ಧೋನಿಯಿಂದಲೂ ಬದಲಾಗದ ಸಿಎಸ್​ಕೆ ಲಕ್, ಚೆನ್ನೈನಲ್ಲೇ 4ನೇ ಸೋಲು, ಪ್ಲೇಆಫ್​ಗೂ​​ ಕಷ್ಟ; ಎಸ್​ಆರ್​ಹೆಚ್​ಗೆ ಸುಲಭ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ಧೋನಿಯಿಂದಲೂ ಬದಲಾಗದ ಸಿಎಸ್​ಕೆ ಲಕ್, ಚೆನ್ನೈನಲ್ಲೇ 4ನೇ ಸೋಲು, ಪ್ಲೇಆಫ್​ಗೂ​​ ಕಷ್ಟ; ಎಸ್​ಆರ್​ಹೆಚ್​ಗೆ ಸುಲಭ ಗೆಲುವು

ಧೋನಿಯಿಂದಲೂ ಬದಲಾಗದ ಸಿಎಸ್​ಕೆ ಲಕ್, ಚೆನ್ನೈನಲ್ಲೇ 4ನೇ ಸೋಲು, ಪ್ಲೇಆಫ್​ಗೂ​​ ಕಷ್ಟ; ಎಸ್​ಆರ್​ಹೆಚ್​ಗೆ ಸುಲಭ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್​ 43ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯವು ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.

ಧೋನಿಯಿಂದಲೂ ಬದಲಾಗದ ಸಿಎಸ್​ಕೆ ಲಕ್, ಚೆನ್ನೈನಲ್ಲೇ 4ನೇ ಸೋಲು, ಪ್ಲೇಆಫ್​ಗೂ​​ ಕಷ್ಟ; ಎಸ್​ಆರ್​ಹೆಚ್​ಗೆ ಸುಲಭ ಗೆಲುವು
ಧೋನಿಯಿಂದಲೂ ಬದಲಾಗದ ಸಿಎಸ್​ಕೆ ಲಕ್, ಚೆನ್ನೈನಲ್ಲೇ 4ನೇ ಸೋಲು, ಪ್ಲೇಆಫ್​ಗೂ​​ ಕಷ್ಟ; ಎಸ್​ಆರ್​ಹೆಚ್​ಗೆ ಸುಲಭ ಗೆಲುವು (PTI)

ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಸನ್​ರೈಸರ್ಸ್​ ಹೈದರಾಬಾದ್ ಸಂಘಟಿತ ಹೋರಾಟದ ಫಲವಾಗಿ ಕೊನೆಗೂ ಜಯದ ನಗೆ ಬೀರಿದೆ. ಮತ್ತೊಂದೆಡೆ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರಿನಲ್ಲಿ ಸತತ 4ನೇ ಸೋಲಿನ ಕಹಿ ಅನುಭವಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಎಸ್​ಆರ್​​ಹೆಚ್​, ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಉಳಿದೈದು ಪಂದ್ಯಗಳನ್ನೂ ಗೆಲ್ಲಬೇಕಿದೆ. ಆದರೆ ಎಂಎಸ್ ಧೋನಿ ನಾಯಕತ್ವ ವಹಿಸಿಕೊಂಡರೂ ಸಿಎಸ್​ಕೆ ಲಕ್ ಬದಲಾಗಿಲ್ಲ. ಚೆನ್ನೈನಲ್ಲೇ ಐದು ಸೋಲಿನ ಜತೆಗೆ ಪ್ಲೇಆಫ್ ಹಾದಿಯೂ ಬಹುತೇಕ ಅಂತ್ಯವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ 43ನೇ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಎಸ್​ಆರ್​​ಹೆಚ್ 5 ವಿಕೆಟ್​​ ಗೆಲುವು ಸಾಧಿಸಿತು. ಇದು ಚೆಪಾಕ್ ಮೈದಾನದಲ್ಲಿ ಚೆನ್ನೈ ಎದುರು ದಾಖಲಿಸಿದ ಮೊದಲು ಜಯ ಇದಾಗಿದೆ. ಹರ್ಷಲ್ ಪಟೇಲ್ (28/4) ಆರ್ಭಟಕ್ಕೆ ತತ್ತರಿಸಿದ ಚೆನ್ನೈ ನಿಗದಿತ 20 ಓವರ್​​ಗಳಲ್ಲಿ 154 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ಇನ್ನೂ 8 ಎಸೆತಗಳನ್ನು ಉಳಿಸಿ 5 ವಿಕೆಟ್​ಗಳ ಜಯಭೇರಿ ಬಾರಿಸಿತು. ಇದೀಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಧೋನಿ ತಂಡವು ಉಳಿದ ಐದು ಪಂದ್ಯ ಗೆದ್ದರೆ 14 ಅಂಕಗಳೊಂದಿಗೆ ಪ್ಲೇಆಫ್​ ಪ್ರವೇಶಿಸಲು ಅವಕಾಶ ಇದೆ.

ಚೆನ್ನೈ 9 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿದ್ದು, 7 ಸೋತಿದೆ. ನಾಲ್ಕರ ಘಟ್ಟಕ್ಕೇರಲು ಉಳಿದ ಪಂದ್ಯಗಳ ಫಲಿತಾಂಶವೂ ನೇರ ಪ್ರಭಾವ ಬೀರುತ್ತದೆ. ಮತ್ತೊಂದೆಡೆ ಎಸ್​ಆರ್​​ಹೆಚ್​ ಆಡಿದ 9ರಲ್ಲಿ 3ಗೆಲುವು, 6 ಸೋತಿದ್ದು 6 ಅಂಕ ಪಡೆದಿದೆ. ಈ ತಂಡವೂ ಉಳಿದ ಐದು ಪಂದ್ಯ ಗೆದ್ದರೆ ಪ್ಲೇಆಫ್​ಗೆ ಸುಲಭವಾಗಿ ಪ್ರವೇಶಿಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಟಾಪ್-6 ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಕೆಳ ಸ್ಥಾನಿ ತಂಡಗಳು ಅಗ್ರ-4ರೊಳಗೆ ಪ್ರವೇಶಿಸಲು ಕಠಿಣ ಹೋರಾಟ ನಡೆಸುವುವುದ ಅಗತ್ಯ. ಮುಂದಿನ ದಿನಗಳಲ್ಲಿ ಇದರ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ.

ಸಿಎಸ್​ಕೆಗೆ ಪಂಚ್ ಕೊಟ್ಟ ಹರ್ಷಲ್

ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್​ಕೆ ಮತ್ತೆ ನಿರಾಸೆ ಮೂಡಿಸಿತು. ಮೊದಲ ಓವರ್​​ನ ಮೊದಲ ಎಸೆತದಲ್ಲೇ ಶೇಕ್ ರಶೀದ್ ನಿರ್ಗಮಿಸಿದರು. ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ನಡೆಸುವ ಮೂಲಕ ಸಿಎಸ್​ಕೆಗೆ ಶಾಕ್ ಕೊಟ್ಟರು. ಬಳಿಕ ಆಯುಷ್ ಮಾತ್ರೆ ಮತ್ತು ಸ್ಯಾಮ್ ಕರನ್ ತಂಡಕ್ಕೆ ಚೇತರಿಕೆ ನೀಡುವ ಯತ್ನಕ್ಕೆ ಕೈ ಹಾಕಿದರು. ಆದರೆ ಕರನ್ 10 ಎಸೆತಗಳಲ್ಲಿ 9 ರನ್ ಗಳಿಸಿ ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು. 30 ರನ್ ಸಿಡಿಸಿದ್ದ ಮಾತ್ರೆಗೆ ಕಮಿನ್ಸ್ ಗೇಟ್​ಪಾಸ್ ಕೊಟ್ಟರು. ರವೀಂದ್ರ ಜಡೇಜಾ 21, ಶಿವಂ ದುಬೆ 12, ದೀಪಕ್ ಹೂಡಾ 22, ಎಂಎಸ್ ಧೋನಿ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಸಿಎಸ್​ಕೆ ಪರ ಮೊದಲ ಪಂದ್ಯವಾಡಿದ ಡೆವಾಲ್ಡ್ ಬ್ರೆವಿಸ್ ಆಕರ್ಷಕ ಇನ್ನಿಂಗ್ಸ್ ಕಟ್ಟಿದರು. 25 ಎಸೆತಗಳಲ್ಲಿ 42 ರನ್ ಗಳಿಸಿದರು. ಇನ್ನು ಎಸ್​ಆರ್​​ಹೆಚ್ ಪರ ಹರ್ಷಲ್ 28 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು.

ಹೈದರಾಬಾದ್​ಗೆ ಸುಲಭ ಗೆಲುವು

ಗುರಿ ಬೆನ್ನಟ್ಟುವ ಅವಧಿಯಲ್ಲಿ ಇನ್ನಿಂಗ್ಸ್​​ನ 2ನೇ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡ ಹೈದರಾಬಾದ್​​ಗೆ ಇಶಾನ್ ಕಿಶನ್ ಆಸರೆಯಾದರು. ಬಳಿಕ ಟ್ರಾವಿಸ್ ಹೆಡ್ ಕೂಡ ರನ್ ಗಳಿಸಲು ಹರಸಾಹಸಪಟ್ಟರು. 19 ರನ್​ಗೆ ಸುಸ್ತಾದರು. ಬಳಿಕ ಹೆನ್ರಿಚ್ ಕ್ಲಾಸೆನ್ 7 ರನ್​​ಗೆ ನಿರ್ಗಮಿಸಿದರು. ಈ ವೇಳೆ ಮಿಂಚಿದ ಇಶಾನ್ ಕಿಶನ್ 44 ರನ್​ಗಳ ಕೊಡುಗೆ ನೀಡಿದರು. ಅನಿಕೇತ್ ವರ್ಮಾ 19 ರನ್​ಗಳ ಕಾಣಿಕೆ ಒದಗಿಸಿಕೊಟ್ಟರು. ಪರಿಣಾಮ ಸಿಎಸ್​ಕೆ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಕೊನೆಯಲ್ಲಿ ಕಮಿಂದು ಮೆಂಡೀಸ್ 32, ನಿತೀಶ್ ಕುಮಾರ್​ ರೆಡ್ಡಿ 19 ರನ್ ಗಳಿಸಿ ಅಜೇಯರಾದರು. ಈ ಜೋಡಿಯ ಅದ್ಭುತ ಫಲವಾಗಿ ಹೈದರಾಬಾದ್ 18.4 ಎಸೆತಗಳಲ್ಲೇ ಗೆಲುವಿನ ನಗೆ ಬೀರಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.