Annayya Serial: ಶಿವು ಎದುರು ತನ್ನ ಪ್ರೀತಿ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿದ್ದಾಳೆ ಪಾರು; ಮಾವನ ಜತೆ ಪಾರು ಪ್ರೀತಿ ಬೆಸುಗೆ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಒಂದಾಗುವ ಸಮಯ ಬಂದಿದೆ. ಶಿವು ಪ್ರೀತಿಗಾಗಿ ಪಾರು ಹಾತೊರೆಯುತ್ತಿದ್ದಾಳೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯ ಹಾಗೂ ಪಾರು ಇಬ್ಬರೂ ಒಂದಾಗುವ ಸಮಯ ಹತ್ತಿರ ಬರುತ್ತಿದೆ. ಪಾರುಗೆ ಶಿವು ಮೇಲೆ ನಿಜವಾಗಿಯೂ ಪ್ರೀತಿ ಆಗಿದೆ. ಆದರೆ ಅದನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಅವಳಿಗೆ ಅರ್ಥ ಆಗುತ್ತಿಲ್ಲ. ತಾನೇ ಮೊದಲು ಪ್ರೇಮ ನಿವೇದನೆ ಮಾಡಿಕೊಂಡರೆ ಶಿವು ಅದನ್ನು ಹೇಗೆ ಸ್ವೀಕರಿಸುತ್ತಾನೆ ಎಂದೂ ಸಹ ಅವಳಿಗೆ ಗೊತ್ತಾಗುತ್ತಿಲ್ಲ. ಆ ಕಾರಣಕ್ಕಾಗಿ ನಿಧಾನವಾಗಿ ಅವಳು ಬೇರೆ ಬೇರೆ ಉಪಾಯಗಳನ್ನು ಬಳಸಿಕೊಂಡು ಶಿವುಗೆ ಹತ್ತಿರವಾಗಲು ನೋಡುತ್ತಿದ್ದಾಳೆ. ಪಾರು ಅಂದುಕೊಂಡಂತೆ ಎಲ್ಲ ಆದರೆ ಶಿವು ಮತ್ತು ಪಾರು ಇಬ್ಬರ ಜೀವನವೂ ಹಸನಾಗುತ್ತದೆ.
ಶಿವು ಕಂಡರೆ ಪಾರುಗೆ ಪ್ರೀತಿ
ಶಿವು ಪ್ರತಿದಿನ ನೆಲಕ್ಕೆ ಮಲಗಿಕೊಳ್ಳುತ್ತಾ ಇರುತ್ತಾನೆ. ಆ ವಿಚಾರ ಮಂಜಿ ಹಾಗೂ ರಾಣಿಗೆ ಗೊತ್ತಾಗಿದೆ. ಅವರಿಬ್ಬರೂ ಶಿವು ಮತ್ತು ಪಾರುವನ್ನು ಒಂದು ಮಾಡಲು ನಾನಾ ರೀತಿಯ ಉಪಾಯ ಮಾಡುತ್ತಿದ್ದಾರೆ. ಕಿಟಕಿಯ ಬಳಿ ಬಂದು ನಿಂತು ಒಳಗಡೆ ಏನಾಗುತ್ತಿದೆ ಎನ್ನುವುದನ್ನು ಅವರು ಗಮನಿಸುತ್ತಾ ಇದ್ದಾರೆ. ಹೀಗಿರುವಾಗ ಪಾರು ಮೊದಲು ಮಾತು ಆರಂಭಿಸುತ್ತಾಳೆ. “ಮಾವಾ ನೀನ್ಯಾಕೆ ಕೆಳಗಡೆ ಮಲ್ಕೋಬೇಕು? ಬಂದು ಮೇಲೆ ಮಲಗಿಕೋ” ಎಂದು ಹೇಳುತ್ತಾಳೆ. ಆದರೆ ಶಿವುಗೆ ಆ ಮಾತನ್ನು ಕೇಳಿ ಮೈಮೇಲೆ ಬಿಸಿನೀರು ಹೊಯ್ದಂತಾಗುತ್ತದೆ. ಅವನು ಅದಕ್ಕೆ ಒಪ್ಪುವುದಿಲ್ಲ. “ಪಾರು ನನಗೆ ಗಾಡಿಲಿ ಬಂದು ಕಿವಿ ಗುಂಯ್ ಅಂತಿದೆ. ನೀನು ಏನೋ ಅಂದ್ರೆ ನನಗೆ ಇನ್ನೇನೋ ಕೇಳಿಸ್ತಿದೆ” ಎಂದು ಮಾತು ಬದಲಿಸೋದಕ್ಕೆ ನೋಡುತ್ತಾನೆ. ಆದರೆ ಪಾರು ಮತ್ತೊಮ್ಮೆ ನೀನು ಬಂದು ಮಂಚದ ಮೇಲೆ ಮಲಗು ಎಂದು ಹೇಳುತ್ತಾಳೆ. ಆಗ ಅವನು ಮತ್ತೆ ನಿರಾಕರಿಸುತ್ತಾನೆ.
ಪಾರು ಮಾತಿಗೆ ಶಿವ ಸೋಲ್ತಾನಾ?
ಪಾರು ಒಂದು ಉಪಾಯ ಮಾಡುತ್ತಾಳೆ. ನೆಲದ ಮೇಲೆ ಮಲಗಿದರೆ ಶೀತ ಆಗುತ್ತೆ. ಚಳಿಗಾಲದಲ್ಲಿ ಹೀಗೆಲ್ಲ ನೆಲದ ಮೇಲೆ ಮಲಗಬಾರದು ಎಂದು ಹೇಳುತ್ತಾಳೆ. ಆದರೆ ಅವನು ನಾನು ನಡುಮನೆಯಲ್ಲಿ ಮಲಗುತ್ತೇನೆ ಎನ್ನುತ್ತಾನೆ. ಅವನು ಎದ್ದು ಹೊರಡುತ್ತಾನೆ. ಆಗ ಪಾರು ಕೈ ಹಿಡಿದು ತಡೆಯುತ್ತಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್ನ ಎಲ್ಲಾ ಎಪಿಸೋಡ್ಗಳ ಕಥೆ ಇಲ್ಲಿ ಓದಬಹುದು.
