ಹಿಂದಿನ ಜನ್ಮದಲ್ಲಿ ಸನ್ಯಾಸಿಯಾಗಿದ್ರಂತೆ ಸಾಹಸಸಿಂಹ ವಿಷ್ಣುವರ್ಧನ್‌; ರಾಜ್‌ಕುಮಾರ್‌ ಜನ್ಮ ರಹಸ್ಯವೂ ಬಯಲು
ಕನ್ನಡ ಸುದ್ದಿ  /  ಮನರಂಜನೆ  /  ಹಿಂದಿನ ಜನ್ಮದಲ್ಲಿ ಸನ್ಯಾಸಿಯಾಗಿದ್ರಂತೆ ಸಾಹಸಸಿಂಹ ವಿಷ್ಣುವರ್ಧನ್‌; ರಾಜ್‌ಕುಮಾರ್‌ ಜನ್ಮ ರಹಸ್ಯವೂ ಬಯಲು

ಹಿಂದಿನ ಜನ್ಮದಲ್ಲಿ ಸನ್ಯಾಸಿಯಾಗಿದ್ರಂತೆ ಸಾಹಸಸಿಂಹ ವಿಷ್ಣುವರ್ಧನ್‌; ರಾಜ್‌ಕುಮಾರ್‌ ಜನ್ಮ ರಹಸ್ಯವೂ ಬಯಲು

ಡಾ ರಾಜ್‌ಕುಮಾರ್‌ ಮತ್ತು ಡಾ ವಿಷ್ಣುವರ್ಧನ್‌ ಅವರ ಪೂರ್ವ ಜನ್ಮದಲ್ಲಿ ಏನಾಗಿದ್ದರು ಎಂಬುದನ್ನು ನಟ, ನಿರೂಪಕ ಮಾಸ್ಟರ್‌ ಆನಂದ್‌ ಹೇಳಿಕೊಂಡಿದ್ದಾರೆ. ಈ ಇಬ್ಬರು ದಂತಕಥೆಗಳ ಜನ್ಮಾಂತರದ ರಹಸ್ಯದ ಬಗ್ಗೆ ವಿನಯ್‌ ಗುರೂಜಿ ಬಳಿ ಕೇಳಿದ್ದರಂತೆ ಆನಂದ್.‌

ಹಿಂದಿನ ಜನ್ಮದಲ್ಲಿ ಋಷಿಯಾಗಿ ಹುಟ್ಟಿದ್ದರಂತೆ ವಿಷ್ಣುವರ್ಧನ್‌, ಅಣ್ಣಾವ್ರ ಪೂರ್ವ ಜನ್ಮದ ರಹಸ್ಯವೂ ಬಯಲು
ಹಿಂದಿನ ಜನ್ಮದಲ್ಲಿ ಋಷಿಯಾಗಿ ಹುಟ್ಟಿದ್ದರಂತೆ ವಿಷ್ಣುವರ್ಧನ್‌, ಅಣ್ಣಾವ್ರ ಪೂರ್ವ ಜನ್ಮದ ರಹಸ್ಯವೂ ಬಯಲು

ಜನ್ಮ, ಪುನರ್ಜನ್ಮ ಹೀಗೆ ಹಿಂದಿನ ಪೂರ್ವಾಪರಗಳ ಬಗ್ಗೆ ಇಂದಿಗೂ ಜನರಲ್ಲಿ ನಂಬಿಕೆ ಉಳಿದಿದೆ. ಜನ ಅದನ್ನು ನಂಬುತ್ತಾರೆ. ಅದರಲ್ಲೂ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳ ಕುರಿತ ಜನ್ಮಾಂತರದ ಕಥೆಗಳು ಕೇಳಿಬರುತ್ತಲೇ ಇರುತ್ತವೆ. ಇದೀಗ ಡಾ. ರಾಜ್‌ಕುಮಾರ್‌ ಮತ್ತು ಡಾ. ವಿಷ್ಣುವರ್ಧನ್‌ ಅವರ ಪೂರ್ವ ಜನ್ಮದ ಬಗ್ಗೆ ನಟ, ನಿರೂಪಕ ಮಾಸ್ಟರ್‌ ಆನಂದ್‌ ಮಾತನಾಡಿದ್ದಾರೆ. ರ್ಯಾಪಿಡ್‌ ರಶ್ಮಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನಗಳಲ್ಲಿ ಈ ಬಗ್ಗೆ ತಮಗೆ ಗೊತ್ತಿದ್ದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಣ್ಣಾವ್ರು ಮತ್ತು ಸಾಹಸ ಸಿಂಹನ ಕಳೆದ ಜನ್ಮದ ಬಗೆಗಿನ ಅಚ್ಚರಿಯನ್ನು ಮಾಸ್ಟರ್‌ ಆನಂದ್‌ ಅವರಿಗೆ ವಿನಯ್‌ ಗುರೂಜಿ ಹೇಳಿದ್ದರಂತೆ.

ಅಣ್ಣಾವ್ರು ಎಷ್ಟು ಚೆನ್ನಾಗಿ ಬದುಕಿದ್ರು. ಯಾವುದೋ ಒಂದು ಶಕ್ತಿ ನನಗೆ ಈ ರೀತಿ ಮಾಡಿಸ್ತಿದೆ ಅನ್ನೋರು. ಹೇಗೆ ಈ ಜ್ಞಾನ ಬಂತು ಅಂತ ನಾನು ಒಮ್ಮೆ ವಿನಯ್‌ ಗುರೂಜಿ ಅವರ ಬಳಿ ನಾನಿದ್ದನ್ನು ಕೇಳಿದೆ. ನಮ್ಮ ಮಟ್ಟಿಗೆ ಅವರೊಬ್ಬ ಮನುಷ್ಯನಾಗಿ ಕಾಣಬಹುದು. ಆದರೆ, ಅವರು ರಾಮಕೃಷ್ಣ ಪರಮಹಂಸರ ಏಳನೇ ಶಿಷ್ಯರು ಎಂದರು. ಈಗಾಗಲೇ ಸಾಕಷ್ಟು ಮಂದಿ ಸಂದರ್ಶನಗಳಲ್ಲಿ ರಾಜ್‌ಕುಮಾರ್‌, ಪರಮಹಂಸರ ಶಿಷ್ಯರು ಎಂದು ಹೇಳಿದ್ದಾರೆ. ಆದರೆ, ಇಲ್ಲಿ ಆ ಕ್ಷಣದ ಬಗ್ಗೆ ವಿನಯ್‌ ಗುರೂಜಿ ಹೇಳಿದ್ರು.

ಕಲೆಯಲ್ಲಿಯೇ ಬದುಕಬೇಕೆಂದಿದ್ದರು ರಾಜ್‌ಕುಮಾರ್

ಅಣ್ಣಾವ್ರ ಮನಸನ್ನು ಅರಿತ ರಾಮಕೃಷ್ಣ ಪರಮಹಂಸರು, ಅಣ್ಣಾವ್ರಿಗೆ ಕೇಳ್ತಾರೆ, ಏನು ಬೇಕು ನಿನಗೆ? ಅಂತ. ಆಗ ಕಲೆಯಲ್ಲಿ ಮುಂದೆ ಬರಬೇಕು ಅನ್ನೋ ಆಸೆ ನನಗೆ ಎಂದು ರಾಜ್‌ಕುಮಾರ್‌ ಕೇಳುತ್ತಾರೆ. ಅದಕ್ಕೆ, ಆಗ್ತಿಯಾ ಹೋಗು.. ಅಷ್ಟೇ ಅದರ ಮೇಲೆ ಪರಮಹಂಸರು ಏನೂ ಮಾತನಾಡಿಲ್ಲ. ಅದಾದ ಮೇಲೆ ಈ ಜನ್ಮಕ್ಕೆ ಬಂದ ಬಳಿಕ, ಅವರಿಗಾಗಿ ಎಂಥ ರಂಗ ಮಂಚ ರೆಡಿಯಾಯ್ತು? ಆ ವೇದಿಕೆ ಹೇಗೆ ಸಜ್ಜಾಯ್ತು ನೋಡಿ, ಎಂಥ ಕಥೆಗಳು, ಎಂಥೆಂಥ ನಿರ್ದೇಶಕರು. ಎಂಥೆಂಥ ಕಥೆಗಳು ಸೃಷ್ಟಿಯಾದವು. ಅವರು ಬಂದಂಥ ಕಾಲಘಟ್ಟ, ಆ ಸಮಯ... ಎಲ್ಲವೂ ಕೂಡಿ ಬಂತು" ಎಂದು ವಿನಯ್‌ ಗುರೂಜಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ ಮಾಸ್ಟರ್‌ ಆನಂದ್.‌

ವಿಷ್ಣುವರ್ಧನ್‌ ಏನಾಗಿದ್ದರು?

"ಆ ಕಾರಣಕ್ಕೋ ಏನೋ, ಯಾವುದೋ ಶಕ್ತಿ ಗೊತ್ತಿಲ್ಲ, ನನ್ನನ್ನು ಕರೆದುಕೊಂಡು ಹೋಗುತ್ತಿದೆ. ಇನ್ನೂ ಇದೆ ನಡೆಯೋ ಮಂಕೆ ಎನ್ನುತ್ತಿದ್ದರು. ಈ ವಿಚಾರ ಅವರಿಗೆ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಅದೇ ರೀತಿ ವಿಷ್ಣುವರ್ಧನ್‌ ಅವರದ್ದೂ ಹಾಗೆಯೇ. ಅವರು ಈ ಹಿಂದಿನ ಜನ್ಮದಲ್ಲಿ ಋಷಿಯಾಗಿ ಹುಟ್ಟಿದವರು. ಈ ವಿಚಾರವನ್ನ ಅನಿರುದ್ಧಗೆ ಮತ್ತು ಭಾರತಿ ಅಮ್ಮನಿಗೂ ಹೇಳಿದ್ದರು. ಆಶ್ರಮಕ್ಕೆ ಬಂದಾಗ ಹೇಳಿದ್ದರು. ನಿಮ್ಮ ಯಜಮಾನ್ರು ಮಹಾತಪಸ್ವಿ ಎಂದು ಭಾರತೀ ಅಮ್ಮನಿಗೆ ಹೇಳಿದ್ದರು. ಯಾವ ಋಷಿ ಎಂಬುದು ಗೊತ್ತಿಲ್ಲ. ಈ ಆತ್ಮದ ಪಯಣ ಇದೆಯಲ್ಲ, ಅದರ ಒಂದೇ ಒಂದು ಆಸೆ ಇದ್ದರೂ ಅದನ್ನು ಮುಗಿಸಿಕೊಂಡು ಬಾ ಎಂದು ಕಳಿಸುತ್ತಂತೆ" ಎಂದಿದ್ದಾರೆ.

ಅವರಲ್ಲೊಬ್ಬರು ಅಣ್ಣಾವ್ರೇ..

"ನಾನು ಒಂದಿನ ಗೂಗಲ್‌ನಲ್ಲಿ ರಾಮಕೃಷ್ಣ ಪರಮಹಂಸರ ಶಿಷ್ಯಂದಿರ ಬಗ್ಗೆ ಸರ್ಚ್‌ ಮಾಡಿದೆ. ಆ ಪೈಕಿ ವಿವೇಕಾನಂದರ ಬಗ್ಗೆ ಎಲ್ಲರಿಗೂ ಗೊತ್ತು. ಇನ್ನೊಂದಿಷ್ಟು ಮಂದಿಯ ಹೆಸರುಗಳು ಬಂದವು. ಆ ಪೈಕಿ ಅಣ್ಣಾವ್ರ ಹುಟ್ಟಿಗೂ (1929) ಮುನ್ನ, ಪರಮಹಂಸರ ಕೆಲ ಶಿಷ್ಯರು 1923ರಲ್ಲಿ, 1925, 1926ರಲ್ಲಿ ಹೀಗೆ ಸಾವನ್ನಪ್ಪಿದ್ದರು. ಹಾಗೆ ನಿಧನರಾದವರಲ್ಲಿ ಒಬ್ಬರು ರಾಜ್‌ಕುಮಾರ್‌ ಆಗಿ ಹುಟ್ಟಿದರು ಎಂದು ನಾನು ಹೇಳುತ್ತೇನೆ. ಆದರೆ ಇವರೇ ಅವರು ಅಂತ ಹೇಳೋಕೆ ಆಗಲ್ಲ" ಎಂದಿದ್ದಾರೆ ಮಾಸ್ಟರ್‌ ಆನಂದ್‌ ಹೇಳಿಕೊಂಡಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.