ಪಿಎಸ್​ಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ ರಾವಲ್ಪಿಂಡಿ ಮೈದಾನದ ಮೇಲೆ ಡ್ರೋನ್ ದಾಳಿ; ಪಾಕ್ ತೊರೆಯಲು ವಿದೇಶಿ ಕ್ರಿಕೆಟಿಗರು ಹಠ!
ಕನ್ನಡ ಸುದ್ದಿ  /  ಕ್ರಿಕೆಟ್  /  ಪಿಎಸ್​ಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ ರಾವಲ್ಪಿಂಡಿ ಮೈದಾನದ ಮೇಲೆ ಡ್ರೋನ್ ದಾಳಿ; ಪಾಕ್ ತೊರೆಯಲು ವಿದೇಶಿ ಕ್ರಿಕೆಟಿಗರು ಹಠ!

ಪಿಎಸ್​ಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ ರಾವಲ್ಪಿಂಡಿ ಮೈದಾನದ ಮೇಲೆ ಡ್ರೋನ್ ದಾಳಿ; ಪಾಕ್ ತೊರೆಯಲು ವಿದೇಶಿ ಕ್ರಿಕೆಟಿಗರು ಹಠ!

ಪಿಎಸ್​ಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ ರಾವಲ್ಪಿಂಡಿ ಮೈದಾನದ ಮೇಲೆ ಡ್ರೋನ್ ದಾಳಿ ನಡೆದಿದ್ದು, ಪಾಕಿಸ್ತಾನ ತೊರೆಯಲು ವಿದೇಶಿ ಕ್ರಿಕೆಟಿಗರು ಹಠ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಪಿಎಸ್​ಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ ರಾವಲ್ಪಿಂಡಿ ಮೈದಾನದ ಮೇಲೆ ಡ್ರೋನ್ ದಾಳಿ; ಪಾಕ್ ತೊರೆಯಲು ವಿದೇಶಿ ಕ್ರಿಕೆಟಿಗರು ಹಠ!
ಪಿಎಸ್​ಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ ರಾವಲ್ಪಿಂಡಿ ಮೈದಾನದ ಮೇಲೆ ಡ್ರೋನ್ ದಾಳಿ; ಪಾಕ್ ತೊರೆಯಲು ವಿದೇಶಿ ಕ್ರಿಕೆಟಿಗರು ಹಠ!

ಪಹಲ್ಗಾಮ್​ನಲ್ಲಿ 26 ಜನರನ್ನು ಕೊಂದಿದ್ದ ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಭಾರತ ದಿಟ್ಟ ಉತ್ತರ ನೀಡುತ್ತಿದೆ. ಈಗಾಗಲೇ ಉಗ್ರರಿರಿದ್ದ 9 ನೆಲೆಗಳನ್ನು ಧ್ವಂಸಗೊಳಿಸಿರುವ ಭಾರತೀಯ ಸೇನೆ, ಇದೀಗ ಉಗ್ರರ ಅಡಗು ತಾಣಗಳ ನಿರ್ನಾಮಕ್ಕೆ ಹುಡುಕಿ ಹುಡುಕಿ ಹೊಡೆಯುತ್ತಿದೆ. ಇದಕ್ಕೆ ಪ್ರತಿದಾಳಿಯಾಗಿ ಪಾಕಿಸ್ತಾನ ಫೂಂಚ್ ಜಿಲ್ಲೆಯಲ್ಲಿ ನಾಗರಿಕರ ಮೇಲೆ ಗುಂಡು ಹೊಡೆದಿದ್ದು, 15 ಮಂದಿಗೂ ಹೆಚ್ಚು ಸಾವನ್ನಪ್ಪಿದ್ದರು. ಇದಕ್ಕೆ ಭಾರೀ ಕೋಪಗೊಂಡಿರುವ ಭಾರತೀಯ ಸೇನೆ, ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಅದರಂತೆ ಇಂದು ರಾತ್ರಿ ಕ್ರಿಕೆಟ್ ಪಂದ್ಯ ನಡೆಯಬೇಕಿದ್ದ ಸ್ಟೇಡಿಯಂ ಮೇಲೂ ದಾಳಿ ನಡೆದಿದ್ದು, ಭಾಗಶಃ ಹಾನಿಯಾಗಿದೆ.

ಇಂದು (ಮೇ 8) ರಾತ್ರಿ 8 ಗಂಟೆಗೆ ನಿಗದಿಯಾಗಿದ್ದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ಗುರುವಾರ ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಿಎಸ್ಎಲ್ ಪಂದ್ಯವು ಸಂಜೆ ಆರಂಭವಾಗಬೇಕಿತ್ತು. ಈ ಘಟನೆಯ ಬೆನ್ನಲ್ಲೇ ಇಡೀ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದ್ದು, ಭದ್ರತಾ ಕಳವಳ ಹೆಚ್ಚಿಸಿದೆ. ಈ ದಾಳಿಯ ನಂತರ ಪಿಎಸ್ಎಲ್ ಅನ್ನು ಕರಾಚಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಇಬ್ಬರು ಸ್ಥಳೀಯರಿಗೆ ಗಾಯ

ಕ್ರೀಡಾಂಗಣದ ಬಳಿಯ ರೆಸ್ಟೋರೆಂಟ್ ಸಹ​ ಭಾಗಶಃ ಹಾನಿಯಾಗಿದೆ. ಪಾಕ್ ಮಾಧ್ಯಮಗಳ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ದಾಳಿ ಒಳಗಾದ ಪ್ರದೇಶವನ್ನು ಸೀಲ್ ಮಾಡಿದ್ದು, ಆ ಡ್ರೋನ್ ಎಲ್ಲಿಂದ ಬಂತು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಸ್ಥಳೀಯರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಭಾರತದಲ್ಲಿ 15 ಮಿಲಿಟರಿ ಪಡೆಗಳ ಮೇಲೆ ದಾಳಿ ನಡೆಸಲು ಇಸ್ಲಾಮಾಬಾದ್ ಪ್ರಯತ್ನಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವು ಲಾಹೋರ್‌ನಲ್ಲಿ ವಾಯು ರಕ್ಷಣಾ ರಾಡಾರ್ ಅನ್ನು ನಾಶಪಡಿಸಿದೆ.

ಪಾಕ್ ತೊರೆಯಲು ಆಟಗಾರರು ಮನವಿ

ಆಪರೇಷನ್ ಸಿಂದೂರ ನಂತರ ಪಾಕಿಸ್ತಾನ ಸೂಪರ್ ಲೀಗ್ ಆಡುತ್ತಿರುವ ವಿದೇಶಿ ಆಟಗಾರರು ಪಾಕ್ ತೊರೆಯಲು ಚಿಂತಿಸಿದ್ದಾರೆ ಎಂದು ವರದಿಯಾಗಿದೆ. ಇವತ್ತಿನ ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ತಂಡಗಳಲ್ಲಿ ಹಲವು ವಿದೇಶಿ ಆಟಗಾರರಿದ್ದಾರೆ. ನಾಯಕ ಡೇವಿಡ್ ವಾರ್ನರ್ ಜೊತೆಗೆ ಕರಾಚಿ ಕಿಂಗ್ಸ್​​ನಲ್ಲಿ ಮೊಹಮ್ಮದ್ ನಬಿ, ಜೇಮ್ಸ್ ವಿನ್ಸ್, ಟಿಮ್ ಸೀಫರ್ಟ್ ಕೂಡ ಸೇರಿದ್ದಾರೆ. ಪೇಶಾವರ್ ಝಲ್ಮಿ ತಂಡದಲ್ಲಿ ಮ್ಯಾಕ್ಸ್ ಬ್ರ್ಯಾಂಟ್, ಟಾಮ್ ಕೊಹ್ಲರ್ ಕ್ಯಾಡ್ಮೋರ್, ಲ್ಯೂಕ್ ವುಡ್, ಅಲ್ಜಾರಿ ಜೋಸೆಫ್ ಇದ್ದಾರೆ. ಇವರ ಜೊತೆಗೆ ಉಳಿದ ತಂಡಗಳಲ್ಲೂ ವಿದೇಶಿಯರಿದ್ದು, ಎಲ್ಲರೂ ಪಾಕಿಸ್ತಾನ ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ತಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗುವಂತೆ ಮನವಿಯೂ ಮಾಡಿದ್ದಾರೆ ಎಂದು ವರದಿಯಾಗಿದೆ.

ವಿದೇಶಿಗರು ಪಾಕಿಸ್ತಾನ ತೊರೆಯುವುದು ಅಸಾಧ್ಯ?

ಪಿಎಸ್‌ಎಲ್ ಮುಖ್ಯಸ್ಥ ಸಲ್ಮಾನ್ ನಾಸಿರ್ ಅವರನ್ನು ವಿದೇಶಿ ಆಟಗಾರರು ನಿನ್ನೆ ರಾತ್ರಿ ಭೇಟಿಯಾಗಿ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ವಾಯುಪ್ರದೇಶದ ಸಮಸ್ಯೆಗಳಿಂದ ವಿದೇಶಿ ಆಟಗಾರರು ದೇಶ ತೊರೆಯುವ ಸಾಧ್ಯತೆಯಿಲ್ಲ. ಆದರೆ ಅವರಿಗೆ ಪಾಕಿಸ್ತಾನ ಸೇನೆಯಿಂದ ಭಾರಿ ಭದ್ರತೆ ಒದಗಿಸಲಾಗಿದೆ ಎಂದು ನಾಸಿರ್ ಅವರು ಹೇಳಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿ ಸರ್ಜಿಕಲ್ ಸ್ಟ್ರೈಕ್‌ಗಳು ನಡೆದಿವೆ. ಆದರೆ ಅದು ಪಿಎಸ್‌ಎಲ್ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸುವುದಿಲ್ಲ. ಪರಿಸ್ಥಿತಿ ಉಲ್ಬಣಗೊಂಡರೆ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.