ಆರ್​ಸಿಬಿ ತೊರೆದ ಬಳಿಕ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ ಆಟಗಾರರಿವರು; ತಂಡಕ್ಕೆ ಬಂದು ಹೋದರೆಲ್ಲಾ ಕಪ್ ಗೆದ್ರು, ಆದರೆ..!
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ ತೊರೆದ ಬಳಿಕ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ ಆಟಗಾರರಿವರು; ತಂಡಕ್ಕೆ ಬಂದು ಹೋದರೆಲ್ಲಾ ಕಪ್ ಗೆದ್ರು, ಆದರೆ..!

ಆರ್​ಸಿಬಿ ತೊರೆದ ಬಳಿಕ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ ಆಟಗಾರರಿವರು; ತಂಡಕ್ಕೆ ಬಂದು ಹೋದರೆಲ್ಲಾ ಕಪ್ ಗೆದ್ರು, ಆದರೆ..!

Royal Challengers Bangalore : ರಾಯಲ್ ಚಾಲೆಂಜರ್ಸ್ ಬೆಂಗಳೂರು ತೊರೆದು ಮತ್ತೊಂದು ತಂಡಕ್ಕೆ ಸೇರಿ ಐಪಿಎಲ್ ಟ್ರೋಫಿ ಗೆದ್ದಿರುವ ಆಟಗಾರರು ಯಾರು? ಆ ಆಟಗಾರರ ಪಟ್ಟಿ ಇಲ್ಲಿದೆ.

ಆರ್​ಸಿಬಿ ತೊರೆದ ಬಳಿಕ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ ಆಟಗಾರರಿವರು; ತಂಡಕ್ಕೆ ಬಂದು ಹೋದರೆಲ್ಲಾ ಕಪ್ ಗೆದ್ರು, ಆದರೆ..!
ಆರ್​ಸಿಬಿ ತೊರೆದ ಬಳಿಕ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ ಆಟಗಾರರಿವರು; ತಂಡಕ್ಕೆ ಬಂದು ಹೋದರೆಲ್ಲಾ ಕಪ್ ಗೆದ್ರು, ಆದರೆ..!

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆರಂಭಕ್ಕೆ‌ ಕೆಲವೇ ದಿನಗಳು ಬಾಕಿ ಉಳಿದಿದೆ. ಮಾರ್ಚ್ 22ರಿಂದ ಶ್ರೀಮಂತ ಲೀಗ್‌ಗೆ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR 2025) ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಕೆಕೆಆರ್ ಮಣಿಸಿ ಅಭಿಯಾನ ಆರಂಭಿಸುವ ಉತ್ಸಾಹದಲ್ಲಿರುವ ಈ ವರ್ಷ ಟ್ರೋಫಿ ಬರ ನೀಗಿಸಬೇಕು ಎಂದು ಭರ್ಜರಿ ಕಸರತ್ತು ನಡೆಸುತ್ತಿದೆ.

2009, 2011, 2016ರಲ್ಲಿ ಐಪಿಎಲ್ ಪ್ರವೇಶಿಸಿದ್ದ ಆರ್​​ಸಿಬಿ ಟ್ರೋಫಿ ಎತ್ತಲು ಸಾಧ್ಯವಾಗಿರಲ್ಲ. 18ನೇ ಆವೃತ್ತಿಯಲ್ಲಾದರೂ ಟ್ರೋಫಿ ಕನಸು ನನಸಾಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಆರ್​ಸಿಬಿ ತಂಡ ತೊರೆದು ಬೇರೊಂದು ತಂಡ ಸೇರಿದ ಸ್ಟಾರ್​ ಆಟಗಾರರು ಮಾತ್ರ ಟ್ರೋಫಿ ಗೆದ್ದು ಬೀಗಿದ್ದಾರೆ. ಆರ್​​ಸಿಬಿಯಿಂದ‌ ಮತ್ತೊಂದು ತಂಡ ಸೇರಿ ಐಪಿಎಲ್ ಪ್ರಶಸ್ತಿ ಜಯಿಸಿದ ಆಟಗಾರರ ಪಟ್ಟಿ ಇಂತಿದೆ.

1. ಯುವರಾಜ್ ಸಿಂಗ್

2014ರಲ್ಲಿ 14 ಕೋಟಿ ರೂ.ಗೆ ಸೇರಿದ್ದ ಟೀಮ್ ಇಂಡಿಯಾದ ಆಲ್​ರೌಂಡರ್ ಯುವರಾಜ್ ಸಿಂಗ್, ಒಂದು ಸೀಸನ್ ನಂತರ‌ ತಂಡದಿಂದ ಬಿಡುಗಡೆಗೊಂಡರು. ಆ ವರ್ಷ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಬೆಂಗಳೂರು 2ನೇ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಇದಾದ 2 ವರ್ಷಗಳ ನಂತರ ಅಂದರೆ 2016ರಲ್ಲಿ ಯುವರಾಜ್ ಸಿಂಗ್ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದು ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದರು. ಅಚ್ಚರಿ ಅಂದರೆ ಫೈನಲ್​ನಲ್ಲಿ ಆರ್​ಸಿಬಿ ವಿರುದ್ಧವೇ ಗೆದ್ದಿದ್ದು. 2019ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು 2ನೇ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. ಇದಾದ ಒಂದು ತಿಂಗಳ ನಂತರ ವಿದಾಯ ಘೋಷಿಸಿದ್ದರು.

2. ಪಾರ್ಥೀವ್ ಪಟೇಲ್

ಪಾರ್ಥೀವ್ ಪಟೇಲ್ 2014ರಲ್ಲಿ ರೆಡ್​ ಆರ್ಮಿ ತಂಡದ ಭಾಗವಾಗಿದ್ದರು. 2018ರಲ್ಲಿ ಮತ್ತೆ ಆರ್‌ಸಿಬಿ ಸೇರಿ 2020ರವರೆಗೂ ಆಡಿದರು. ಆದರೆ 2020ರಲ್ಲಿ ಇಡೀ ಐಪಿಎಲ್ ಬೆಂಚ್​​ಗೆ ಸೀಮಿತಕ್ಕೆ ಒಳಗಾದರು. ಈ ಟೂರ್ನಿ ಮುಗಿದ ಒಂದು ತಿಂಗಳ ನಂತರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2014ರಲ್ಲಿ ರಾಯಲ್ ಚಾಲೆಂಜರ್ಸ್ ತೊರೆದ ನಂತರ ಮುಂಬೈ ಸೇರಿದ್ದ ಪಾರ್ಥೀವ್ 2015, 2017ರಲ್ಲಿ 2 ಸಲ ಚಾಂಪಿಯನ್ ತಂಡದ ಭಾಗವಾಗಿದ್ದರು.

3. ಜಾಕ್ ಕಾಲೀಸ್

ಜಾಕ್​ ಕಾಲಿಸ್ ಆರ್​ಸಿಬಿಯೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನ ಪ್ರಾರಂಭಿಸಿದರು. ಮೂರು ಆವೃತ್ತಿಗಳು ಇದೇ ತಂಡದ ಪರ ಆಡಿದ್ದರು. ಆರ್​​ಸಿಬಿ ಪರ 2009ರಲ್ಲಿ ಒಂದು ಫೈನಲ್ ಸಹ ಆಡಿದ್ದರು. ಆದರೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋತರು. ಆ ಬಳಿಕ 2011ರಲ್ಲಿ ಕೆಕೆಆರ್ ಸೇರಿದ ಕಾಲೀಸ್, ನಾಲ್ಕು ವರ್ಷಗಳ ಆ ಫ್ರಾಂಚೈಸಿ ಪರ ಸೇವೆ ಸಲ್ಲಿಸಿದರು. ಆದರೆ ಆರ್​ಸಿಬಿ ತೊರೆದ ಎರಡು ವರ್ಷಗಳ ನಂತರ ಕೊಲ್ಕತ್ತಾದೊಂದಿಗೆ ಮೊದಲ ಬಾರಿಗೆ ಕಪ್ ಗೆಲ್ಲುವಲ್ಲಿ ಯಶಸ್ವಿಯಾದರು. ಆಗ ಗೌತಮ್ ಗಂಭೀರ್​ ಕೆಕೆಆರ್ ನಾಯಕನಾಗಿದ್ದರು.

4. ಮೊಯಿನ್ ಅಲಿ

ಮೊಯಿನ್ ಅಲಿ 2018ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಸೇರಿಕೊಂಡರು. 3 ವರ್ಷಗಳ ಅವಧಿ ರೆಡ್​ ಆರ್ಮಿ ಜೊತೆಯಿದ್ದ ಅಲಿ, 2021ರಲ್ಲಿ ಚೆನ್ನೈ ಸೇರಿದರು. ಇಂಗ್ಲೆಂಡ್ ಆಟಗಾರ ಸಿಎಸ್​​ಕೆ ಸೇರಿದ ಅದೇ ವರ್ಷವೇ ಚಾಂಪಿಯನ್ ಆದರು. ಐಪಿಎಲ್ 2022ರ ಮೆಗಾ ಹರಾಜಿನ ಮೊದಲು ಅವರನ್ನು ಸಿಎಸ್‌ಕೆ ಉಳಿಸಿಕೊಂಡಿತ್ತು. 2023ರಲ್ಲೂ ಮತ್ತೊಂದು ಟ್ರೋಫಿ ಗೆದ್ದರು.

ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ ಐಪಿಎಲ್​ 2009 ಮತ್ತು 2010ರಲ್ಲಿ ಆರ್​​ಸಿಬಿ ಭಾಗವಾಗಿದ್ದರು. 2009ರಲ್ಲಿ ಆರ್​ಸಿಬಿ ಪರ ಫೈನಲ್ ಆಡಿದ್ದರು. ಆದರೆ ಸೋಲು ಕಂಡಿತ್ತು. ಬಳಿಕ 2011 ರಿಂದ 2013ರವರೆಗೆ ಪುಣೆ ವಾರಿಯರ್ಸ್ ಪರ ಆಡಿದ ಉತ್ತಪ್ಪ, ತದನಂತರ ಕೋಲ್ಕತ್ತಾ ಸೇರಿದರು. ಆರ್​ಸಿಬಿ ತೊರೆದ 4 ವರ್ಷಗಳ ನಂತರ ಕೆಕೆಆರ್​​ ಪರ ತಮ್ಮ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದರು. 2021ರಲ್ಲಿ ಚೆನ್ನೈ ಸೇರಿದ ಉತ್ತಪ್ಪ 2ನೇ ಬಾರಿಗೆ ಚಾಂಪಿಯನ್ ಆದರು.

ಅಷ್ಟೇ ಅಲ್ಲದೆ, ಶೇನ್ ವ್ಯಾಟ್ಸನ್​, ಶಿವಂ ದುಬೆ, ಮನೀಷ್ ಪಾಂಡೆ, ಕೇದಾರ್ ಜಾಧವ್, ಕ್ವಿಂಟನ್ ಡಿ ಕಾಕ್ ಸೇರಿದಂತೆ ಹಲವರು ಆರ್​ಸಿಬಿ ತಂಡವನ್ನು ತೊರೆದ ನಂತರ ಬೇರೆ ತಂಡಗಳ ಪರ ಚಾಂಪಿಯನ್​ ಆಗಿದ್ದಾರೆ. ಆದರೆ, ಆರ್​ಸಿಬಿ ಮಾತ್ರ ಕಪ್ ಎತ್ತಿಲ್ಲ. ಈ ಸಲವಾದರೂ ಪ್ರಶಸ್ತಿ ಗೆಲ್ಲುತ್ತಾ ಎಂಬುದನ್ನು ಕಾದುನೋಡಬೇಕಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner