ಚೈತ್ರಾ ಕುಂದಾಪುರ- ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ; ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮದುವೆಯ ಸಂಭ್ರಮ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಚೈತ್ರಾ ಕುಂದಾಪುರ- ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ; ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮದುವೆಯ ಸಂಭ್ರಮ ನೋಡಿ

ಚೈತ್ರಾ ಕುಂದಾಪುರ- ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ; ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮದುವೆಯ ಸಂಭ್ರಮ ನೋಡಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ, ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ ಇಂದು ಕುಂದಾಪುರದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮ, ಸಡಗರದಿಂದ ನಡೆದಿದೆ.

ಚೈತ್ರಾ ಕುಂದಾಪುರ- ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ; ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮದುವೆಯ ಸಂಭ್ರಮ ನೋಡಿ
ಚೈತ್ರಾ ಕುಂದಾಪುರ- ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ; ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮದುವೆಯ ಸಂಭ್ರಮ ನೋಡಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ, ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ ಇಂದು ಕುಂದಾಪುರದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮ, ಸಡಗರದಿಂದ ನಡೆದಿದೆ. ತಾನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನ ಜತೆ ಇವರು ಸಪ್ತಪದಿ ತುಳಿದಿದ್ದಾರೆ. ಬಿಗ್‌ಬಾಸ್‌ ಸಹ ಸ್ಪರ್ಧಿ ರಜತ್‌ ಅವರು ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದಾರೆ. ಇವರ ಮದುವೆಯ ಸಂಭ್ರಮದ ಫೋಟೋಗಳು, ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಮದುವೆಗೆ ಅವರ ಆಪ್ತರು, ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು, ಕುಟುಂಬಸ್ಥರು ಆಗಮಿಸಿ ಶುಭಹಾರೈಸಿದ್ದಾರೆ. ಹಿರಿಯಡ್ಕ ಮೂಲದ ಶ್ರೀಕಾಂತ್ ಕಶ್ಯಪ್ ಜತ ಚೈತ್ರಾ ಮದುವೆಯಾಗಿದ್ದಾರೆ. ಮದುವೆಯ ತನಕವೂ ತಾನು ಮದುವೆಯಾಗಲಿರುವ ಹುಡುಗನ ಕುರಿತು ಇವರು ಬಾಯ್ಬಿಟ್ಟಿರಲಿಲ್ಲ. ಇವರಿಬ್ಬರು ಹನ್ನೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ಅನಿಮೇಷನ್‌ ಓದಿರುವ ಶ್ರೀಕಾಂತ್ ಕಶ್ಯಪ್ ಜತೆ ಚೈತ್ರಾ ಕುಂದಾಪುರ ಒಂದೇ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ ಮಾಡಿದ್ದರಂತೆ. ಆ ಸಮಯದಲ್ಲಿ ಚೈತ್ರಾ ಆಂಕರ್‌ ಆಗಿದ್ದರು. ಶ್ರೀಕಾಂತ್‌ ಕಶ್ಯಪ್‌ ವಿಡಿಯೋ ಎಡಿಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಕಶ್ಯಪ್‌ ವಾಸ್ತು ಮತ್ತು ಜ್ಯೋತಿಷ ಕಲಿತು ಅದನ್ನೇ ಕರಿಯರ್‌ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರಿಬ್ಬರ ಹನ್ನೆರಡು ವರ್ಷದ ಪ್ರೀತಿ ಶುಭವಿವಾಹದ ಮೂಲಕ ಯಶಸ್ಸಾಗಿದೆ.

ಮದುವೆ ವಿಡಿಯೋ

ಈ ಮದುವೆಯಲ್ಲಿ ರಜತ್‌ ಬುಜ್ಜಿ ಎಲ್ಲರ ಗಮನ ಸೆಳೆದಿದ್ದಾರೆ. ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಅಣ್ಣನ ಸ್ಥಾನದಲ್ಲಿರುವ ರಜತ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ರಜತ್‌ ನಗುನಗುತ್ತಾ ಎಲ್ಲರನ್ನೂ ನಗಿಸುತ್ತಿರುವುದನ್ನು ವಿಡಿಯೋಗಳಲ್ಲಿ ನೋಡಬಹುದು. ಒಂದು ಸಂದರ್ಭದಲ್ಲಿ ಚೈತ್ರಾ ಭಾವುಕರಾಗಿ ಕಣ್ಣೀರು ಒರಿಸಿಕೊಂಡಿರುವುದು ಕಾಣಿಸಿದೆ.

ಹಿಂದುತ್ವದ ಬಗ್ಗೆ ತಮ್ಮ ಪ್ರಖರ ಭಾಷಣಗಳ ಮೂಲಕವೇ ಸದ್ದು ಮಾಡಿದ್ದ, ಫೈರ್‌ ಬ್ರಾಂಡ್‌ ಎಂದೇ ಖ್ಯಾತಿ ಪಡೆದ ಚೈತ್ರಾ ಕುಂದಾಪುರ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ನಿನ್ನೆ ಕುಂದಾಪುರದ ಮನೆಯಲ್ಲಿ ಮದರಂಗಿ ಶಾಸ್ತ್ರ ನಡೆದಿತ್ತು. ಯಾವುದೇ ಆಡಂಬರ ಇಲ್ಲದೆ, ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಚೈತ್ರಾ ಅವರ ಮದುವೆ ನೆರವೇರಿದೆ. ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿಗಳು, ಕಿರುತೆರೆಯ ಆಪ್ತರು ಈ ಮದುವೆಯಲ್ಲಿ ಭಾಗವಹಿದ್ದಾರೆ. ಧನರಾಜ್‌ ಆಚಾರ್‌ ಸೇರಿದಂತೆ ಸಾಕಷ್ಟು ಜನರು ಸೋಷಿಯಲ್‌ ಮೀಡಿಯಾದಲ್ಲಿ ಮದುವೆಯ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in