ಮಧ್ಯರಾತ್ರಿ ಮೌನಿ ರಾಯ್ ತಂಗಿದ್ದ ಲಾಡ್ಜ್ ಕೊಠಡಿಯ ಬಾಗಿಲು ತೆರೆಯಲು ಯತ್ನಿಸಿದ ಆಗುಂತಕ; ಬಾಲಿವುಡ್ ನಟಿ ಬಿಚ್ಚಿಟ್ಟ ಭಯಾನಕ ಅನುಭವ
ಬಾಲಿವುಡ್ ನಟಿ ಸದ್ಯ ತನ್ನ ಮುಂಬರುವ ಸಿನಿಮಾ ಭೂತಿನಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಇವರು ತನ್ನ ಬದುಕಿನಲ್ಲಿ ನಡೆದ ಭಯಾನಕ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಸಣ್ಣ ಪಟ್ಟಣವೊಂದರಲ್ಲಿ ಲಾಡ್ಜ್ ರೂಂನಲ್ಲಿದ್ದಾಗ ಆ ಕೊಠಡಿಯ ಕೀಯನ್ನು ತೆರೆಯಲು ಮಧ್ಯರಾತ್ರಿಯಲ್ಲಿ ಆಗುಂತಕನೊಬ್ಬ ಪ್ರಯತ್ನಿಸಿದ್ದಾನೆ. ಭಯದಿಂದ ಇವರು ಜೋರಾಗಿ ಕಿರುಚಿದ್ದಾರೆ.

ಸಣ್ಣ ಪಟ್ಟಣಗಳಲ್ಲಿ ಲಾಡ್ಜ್ಗಳಲ್ಲಿ, ಹೋಟೆಲ್ ರೂಂಗಳಲ್ಲಿ ವಾಸಿಸುವುದು ಕೆಲವೊಮ್ಮೆ ಅಸುರಕ್ಷಿತವಾಗಿರಬಹುದು. ಮಧ್ಯರಾತ್ರಿ ಬಾಗಿಲು ಬಡಿಯಬಹುದು, ಯಾರೋ ಬಾಗಿಲು ತೆರೆದು ಒಳಗೆ ಪ್ರವೇಶಿಸಬಹುದು. ಇಂತಹ ಅನುಭವವನ್ನು ಬಾಲಿವುಡ್ನ ಖ್ಯಾತ ನಟಿ ಮೌನಿ ರಾಯ್ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಸದ್ಯ ತನ್ನ ಮುಂಬರುವ ಸಿನಿಮಾ ಭೂತ್ನಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಇವರು ತನ್ನ ಬದುಕಿನಲ್ಲಿ ನಡೆದ ಭಯಾನಕ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಸಣ್ಣ ಪಟ್ಟಣವೊಂದರಲ್ಲಿ ಲಾಡ್ಜ್ ರೂಂನಲ್ಲಿದ್ದಾಗ ಆ ಕೊಠಡಿಯ ಕೀಯನ್ನು ತೆರೆಯಲು ಮಧ್ಯರಾತ್ರಿಯಲ್ಲಿ ಆಗುಂತಕನೊಬ್ಬ ಪ್ರಯತ್ನಿಸಿದ್ದಾನೆ. ಭಯದಿಂದ ಇವರು ಜೋರಾಗಿ ಕಿರುಚಿದ್ದಾರೆ. ತನಗಾದ ಆ ಅನುಭವವನ್ನು ಬಾಲಿವುಡ್ ಬಬಲ್ ಚಾನೆಲ್ ಜತೆ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿಯ ಭಯಾನಕ ಅನುಭವ
"ನಾನು ಆಗ ಸಣ್ಣ ಪಟ್ಟಣದಲ್ಲಿದ್ದೆ. ಯಾವ ನಗರ ಎಂದು ನನಗೆ ಖಚಿತವಾಗಿ ಈಗ ನೆನಪಿಗೆ ಬರುತ್ತಿಲ್ಲ. ಹೀಗಾಗಿ ತಪ್ಪಾಗಿ ಬೇರೆ ಊರಿನ ಹೆಸರು ಹೇಳಲು ಬಯಸುವುದಿಲ್ಲ. ಯಾರೋ ನಮ್ಮ ಲಾಡ್ಜ್ನ ಕೀ ಕದ್ದಿದ್ದರು. ಮಧ್ಯರಾತ್ರಿ ಯಾರೋ ನಮ್ಮ ಕೊಠಡಿಯ ಬಾಗಿಲನ್ನು ತೆರೆಯಲು ಯತ್ನಿಸುತ್ತಿರುವುದು ಗೊತ್ತಾಯಿತು. ಆ ಸಮಯದಲ್ಲಿ ನಾನೊಬ್ಬಳೇ ಇರಲಿಲ್ಲ. ನನ್ನ ಮ್ಯಾನೇಜರ್ ಇದ್ದರು. ನಾನು ಭಯದಲ್ಲಿ ಬೊಬ್ಬೆ ಹೊಡೆದೆ" ಎಂದ ಮೌನಿ ರಾಯ್ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
"ಬಳಿಕ ನಾವು ಈ ಭದ್ರತಾ ವೈಫಲ್ಯದ ಕುರಿತು ಹೋಟೆಲ್ ಸಿಬ್ಬಂದಿಯ ಬಳಿ ವಿಚಾರಿಸಿದೆವು. ನಾವು ಬಳಿಕ ರಿಸೆಪ್ಷನ್ಗೆ ಕಾಲ್ ಮಾಡಲು ಯತ್ನಿಸಿದೆವು. ಆ ಹೋಟೆಲ್ನ ರಿಸೆಪ್ಷನ್ ಯಾರೋ ಹೌಸ ಕೀಪಿಂಗ್ನವರು ಆಗಿರಬಹುದು ಎಂದರು. ನಮ್ಮ ಕೊಠಡಿಯ ಬಾಗಿಲನ್ನು ತಟ್ಟದೆ, ಕಾಲಿಂಗ್ ಬೆಲ್ ಒತ್ತದೆ, ಯಾವುದೇ ಬೆಲ್ ಮಾಡದೆ, ಮಧ್ಯರಾತ್ರಿ 12.30 ಗಂಟೆಗೆ ಬಾಗಿಲು ತೆರೆಯಲು ಯತ್ನಿಸುವುದೆಂದರೆ ಏನರ್ಥ?" ಎಂದು ಮೌನಿರಾಯ್ ಹೇಳಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ವಿವರ ಅವರು ನೀಡಿಲ್ಲ.
ಮೌನಿ ರಾಯ್ ಅವರು ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ ಎಂಬ ಟೆಲಿವಿಷನ್ ಶೋ ಮೂಲಕ ತನ್ನ ಕರಿಯರ್ ಆರಂಭಿಸಿದರು. ಆದರೆ, ದೇವನ್ ಕೆ ದೇವ್ನಲ್ಲಿ ಸತಿಯಾಗಿ, ನಾಗಿಣಿಯಲ್ಲಿ ಮಹಾದೇವ್ ಮತ್ತು ಶಿವನ್ಯಳಾಗಿ ಖ್ಯಾತಿ ಪಡೆದರು. ಗೋಲ್ಡ್ ಆಂಡ್ ಬ್ರಹ್ಮಾಸ್ತ್ರದಂತಹ ಸಿನಿಮಾಗಳ ಮೂಲಕವೂ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಮೌನಿ ರಾಯ್ ಅವರ ಮುಂಬರುವ ಸಿನಿಮಾ
ಬಾಲಿವುಡ್ ನಟಿ ಮೌನಿ ರಾಯ್ ಅವರು ಹಾರರ್ ಸಿನಿಮಾ ಭೂತಿನಿ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮೌನಿ ಅವರು ಮೊಹಬತ್ ಎಂಬ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ಧಾಂತ್ ಸಚ್ದೇವ್ ನಿರ್ದೇಶನದ ಮತ್ತು ದೀಪಕ್ ಮುಕುತ್ ಮತ್ತು ಸಂಜಯ್ ದತ್ ನಿರ್ಮಿಸಿರುವ ಈ ಚಿತ್ರದಲ್ಲಿ ಪಾಲಕ್ ತಿವಾರಿ, ಸನ್ನಿ ಸಿಂಗ್ ಮತ್ತು ನವನೀತ್ ಮಲಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಿನಿಮಾ ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಾಕ್ಸ್ ಆಫೀಸ್ನಲ್ಲಿ ಅಜಯ್ ದೇವಗನ್ ಅವರ ರೈಡ್ 2 ಸಿನಿಮಾದೊಂದಿಗೆ ಭೂತಿನಿ ಸ್ಪರ್ಧಿಸಲಿದೆ. ರೈಡ್ ಸಿನಿಮಾದಲ್ಲಿ ವಾಣಿ ಕಪೂರ್ ಮತ್ತು ರಿತೇಶ್ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.