ಗಿಲ್ ನಾಯಕ, ಕರುಣ್ ವಾಪಸ್, ಶ್ರೇಯಸ್ ಸೇರ್ಪಡೆ; ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಭಾರತ 'ಎ' ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಗಿಲ್ ನಾಯಕ, ಕರುಣ್ ವಾಪಸ್, ಶ್ರೇಯಸ್ ಸೇರ್ಪಡೆ; ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಭಾರತ 'ಎ' ಸಂಭಾವ್ಯ ತಂಡ

ಗಿಲ್ ನಾಯಕ, ಕರುಣ್ ವಾಪಸ್, ಶ್ರೇಯಸ್ ಸೇರ್ಪಡೆ; ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಭಾರತ 'ಎ' ಸಂಭಾವ್ಯ ತಂಡ

India A Likely Squad: ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಭಾರತ 'ಎ' ಸಂಭಾವ್ಯ ತಂಡ ಹೇಗಿರಲಿದೆ? ಪ್ರಮುಖ ಆಟಗಾರರೂ ಈ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಏನು? ಇಲ್ಲಿದೆ ವಿವರ.

ಗಿಲ್ ನಾಯಕ, ಕರುಣ್ ವಾಪಸ್, ಶ್ರೇಯಸ್ ಸೇರ್ಪಡೆ; ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಭಾರತ 'ಎ' ಸಂಭಾವ್ಯ ತಂಡ
ಗಿಲ್ ನಾಯಕ, ಕರುಣ್ ವಾಪಸ್, ಶ್ರೇಯಸ್ ಸೇರ್ಪಡೆ; ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಭಾರತ 'ಎ' ಸಂಭಾವ್ಯ ತಂಡ

ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ, ಭಾರತ 'ಎ' ತಂಡವು ಆಂಗ್ಲರ ನಾಡಿಗೆ ಪ್ರವಾಸ ಕೈಗೊಂಡು ಮೇ 30 ರಿಂದ ಕ್ಯಾಂಟರ್​​ಬರಿಯ ಸೇಂಟ್ ಲಾರೆನ್ಸ್‌ನ ಸ್ಪಿಟ್‌ಫೈರ್ ಮೈದಾನದಲ್ಲಿ 2 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ. 2ನೇ ನಾಲ್ಕು ದಿನಗಳ ಪಂದ್ಯ ಜೂನ್ 6 ರಿಂದ ನಾರ್ಥಾಂಪ್ಟನ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಯ ಪ್ರಕಾರ, ಕರುಣ್ ನಾಯರ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಇಬ್ಬರು ಭಾರತೀಯರಲ್ಲಿ ಒಬ್ಬರಾಗಿರುವ 33 ವರ್ಷದ ಕರುಣ್ ನಾಯರ್ 2017 ರಿಂದ ರಾಷ್ಟ್ರೀಯ ತಂಡಕ್ಕಾಗಿ ಆಡಿಲ್ಲ. ಆದಾಗ್ಯೂ, ಅವರು ಎಲ್ಲಾ ಸ್ವರೂಪಗಳ ದೇಶೀಯ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಗಮನ ಸೆಳೆದಿದ್ದಾರೆ.

ಕಳೆದ ಆವೃತ್ತಿಯಲ್ಲಿ ಟನ್​ಗಟ್ಟಲೇ ರನ್ ಗಳಿಸಿದ್ದ ಕರುಣ್, ಇದೀಗ ಐಪಿಎಲ್​ನಲ್ಲೂ ಮಿಂಚುತ್ತಿದ್​ದಾರೆ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಮರು ಸೇರ್ಪಡೆಗೊಳ್ಳುವ ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ಭಾರತ ತಂಡ ಅಥವಾ ಭಾರತ ಎ ತಂಡದಲ್ಲಿ ಸ್ಥಾನ ಭದ್ರಪಡಿಸುವುದು ಖಚಿತ ಎನ್ನಬಹುದು. ಮೇ 2ನೇ ವಾರದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.

ಯಾರಿಗೆಲ್ಲಾ ಅವಕಾಶ ಸಿಗಬಹುದು?

ಮೊದಲ ಟೆಸ್ಟ್ ಮತ್ತು 2025ರ ಐಪಿಎಲ್ ಫೈನಲ್ ನಡುವೆ 25 ದಿನಗಳ ಅಂತರವಿರುವುದನ್ನು ಗಮನಿಸಬೇಕಾದ ಸಂಗತಿ. ಪಟೌಡಿ ಟ್ರೋಫಿಗಾಗಿ ಮುಖ್ಯ ತಂಡವು ಇಂಗ್ಲೆಂಡ್‌ನಲ್ಲಿ ಸುಮಾರು 2 ತಿಂಗಳು ಕಳೆಯಲು ಸಜ್ಜಾಗಿದೆ. ಆದಾಗ್ಯೂ, ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಎಡವಿದ್ದ ಶುಭ್ಮನ್​ ಗಿಲ್ ಅವರಂತಹ ಆಟಗಾರರು ಬೇಗನೆ ತಂಡಕ್ಕೆ ಸೇರಬಹುದು. ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್‌ನಲ್ಲಿ ಎಂದಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅಭ್ಯಾಸ ಪಂದ್ಯಗಳಿಗೆ ಭಾರತ ಎ ತಂಡಕ್ಕೆ ಆಯ್ಕೆಯಾಗಬಹುದು.

ಹಿರಿಯ ವೇಗಿಗಳು 'ಎ' ಪ್ರವಾಸದ ಭಾಗವಾಗುವ ಸಾಧ್ಯತೆ ಇದೆ. ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಮುಕೇಶ್ ಕುಮಾರ್ ಮತ್ತು ಹರ್ಷಿತ್ ರಾಣಾ ಅವರಂತಹ ಉದಯೋನ್ಮುಖ ಸ್ಪರ್ಧಿಗಳು ಭಾರತ ಎ ತಂಡಕ್ಕೆ ಆಯ್ಕೆಯಾಗಬಹುದು. ಆದರೆ ಆಸ್ಟ್ರೇಲಿಯಾ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಆಲ್‌ರೌಂಡ್ ಜೋಡಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಹಿರಿಯರ ತಂಡವನ್ನು ನೇರವಾಗಿ ಸೇರಿಕೊಳ್ಳಬಹುದು.

ಆಸ್ಟ್ರೇಲಿಯಾದಲ್ಲಿ 'ಎ' ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಿದ್ದರು. ಆದರೆ ಅವರು ಪ್ರಸ್ತುತ ಗಾಯಗೊಂಡಿದ್ದು, ಅವರು ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಬಹುದು. ಹಾಗಾಗಿ ಗಿಲ್ ಮೊದಲೇ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಾದ ಕಾರಣ ಭಾರತ ಎ ತಂಡಕ್ಕೆ ಅವರೇ ನಾಯಕನಾಗಬಹುದು. ಸಾಯಿ ಸುದರ್ಶನ್ ಸಹ ಅವಕಾಶ ಪಡೆಯಬಹುದು. ಅತ್ಯದ್ಭುತ ಪ್ರದರ್ಶನಗಳ ಹೊರತಾಗಿ ಅಭಿಮನ್ಯು ಈಶ್ವರನ್ ಹಿರಿಯ ತಂಡಕ್ಕೆ ಆಯ್ಕೆಯಾಗಿಲ್ಲ.

ಶ್ರೇಯಸ್ ಅಯ್ಯರ್ ವರ್ಷವಿಡೀ ಏಕದಿನ ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಇದೀಗ ತಾನು ಮತ್ತೆ ಭಾರತ ತಂಡದಲ್ಲಿ ಅವಕಾಶ ಪಡೆಯಲಿದ್ದು, ಇಂಗ್ಲೆಂಡ್ ಸರಣಿಗೂ ಮುನ್ನ ಪರಿಸ್ಥಿತಿಗೆ ಹೊಂದಿಕೊಳ್ಳಲು ಭಾರತ ಎ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಧ್ರುವ್ ಜುರೆಲ್ ಮತ್ತು ಇಶಾನ್ ಕಿಶನ್ ಆಸ್ಟ್ರೇಲಿಯಾದಲ್ಲಿ 'ಎ' ತಂಡಕ್ಕಾಗಿ ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾಗಬಹುದು. ಐಪಿಎಲ್​ನಲ್ಲಿ ಯಾವ ತಂಡಗಳು ಪ್ಲೇಆಫ್‌ಗೆ ತಲುಪುತ್ತವೆ ಎಂಬುದರ ಆಧಾರದ ಮೇಲೆ ಆಟಗಾರರ ಆಯ್ಕೆ ನಡೆಯಲಿದೆ. ಯಾರಿಗೆ ತಂಡದಲ್ಲಿ ಅವಕಾಶ ಸಿಗಬಹುದು ಎಂಬುದನ್ನು ಕಾದುನೋಡೋಣ.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಗೆ ಭಾರತ 'ಎ' ಸಂಭಾವ್ಯ ತಂಡ

ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಕರುಣ್ ನಾಯರ್, ಇಶಾನ್ ಕಿಶನ್, ಧ್ರುವ್ ಜುರೆಲ್, ಸಾಯಿ ಕಿಶೋರ್, ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಹರ್ಷಿತ್ ರಾಣಾ, ಮುಕೇಶ್ ಕುಮಾರ್.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.