಂಪಿಯನ್ ಆದ ಭಾರತ ಮಾಸ್ಟರ್ಸ್(Sportzpics for IML via PTI Photo)
ಮಾಸ್ಟರ್ಸ್ ಲೀಗ್ ಟಿ20: ವೆಸ್ಟ್‌ ಇಂಡೀಸ್ ಮಣಿಸಿ ಚಾಂಪಿಯನ್ ಆದ ಭಾರತ ಮಾಸ್ಟರ್ಸ್(Sportzpics for IML via PTI Photo)

ಇಂಟರ್‌ನ್ಯಾಷನಲ್‌ ಮಾಸ್ಟರ್ಸ್ ಲೀಗ್ ಟಿ20ಯ 2025ರ ಆವೃತ್ತಿಯಲ್ಲಿ ಇಂಡಿಯಾ ಮಾಸ್ಟರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರಾಯ್‌ಪುರದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಮಾಸ್ಟರ್ಸ್ ವಿರುದ್ಧ 6 ವಿಕೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಭಾರತ ಮಾಸ್ಟರ್ಸ್‌ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯ ಪ್ರದರ್ಶಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ ಮಾಸ್ಟರ್ಸ್‌ 7 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಭಾರತ ಮಾಸ್ಟರ್ಸ್‌ ಕೇವಲ 17.1 ಓವರ್‌ಗಳಲ್ಲಿ ಗುರಿ ಸಾಧಿಸಿತು. ಭಾರತದ ಪರ ಫೈನಲ್‌ ಪಂದ್ಯದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಅಂಬಾಟಿ ರಾಯುಡು 50 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 74 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ಪರ, ಡ್ವೇಯ್ನ್‌ ಸ್ಮಿತ್‌ 35 ಎಸೆತಗಳಲ್ಲಿ 45 ರನ್‌ ಗಳಿಸಿದರು. 50 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 74 ರನ್‌ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡಿದ ಲೆಂಡ್ಲ್‌ ಸಿಮನ್ಸ್‌ 57 ರನ್‌ ಕಲೆ ಹಾಕಿದರು. ಕೊನೆಗೆ ರಾಮ್‌ದಿನ್‌ ಅಜೇಯ 12 ರನ್‌ ಗಳಿಸಿದರು. ಉಳಿದಂತೆ ತಂಡದ ಯಾರಿಂದಲೂ ಉತ್ತಮ ಪ್ರದರ್ಶನ ಹೊರಬರಲಿಲ್ಲ. ಹೀಗಾಗಿ ತಂಡವು ಅಲ್ಪ ಗುರಿ ಮಾತ್ರ ನೀಡಲು ಸಾಧ್ಯವಾಯ್ತು.

ಗೆಲುವಿನ ದಡ ಸೇರಿಸಿದ ಬಿನ್ನಿ

149 ರನ್‌ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್‌ಗೆ ಸಚಿನ್‌ ತೆಂಡೂಲ್ಕರ್‌ ಮತ್ತು ಅಂಬಾಟಿ ರಾಯುಡು 67 ರನ್‌ಗಳ ಜೊತೆಯಾಟವಾಡಿದರು. 18 ಎಸೆತಗಳಲ್ಲಿ 25 ರನ್‌ ಗಳಿಸಿ ಸಚಿನ್‌ ಮೊದಲನೆಯವರಾಗಿ ಔಟಾದರು. ಈ ವೇಳೆ ಗುರುಕೀರತ್‌ ಸಿಂಗ್‌ 14 ರನ್‌ ಗಳಿಸಿದರೆ, ಯೂಸುಫ್‌ ಪಠಾಣ್‌ ಶೂನ್ಯಕ್ಕೆ ನಿರ್ಗಮಿಸಿದರು.‌

ಈ ವೇಳೆ ಬಂದ ಸ್ಟುವರ್ಟ್‌ ಬಿನ್ನಿ 9 ಎಸೆತಗಳಲ್ಲಿ 16 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯುವರಾಜ್‌ ಸಿಂಗ್‌ ಅಜೇಯ 13 ರನ್‌ ಗಳಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ವಿನಯ್‌ ಕುಮಾರ್‌ 3 ವಿಕೆಟ್‌ ಪಡೆದರೆ, ಶಹಬಾಜ್‌ ನದೀಮ್‌ 2 ವಿಕೆಟ್‌ ಕಿತ್ತರು.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.