ಕೆಲಸದಿಂದ ಕಿತ್ತು ಹಾಕಿರುವುದನ್ನು ಬಾಸ್ ಬಳಿ ಪ್ರಶ್ನಿಸಿದ ತಾಂಡವ್ ಮತ್ತು ಶ್ರೇಷ್ಠಾ; ಗೆಟ್ ಔಟ್ ಎಂದ ಬಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕೆಲಸದಿಂದ ಕಿತ್ತು ಹಾಕಿರುವುದನ್ನು ಬಾಸ್ ಬಳಿ ಪ್ರಶ್ನಿಸಿದ ತಾಂಡವ್ ಮತ್ತು ಶ್ರೇಷ್ಠಾ; ಗೆಟ್ ಔಟ್ ಎಂದ ಬಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ

ಕೆಲಸದಿಂದ ಕಿತ್ತು ಹಾಕಿರುವುದನ್ನು ಬಾಸ್ ಬಳಿ ಪ್ರಶ್ನಿಸಿದ ತಾಂಡವ್ ಮತ್ತು ಶ್ರೇಷ್ಠಾ; ಗೆಟ್ ಔಟ್ ಎಂದ ಬಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 28ರ ಸಂಚಿಕೆಯಲ್ಲಿ ಭಾಗ್ಯ ಎದುರಿನಲ್ಲಿಯೇ ತಾಂಡವ್ ಮತ್ತು ಶ್ರೇಷ್ಠಾಳನ್ನು ಬಾಸ್ ಅವರ ಕಂಪನಿಯಿಂದ ಕಿತ್ತು ಹಾಕಿದ್ದಾರೆ. ಅದನ್ನು ತಾಂಡವ್ ಮತ್ತು ಶ್ರೇಷ್ಠಾ ಇಬ್ಬರೂ ಬಾಸ್ ಮತ್ತು ಅವರ ಹೆಂಡತಿ ಬಳಿ ಪ್ರಶ್ನಿಸಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರ ಏಪ್ರಿಲ್ 28ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರ ಏಪ್ರಿಲ್ 28ರ ಸಂಚಿಕೆ (Colors Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 28ರ ಸಂಚಿಕೆಯಲ್ಲಿ ತಾಂಡವ್ ಮತ್ತು ಶ್ರೇಷ್ಠಾಳನ್ನು ಕಂಪನಿಯ ಕೆಲಸದಿಂದ ಬಾಸ್ ಕಿತ್ತು ಹಾಕಿದ್ದಾರೆ. ತಾಂಡವ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರೆ, ಶ್ರೇಷ್ಠಾ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ತಾಂಡವ್ ಬಗ್ಗೆ ಅಸಮಾಧಾನ ಹೊಂದಿದ್ದ ಬಾಸ್, ಅವನಿಗೆ ಎಲ್ಲರ ಎದುರೇ ಕರೆದು ಛೀಮಾರಿ ಹಾಕಿದ್ದಾರೆ. ನಂತರ ಕೆಲಸ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಬಾಸ್ ನಿರ್ಧಾರ ತಾಂಡವ್ ಮತ್ತು ಶ್ರೇಷ್ಠಾಗೆ ನಡುಕ ಉಂಟು ಮಾಡಿದೆ. ಏಕಾಏಕಿ ಯಾವುದೇ ಸೂಚನೆ ಇಲ್ಲದೆ, ಕೆಲಸದಿಂದ ತೆಗೆದು ಹಾಕಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಬಾಸ್ ಕ್ರಮವು ಸರಿಯಲ್ಲ ಎಂದು ಇಬ್ಬರೂ ವಾದಿಸಿದ್ದಾರೆ.

ತನ್ನನ್ನು ಯಾಕೆ ಕೆಲಸದಿಂದ ತೆಗೆದು ಹಾಕಿದ್ದೀರಿ, ನಾನು ಈ ವರ್ಷದ ಬೆಸ್ಟ್ ಎಂಪ್ಲಾಯಿ, ಅಲ್ಲದೆ, ಕಂಪನಿಗೆ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ವಿವಿಧ ಪ್ರಾಜೆಕ್ಟ್‌ಗಳನ್ನು ನಿರ್ವಹಿಸಿದ್ದೇನೆ, ಕಂಪನಿಗೆ ಉತ್ತಮ ಆದಾಯ ತಂದುಕೊಟ್ಟಿದ್ದೇನೆ ಎಂದು ತಾಂಡವ್ ಬಾಸ್ ಬಳಿ ಪ್ರಶ್ನಿಸಿದ್ದಾನೆ. ಅಲ್ಲದೆ, ಕಂಪನಿ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾದವರು ನೀವು, ನಿಮ್ಮ ಹೆಂಡತಿಯಲ್ಲ. ಅವರು ಹೇಗೆ ನನ್ನ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ, ಒಮ್ಮೆ ನಿಮ್ಮ ನಿರ್ಧಾರವನ್ನು ಪರಿಶೀಳಿಸಿ, ನನ್ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ತಾಂಡವ್ ಬಾಸ್ ಬಳಿ ಗೋಗರೆದಿದ್ದಾನೆ. ಆದರೆ ಬಾಸ್ ಅವನ ಮಾತನ್ನು ಕೇಳಲು ತಯಾರಿಲ್ಲ.

ತಾಂಡವ್ ಮಾತಿಗೆ ಬಾಸ್, ಈ ಕಂಪನಿಯಲ್ಲಿ ನನಗೆ ಎಷ್ಟು ಹಕ್ಕಿದೆಯೋ, ನನ್ನ ಹೆಂಡತಿಗೂ ಅಷ್ಟೇ ಹಕ್ಕಿದೆ. ಅವಳು ಸರಿಯಾಗಿ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿರುತ್ತಾಳೆ, ಅದನ್ನು ನೀನು ಪ್ರಶ್ನಿಸುವ ಹಾಗಿಲ್ಲ ಎಂದು ಹೇಳುತ್ತಾರೆ. ಅಲ್ಲದೇ, ಕಂಪನಿಯಲ್ಲಿ ಕೆಲಸ ಮಾಡಿದರೆ ಸಾಲದು, ಮೌಲ್ಯಗಳು, ಸಂಬಂಧಕ್ಕೆ ಬೆಲೆ ಕೊಡುವುದನ್ನು ಕೂಡ ಕಲಿತಿರಬೇಕು, ಅಬಲೆ ಎಂದು ಹೆಣ್ಣಿಗೆ ಕಿರುಕುಳ ಕೊಡುವುದು ಸರಿಯಲ್ಲ ಎಂದು ಹೇಳುತ್ತಾರೆ. ಅದನ್ನು ಕೇಳಿ ತಾಂಡವ್‌ಗೆ ಮತ್ತಷ್ಟು ಕಿರಿಕಿರಿಯಾಗುತ್ತದೆ.

ಆಗ ಶ್ರೇಷ್ಠಾ, ಕಂಪನಿ ಪಾಲಿಸಿ ಅದು ಇದೂ ಎಂದು ಬಾಸ್ ಪತ್ನಿ ಜತೆ ವಾದಕ್ಕೆ ಮುಂದಾಗುತ್ತಾಳೆ. ಆಗ ಬಾಸ್ ಪತ್ನಿ, ನೀನು ರೂಲ್ಸ್, ಪಾಲಿಸಿ ಎಂದು ಮಾತನಾಡಿದರೆ ನಾವು ಕೂಡ ರೂಲ್ಸ್ ಪಾಲಿಸಿ ಎಂದು ಹೇಳಬೇಕಾಗುತ್ತದೆ. ನಮ್ಮ ಕಂಪನಿ ರೂಲ್ಸ್, ಪಾಲಿಸಿ ಪ್ರಕಾರ ಗಂಡ ಹೆಂಡತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುವಂತಿಲ್ಲ ಎಂದು ಹೇಳುತ್ತಾರೆ. ನಂತರ ನೀವಿಬ್ಬರೂ ಈಗ ಗಂಡ ಹೆಂಡತಿ, ಹೀಗಾಗಿ ಕಂಪನಿ ಕೆಲಸ ಬಿಟ್ಟು ಹೊರಡಿ, ಗೆಟ್ ಔಟ್ ಎಂದು ಹೇಳುತ್ತಾರೆ. ಆಗ ತಾಂಡವ್ ಮತ್ತು ಶ್ರೇಷ್ಠಾ, ಕೆಲಸ ಬಿಟ್ಟು ಅಲ್ಲಿಂದ ಹೊರಡಬೇಕಾಗುತ್ತದೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರದ ಏಪ್ರಿಲ್ 28ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 772ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in