ಬಿಗ್ ಬಾಸ್ ಮನೆಯಲ್ಲಿ ಅನುಷಾ, ಐಶ್ವರ್ಯ ಜಗಳ, ಚಪ್ಪಾಳೆ ತಟ್ಟಿದ ಉಗ್ರಂ ಮಂಜು; ಮನೆಮಂದಿ ಮೇಲೆ ಮುನಿಸಿಕೊಂಡ ಬಿಗ್ ಬಾಸ್
Bigg Boss: ಬಿಗ್ ಬಾಸ್ ಮನೆಯಲ್ಲಿ ಒಂದು ನೇರ ನಾಮಿಷನ್ ಮಾಡಲೇಬೇಕಾಗಿತ್ತು. ಶಿಶಿರ್ ಈ ವಾರದ ಕ್ಯಾಪ್ಟನ್ ಆದ ಕಾರಣ ಆ ವಿಶೇಷ ಅಧಿಕಾರವನ್ನು ಹೊಂದಿದ್ದರು. ಆ ಅಧಿಕಾರದ ಮೇಲೆ ಅನುಷಾ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ. ಮನೆಮಂದಿ ಮೇಲೆ ಬಿಗ್ ಬಾಸ್ ಮುನಿಸಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಆಟದಲ್ಲಿ ಇದೀಗ ಟ್ವಿಸ್ಟ್ ಹೆಚ್ಚಾಗುತ್ತಿದೆ. ನೇರ ನಾಮಿನೇಷನ್ ಮಾಡಲು ಶಿಶಿರ್ ಅನುಷಾ ಅವರ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅವರ ಹೆಸರನ್ನು ತೆಗೆದುಕೊಂಡಿರುವ ಕಾರಣ ಅನುಷಾ ಸ್ವಲ್ಪ ಸಮಯದ ಬಳಿಕ ಗರಂ ಆಗಿದ್ದಾರೆ. ಈ ಬಾರಿ ನೇರ ನಾಮಿನೇಷನ್ ಮಾಡುವಾಗ ನಾಮಿನೇಟ್ ಆದವರು ಕಹಿಯಾದ ಜ್ಯೂಸ್ ಕೂಡ ಕುಡಿಯಬೇಕಾಗಿರುತ್ತದೆ. ಅದನ್ನು ಅನುಷಾ ತುಂಬಾ ಸಲೀಸಾಗಿ ಕುಡಿದು ಮುಗಿಸಿದ್ದಾರೆ. ಆದರೆ ನಂತರದಲ್ಲಿ ಐಶ್ವರ್ಯ ಅನುಷಾ ಮಾತನಾಡಿದ ವಿಚಾರವನ್ನು ಶಿಶಿರ್ ಬಳಿ ಹೇಳಿದ್ದಾರೆ. ಆಗ ಶಿಶಿರ್ಗೆ ಕೋಪ ಬಂದಿದೆ.
ಶಿಶಿರ್ಗೆ ವಿಷಯ ತಿಳಿಸಿದ್ದು ಐಶ್ವರ್ಯಾ
ಆದರೂ ಶಿಶಿರ್ ಹಾಗೂ ಅನುಷಾ ನಡುವೆ ಯಾವುದೇ ಜಗಳ ಆಗಿಲ್ಲ. ಅದರ ಬದಲಾಗಿ ಐಶ್ವರ್ಯ ಹಾಗೂ ಅನುಷಾ ನಡುವೆ ಜಗಳ ಆಗಿದೆ. ಈ ರೀತಿ ಜಗಳ ಆಗಲು ಕಾರಣ ಏನು ಎಂದರೆ ಅನುಷಾ ಮಾತನಾಡುವುದನ್ನು ಕೇಳಿಸಿಕೊಂಡ ಐಶ್ವರ್ಯ ಸೀದಾ ಹೋಗಿ ಅದನ್ನು ಶಿಶಿರ್ ಬಳಿ ಹೇಳಿದ್ಧಾಳೆ. ಅನುಷಾ ಹೇಳಿದ್ದೇನೆಂದರೆ “ಬಕೆಟ್ ಹಿಡಿಯೋಕೆ ಬರಲ್ಲ ಗುರು ನಾವಿರೋದೆ ಹಿಂಗೆ” ಎಂದು ಎಂದು. ಆದರೆ ಅದನ್ನು ಕೇಳಿಸಿಕೊಂಡು ಹೋಗಿ ಐಶ್ವರ್ಯ ಶಿಶಿರ್ ಹತ್ತಿರ ಚಾಡಿ ಹೇಳಿದ್ದಾರೆ.
ಶಿಶಿರ್ ಈ ಬಗ್ಗೆ ಹೆಚ್ಚೇನು ಪ್ರತಿಕ್ರಿಯೆ ನೀಡಿಲ್ಲ. ಅವನಿಗೆ ಬಕೆಟ್ ಹಿಡ್ಯೋರೇ ಇಷ್ಟ ಆಗ್ತಾರೆ ಎಂದು ಐಶ್ವರ್ಯ ಹೇಳಿದ್ದಾರೆ. ನಂತರ ಇದು ದೊಡ್ಡ ಸದ್ಧಾಗಿದೆ. ನೀವು ತೊಟ್ಟಿಲನ್ನೂ ತೂಗೋದು ಮಗುನೂ ಚಿವುಟೋದು ಮಾಡಬೇಡಿ ಎಂದು ಅನುಷಾ ಹೇಳಿದ್ದಾರೆ. ಅನುಷಾಗೆ ಐಶ್ವರ್ಯ ಮಾಡುವ ಆಟ, ಅವರ ವಿಚಾರ ಯಾವುದೂ ಇಷ್ಟ ಆಗುತ್ತಿಲ್ಲ. ಹೀಗಾದಾಗ ಮುಂದೆ ಏನಾಗುತ್ತದೆ ಎಂದು ಕಾದು ನೋಡಿದಾಗ ಗಾರ್ಡನ್ ಏರಿಯಾದಲ್ಲಿ ಮತ್ತೆ ಜಗಳ ಆಗುತ್ತದೆ.
ಗಾರ್ಡನ್ ಏರಿಯಾದಲ್ಲಿ ಮತ್ತೆ ಜಗಳ
ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುವ ಸಂದರ್ಭದಲ್ಲಿ ಇದೇ ವಿಚಾರ ದೊಡ್ಡದಾಗುತ್ತದೆ. ಅನುಷಾ ಹಾಗೂ ಐಶ್ವರ್ಯ ಪರಸ್ಪರ ಮಾತನಾಡುತ್ತಾ ಜಗಳ ಮಾಡುತ್ತಾರೆ. ಒಬ್ಬರಿಗಿಂತ ಇನ್ನೊಬ್ಬರ ಧ್ವನಿ ಜೋರಾಗುತ್ತದೆ. ಬಕೆಟ್ ಹಿಡಿಯೋದನ್ನ ಬಿಡ್ರಿ ನೀವು ಮೊದ್ಲು ಅಂತ ಅನುಷಾ ಐಶ್ವರ್ಯಾಗೆ ಹೇಳುತ್ತಾಳೆ. ನಂತರ ಉಗ್ರಂ ಮಂಜು ಚಪ್ಪಾಳೆ ತಟ್ಟುವುದು ಕಾಣುತ್ತದೆ. ಅಲ್ಲಿಂದ ಐಶ್ವರ್ಯ ಎದ್ದು ಹೋಗುತ್ತಾರೆ. ಇಷ್ಟೆಲ್ಲ ಆಗಿ ಮುಂದಿನ ದಿನಗಳಲ್ಲಿ ಇವರಿಬ್ಬರ ಸಂಬಂಧ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.
ಇನ್ನು ಬಿಗ್ ಬಾಸ್ಗೆ ಕೋಪ ಬಂದು ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಇದರಿಂದ ಮನೆಯವರಿಗೆ ಆದೇಶ ಅಥವಾ ಸೂಚನೆ ನೀಡುವವರೇ ಇಲ್ಲದಂತಾಗಿದೆ.