ಮನೆಗೇ ಬಂದು ಧಮ್ಕಿ ಹಾಕಿದಳು ಕನ್ನಿಕಾ; ಲೈಸನ್ಸ್ ಪಡೆದೇ ತೀರುತ್ತೇನೆ ಎಂದಳು ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 17ರ ಸಂಚಿಕೆಯಲ್ಲಿ ಕನ್ನಿಕಾ ಭಾಗ್ಯ ಮನೆಗೇ ಬಂದಿದ್ದಾಳೆ. ಮನೆಯಲ್ಲಿ ಭಾಗ್ಯ ಮತ್ತು ಮನೆಯವರು ಇದ್ದಾರೆ, ಅವರ ಮಧ್ಯೆ ಕುಳಿತು, ಅದು ಹೇಗೆ ನೀನು ಬಿಜಿನೆಸ್ ಮಾಡುತ್ತಿ, ಲೈಸನ್ಸ್ ಪಡೆಯುತ್ತೀ ಎಂದು ನಾನೂ ನೋಡುತ್ತೇನೆ ಎಂದು ಆವಾಜ್ ಹಾಕಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 17ರ ಸಂಚಿಕೆಯಲ್ಲಿ ಭಾಗ್ಯ ಲೈಸನ್ಸ್ ಪಡೆಯುವ ಸಲುವಾಗಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ಗೆ ಕರೆ ಮಾಡಿದ್ದಾಳೆ. ಅವರು ಭಾಗ್ಯಳ ಕರೆ ಸ್ವೀಕರಿಸಿಲ್ಲ, ನಂತರ ಆಫೀಸ್ ನಂಬರ್ಗೆ ಕರೆ ಮಾಡಿದ್ದಾಳೆ. ಅಲ್ಲಿಗೆ ಬಂದ ಅಧಿಕಾರಿ, ಭಾಗ್ಯಗೆ ಲೈಸನ್ಸ್ ಕೊಡಲು ಇನ್ನೂ ತಡವಾಗುತ್ತದೆ ಎಂದು ತಿಳಿಸಿ ಎಂದು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಭಾಗ್ಯಗೆ ಅವರು ಲೈಸನ್ಸ್ ಸಿಕ್ಕಾಗ ಹೇಳುತ್ತೇವೆ, ಪದೇ ಪದೇ ಫೋನ್ ಮಾಡಬೇಡಿ ಎಂದು ಕರೆ ಕಟ್ ಮಾಡಿದ್ದಾರೆ. ಅವರ ಉತ್ತರದಿಂದ ಭಾಗ್ಯಗೆ ಸಮಾಧಾನವಾಗಿಲ್ಲ, ಅಲ್ಲದೆ, ಅವಳಿಗೆ ನನ್ನ ವಿರುದ್ಧ ಯಾರೋ ಸಂಚು ರೂಪಿಸಿದ್ದಾರೆ ಎನ್ನುವ ಸಂಶಯ ಶುರುವಾಗಿದೆ.
ಅಷ್ಟರಲ್ಲಿ ಕನ್ನಿಕಾ ಕಾಮತ್ ಭಾಗ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಭಾಗ್ಯಳನ್ನು ಕಂಡು, ಹೇಗಿದ್ದೀಯಾ ಭಾಗ್ಯ, ತುಂಬಾ ಸಮಯವಾಯಿತು, ನಿನ್ನನ್ನು ನೋಡಿಕೊಂಡು ಹೋಗೋಣ ಎಂದು ಬಂದೆ ಎಂದು ಹೇಳಿದ್ದಾಳೆ. ಅವಳ ಗತ್ತು ಮತ್ತು ಬಿನ್ನಾಣ ನೋಡಿ ಮನೆಯವರಿಗೆ ಕೋಪ ಬಂದಿದೆ. ಅಷ್ಟಕ್ಕೇ ಸುಮ್ಮನಾಗದ ಕನ್ನಿಕಾ, ನೀನು ಅದೇನೋ ಫುಡ್ ಬಿಜಿನೆಸ್ ಶುರು ಮಾಡಿದ್ದೀಯಂತೆ, ಅದು ಲೈಸನ್ಸ್ ಇಲ್ಲದೆ ಮುಚ್ಚಿ ಹೋಯಿತಂತೆ ಎಂದು ವ್ಯಂಗವಾಡಿದ್ದಾಳೆ. ಆಗ ಭಾಗ್ಯ ಮತ್ತು ಮನೆಯವರಿಗೆ ಇದು ಕನ್ನಿಕಾಳ ಕುತಂತ್ರ ಎಂದು ಅರಿವಾಗಿದೆ.
ನೀನು ಹೇಗೆ ಲೈಸನ್ಸ್ ಪಡೆದುಕೊಳ್ಳುತ್ತೀ ಮತ್ತು ಅದು ಹೇಗೆ ಬಿಜಿನೆಸ್ ಮಾಡುತ್ತೀ ಎಂದು ನಾನೂ ನೋಡುತ್ತೇನೆ ಎಂದು ಕನ್ನಿಕಾ, ಭಾಗ್ಯಗೆ ಅವಾಜ್ ಹಾಕುತ್ತಾಳೆ. ಭಾಗ್ಯ ಅದಕ್ಕೆ ನಕ್ಕು, ನೀನು ಒಳ್ಳೆಯ ಕೆಲಸವನ್ನೇ ಮಾಡಿದ್ದೀ, ನಿನ್ನಿಂದಾಗಿ ನನಗೆ ಈ ಪ್ರಕ್ರಿಯೆ, ಲೈಸನ್ಸ್ ಎಲ್ಲ ತಿಳಿಯಿತು. ಎಲ್ಲವೂ ನಿನ್ನಂತಹ ಹಿತಶತ್ರುಗಳ ಆಶೀರ್ವಾದ, ನಿನ್ನಿಂದಾಗಿ ನಾನು ಇದೆಲ್ಲಾ ಮಾಡುವಂತಾಯಿತು, ನನಗಂತೂ ಇದರಿಂದ ಪ್ರಯೋಜನವೇ ಆಗುತ್ತಿದೆ, ನೀನು ಮಾತ್ರ ಕೆಟ್ಟದ್ದು ಬಯಸಿದ್ದು, ನನಗೆ ಒಳ್ಳೆಯದೇ ಆಗಿದೆ ಎಂದು ಹೇಳುತ್ತಾಳೆ. ಕನ್ನಿಕಾ ಧಮ್ಕಿಗೆ ಸ್ವಲ್ಪವೂ ಹೆದರದ ಭಾಗ್ಯ, ಲೈಸನ್ಸ್ ಪಡೆಯಲು ಹೊರಡುತ್ತಾಳೆ.
ಆಫೀಸ್ಗೆ ಬಂದಾಗ, ಫುಡ್ ಇನ್ಸ್ಪೆಕ್ಟರ್ ಅಲ್ಲಿ ಭಾಗ್ಯ ಹಿಂದಿನ ದಿನ ಕೊಟ್ಟಿದ್ದ ಫುಡ್ ಅನ್ನು ಲ್ಯಾಬ್ಗೆ ಟೆಸ್ಟ್ಗೆ ಕಳುಹಿಸಿ ಎಂದು ಹೇಳುತ್ತಾರೆ. ಅದೇ ಸಮಯಕ್ಕೆ ಭಾಗ್ಯ ಅಲ್ಲಿಗೆ ಬರುತ್ತಾಳೆ. ಅವಳು ನಿನ್ನೆ ಕೊಟ್ಟ ಫುಡ್ ಅನ್ನು ಇವತ್ತು ಟೆಸ್ಟ್ಗೆ ಕೊಡುತ್ತಿದ್ದಾರೆ ಎನ್ನುವುದನ್ನು ಗಮನಿಸಿ, ಅದನ್ನು ತೆಗೆದುಕೊಳ್ಳುತ್ತಾಳೆ. ಅವಳಿಗೆ ಅಧಿಕಾರಿ, ಕನ್ನಿಕಾ ಜೊತೆ ಶಾಮೀಲಾಗಿರುವ ವಾಸನೆ ಬಡಿಯುತ್ತದೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರದ ಏಪ್ರಿಲ್ 17ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 765ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ