140 ಕಿಮೀ ವೇಗದಲ್ಲಿ ಬೌಲ್ ಮಾಡಿದರೆ ಜೊಲ್ಲು ಸುರಿಸುತ್ತೇವೆ, ಆದರೆ ಅವಕಾಶ ಏಕೆ ಕೊಡಲ್ಲ; ಸುನಿಲ್ ಗವಾಸ್ಕರ್ ಪ್ರಶ್ನೆ
ಕನ್ನಡ ಸುದ್ದಿ  /  ಕ್ರಿಕೆಟ್  /  140 ಕಿಮೀ ವೇಗದಲ್ಲಿ ಬೌಲ್ ಮಾಡಿದರೆ ಜೊಲ್ಲು ಸುರಿಸುತ್ತೇವೆ, ಆದರೆ ಅವಕಾಶ ಏಕೆ ಕೊಡಲ್ಲ; ಸುನಿಲ್ ಗವಾಸ್ಕರ್ ಪ್ರಶ್ನೆ

140 ಕಿಮೀ ವೇಗದಲ್ಲಿ ಬೌಲ್ ಮಾಡಿದರೆ ಜೊಲ್ಲು ಸುರಿಸುತ್ತೇವೆ, ಆದರೆ ಅವಕಾಶ ಏಕೆ ಕೊಡಲ್ಲ; ಸುನಿಲ್ ಗವಾಸ್ಕರ್ ಪ್ರಶ್ನೆ

Sunil Gavaskar on Sandeep Sharma: ಚೆನ್ನೈನಲ್ಲಿ ನಡೆದ ಐಪಿಎಲ್ 2024 ಕ್ವಾಲಿಫೈಯರ್ 2ರಲ್ಲಿ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ನಂತರ ಆರ್​​ಆರ್​ ಬೌಲರ್ ಸಂದೀಪ್ ಶರ್ಮಾ ಅವರನ್ನು ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

140 ಕಿಮೀ ವೇಗದಲ್ಲಿ ಬೌಲ್ ಮಾಡಿದರೆ ಜೊಲ್ಲು ಸುರಿಸುತ್ತೇವೆ, ಆದರೆ ಅವಕಾಶ ಏಕೆ ಕೊಡಲ್ಲ; ಸುನಿಲ್ ಗವಾಸ್ಕರ್ ಪ್ರಶ್ನೆ
140 ಕಿಮೀ ವೇಗದಲ್ಲಿ ಬೌಲ್ ಮಾಡಿದರೆ ಜೊಲ್ಲು ಸುರಿಸುತ್ತೇವೆ, ಆದರೆ ಅವಕಾಶ ಏಕೆ ಕೊಡಲ್ಲ; ಸುನಿಲ್ ಗವಾಸ್ಕರ್ ಪ್ರಶ್ನೆ

ಯಾವುದೇ ಬೌಲರ್​​ 140 ಕಿಲೋ ಮೀಟರ್​ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡಿದರೆ ನಾವು ಜೊಲ್ಲು ಸುರಿಸಿಕೊಂಡು ನೋಡುತ್ತೇವೆ, ವ್ಹಾವ್ ಎಂದು ಉದ್ಘರಿಸುತ್ತೇವೆ. ಆದರೆ ಅಂತಹ ಬೌಲರ್​​ಗಳಿಗೆ ಭಾರತ ತಂಡದಲ್ಲಿ ಅವಕಾಶ ಏಕೆ ಕೊಡುವುದಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ವೇಗಿ ಸಂದೀಪ್ ಶರ್ಮಾ ಪರ ಬ್ಯಾಟ್ ಬೀಸಿದ ಸುನಿಲ್ ಗವಾಸ್ಕರ್ (Sunil Gavaskar on Sandeep Sharma), ಭಾರತದ ಆಯ್ಕೆದಾರರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಆರಂಭಿಕ ಎಡಗೈ ಬ್ಯಾಟ್ಸ್​ಮನ್​​ ಟ್ರಾವಿಸ್ ಹೆಡ್ ಅವರನ್ನು ಜಾಣತನದಿಂದ ಔಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಬೌಲರ್ ಸಂದೀಪ್ ಶರ್ಮಾ ಅವರ ಬೌಲಿಂಗ್​ ವಿಧಾನ ಮತ್ತು ಮೊದಲ 3 ಓವರ್​ಗಳಲ್ಲಿ ಕೇವಲ 19 ರನ್​​ಗಳನ್ನು ಬಿಟ್ಟುಕೊಟ್ಟಿದ್ದಕ್ಕೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಗೆ ಸಂಬಂಧಿಸಿ ಚರ್ಚೆಗಳು ಆರಂಭಗೊಂಡಾಗ ಆರ್​ಆರ್​ ಪರ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದ ಸಂದೀಪ್ ಶರ್ಮಾಗೂ ಮಣೆ ಹಾಕಬೇಕೆಂದು ಕ್ರಿಕೆಟ್ ತಜ್ಞರು ಮತ್ತು ಮಾಜಿ ಕ್ರಿಕೆಟರ್​ಗಳು ಬಿಸಿಸಿಐಗೆ ಸಲಹೆ ನೀಡಿದ್ದರು. ಪವರ್​ಪ್ಲೇನಲ್ಲಿ ಪ್ರಭಾವಶಾಲಿ ಅಂಕಿ-ಅಂಶಗಳನ್ನು ಕಾಪಾಡಿಕೊಂಡು ಸ್ಲಾಗ್ ಓವರ್​​ಗಳಲ್ಲಿ ಹಳೆಯ ಚೆಂಡಿನೊಂದಿಗೆ ಸುಧಾರಿತ ಪ್ರದರ್ಶನ ನೀಡಿದ್ದರು.

ಆದರೂ ವೇಗಿಯನ್ನು ಕಡೆಗಣಿಸಲಾಯಿತು. ಭಾರತ ತಂಡ ಪ್ರಕಟವಾದಾಗಲೂ ಆಯ್ಕೆ ಮಾಡದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಮಾತನಾಡಿದ ಗವಾಸ್ಕರ್, ಬಿಸಿಸಿಐ ಆಯ್ಕೆದಾರರು ಸಂದೀಪ್ ಬಗ್ಗೆ ಗಮನ ಹರಿಸಬೇಕೆಂದು ಬಯಸಿದ್ದಾರೆ. 31 ವರ್ಷದ ಸಂದೀಪ್ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಗವಾಸ್ಕರ್​ ಹೇಳಿದ್ದಾರೆ. ಆತ ಅತ್ಯಂತ ಬುದ್ಧಿವಂತಿಕೆ ಬೌಲರ್​ ಎಂದು ಗುಣಗಾನ ಮಾಡಿದ್ದಾರೆ.

ಸಂದೀಪ್​ ಶರ್ಮಾಗೇಕಿಲ್ಲ ಅವಕಾಶ ಎಂದು ಗವಾಸ್ಕರ್ ಪ್ರಶ್ನೆ

'ಯಾರಾದರೂ 140 ಕಿಲೋ ಮೀಟರ್​ಗಿಂತ ಹೆಚ್ಚಿನ ಬೌಲಿಂಗ್ ಮಾಡಿದಾಗಲೆಲ್ಲಾ, ನಾವು ಜೊಲ್ಲು ಸುರಿಸಲು ಪ್ರಾರಂಭಿಸುತ್ತೇವೆ. ಆದರೆ ಯಾರೂ ಅಂತಹ ಬೌಲರ್​ ಅನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡುವುದಿಲ್ಲ. ಆತನ ಬಗ್ಗೆ ಚರ್ಚೆಯೂ ನಡೆಸುವುದಿಲ್ಲ. ಸಂದೀಪ್​ ಶರ್ಮಾ ನಿಧಾನಗತಿಯ ಬೌಲಿಂಗ್​​ ನೋಡಿ, ಅದು ಎಷ್ಟು ಬುದ್ಧಿವಂತಿಕೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಆಯ್ಕೆದಾರರಿಗೆ ತಿಳಿಸಿದ್ದಾರೆ.

ಐಪಿಎಲ್ 2024 ರಲ್ಲಿ ರಾಜಸ್ಥಾನ್ ಪರ 10 ಪಂದ್ಯಗಳಲ್ಲಿ 11 ವಿಕೆಟ್​ಗಳನ್ನು ಪಡೆದ ಸಂದೀಪ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂದು ಬಿಸಿಸಿಐಗೆ ಗವಾಸ್ಕರ್ ಕರೆ ಕೊಟ್ಟಿದ್ದಾರೆ. ಸಂದೀಪ್ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇಲ್ಲ. ಏಕೆಂದರೆ ಆಯ್ಕೆದಾರರು ಈ ವರ್ಷದ ಜೂನ್​ನಲ್ಲಿ ನಡೆಯುವ ಐಸಿಸಿ ಟೂರ್ನಿಯ ನಂತರ ಮುಂದಿನ ಟಿ20 ವಿಶ್ವಕಪ್​​ಗೆ ಯುವ ತಂಡವನ್ನು ನಿರ್ಮಿಸಲು ಬಿಸಿಸಿಐ ನೋಡುತ್ತಿದೆ.

ಸಿಕ್ಕ ಅವಕಾಶದಲ್ಲಿ ಕೈಚೆಲ್ಲಿದ್ದ ಸಂದೀಪ್​

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಮೊದಲ ಮೂರು ಋತುಗಳಲ್ಲಿ (2013-15), ಆಗ ಪಂಜಾಬ್ ಕಿಂಗ್ಸ್​​ ಭಾಗವಾಗಿದ್ದ ಸಂದೀಪ್ ಶರ್ಮಾ 39 ವಿಕೆಟ್​ ಪಡೆದಿದ್ದರು. ಉತ್ತಮ ಪ್ರದರ್ಶನದೊಂದಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ವೇಗಿ, ಜಿಂಬಾಬ್ವೆ ವಿರುದ್ಧ ಆಡಿದ 2 ಟಿ20 ಪಂದ್ಯಗಳಲ್ಲಿ ನಿರೀಕ್ಷೆಗೆ ಪ್ರದರ್ಶನ ನೀಡಲು ವಿಫಲರಾದರು. ಸಾಕಷ್ಟು ರನ್​ ಸೋರಿಕೆ ಮಾಡಿದರು.

ತದನಂತರ ಇಂಜುರಿಗೆ ತುತ್ತಾದ ಸಂದೀಪ್ ಅವರನ್ನು ತಂಡದಿಂದ ಕೈಬಿಡಲಾಯಿತು. ಈ ಗಾಯವು ಸುಮಾರು ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ದೂರವಿಟ್ಟಿತು. ಗಾಯದ ನಂತರ ಅವರು ಹೆಚ್ಚು ಪ್ರಬುದ್ಧ ಮತ್ತು ತಂತ್ರಗಾರಿಕೆಯ ಬೌಲರ್ ಆಗಿ ಮರಳಿದರೂ ಭಾರತ ತಂಡಕ್ಕೆ ಎಂದೂ ಅವಕಾಶ ಪಡೆಯಲಿಲ್ಲ. ಪ್ರಸ್ತುತ ಟಿ20 ವಿಶ್ವಕಪ್​ಗೆ ಆಯ್ಕೆ ಆಗದಿದ್ದರೂ ದ್ವಿಪಕ್ಷೀಯ ಸರಣಿಗಳಿಗಾದರೂ ಅವಕಾಶ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

 

 

Whats_app_banner