Annayya Serial: ವೀರಭದ್ರನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ ಶಿವು ತಾಯಿ; ಗೊಂದಲದ ಬದುಕಲ್ಲಿ ಪಾರು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ವೀರಭದ್ರನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ ಶಿವು ತಾಯಿ; ಗೊಂದಲದ ಬದುಕಲ್ಲಿ ಪಾರು

Annayya Serial: ವೀರಭದ್ರನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ ಶಿವು ತಾಯಿ; ಗೊಂದಲದ ಬದುಕಲ್ಲಿ ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವುಗೆ ತನ್ನ ತಾಯಿ ಏನಾಗಿದ್ದಾಳೆ? ಈಗ ಎಲ್ಲಿದ್ದಾಳೆ ಎಂಬ ಯಾವ ಮಾಹಿತಿಯೂ ಇದ್ದಂತಿಲ್ಲ. ಹೀಗಿರುವಾಗ ವೀರಭದ್ರ ಎಲ್ಲವನ್ನೂ ಅರಿತುಕೊಂಡು ಮತ್ತೊಂದು ಹೆಜ್ಜೆ ಮುಂದಿಡುತ್ತಿದ್ದಾನೆ.

ವೀರಭದ್ರನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ ಶಿವು ತಾಯಿ
ವೀರಭದ್ರನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ ಶಿವು ತಾಯಿ

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ತುಂಬಾ ನೋವಿನಲ್ಲಿದ್ದಾಳೆ ಎಂದು ಶಿವುಗೆ ಗೊತ್ತಾಗಿದೆ, ಅವಳಿಗೆ ಸತ್ಯದ ಅರಿವಾಗಲಿ ಎಂದು ಅವನು ಬಯಸುತ್ತಿದ್ದಾನೆ. ಆದರೆ ಪಾರು ಈಗ ಮೆಡಿಕಲ್ ಕ್ಯಾಂಪ್‌ಗೆ ಹೋಗು ಎಂದರೆ ಯಾಕೆ ಹೋಗುತ್ತಿಲ್ಲ ಎಂದು ಅವನಿಗೆ ಅನುಮಾನ ಬಂದಂತಿದೆ. ಅವಳ ಗೆಳತಿ ಕಾಲ್ ಮಾಡಿ ನೀನೂ ನಮ್ಮ ಜೊತೆ ಬಂದ್ರೆ ಚೆನ್ನಾಗಿರುತ್ತದೆ ಎಂದು ಹೇಳಿದ್ಧಾಳೆ. ಅದನ್ನು ಕೇಳಿದರೂ ಮೊದಲು ಪಾರುಗೆ ಹೋಗುವ ಮನಸಾಗುವುದಿಲ್ಲ. ಆದರೆ ನಂತರದಲ್ಲಿ ಅನುಮಾನ ಬಂದು ಶಿವು ಹೇಳುತ್ತಾನೆ. ನಿನಗೆ ಹೇಗಂದ್ರೂ ಸಿದ್ದಾರ್ಥ್‌ನನ್ನು ನೋಡಬೇಕಲ್ಲ ಹೋಗು ಎಂದು ಹೇಳುತ್ತಾನೆ.

ಆಗ ಪಾರು ಅವನ ಮಾತನ್ನು ನಂಬಿ ಹೌದು ನನಗೆ ಈ ರೀತಿ ಉಪಾಯ ಹೊಳೆದಿರಲಿಲ್ಲ ಎಂದುಕೊಂಡು ಹೋಗಲು ರೆಡಿಯಾಗುತ್ತಾಳೆ. ಆಗ ಶಿವು ಸಮ್ಮತಿ ಸೂಚಿಸುತ್ತಾನೆ. ಆ ನಂತರದಲ್ಲಿ ಇತ್ತ ವೀರಭದ್ರ ಶಿವು ತಾಯಿಗೆ ತೊಂದರೆ ಕೊಡಲು ಹೋಗುತ್ತಾನೆ. ಶಿವು ತಾಯಿ ಸನ್ನಡತೆಯ ಆಧಾರದ ಮೇಲೆ ಈ ಬಾರಿ ಜೈಲಿನಿಂದ ಬಿಡುಗಡೆ ಆಗುತ್ತಾಳೆ ಎಂಬ ಸುದ್ದಿ ಕೇಳಿ ಅವನು ಹೋಗಿರುತ್ತಾನೆ. ಅಲ್ಲಿಗೆ ಹೋಗಿ “ನೀನು ಈ ಬಾರಿ ಜೈಲಿನಿಂದ ಬಿಡುಗಡೆ ಆಗುತ್ತಿದ್ದೀಯಾ ಎಂಬ ಸುದ್ದಿ ಗೊತ್ತಾಯ್ತು” ಎಂದು ಹೇಳುತ್ತಾನೆ.

ಆಗ ಹೌದು ಈಗ ನನ್ನ ಕಾಲ ಆರಂಭವಾಗುತ್ತದೆ ಎಂದು ಅವಳು ಹೇಳುತ್ತಾಳೆ. ಆದರೆ ನಿನ್ನನ್ನು “ಯಾವ ಮಗ ಹೊರಗಡೆ ಹೋಗಲು ಬಿಡುತ್ತಾನೆ” ಎನ್ನುತ್ತಾ ಕಳ್ಳ ನಗೆಯಾಡುತ್ತಾನೆ. ಅಷ್ಟರಲ್ಲಿ ಸುದ್ದಿ ಬರುತ್ತದೆ. ಅವಳ ಹಾಸಿಗೆ ಅಡಿಯಲ್ಲಿ ಗಾಂಜಾ ಸಿಕ್ಕಿರುತ್ತದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner