ದೇಶ ಫಸ್ಟ್, ಕ್ರಿಕೆಟ್ ನೆಕ್ಸ್ಟ್, ಒಂದು ವಾರದ ಮಟ್ಟಿಗೆ ಐಪಿಎಲ್ ರದ್ದು; ಬಿಸಿಸಿಐ ಅಧಿಕೃತ ಆದೇಶ, ಮುಂದಿನ ನಡೆ ಏನಿರಬಹುದು?
ಕನ್ನಡ ಸುದ್ದಿ  /  ಕ್ರಿಕೆಟ್  /  ದೇಶ ಫಸ್ಟ್, ಕ್ರಿಕೆಟ್ ನೆಕ್ಸ್ಟ್, ಒಂದು ವಾರದ ಮಟ್ಟಿಗೆ ಐಪಿಎಲ್ ರದ್ದು; ಬಿಸಿಸಿಐ ಅಧಿಕೃತ ಆದೇಶ, ಮುಂದಿನ ನಡೆ ಏನಿರಬಹುದು?

ದೇಶ ಫಸ್ಟ್, ಕ್ರಿಕೆಟ್ ನೆಕ್ಸ್ಟ್, ಒಂದು ವಾರದ ಮಟ್ಟಿಗೆ ಐಪಿಎಲ್ ರದ್ದು; ಬಿಸಿಸಿಐ ಅಧಿಕೃತ ಆದೇಶ, ಮುಂದಿನ ನಡೆ ಏನಿರಬಹುದು?

ಮೇ 8ರ ಗುರುವಾರ ರಾತ್ರಿ ಭಾರತ-ಪಾಕಿಸ್ತಾನ ಉದ್ವಿಗ್ನತೆ ಉಲ್ಬಣಗೊಂಡ ಹಿನ್ನೆಲೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಮಹತ್ವದ ಸಭೆ ನಡೆಸಿ ಪ್ರಸಕ್ತ ಆವೃತ್ತಿಯ ಐಪಿಎಲ್ ಒಂದು ವಾರದ ಮಟ್ಟಿಗೆ ಮುಂದೂಡಿಕೆ ಮಾಡಲಾಗಿದೆ.

ಒಂದು ವಾರದ ಮಟ್ಟಿಗೆ ಐಪಿಎಲ್ ರದ್ದು; ಬಿಸಿಸಿಐ ಅಧಿಕೃತ ಆದೇಶ, ಮುಂದಿನ ನಡೆ ಏನಿರಬಹುದು?
ಒಂದು ವಾರದ ಮಟ್ಟಿಗೆ ಐಪಿಎಲ್ ರದ್ದು; ಬಿಸಿಸಿಐ ಅಧಿಕೃತ ಆದೇಶ, ಮುಂದಿನ ನಡೆ ಏನಿರಬಹುದು? (IPL)

ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ಹಿನ್ನೆಲೆ ಇಂಡಿಯನ್ ಪ್ರೀಮಿಯರ್ ಲೀಗ್​​ನ ಪ್ರಸ್ತುತ ಆವೃತ್ತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವಾರದ ಅವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದಕ್ಕೂ ಮುನ್ನ ಐಪಿಎಲ್ ಸ್ಥಗಿತದ ಕುರಿತು ಮಾಹಿತಿ ನೀಡಿತ್ತಾದರೂ ಎಲ್ಲಿಯವರೆಗೂ ಎಂದು ವಿವರಣೆ ನೀಡಿರಲಿಲ್ಲ. ಸಂಬಂಧಿತ ಐಪಿಎಲ್ ಅಧಿಕಾರಿಗಳು, ಫ್ರಾಂಚೈಸಿ ಮಾಲೀಕರ ಜತೆಗೆ ಸಮಾಲೋಚನೆ ನಡೆಸಿ ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನದ ನಂತರ ಟೂರ್ನಿಯ ಹೊಸ ವೇಳಾಪಟ್ಟಿ ಮತ್ತು ಸ್ಥಳಗಳ ಬಗ್ಗೆ ಕುರಿತು ಮಾಹಿತಿ ಒದಗಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಮುಂದಿನ ನಡೆ ಏನಿರಬಹುದು ಎಂಬುದು ಕುತೂಹಲ ಮೂಡಿಸಿದೆ.

ನಿರ್ಣಾಯಕ ಹಂತದಲ್ಲಿ ರಾಷ್ಟ್ರದೊಂದಿಗೆ ಬಿಸಿಸಿಐ ದೃಢವಾಗಿ ನಿಲ್ಲುತ್ತದೆ. ಭಾರತ ಸರ್ಕಾರ, ಸಶಸ್ತ್ರ ಪಡೆ ಮತ್ತು ದೇಶದ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಇತ್ತೀಚಿನ ಭಯೋತ್ಪಾದಕ ದಾಳಿ ಮತ್ತು ಪಾಕಿಸ್ತಾನದ ಸಶಸ್ತ್ರ ಪಡೆಗಳ ಅನಗತ್ಯ ಆಕ್ರಮಣಕ್ಕೆ ದೃಢವಾದ ಪ್ರತಿಕ್ರಿಯೆ ನೀಡುತ್ತಿರುವ ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಮಂಡಳಿಯು ವಂದಿಸುತ್ತದೆ. ಆಪರೇಷನ್ ಸಿಂಧೂರ ಅಡಿಯಲ್ಲಿ ಅವರ ವೀರೋಚಿತ ಪ್ರಯತ್ನಗಳು ರಾಷ್ಟ್ರವನ್ನು ರಕ್ಷಿಸುತ್ತಿವೆ ಮತ್ತು ಪ್ರೇರೇಪಿಸುತ್ತಿವೆ" ಎಂದು ಬಿಸಿಸಿಐ ಹೇಳಿದೆ.

ರಾಷ್ಟ್ರ ಮತ್ತು ಅದರ ಸಾರ್ವಭೌಮತ್ವ, ಸಮಗ್ರತೆ ಮತ್ತು ನಮ್ಮ ದೇಶದ ಭದ್ರತೆಗಿಂತ ದೊಡ್ಡದು ಯಾವುದೂ ಇಲ್ಲ. ಭಾರತವನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುವುದಕ್ಕೆ ಬಿಸಿಸಿಐ ಬದ್ಧವಾಗಿದೆ. ಗುರುವಾರ ರಾತ್ರಿ (ಮೇ 8) ಭಾರತ-ಪಾಕಿಸ್ತಾನ ಉದ್ವಿಗ್ನತೆ ಉಲ್ಬಣಗೊಂಡ ನಂತರ ಈ ವಿಷಯದ ಬಗ್ಗೆ ಚರ್ಚಿಸಲು ಬಿಸಿಸಿಐ ಉನ್ನತ ಅಧಿಕಾರಿಗಳು ವರ್ಚುವಲ್ ಮೂಲಕ ಸಭೆ ಸೇರಿದ್ದರು. ಮುಂದಿನ ಆಯ್ಕೆಗಳು ಕುರಿತು ಸಮಾಲೋಚನೆ ನಡೆಸಿದರು. ಇದರ ನಂತರ ಐಪಿಎಲ್ ಮಾಲೀಕರ ಜೊತೆಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಯಿತು.

ಟಿ20 ವಿಶ್ವಕಪ್​ಗೂ ಮುನ್ನ ಆಯೋಜನೆ ಪಕ್ಕಾ

ಒಂದು ವಾರದಲ್ಲಿ ನಂತರ ಟೂರ್ನಿ ಪುನರಾರಂಭಿಸಲು ಸಾಧ್ಯವಾಗದಿದ್ದರೆ, ವರ್ಷದ ಕೊನೆಯಲ್ಲಿ ಪಂದ್ಯಾವಳಿಯ ಉಳಿದ ಭಾಗವನ್ನು ಮತ್ತೊಂದು ವಿಂಡೋದಲ್ಲಿ ಮರುಹೊಂದಿಸಲು ಪ್ರಯತ್ನಿಸಲಾಗುವುದು. ಗುರುವಾರ (ಮೇ 8) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಅಮಾನತುಗೊಂಡ ಪಂದ್ಯ ಮತ್ತು 4 ಪ್ಲೇಆಫ್ ಪಂದ್ಯಗಳು ಸೇರಿದಂತೆ 16 ಪಂದ್ಯಗಳು ಬಾಕಿ ಉಳಿದಿವೆ. ಭಾರತ ಕ್ರಿಕೆಟ್ ತಂಡ ಜೂನ್ ಮತ್ತು ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲದೆ, ಉಳಿದ ಕ್ರಿಕೆಟ್ ತಂಡಗಳ ಆಟಗಾರರ ಲಭ್ಯತೆಯನ್ನು ನೋಡಿಕೊಂಡು ಟೂರ್ನಿ ನಡೆಸಬೇಕಿದೆ. ಆಯಾ ಕ್ರಿಕೆಟ್​ ಮಂಡಳಿಗಳಿಗೆ ಬಿಡುವಿಲ್ಲದ ವೇಳಾಪಟ್ಟಿ ಇರುವ ಕಾರಣ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

2021ರ ಕೋವಿಡ್ ಸಮಯದಲ್ಲಿ ಐಪಿಎಲ್ ಅನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ, ಟೂರ್ನಿಯ ಉಳಿದ ಭಾಗವನ್ನು ನಂತರ ಯುಎಇಯಲ್ಲಿ ಆಡಿಸಲಾಗಿತ್ತು. ಅದು ಕೂಡ ವರ್ಷದ ಕೊನೆಯಲ್ಲಿ. ಇದೀಗ ಮುಂದಿನ ವಾರದಲ್ಲಿ ಯಾವುದೇ ಮರು ಆಯೋಜನೆ ಸಾಧ್ಯವಾಗದಿದ್ದರೆ, ಆಟಗಾರರ ಬಿಡುವು, ಸಮಯ ನೋಡಿಕೊಂಡು ಮುಂದಿನ ವರ್ಷದ ಟಿ20 ವಿಶ್ವಕಪ್​ಗೂ ಮುನ್ನ ಐಪಿಎಲ್ ಆಯೋಜಿಸುವ ನಿರೀಕ್ಷೆ ಇದೆ. ಜಮ್ಮು ಮತ್ತು ಪಠಾಣ್​ಕೋಟ್​​​​ನಲ್ಲಿ ವಾಯು ದಾಳಿಯ ಎಚ್ಚರಿಕೆಯ ಹಿನ್ನೆಲೆ ಧರ್ಮಶಾಲಾದಲ್ಲಿ ಪಂಜಾಬ್ ಮತ್ತು ಡೆಲ್ಲಿ ನಡುವಿನ ಐಪಿಎಲ್ ಪಂದ್ಯವನ್ನು ಅರ್ಧದಲ್ಲೇ ರದ್ದುಪಡಿಸಲಾಗಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.