ಆರ್‌ಸಿಬಿ vs ರಾಜಸ್ಥಾನ್‌ ರಾಯಲ್ಸ್‌ 2ನೇ ಮುಖಾಮುಖಿ; ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಹೀಗಿದೆ ಪಿಚ್-ಹವಾಮಾನ ವರದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ Vs ರಾಜಸ್ಥಾನ್‌ ರಾಯಲ್ಸ್‌ 2ನೇ ಮುಖಾಮುಖಿ; ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಹೀಗಿದೆ ಪಿಚ್-ಹವಾಮಾನ ವರದಿ

ಆರ್‌ಸಿಬಿ vs ರಾಜಸ್ಥಾನ್‌ ರಾಯಲ್ಸ್‌ 2ನೇ ಮುಖಾಮುಖಿ; ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಹೀಗಿದೆ ಪಿಚ್-ಹವಾಮಾನ ವರದಿ

ಆರ್‌ಸಿಬಿ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಿನ 2ನೇ ಮುಖಾಮುಖಿಗೆ ಮಳೆ ಅಡ್ಡಿಯಾಗುತ್ತಾ ಎಂಬ ಚಿಂತೆ ಅಭಿಮಾನಿಗಳದ್ದು. ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿದ್ದು, ಪಿಚ್ ಹಾಗೂ ಹವಾಮಾನ ವರದಿ ಇಲ್ಲಿದೆ.

ಆರ್‌ಸಿಬಿ vs ರಾಜಸ್ಥಾನ್‌ ರಾಯಲ್ಸ್‌ 2ನೇ ಮುಖಾಮುಖಿ; ಚಿನ್ನಸ್ವಾಮಿ ಸ್ಟೇಡಿಯಂ ಪಿಚ್‌ ವರದಿ
ಆರ್‌ಸಿಬಿ vs ರಾಜಸ್ಥಾನ್‌ ರಾಯಲ್ಸ್‌ 2ನೇ ಮುಖಾಮುಖಿ; ಚಿನ್ನಸ್ವಾಮಿ ಸ್ಟೇಡಿಯಂ ಪಿಚ್‌ ವರದಿ (HT_PRINT)

ಐಪಿಎಲ್ 2025ರ ಆವೃತ್ತಿಯಲ್ಲಿ ತವರು ಮೈದಾನದಲ್ಲಿ ಒಂದೂ ಗೆಲುವು ಸಾಧಿಸದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ತವರು ಮೈದಾನವೇ ಭೇದಿಸಲಾಗದ ಕೋಟೆಯಾಗಿದೆ. ತವರಿನ ಹೊರಗೆ ಅಜೇಯರಾಗಿ ಬೀಗುತ್ತಿರುವ ಆರ್‌ಸಿಬಿ ಆರ್ಮಿ, ಅಭಿಮಾನಿಗಳ ಸ್ವರ್ಗ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ವಿಜಯ ಎದುರು ನೋಡುತ್ತಿದೆ. ಏಪ್ರಿಲ್‌ 24ರ ಗುರುವಾರ ತಂಡವು ರಾಜಸ್ಥಾನ ರಾಯಲ್ಸ್ (Royal Challengers Bengaluru vs Rajasthan Royals) ವಿರುದ್ಧ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಬಾರಿಗೆ ಕಣಕ್ಕಿಳಿಯಲಿದೆ.

ಟೂರ್ನಿಯಲ್ಲಿ ಸೊಂಟ ಮುರಿದಂತೆ ಆಡುತ್ತಿರುವ ರಾಜಸ್ಥಾನಕ್ಕೆ ಸ್ಥಿರತೆ ಸಿಕ್ಕಿಲ್ಲ. ಇದುವರೆಗೆ ಕೇವಲ 2 ಪಂದ್ಯಗಳಲ್ಲಿ ಗೆದ್ದಿರುವ ತಂಡವು ಕೊನೆಯ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್‌ ಓವರ್‌ ಸೋಲಿನ ಬೆನ್ನಲ್ಲೇ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಂತಿಮ ಓವರ್‌ನಲ್ಲಿ ಕೇವಲ ಎರಡು ರನ್‌ಗಳಿಂದ ಮುಗ್ಗರಿಸಿತು. ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ತಂಡದಲ್ಲಿ ನಿಯಮಿತವಾಗಿ ಆಡುತ್ತಿಲ್ಲ. ರಿಯಾನ್ ಪರಾಗ್ ನಾಯಕತ್ವದ ಜವಾಬ್ದಾರಿ ವಹಿಸಿದರೂ, ಕಳೆದ ಋತುವಿನಲ್ಲಿ ಅವರು ನೀಡಿದ ಪ್ರದರ್ಶನದ ಪುನರಾವರ್ತನೆ ಆಗುತ್ತಿಲ್ಲ.

ಆಲ್‌ರೌಂಡ್‌ ತಂಡವನ್ನು ಹೊಂದಿರುವ ಆರ್‌ಸಿಬಿ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಬಲಿಷ್ಠವಾಗಿದೆ. ಮುಖ್ಯವಾಗಿ ಟೂರ್ನಿಯಲ್ಲಿ ಅತ್ಯುತ್ತಮ ಫೀಲ್ಡಿಂಗ್‌ ಹೊಂದಿರುವ ಕೆಲವೇ ತಂಡಗಳಲ್ಲಿ ಆರ್‌ಸಿಬಿ ಕೂಡಾ ಒಂದು.

ಚಿನ್ನಸ್ವಾಮಿ ಸ್ಟೇಡಿಯಂ ಪಿಚ್‌ ಹಾಗೂ ಹವಾಮಾನ ವರದಿ

ಪಂಜಾಬ್‌ ವಿರುದ್ಧದ ಕೊನೆಯ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗಿಲ್ಲ. ಆಕಾಶ ಶುಭ್ರವಾಗಿದ್ದು, ನಗರದಲ್ಲಿ ಭಾರಿ ಬಿಸಿಲು ಕಾಣಿಸಿದೆ. ಕಳೆದ ಎರಡು ದಿನಗಳಿಂದ ಮೈದಾನದ ಸಿಬ್ಬಂದಿ ಚಿನ್ನಸ್ವಾಮಿ ಪಿಚ್ ಅನ್ನು ಎರಡು ಪದರಗಳ ಹೆಸ್ಸಿಯನ್‌ ಕವರ್‌ನಿಂದ ಮುಚ್ಚಿದ್ದಾರೆ. ಮೈದಾನದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿ, ಗ್ರೌಂಡ್‌ಗೆ ಬೀಳುವ ನೀರು ಅಲ್ಲೇ ಇಂಗುವಂಥ ಡ್ರೈನೇಜ್‌ ವ್ಯವಸ್ಥೆ ಇದೆ. ಈ ಕೆಲಸ ಮಾಡಿದ ನಂತರ ಪಿಚ್‌ ನಿಧಾನಗತಿಯಲ್ಲಿ ವರ್ತಿಸುತ್ತಿದೆ. ಈ ಬಾರಿಯ ಆವೃತ್ತಿಯಲ್ಲಿ ಇಲ್ಲಿ ಸಾಧಾರಣ ಮೊತ್ತಗಳಷ್ಟೇ ದಾಖಲಾಗಿವೆ. ಈ ಬಾರಿ ಈವರೆಗೆ ಈ ಮೈದಾನದಲ್ಲಿ ಎದುರಾಳಿ ತಂಡವೇ ಮೇಲುಗೈ ಸಾಧಿಸಿದೆ. ತವರಿನ ಲಾಭ ಪಡೆಯುವಲ್ಲಿ ಆರ್‌ಸಿಬಿ ಸಂಪೂರ್ಣ ವಿಫಲವಾಗಿದೆ. ಈ ಬಾರಿಯೂ, ರಾಜಸ್ಥಾನದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆಗಿದ್ದು, ಅವರು ಚಿನ್ನಸ್ವಾಮಿ ಮೈದಾನದ ಮರ್ಮವನ್ನು ಚೆನ್ನಾಗಿ ಅರಿತಿದ್ದಾರೆ. ಆರ್‌ಸಿಬಿಗೆ ಇಲ್ಲಿ ಟಾಸ್‌ ಗೆಲುವು ತುಂಬಾ ಮುಖ್ಯ. ಈವರೆಗೆ ಟಾಸ್‌ ಸೋತು ಪಂದ್ಯವನ್ನೂ ಸೋತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.

ರಾಜಸ್ಥಾನ ರಾಯಲ್ಸ್ ಸಂಭಾವ್ಯ ತಂಡ

ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಶುಭಮ್ ದುಬೆ, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ/ ಆಕಾಶ್ ಮಧ್ವಾಲ್.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.