ಭಾಗ್ಯಳಿಗೆ ಕಿರುಕುಳ ಕೊಡುತ್ತಿದ್ದ ತಾಂಡವ್‌ನನ್ನು ಕಂಪನಿಯಿಂದ ಕಿತ್ತು ಹಾಕಿದ ಬಾಸ್; ಶ್ರೇಷ್ಠಾಗೂ ಗೇಟ್‌ಪಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಳಿಗೆ ಕಿರುಕುಳ ಕೊಡುತ್ತಿದ್ದ ತಾಂಡವ್‌ನನ್ನು ಕಂಪನಿಯಿಂದ ಕಿತ್ತು ಹಾಕಿದ ಬಾಸ್; ಶ್ರೇಷ್ಠಾಗೂ ಗೇಟ್‌ಪಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಳಿಗೆ ಕಿರುಕುಳ ಕೊಡುತ್ತಿದ್ದ ತಾಂಡವ್‌ನನ್ನು ಕಂಪನಿಯಿಂದ ಕಿತ್ತು ಹಾಕಿದ ಬಾಸ್; ಶ್ರೇಷ್ಠಾಗೂ ಗೇಟ್‌ಪಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 25ರ ಸಂಚಿಕೆಯಲ್ಲಿ ಭಾಗ್ಯ ತಾಂಡವ್ ಆಫೀಸ್‌ನ ಕ್ಯಾಂಟೀನ್ ಉಸ್ತುವಾರಿ ವಹಿಸಿಕೊಂಡಿದ್ದಾಳೆ. ಅಲ್ಲಿಯೂ ತಾಂಡವ್ ಭಾಗ್ಯಗೆ ಬೈದಿದ್ದಾನೆ. ಕೊನೆಗೆ ಬಾಸ್ ಭಾಗ್ಯಳಿಗೆ ಕಿರುಕುಳ ಕೊಡುತ್ತಿದ್ದ ತಾಂಡವ್‌ನನ್ನು ಕಂಪನಿಯಿಂದ ಕಿತ್ತು ಹಾಕಿ, ಶ್ರೇಷ್ಠಾಗೂ ಗೇಟ್‌ಪಾಸ್ ಕೊಟ್ಟಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆ (Colors Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 25ರ ಸಂಚಿಕೆಯಲ್ಲಿ ಭಾಗ್ಯ ತಾಂಡವ್ ಕೆಲಸ ಮಾಡುವ ಕಂಪನಿಯ ಕ್ಯಾಂಟೀನ್‌ ವಹಿಸಿಕೊಂಡಿದ್ದಾಳೆ. ಕೈತುತ್ತು ಕ್ಯಾಂಟೀನ್ ಉದ್ಘಾಟನೆ ನೆರವೇರಿದೆ. ಭಾಗ್ಯ ಮನೆಯವರು ಎಲ್ಲರೂ ಅಲ್ಲಿ ಸೇರಿ ಸಂಭ್ರಮಿಸಿದ್ದಾರೆ. ಭಾಗ್ಯ ಕೂಡ ತನ್ನ ಕಷ್ಟಗಳು ದೂರಾಗಲಿ, ಹೊಸ ಉದ್ಯಮ ಕೈಹಿಡಿಯಲಿ ಎಂದು ಬೇಡಿಕೊಂಡಿದ್ದಾಳೆ. ಕಂಪನಿಯ ಬಾಸ್ ಮತ್ತು ಅವರ ಹೆಂಡತಿ ಮನಸಾರೆ ಭಾಗ್ಯಳನ್ನು ಹೊಗಳಿದ್ದಾರೆ. ಅಲ್ಲದೆ, ಉದ್ಯೋಗಿಗಳು ಕೂಡ ಭಾಗ್ಯ ಕ್ಯಾಂಟೀನ್ ತೆರೆದಿರುವುದನ್ನು ಕಂಡು ಸಂಭ್ರಮಿಸಿದ್ದಾರೆ.

ನಂತರ ಭಾಗ್ಯ, ನನಗೆ ಈ ಅವಕಾಶ ನೀಡಿರುವುದಕ್ಕೆ ಕಂಪನಿ ಬಾಸ್ ಮತ್ತು ಅವರ ಹೆಂಡತಿಗೆ ಕೃತಜ್ಞತೆ ಹೇಳಿದ್ದಾಳೆ, ಬಳಿಕ ಬಾಸ್ ಹೆಂಡತಿ ಮಾತನಾಡಿ, ಭಾಗ್ಯಗೆ ಕೆಲವರು ತುಂಬಾ ಬೇಕಾದವರೇ ಕಿರುಕುಳ ಕೊಟ್ಟಿದ್ದಾರೆ. ಕಷ್ಟ ಕೊಟ್ಟಿದ್ದಾರೆ. ಆದರೂ ಅವಳು ಎಲ್ಲವನ್ನೂ ಎದುರಿಸಿ, ಮುನ್ನುಗ್ಗಿದ್ದಾಳೆ. ಅಲ್ಲದೆ, ಅವಳ ಸ್ವಂತ ಗಂಡನೇ ಅನ್ಯಾಯ ಮಾಡಿದರೂ, ಅವಳು ಮಾತ್ರ ಎದೆಗುಂದಲಿಲ್ಲ, ಅತ್ತೆ ಮಾವನನ್ನು, ಮಕ್ಕಳನ್ನು ಕೂಡ ಚೆನ್ನಾಗಿ ನೋಡಿಕೊಂಡಿದ್ದಾಳೆ ಎಂದು ಹೊಗಳಿದ್ದಾರೆ. ಅವರ ಹೊಗಳಿಕೆ ಕೇಳಿ ತಾಂಡವ್ ಮತ್ತು ಶ್ರೇಷ್ಠಾ ಮನಸ್ಸಿನಲ್ಲಿಯೇ ಬೈದುಕೊಂಡಿದ್ದಾರೆ.

ಬಳಿಕ ಭಾಗ್ಯ ಎಲ್ಲರಿಗೂ ಹೊಸ ಕ್ಯಾಂಟೀನ್ ಓಪನ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಸ್ವೀಟ್ ಕೊಡಲು ಹೋಗಿದ್ದಾಳೆ. ಆದರೆ ತಾಂಡವ್ ಅವಳು ಕೊಟ್ಟ ಸ್ವೀಟ್ ಅನ್ನು ದೂರಕ್ಕೆ ಎಸೆದಿದ್ದಾನೆ. ನಂತರ ಅವಳಿಗೆ ಮತ್ತೆ ಬೈದಿದ್ದಾನೆ. ಆಗ ತಾಂಡವ್ ಜತೆ ಶ್ರೇಷ್ಠಾ ಕೂಡ ಭಾಗ್ಯಳಿಗೆ ಬೈದು, ಅವಮಾನ ಮಾಡಿದ್ದಾಳೆ. ಹೀಯಾಳಿಕೆಯ ಮಾತುಗಳನ್ನು ಆಡಿ, ಅಲ್ಲಿಂದ ಇಬ್ಬರೂ ಕೋಪದಿಂದ ಹೋಗಿದ್ದಾರೆ. ಹೋಗುವ ಮೊದಲು ತಾಂಡವ್, ನಾನು ಈ ಕಂಪನಿಯ ಮ್ಯಾನೇಜರ್, ನಿನ್ನನ್ನು ಏನು ಮಾಡಬೇಕು ಎಂದು ನನಗೆ ತಿಳಿದಿದೆ ಎಂದು ಧಮ್ಕಿ ಹಾಕಿ ಹೋಗಿದ್ದಾನೆ.

ಹಾಗೆ ಹೋದ ತಾಂಡವ್ ಮತ್ತು ಶ್ರೇಷ್ಠಾಳನ್ನು ಬಾಸ್ ಪಿಎ ಮತ್ತೆ ಕ್ಯಾಂಟೀನ್‌ಗೆ ಬರುವಂತೆ ಹೇಳಿದ್ದಾನೆ. ಅವರು ಬಂದ ಕೂಡಲೇ, ಬಾಸ್ ಹೆಂಡತಿ ತಾಂಡವ್ ಮತ್ತು ಶ್ರೇಷ್ಠಾಳ ಕೈಗೆ ಕವರ್ ಒಂದನ್ನು ನೀಡುತ್ತಾರೆ. ಭಾಗ್ಯಳಿಗೆ ಕಿರುಕುಳ ಕೊಟ್ಟಿರುವುದಕ್ಕೆ ಇದು ನಿಮಗೆ ಉಡುಗೊರೆ ಎಂದು ಹೇಳುತ್ತಾರೆ. ಇಬ್ಬರೂ ಕವರ್ ತೆಗೆದು, ಅದರಲ್ಲಿನ ಲೆಟರ್ ಓದುತ್ತಲೇ ಬೆಚ್ಚಿಬೀಳುತ್ತಾರೆ. ಅದು ತಾಂಡವ್ ಮತ್ತು ಶ್ರೇಷ್ಠಾಳನ್ನು ಕಂಪನಿಯ ಕೆಲಸದಿಂದ ತೆಗೆದುಹಾಕಿರುವ ಟರ್ಮಿನೇಶನ್ ಲೆಟರ್! ಇಬ್ಬರೂ ಭಯದಿಂದ ಮುಖ ಮುಖ ನೋಡಿಕೊಳ್ಳುತ್ತಾರೆ.

ಭಾಗ್ಯ ಮನೆಯವರು ಅದೇನು ಎಂದು ಅಚ್ಚರಿಯಿಂದ ನೋಡುತ್ತಿರುವಾಗ, ಬಾಸ್ ಹೆಂಡತಿ ಮುಂದೆ ಬಂದು, ಭಾಗ್ಯಳಿಗೆ ತೊಂದರೆ ಕೊಟ್ಟವರು ನಮ್ಮಲ್ಲಿ ಇರುವುದು ಬೇಡ, ಕೂಡಲೇ ಹೊರಡಿ, ಲೆಟರ್‌ ನಿಮಗೆ ಕೊಟ್ಟಾಗಿದೆ ಎಂದು ಜೋರಾಗಿ ಹೇಳುತ್ತಾರೆ. ತಾಂಡವ್ ಮತ್ತು ಶ್ರೇಷ್ಠಾ ಏನು ಮಾಡಬೇಕೆಂದು ತಿಳಿಯದೇ ಅಲ್ಲೇ ನಿಂತುಕೊಂಡಿದ್ದಾರೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರದ ಏಪ್ರಿಲ್ 25ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 771ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in