ಭಾಗ್ಯಳನ್ನು ಕರೆದುಕೊಂಡು ನೇರವಾಗಿ ಕನ್ನಿಕಾ ಆಫೀಸ್‌ಗೆ ಹೊರಟಳು ಕುಸುಮಾ; ಊಟ ಆರ್ಡರ್ ಮಾಡಿದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಳನ್ನು ಕರೆದುಕೊಂಡು ನೇರವಾಗಿ ಕನ್ನಿಕಾ ಆಫೀಸ್‌ಗೆ ಹೊರಟಳು ಕುಸುಮಾ; ಊಟ ಆರ್ಡರ್ ಮಾಡಿದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಳನ್ನು ಕರೆದುಕೊಂಡು ನೇರವಾಗಿ ಕನ್ನಿಕಾ ಆಫೀಸ್‌ಗೆ ಹೊರಟಳು ಕುಸುಮಾ; ಊಟ ಆರ್ಡರ್ ಮಾಡಿದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 21ರ ಸಂಚಿಕೆಯಲ್ಲಿ ಭಾಗ್ಯ ಮನೆಗೆ ಬಂದು ಲೈಸನ್ಸ್ ಸಿಕ್ಕ ಕಥೆಯನ್ನು ರೋಚಕವಾಗಿ ವಿವರಿಸಿದ್ದಾಳೆ. ಸುಂದರಿಯೂ ಅವಳಿಗೆ ಸಾಥ್ ನೀಡಿದ್ದಾಳೆ. ನಂತರ ಕುಸುಮಾ, ಭಾಗ್ಯಳನ್ನು ಕರೆದುಕೊಂಡು ಕನ್ನಿಕಾ ಆಫೀಸ್‌ಗೆ ಹೋಗಿ ಅಲ್ಲಿನವರಿಗೆ ಊಟ ಕೊಟ್ಟಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರ ಏಪ್ರಿಲ್ 21ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರ ಏಪ್ರಿಲ್ 21ರ ಸಂಚಿಕೆ (Colors Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 21ರ ಸಂಚಿಕೆಯಲ್ಲಿ ಭಾಗ್ಯ ಆಹಾರ ಇಲಾಖೆಯಿಂದ ಲೈಸನ್ಸ್ ಪಡೆದುಕೊಂಡು ಮನೆಗೆ ಬಂದಿದ್ದಾಳೆ. ನಂತರ ಮನೆಯವರಿಗೆ ಹೇಗೆ ನನಗೆ ಲೈಸನ್ಸ್ ಸಿಕ್ಕಿತು, ಆಹಾರ ಇಲಾಖೆಯ ನಿರ್ದೇಶಕರು ಹೇಗೆ ಬೆಂಬಲಿಸಿದರು ಮತ್ತು ನ್ಯಾಯವಾಗಿ ಹೇಗೆ ಲೈಸನ್ಸ್ ಪಡೆದುಕೊಂಡೆ ಎಂದು ವಿವರಿಸಿದ್ದಾಳೆ. ಅಲ್ಲದೆ, ಭ್ರಷ್ಟಾಚಾರದಲ್ಲಿ ತೊಡಗಿದ್ದ ಇನ್ಸ್‌ಪೆಕ್ಟರ್‌ಗೆ ನಿರ್ದೇಶಕರು ಸಸ್ಪೆಂಡ್ ಶಿಕ್ಷೆ ನೀಡಿರುವುದನ್ನು ಕೂಡ ಭಾಗ್ಯ ಮನೆಯಲ್ಲಿ ಹೇಳಿದ್ದಾಳೆ. ಅಲ್ಲದೆ, ಕನ್ನಿಕಾ ಕೂಡ ಅಲ್ಲಿಗೆ ಬಂದು ಕಿರುಕುಳ ಕೊಟ್ಟಿರುವುದನ್ನು ಕುಸುಮಾ ಮತ್ತು ಧರ್ಮರಾಜ್ ಬಳಿ ಭಾಗ್ಯ ತಿಳಿಸಿದ್ದಾಳೆ. ಅವಳಿಗೆ ಸುಂದರಿ ಸಾಥ್ ನೀಡಿದ್ದಾಳೆ.

ಅದನ್ನು ಕೇಳಿ ಮನೆಯವರೆಲ್ಲ ಸಂತಸ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಇನ್ನು ಮುಂದೆ ಯಾವುದೇ ಸಮಸ್ಯೆಯಿಲ್ಲದೆ, ನಾವು ಕೈತುತ್ತು ಊಟದ ಸೇವೆ ನೀಡಬಹುದು ಎಂದು ಸಂಭ್ರಮಿಸಿದ್ದಾರೆ. ನಂತರ ಕುಸುಮಾ, ಭಾಗ್ಯಳನ್ನು ಕರೆದುಕೊಂಡು ಸುಮಾರು 30 ಜನರಿಗೆ ಆಗುವಷ್ಟು ಊಟ ರೆಡಿ ಮಾಡಿ ಕೊಡು ಎಂದು ಹೇಳಿದ್ದಾಳೆ. ಯಾರಿಗೆ ಏನು ಎಂದು ಭಾಗ್ಯ ಕೇಳಿದರೂ, ಕುಸುಮಾ ಹೇಳಿಲ್ಲ. ಮೊದಲು ನೀನು ಊಟ ರೆಡಿ ಮಾಡು, ನಂತರ ನೋಡೋಣ ಎಂದು ಹೇಳಿದ್ದಾಳೆ. ಅದರಂತೆ ಭಾಗ್ಯ ಸುಮಾರು 30 ಜನರಿಗೆ ಆಗುವಷ್ಟು ಒಳ್ಳೆಯ ಊಟ ತಯಾರಿಸಿದ್ದಾಳೆ.

ನಂತರ ಕುಸುಮಾ, ಅದ್ಧೂರಿಯಾಗಿ ರೆಡಿಯಾಗಿ ಹೊರಟಿದ್ದಾಳೆ. ಭಾಗ್ಯ ಮತ್ತು ಸುಂದರಿಯನ್ನು ಕೂಡ ಹೊರಡಲು ಹೇಳಿದ್ದಾಳೆ. ಹಾಗೆಯೇ ಭಾಗ್ಯ ಮತ್ತು ಸುಂದರಿ ಕೂಡ ಚೆನ್ನಾಗಿ ಹೊರಟು ರೆಡಿಯಾಗಿದ್ದಾರೆ. ನಂತರ ಅವರನ್ನು ಕರೆದು, ನಾವು ಕನ್ನಿಕಾ ಆಫೀಸ್‌ಗೆ ಹೊರಟಿದ್ದೇವೆ ಎಂದು ಕುಸುಮಾ ಹೇಳಿದ್ದಾಳೆ. ನಂತರ ಕಾರ್‌ನಲ್ಲಿ ಭಾಗ್ಯ, ಕುಸುಮಾ ಮತ್ತು ಸುಂದರಿ ಕನ್ನಿಕಾ ಆಫೀಸ್‌ಗೆ ಹೋಗಿದ್ದಾರೆ. ಅಲ್ಲಿ ಕನ್ನಿಕಾ ಬಂದಿರುವುದಿಲ್ಲ, ಹೀಗಾಗಿ ಅವಳನ್ನು ಕಾಯುತ್ತಾ ಮೂವರು ಕುಳಿತಿದ್ದಾರೆ. ಅಷ್ಟರಲ್ಲಿ ಊಟದ ಸಮಯವಾಗಿದೆ, ಎಲ್ಲರನ್ನೂ ಕರೆದುಕೊಂಡು ಕುಸುಮಾ ಮತ್ತು ಭಾಗ್ಯ, ಕೆಫೆಟೇರಿಯಾಗೆ ಹೋಗಿದ್ದಾರೆ. ಅಲ್ಲಿ ಕನ್ನಿಕಾ ಆಫೀಸ್‌ನ ಎಲ್ಲರಿಗೂ ತಾವು ಮನೆಯಿಂದ ತಂದಿದ್ದ ಊಟವನ್ನು ಹಂಚಿದ್ದಾರೆ. ಅಷ್ಟರಲ್ಲಿ ಕನ್ನಿಕಾ ಆಫೀಸ್‌ಗೆ ಬಂದಿದ್ದಾಳೆ.

ಇತ್ತ ಆಫೀಸ್‌ನಲ್ಲಿ ಶ್ರೇಷ್ಠಾ, ತಾಂಡವ್ ಬಳಿ, ಕನ್ನಿಕಾ ಕೆಲಸ ಫಲಿಸಲಿಲ್ಲ, ಭಾಗ್ಯಗೆ ಫುಡ್ ಲೈಸನ್ಸ್ ಸಿಕ್ಕಿದೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ಅವನು ಮತ್ತಷ್ಟು ಕೋಪಗೊಳ್ಳುತ್ತಾನೆ. ಅದೇ ಸಮಯದಲ್ಲಿ ಗೌರವ್ ಬಂದು, ಮನೆ ಊಟ ಆರ್ಡರ್ ಮಾಡುತ್ತಿದ್ದೇನೆ ಸರ್, ನಿಮಗೂ ಬೇಕಾ ಎನ್ನುತ್ತಾನೆ, ತಾಂಡವ್ ಕೂಡಲೇ ಹೌದು ಬೇಕು, ಬೇಕು, ಎರಡು ಊಟ ನನಗೆ ಆರ್ಡರ್ ಮಾಡಿ ಎಂದು ಹೇಳಿದ್ದಾನೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರದ ಏಪ್ರಿಲ್ 21ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 767ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in