Kaniha Leg Injury: ಕಾಲಿಗೆ ಗಂಭೀರ ಗಾಯ, ವಾಕರ್ ಸಹಾಯದಿಂದ ನಡೆಯುತ್ತಿರುವ 'ಅಣ್ಣಾವ್ರು' ಸಿನಿಮಾ ನಟಿ!
ತಾವು ವಾಕರ್ ಹಿಡಿದು ನಡೆಯುತ್ತಿರುವ ಫೋಟೋವನ್ನು ಕನಿಹಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ಒಂದು ವಾರ ಕಳೆಯಿತು, ಸುಧಾರಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಕಾಲ ಬೇಕಾಗುತ್ತದೆ'' ಎಂದು ಕನಿಹಾ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್, ತಾವು ಈಗ ಯಾರ ಸಪೋರ್ಟ್ ಇಲ್ಲದೆ ನಡೆಯುತ್ತಿದ್ದೇನೆ, 2 ವರ್ಷಗಳ ಹಿಂದೆ ಜರುಗಿದ ಅಪಘಾತದಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಮತ್ತೊಬ್ಬ ನಟಿ ಕೂಡಾ ಇದೇ ಪರಿಸ್ಥಿತಿಯಲ್ಲಿದ್ದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹೆಲ್ತ್ ಅಪ್ಡೇಟ್ ನೀಡಿದ್ದಾರೆ.
ದರ್ಶನ್ ಜೊತೆ ಅಣ್ಣಾವ್ರು, ಸುದೀಪ್ ಜೊತೆ ಸೈ ಹಾಗೂ ಬಾಲಾಜಿ ರವಿಚಂದ್ರನ್ ಜೊತೆ ರಾಜಕುಮಾರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಕನಿಹಾ ನಿಮಗೆ ನೆನಪಿರಬಹುದು. ಕೆಲವು ದಿನಗಳಿಂದ ಕನಿಹಾ ಕಾಲಿನ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರು ಲೆಗ್ ಬೂಟ್ಸ್ ಧರಿಸಿ ವಾಕರ್ ಸಹಾಯದಿಂದ ನಡೆಯುತ್ತಿದ್ದಾರೆ. ತಾವು ವಾಕರ್ ಹಿಡಿದು ನಡೆಯುತ್ತಿರುವ ಫೋಟೋವನ್ನು ಕನಿಹಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ಒಂದು ವಾರ ಕಳೆಯಿತು, ಸುಧಾರಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಕಾಲ ಬೇಕಾಗುತ್ತದೆ'' ಎಂದು ಕನಿಹಾ ಬರೆದುಕೊಂಡಿದ್ದಾರೆ. ಕನಿಹಾ ಪೋಸ್ಟ್ಗೆ ಜನ ಸಾಮಾನ್ಯರು, ಸೆಲಬ್ರಿಟಿಗಳು ಕಮೆಂಟ್ ಮಾಡಿ ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ವಿಶ್ ಮಾಡುತ್ತಿದ್ದಾರೆ.
ಕನಿಹಾ ಮೂಲ ಹೆಸರು ದಿವ್ಯಾ ವೆಂಕಟಸುಬ್ರಮನಿಯನ್. ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಈ ಚೆಲುವೆ 2002ರಲ್ಲಿ ಚಿತ್ರರಂಗಕ್ಕೆ ಬಂದರು. ಕನ್ನಡ , ತಮಿಳು ಹೊರತುಪಡಿಸಿದರೆ ಕನಿಹಾ ಮಲಯಾಳಂ ಭಾಷೆಗಳಲ್ಲಿ ಹೆಚ್ಚು ನಟಿಸಿದ್ದಾರೆ. ಕನಿಹಾ ಡಬ್ಬಿಂಗ್ ಆರ್ಟಿಸ್ಟ್, ಹಿನ್ನೆಲೆ ಗಾಯಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಕೂಡಾ ಆಕೆ ಗುರುತಿಸಿಕೊಂಡಿದ್ದಾರೆ. 2008 ರಲ್ಲಿ ಕನಿಹಾ, ಶ್ಯಾಮ್ ರಾಧಾಕೃಷ್ಣನ್ ಎಂಬುವರನ್ನು ಮದುವೆಯಾದರು. ಈ ದಂಪತಿಗೆ ಸಾಯಿ ರಿಷಿ ಎಂಬ 13 ವರ್ಷದ ಮಗ ಇದ್ಧಾನೆ. ಮದುವೆ ನಂತರ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿ ಕೆಲವು ದಿನಗಳ ಕಾಲ ಯುಎಸ್ನಲ್ಲಿ ನೆಲೆಸಿದ್ದ ಕನಿಹಾ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳು
ಟಾಲಿವುಡ್ ಹಿರಿಯ ಸ್ಟಾರ್ ನಟನೊಂದಿಗೆ ಕೈ ಜೋಡಿಸಿದ ಶ್ರೀಲೀಲಾ.. ಚಿತ್ರದಲ್ಲಿ ಆಕೆ ಮಾಡ್ತಿರೋದು ಯಾವ ಪಾತ್ರ?
ಸದ್ಯಕ್ಕೆ ಶ್ರೀಲೀಲಾ ತೆಲುಗಿನ ಹೊಸ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಅದೂ ಕೂಡಾ ಶ್ರೀಲೀಲಾ, ತೆಲುಗು ಚಿತ್ರರಂಗದ ಹಿರಿಯ ಸ್ಟಾರ್ ನಟನೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸುದ್ದಿಯನ್ನು ನಿರ್ದೇಶಕ ಅನಿಲ್ ರಾವಿಪುಡಿ ತಮ್ಮ ಟ್ವಿಟ್ಟರ್ನಲ್ಲಿ ಕನ್ಫರ್ಮ್ ಮಾಡಿದ್ದಾರೆ. ಇದು ಶ್ರೀಲೀಲಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಫೋಟೋದಲ್ಲಿ ಶ್ರೀಲೀಲಾ, ಆ ಸ್ಟಾರ್ ನಟನ ಕೈ ಹಿಡಿದು ಥಂಬ್ ಕೊಟ್ಟಿದ್ದಾರೆ. ಜೊತೆಗೆ ಕಣ್ಣು ಹೊಡೆಯವ ಪೋಸ್ ನೀಡಿದ್ದಾರೆ. ಶ್ರೀಲೀಲಾ ಹೊಸ ಚಿತ್ರದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಯಶಸ್ಸಿನ ಹಾದಿಯಲ್ಲಿ ವಾಮಾಚಾರ ಹಿನ್ನೆಲೆ ಕಥೆ ಹೊಂದಿರುವ 'ಸಕೂಚಿ'
ಅಶೋಕ್ ಚಕ್ರವರ್ತಿ ನಿರ್ದೇಶನದಲ್ಲಿ ತ್ರಿವಿಕ್ರಮ್ ಹಾಗೂ ಡಯಾನ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಸಕೂಚಿ' ಸಿನಿಮಾ ಫೆಬ್ರವರಿ 17 ರಂದು ತೆರೆ ಕಂಡಿತ್ತು. ಇದೀಗ ಈ ಸಿನಿಮಾ 25 ದಿನಕ್ಕೆ ಕಾಲಿಟ್ಟಿದೆ. ಇದು ಚಿತ್ರತಂಡಕ್ಕೆ ಖುಷಿ ನೀಡಿದ್ದು ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ಅರ್ಪಿಸಿತು. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಒತ್ತಿ.