ಜೋಶ್ ಹೇಜಲ್​ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್​​ ಈತ; ಆ ಒಂದು ನಿರ್ಧಾರವೇ ಆರ್​ಸಿಬಿ ಗೆಲ್ಲಲು ಪ್ರಮುಖ ಕಾರಣ!
ಕನ್ನಡ ಸುದ್ದಿ  /  ಕ್ರಿಕೆಟ್  /  ಜೋಶ್ ಹೇಜಲ್​ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್​​ ಈತ; ಆ ಒಂದು ನಿರ್ಧಾರವೇ ಆರ್​ಸಿಬಿ ಗೆಲ್ಲಲು ಪ್ರಮುಖ ಕಾರಣ!

ಜೋಶ್ ಹೇಜಲ್​ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್​​ ಈತ; ಆ ಒಂದು ನಿರ್ಧಾರವೇ ಆರ್​ಸಿಬಿ ಗೆಲ್ಲಲು ಪ್ರಮುಖ ಕಾರಣ!

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ ಜೋಶ್ ಹೇಜಲ್​ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್ ಜಿತೇಶ್ ಶರ್ಮಾ.​​ ಈತನ ಆ ಒಂದು ನಿರ್ಧಾರವೇ ಆರ್​ಸಿಬಿ ಗೆಲ್ಲಲು ಪ್ರಮುಖ ಕಾರಣವಾಯಿತು.

ಜೋಶ್ ಹೇಜಲ್​ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್​​ ಈತ; ಆ ಒಂದು ನಿರ್ಧಾರವೇ ಆರ್​ಸಿಬಿ ಗೆಲ್ಲಲು ಪ್ರಮುಖ ಕಾರಣ!
ಜೋಶ್ ಹೇಜಲ್​ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್​​ ಈತ; ಆ ಒಂದು ನಿರ್ಧಾರವೇ ಆರ್​ಸಿಬಿ ಗೆಲ್ಲಲು ಪ್ರಮುಖ ಕಾರಣ! (AFP)

ಇಂಡಿಯನ್ ಪ್ರೀಮಿಯರ್ ಲೀಗ್ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್​ಗಳ ಅಂತರದಿಂದ ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆರ್​​ಸಿಬಿಗೆ ಎರಡು ಪಾಯಿಂಟ್ ಬರಲು ಟರ್ನಿಂಗ್ ಪಾಯಿಂಟ್ ಮಾಡಿದ್ದೇ ವಿಕೆಟ್ ಕೀಪರ್ ಜಿತೇಶ್ ಶರ್ಮಾ. 4 ವಿಕೆಟ್ ಉರುಳಿಸಿ ಪಂದ್ಯದ ಚಿತ್ರಣ ಬದಲಿಸಿ ಗೆಲುವು ತಂದುಕೊಟ್ಟ ಜೋಶ್ ಹೇಜಲ್​ವುಡ್ ಪಂದ್ಯಶ್ರೇಷ್ಠ ಪಡೆದರಾದರೂ ನಿಜವಾದ ಗೆಲುವಿನ ರೂವಾರಿ ಜಿತೇಶ್ ಶರ್ಮಾ ಅಂದರೆ ತಪ್ಪಾಗಲ್ಲ!

ಪಂದ್ಯದಲ್ಲಿ ಆ ಒಂದು ನಿರ್ಧಾರದಿಂದ ಸೋಲು-ಗೆಲುವಿನ ಭವಿಷ್ಯವೇ ನಿರ್ಧಾರವಾಯಿತು. ರಾಜಸ್ಥಾನ್ ರಾಯಲ್ಸ್ ಗೆಲ್ಲಲು ಮೂರು ಓವರ್​​ಗಳಲ್ಲಿ 40 ರನ್ ಬೇಕಿತ್ತು. 18ನೇ ಓವರ್​​​ನಲ್ಲಿ ಭುವನೇಶ್ವರ್​ ಕುಮಾರ್​ ಬೌಲಿಂಗ್​​ನಲ್ಲಿ ಬರೋಬ್ಬರಿ 22 ರನ್ ಗಳಿಸಿದ ಆರ್​ಆರ್​​, ಕೊನೆಯ 2 ಓವರ್​​ಗಳಲ್ಲಿ ಕೇವಲ 18 ರನ್ ಬೇಕಿತ್ತು. ಅಬ್ಬರಿಸುತ್ತಿದ್ದ ಧ್ರುವ್ ಜುರೆಲ್ ಅಸಾಧಾರಣ ಆಟದ ಮೂಲಕ ಪಂದ್ಯವನ್ನು ಗೆಲ್ಲಿಸಲು ಯತ್ನಿಸುತ್ತಿದ್ದರು. ಆಗ 19ನೇ ಓವರ್​​ನಲ್ಲಿ ಬೌಲಿಂಗ್ ದಾಳಿಗಿಳಿದ ಜೋಶ್ ಹೇಜಲ್​ವುಡ್ ಪಂದ್ಯದ ದಿಕ್ಕನೇ ಬದಲಿಸಿದರು. ಈ ಓವರ್​​​ನಲ್ಲಿ ಪ್ರಮುಖ 2 ವಿಕೆಟ್ ಕಿತ್ತರು.

19ನೇ ಓವರ್​​ನಲ್ಲಿ 2 ವಿಕೆಟ್ ಸಹಿತ ಕೇವಲ 1 ರನ್ ಬಿಟ್ಟುಕೊಟ್ಟ ಜೋಶ್​, ಆರ್​ಆರ್ ಕನಸನ್ನು ಭಗ್ನಗೊಳಿಸಿದರು. ಆದರೆ ಪಂದ್ಯದ ಚಿತ್ರಣ ಬದಲಾಗಿದ್ದು ಜಿತೇಶ್ ಶರ್ಮಾ ಅವರ ಚಾಣಾಕ್ಷ ವಿಕೆಟ್ ಕೀಪರ್​​ನಿಂದ! 19ನೇ ಓವರ್​​ನ 3ನೇ ಎಸೆತದಲ್ಲಿ ಹೇಜಲ್​ವುಡ್ ಔಟ್​ಸೈಡ್ ಆಫ್​ಸ್ಟಂಪ್​​ನಲ್ಲಿ ಯಾರ್ಕರ್​ ಹಾಕಿದರು. ಆ ಚೆಂಡನ್ನು ಧ್ರುವ್ ಜುರೆಲ್​ ಥರ್ಡ್​ಮ್ಯಾನ್ ಕಡೆಗೆ ಬಾರಿಸಲು ಯತ್ನಿಸಿದರು. ಆದರೆ ಆ ಚೆಂಡು ಬ್ಯಾಟ್​ಗೆ ತಪ್ಪಿಸಿ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಅದು ಔಟೆಂದ್ ಯಾರೂ ನಿರೀಕ್ಷಿಸಿರಲಿಲ್ಲ. ಸ್ವತಃ ಬೌಲರ್​ ಜೋಶ್ ಕೂಡ ನಂಬಿರಲಿಲ್ಲ. ಆದರೆ ಇದನ್ನು ಗ್ರಹಿಸಿದ್ದು ಜಿತೇಶ್ ಮಾತ್ರ!

ಔಟ್ ಅನ್ನು ಅಪೀಲು ಸಹ ಮಾಡದೆ ಹೋಗುತ್ತಿದ್ದ ಜೋಶ್​ ಮತ್ತು ಅಲ್ಲಿದ್ದ ನಾಯಕ ರಜತ್ ಪಾಟೀದಾರ್ ಅವರಿಗೆ ಜಿತೇಶ್ ಶರ್ಮಾ ಅವರು ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಅದು ಔಟ್​ ಎಂದು ನೂರಕ್ಕೆ ನೂರು ಪ್ರತಿಶತಃ ನಂಬಿದ್ದ ಜಿತೇಶ್, ಡಿಆರ್​ಎಸ್​​ ತೆಗೆದುಕೊಳ್ಳಲು ನಾಯಕನನ್ನು ಒಪ್ಪಿಸಿದರು. ಅದರಂತೆ, ರಜತ್ ಪಾಟೀದಾರ್​ ರಿವ್ಯೂ ತೆಗೆದುಕೊಂಡರು. ಮೂರನೇ ಅಂಪೈರ್ ಪರಿಶೀಲನೆಯಲ್ಲಿ ಅಲ್ಟ್ರಾಎಡ್ಜ್‌ನಲ್ಲಿ ಬಾಟಮ್-ಎಡ್ಜ್‌ ಆಗಿತ್ತು. ಆಗ ಬ್ಯಾಟ್ ಗಾಳಿಯಲ್ಲಿತ್ತು. ಇದು ಔಟೆಂಟ್​ ತೀರ್ಮಾನವಾಗುತ್ತಿದ್ದಂತೆ ಆರ್​ಸಿಬಿ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಧ್ರುವ್ ಜುರೆಲ್ ಉತ್ತಮ ಪ್ರದರ್ಶನ

ಸಂಕಷ್ಟದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೆರವಾಗಿದ್ದೇ ಧ್ರುವ್ ಜುರೆಲ್. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜುರೆಲ್, ಆರಂಭದಲ್ಲಿ ನಿಧಾನವಾಗಿ ಬ್ಯಾಟ್ ಬೀಸಿದರು. ನಂತರ ಬ್ಯಾಟಿಂಗ್ ಗೇರ್​ ಚೇಂಜ್ ಮಾಡಿದರು. ಆರ್​ಸಿಬಿ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಸಿಕ್ಸರ್​, ಬೌಂಡರಿಗಳ ಸುರಿಮಳೆಗೈದರು. ಅವರು 34 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈತನ ಬಳಿಕ ಯಾರೂ ಗೆಲ್ಲಿಸುವ ಯತ್ನಕ್ಕೆ ಕೈ ಹಾಕಿಲ್ಲ.

ಆರ್​​ಸಿಬಿಗೆ ತವರಿನಲ್ಲಿ ಮೊದಲ ಗೆಲುವು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನ ಎಂ ಚಿನ್ನಸ್ವಾಮಿ ಕ್ರಿಕೆಟ್​ ಮೈದಾನದಲ್ಲಿ ಪ್ರಸಕ್ತ ಐಪಿಎಲ್​ನಲ್ಲಿ ಮೊದಲ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ಆಡಿದ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್​ಸಿಬಿ, ತವರಿನ ಅಭಿಮಾನಿಗಳ ಎದುರು ಗೆಲುವಿನ ಖಾತೆ ತೆರೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು, 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.