ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್​ನಲ್ಲಿ ಜಗಳಗಳು ಕಾಮನ್; 2 ವಿವಾದಾತ್ಮಕ ತೀರ್ಪುಗಳಿಗೆ ಅಂಪೈರ್​ ಜತೆಗೆ ಶುಭ್ಮನ್ ಗಿಲ್ ವಾಗ್ವಾದ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್​ನಲ್ಲಿ ಜಗಳಗಳು ಕಾಮನ್; 2 ವಿವಾದಾತ್ಮಕ ತೀರ್ಪುಗಳಿಗೆ ಅಂಪೈರ್​ ಜತೆಗೆ ಶುಭ್ಮನ್ ಗಿಲ್ ವಾಗ್ವಾದ, Video

ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್​ನಲ್ಲಿ ಜಗಳಗಳು ಕಾಮನ್; 2 ವಿವಾದಾತ್ಮಕ ತೀರ್ಪುಗಳಿಗೆ ಅಂಪೈರ್​ ಜತೆಗೆ ಶುಭ್ಮನ್ ಗಿಲ್ ವಾಗ್ವಾದ, VIDEO

ಗುಜರಾತ್ ಟೈಟಾನ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಜಿಟಿ ನಾಯಕ ಶುಭ್ಮನ್ ಗಿಲ್ ಅವರು ಅಂಪೈರ್‌ಗಳೊಂದಿಗೆ ಮಾಡಿದ ವಾಗ್ವಾದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ.

ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್​ನಲ್ಲಿ ಜಗಳಗಳು ಕಾಮನ್; 2 ವಿವಾದಾತ್ಮಕ ತೀರ್ಪುಗಳಿಗೆ ಅಂಪೈರ್​ ಜತೆಗೆ ಶುಭ್ಮನ್ ಗಿಲ್ ವಾಗ್ವಾದ
ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್​ನಲ್ಲಿ ಜಗಳಗಳು ಕಾಮನ್; 2 ವಿವಾದಾತ್ಮಕ ತೀರ್ಪುಗಳಿಗೆ ಅಂಪೈರ್​ ಜತೆಗೆ ಶುಭ್ಮನ್ ಗಿಲ್ ವಾಗ್ವಾದ

ಮೇ 2ರ ಶುಕ್ರವಾರ ಅಹ್ಮಾದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ರೋಮಾಂಚಕ ಗುಜರಾತ್ ಟೈಟಾನ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಜಿಟಿ ನಾಯಕ ಶುಭ್ಮನ್ ಗಿಲ್ ಅವರು ಅಂಪೈರ್‌ಗಳೊಂದಿಗೆ ಮಾಡಿದ ವಾಗ್ವಾದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ. ಅಂಪೈರ್​ ನೀಡಿದ ಎರಡು ತೀರ್ಪುಗಳಿಗೆ ಜಿಟಿ ನಾಯಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ರಿಕೆಟ್ ವಲಯದಲ್ಲೂ ಚರ್ಚೆ ಉಂಟು ಮಾಡಿದೆ. ಇದರಿಂದ ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್​ನಲ್ಲಿ ಜಗಳಗಳು ಕಾಮನ್ ಎನ್ನುತ್ತಿದ್ದಾರೆ ನೆಟ್ಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು.

ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ಅದ್ಭುತ ಪ್ರದರ್ಶನ ನೀಡಿತು. ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಸಾಯಿ ಸುದರ್ಶನ್ 48 ರನ್ ಗಳಿಸಿದರೆ ಗಿಲ್ (76) ಮತ್ತು ಜೋಸ್ ಬಟ್ಲರ್ (64) ತಲಾ ಅರ್ಧಶತಕ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು. 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಹೋದ ವರ್ಷ ಆಟಂ ಬಾಂಬ್ ಸಿಡಿಸುತ್ತಿದ್ದ ಸನ್ ಈಗ ಠುಸ್ ಪಠಾಕಿಯಾಗಿದೆ. 38 ರನ್​ಗಳಿಂದ ಶರಣಾಗಿ ಪ್ಲೇಆಫ್​ ಹಾದಿಯನ್ನು ಬಹುತೇಕ ಮುಗಿಸಿದೆ.

ಗಿಲ್-ಅಂಪೈರ್ ಜೊತೆಗ ವಾಗ್ವಾದ

ಶುಭ್ಮನ್ ಗಿಲ್ ಮತ್ತು ಆನ್​ಫೀಲ್ಡ್ ಅಂಪೈರ್​ಗಳ ಜೊತೆಗೆ ಸುದೀರ್ಘ ವಾಗ್ವಾದ ನಡೆಯಿತು. ಎಲ್​ಬಿಡಬ್ಲ್ಯು ವಿಚಾರವಾಗಿ ಈ ಜಗಳ ಚರ್ಚೆ ಜರುಗಿತು. ಎಸ್‌ಆರ್‌ಎಚ್ 14ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾರ ಕಾಲಿಗೆ ಚೆಂಡು ತಗುಲಿತು. ಆಗ ಜಿಟಿ ಬೌಲರ್ ಪ್ರಸಿದ್ಧ್ ಕೃಷ್ಣ ಮತ್ತು ಫೀಲ್ಡರ್ಸ್​ ಎಲ್‌ಬಿಡಬ್ಲ್ಯೂ ಔಟ್​ಗೆ ಮನವಿ ಮಾಡಿದರು. ಆದರೆ ಅಂಪೈರ್​ ಅದನ್ನು ನಾಟೌಟ್ ಎಂದು ತೀರ್ಪು ಕೊಟ್ಟರು. ಆಗ ಜಿಟಿ ಡಿಆರ್​ಎಸ್​ ಮೊರೆ ಹೋಯಿತು. ಆದಾಗ್ಯೂ, ವಿಮರ್ಶೆಯಲ್ಲಿ ಚೆಂಡು ಎಲ್ಲಿ ಪಿಚ್ ಆಗಿದೆ ಎಂಬುದನ್ನು ತೋರಿಸಲಿಲ್ಲ, , ಕೇವಲ ಇಂಪ್ಯಾಕ್ಟ್ ಮತ್ತು ವಿಕೆಟ್‌ಗಳನ್ನು ತೋರಿಸಿದೆ. ಕೊನೆ ಅಂಪೈರ್ಸ್ ಕಾಲ್ ಎಂದು ನಾಟೌಟ್ ತೀರ್ಮಾನ ಕೊಡಲಾಯಿತು.

ನಾಟೌಟ್ ಎಂದು ತೀರ್ಪು ಕೊಟ್ಟ ಬೆನ್ನಲ್ಲೇ ಬೌಂಡರಿ ಗೆರೆಯಲ್ಲಿದ್ದ ಗಿಲ್ ಕೋಪದಿಂದಲೇ ಅಂಪೈರ್​ ಬಳಿಗೆ ಬಂದರು. ಆಗ ತೀರ್ಪಿನ ಬಗ್ಗೆ ಶುಭ್ಮನ್ ಸರಿಯಾಗಿ ತೋರಿಸಲಿಲ್ಲ ಮತ್ತು ಚೆಂಡು ವಿಕೆಟ್​ಗೆ ತಾಗಿದೆ ಎಂದು ಪರದೆಯ ಮೇಲಿನ ದೃಶ್ಯ ತೋರಿಸುತ್ತಾ ವಾಗ್ವಾದ ನಡೆಸಿದರು. ಮತ್ತೊಂದೆಡೆ ಅಂಪೈರ್ ಸಹ ಉತ್ತರ ಕೊಡುತ್ತಾ ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೂ ಅವರ ಕೋಪ ತಣ್ಣಗಾಗಲಿಲ್ಲ. ಪರಿಣಾಮವಾಗಿ, ಗಿಲ್ ಮತ್ತು ಅಂಪೈರ್ ನಡುವೆ ಸಣ್ಣ ವಾಗ್ವಾದ ನಡೆಯಿತು. ನಂತರ ಅಭಿಷೇಕ್ ಶರ್ಮಾ ಮಧ್ಯಪ್ರವೇಶಿಸಿ ಗಿಲ್​ರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಇದರ ವಿಡಿಯೋ ವೈರಲ್ ಆಗಿದೆ.

ರನ್ ಔಟ್ ವಿವಾದ, ಕೆರಳಿದ ಗಿಲ್

76 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಗಿಲ್, ಹರ್ಷಲ್ ಪಟೇಲ್ ಅವರಿಂದ ರನೌಟ್ ಆದರು. ಇದು ಕೂಡ ವಿವಾದಾತ್ಮಕ ಔಟ್ ತೀರ್ಪು ಆಗಿತ್ತು. ಮೈದಾನದಲ್ಲಿ ಆನ್​ಫೀಲ್ಡ್​ ಅಂಪೈರ್​ಗಳ ಜೊತೆಗೆ ಕಿತ್ತಾಟ ನಡೆಸಲು ಸಾಧ್ಯವಾಗದಿದ್ದರೂ ಬೌಂಡರಿ ಗೆರೆ ಬಳಿಯಿದ್ದ ಆಫ್​ಫೀಲ್ಡ್ ಅಂಪೈರ್​ ಜೊತೆಗೆ ಕಿತ್ತಾಡಿದ್ದಾರೆ. 13ನೇ ಓವರ್​​ನ ಕೊನೆಯ ಎಸೆತದಲ್ಲಿ ಜೋಸ್ ಬಟ್ಲರ್ ಶಾರ್ಟ್​​ ಪೈನ್ ಕಡೆಗೆ ಇನ್​ಸೈಡ್ ಎಡ್ಜ್​ ಆಗಿ ಹೋಗುತ್ತದೆ. ಆಗ ನಾನ್​ಸ್ಟ್ರೈಕರ್ ಗಿಲ್ ವೇಗವಾಗಿ ಓಡಿ ರನ್ ಕದಿಯಲು ಯತ್ನಿಸುತ್ತಾರೆ. ಆದರೆ ಚೆಂಡು ಪಡೆದ ಹರ್ಷಲ್ ಪಟೇಲ್ ಅಷ್ಟೇ ವೇಗವಾಗಿ ರನೌಟ್​ಗೆ ಗುರಿ ಇಡುತ್ತಾರೆ. ವಿಕೆಟ್ ಕೀಪರ್​ ಹೆನ್ರಿಚ್ ಕ್ಲಾಸೆನ್ ಗ್ಲೌಸ್​ಗೆ ತಾಗಿ ಚೆಂಡು ಮುಂದಕ್ಕೆ ಹೋಗಿದೆ.

ಆದರೆ ಗಿಲ್ ಕ್ರೀಸ್​ಗೆ ಬರುವುದಕ್ಕೂ ಮುನ್ನ ಚೆಂಡು ಬೇಲ್ಸ್​ಗೆ ತಗುಲಿದೆಯೇ ಎನ್ನುವುದಕ್ಕೆ ಸಂಬಂಧಿಸಿ ಯಾವುದೇ ಸ್ಪಷ್ಟನೆ ಸಿಗುವುದಿಲ್ಲ. ಹೀಗಾಗಿ, ಅದು ಟಚ್ ಆಂಡ್ ಗೋ ಎನ್ನುವಂತಿದೆ. ಫ್ರೇಮ್ ಟು ಫ್ರೇಮ್ ಪರಿಶೀಲಿಸಿದರೂ ಅದು ಗೊಂದಲದ ಗೂಡಾಗಿ ಕಂಡುಬಂತು. ಗ್ಲೌಸ್​ನಿಂದ ಚೆಂಡು ಬಿಡುಗಡೆಯಾದಾಗ ಚೆಂಡು ಸ್ಟಂಪ್​​​ಗಳಿಗೆ ತುಂಬಾ ಹತ್ತಿರದಲ್ಲಿದ್ದಂತೆ ಕಾಣುತ್ತದೆ. ಆದರೆ ಚೆಂಡು ಪಾಸ್ ಆದ ನಂತರ ಸ್ಟಂಪ್‌ ಬೇಲ್ಸ್ ಎಗರಿದೆ. ಇದು ಸ್ಪಷ್ಟವಾಗಿಯೂ ಕಾಣುತ್ತದೆ. ಮೂರನೇ ಅಂಪೈರ್ ಕಠಿಣ ನಿರ್ಧಾರ ತೆಗೆದುಕೊಂಡು ಔಟ್ ಎಂದು ತೀರ್ಪುಕೊಟ್ಟರು. ಇದು ಗಿಲ್ ಆಕ್ರೋಶಕ್ಕೆ ಕಾರಣವಾಯಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.